ಕಾಲಭೈರವನನ್ನು ಇಡೀ ವಿಶ್ವದ ಉಗ್ರವಾದ ದೇವತೆ ಎಂದು ನಂಬಲಾಗುತ್ತದೆ ಮತ್ತು ಅವನನ್ನು ವಿಧ್ವಂಸಕ ಎಂದು ಕರೆಯಲಾಗುತ್ತದೆ. ಅವನನ್ನು ಸಾವಿಗೂ ಮೀರಿದ ಹಾಗೂ ಸಮಯದ ಪ್ರಮುಖ ಆಡಳಿತಗಾರನೆಂದು ನಂಬಲಾಗುತ್ತದೆ. ಕಾಲ ಭೈರವನ ಸ್ವರೂಪಕ್ಕೆ ಕುರಿತಾದ ಅನೇಕ ದಂತ ಕಥೆಗಳಿವೆ. ದಂತಕಥೆಗಳ ಪ್ರಕಾರ ಕಾಲಭೈರವನನ್ನು ಶಿವದೇವರೇ ಸೃಷ್ಟಿ ಮಾಡಿದ್ದಾರೆನ್ನಲಾಗುತ್ತದೆ ಆದುದರಿಂದ ಕಾಲ ಭೈರವನಿಗೆ ಅರ್ಪಿತವಾದ ಹೆಚ್ಚಿನ ದೇವಾಲಯಗಳು ಶಿವ ದೇವಾಲಯದ ಹತ್ತಿರದಲ್ಲಿರುತ್ತದೆ.
ಕರ್ನಾಟಕದ ಅಗ್ರಮಾನ್ಯ ಕಾಲ ಭೈರವ ದೇವಾಲಯಗಳು
ದೇಶದಲ್ಲೆಡೆ ನಾವು ಕಾಲ ಭೈರವನ ದೇವಾಲಯಗಳನ್ನು ಕಾಣಬಹುದಾಗಿದೆ. ಭಾರತದ ಪ್ರತಿ ರಾಜ್ಯದಲ್ಲಿಯೂ ಸಾವಿನ ಮೇಲೆ ತನ್ನ ಹಿಡಿತವನ್ನು ಹೊಂದಿರುವ ಈ ಶಕ್ತಿಶಾಲಿ ದೇವರಿಗೆ ಸಮರ್ಪಿತವಾದ ದೇವಾಲಯಗಳನ್ನು ಕಾಣುತ್ತೇವೆ. ಈ ದೇವರು ಸಾಮಾನ್ಯವಾಗಿ ಹಿಂದೂ, ಬೌದ್ದ ಹಾಗೂ ಸಿಖ್ ಧರ್ಮದವರಿಂದ ಪೂಜಿಸಲ್ಪಡುತ್ತದೆ. ಈ ದೇವರನ್ನು ಇನ್ನಿತರ ದೇಶಗಳಲ್ಲಿಯೂ ಆರಾಧಿಸಲ್ಪಡುತ್ತದೆ. ಅಲ್ಲದೆ ಈ ದೇವರನ್ನು ಮಹಿಳೆಯರ ರಕ್ಷಕ ಎಂದು ಕರೆಯಲಾಗುತ್ತದೆ. ಆದುದರಿಂದ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಮತ್ತು ಭಕ್ತರಿಂದ ಮಾನ್ಯತೆ ಪಡೆದ ಕಾಲಭೈರವ ದೇವಾಲಯಗಳ ಬಗ್ಗೆ ತಿಳಿಯೋಣ
ಕಾಲಭೈರವೇಶ್ವರ ದೇವಾಲಯ, ಬೆಂಗಳೂರು
ಮೆಟ್ರೋ ನಗರವಾದ ಬೆಂಗಳೂರಿನ ರಾಜರಾಜೇಶ್ವರೀ ನಗರದ ಪರಿಸರದಲ್ಲಿ ನೆಲೆಸಿರುವ ಈ ಕಾಲ ಭೈರವೇಶ್ವರ ದೇವಾಲಯವು ಅತ್ಯಂತ ಭೇಟಿ ಕೊಡುವ ಸ್ಥಳಗಳಲ್ಲಿ ಒಂದೆನಿಸಿದೆ. ಒಂದು ಸುಂದರವಾದ ಗೋಪುರದಲ್ಲಿ ಸುಂದರವಾಗಿ ಕೆತ್ತಲಾದ ಕಾಲಭೈರವನ ಪ್ರತಿಮೆಯು ದೇವಾಲಯದ ಗರ್ಭಗುಡಿಯಲ್ಲಿದೆ. ನೀವು ದೇವಾಲಯಗಳ ವಾಸ್ತುಶಿಲ್ಪಗಳನ್ನು ಪರಿಶೀಲಿಸಲು ಇಷ್ಟ ಪಡುವವರಾಗಿದ್ದಲ್ಲಿ ಈ ಸುಂದರವಾದ ಕಾಲ ಭೈರವ ದೇವಾಲಯವು ನಿಮ್ಮ ಭೇಟಿಗೆ ಸೂಕ್ತವಾದ ದೇವಾಲಯವಾಗಿದೆ.
ಕಾಲ ಭೈರವ ದೇವಾಲಯ, ಬೀದರ್
ಬೀದರ್ ತನ್ನಲ್ಲಿ ಕೋಟೆಗಳು, ದೇವಾಲಯಗಳು, ಮತ್ತು ಸ್ಮಾರಕಗಳು ಇನ್ನೂ ಮುಂತಾದುವುಗಳನ್ನು ಒಳಗೊಂಡಿರುವ ಪ್ರವಾಸಿ ತಾಣವಾಗಿದೆ. ಇವುಗಳಲ್ಲಿ ಕಾಲ ಭೈರವ ದೇವಾಲಯವೂ ಕೂಡ ಒಂದು ಪ್ರಮುಖವಾದುದಾಗಿದ್ದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಮತ್ತು ಭಕ್ತರು ಹತ್ತಿರದ ಪಟ್ಟಣಗಳಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಇಲ್ಲಿಗೆ ಬಂದು ತಮ್ಮ ಭಕ್ತಿ ಮತ್ತು ಗೌರವವನ್ನು ದೇವರಿಗೆ ಅರ್ಪಿಸುವುದನ್ನು ಕಾಣಬಹುದು. ಈ ದೇವಾಲಯದ ಪರಿಸರದಲ್ಲಿರುವ ಹಸಿರುಮಯ ವಾತಾವರಣವೂ ಕೂಡಾ ದೇವಾಲಯದ ಸೌಂದರ್ಯತೆಯನ್ನು ವೃದ್ದಿಸುವಲ್ಲಿ ಪರಿಣಾಮಕಾರಿಯಾಗಿದೆ. ಉತ್ಸವಗಳ ಸಮಯದಲ್ಲಿ ಈ ದೇವಾಲಯವು ಭಕ್ತಾದಿಗಳಿಂದ ತುಂಬಿರುತ್ತದೆ.
ಕಾಲ ಭೈರವ ದೇವಾಲಯ , ಗದಗ
ಗದಗಿನಲ್ಲಿರುವ ಕಾಲ ಭೈರವ ದೇವಾಲಯವು ಅತ್ಯಂತ ಹೆಚ್ಚು ಭೇಟಿ ನೀಡುವ ದೇವಾಲಯಗಳಲ್ಲಿ ಒಂದೆನಿಸಿದೆ. ಇದರ ಸುಂದರವಾದ ಕೆತ್ತನೆ ಮತ್ತು ಅದ್ಬುತವಾದ ವಾಸ್ತುಶಿಲ್ಪಗಳಿಂದಾಗಿಯೂ ಕೂಡಾ ಇದು ಪ್ರವಾಸಿಗರಲ್ಲಿ ಹೆಚ್ಚಿನ ಪ್ರಸಿದ್ದಿಯನ್ನು ಪಡೆದಿದೆ. ಹಸಿರು ಮರಗಳಿಂದ ಸುತ್ತುವರಿಯಲ್ಪಟ್ಟ ಈ ಸುಂದರವಾದ ಕಾಲಭೈರವ ದೇವಾಲಯದ ಸಂಕೀರ್ಣವು ಸಂದರ್ಶಕರಿಗೆ ಶಾಂತಿಯುತವಾದ ಮತ್ತು ಪ್ರಶಾಂತವಾದ ವಾತಾವರಣದ ಸಾರವನ್ನು ಒದಗಿಸುತ್ತದೆ. ಕಾಲಭೈರವ ದೇವರು ಬೌದ್ದರಿಂದಲೂ ಸಾಮಾನ್ಯವಾಗಿ ಪೂಜಿಸಲ್ಪಡುವುದರಿಂದ ಗದಗಿಗೆ ಬೌದ್ದ ಧರ್ಮದ ಪ್ರವಾಸಿಗರೂ ಕೂಡಾ ಭೇಟಿ ನೀಡುತ್ತಾರೆ. ಈ ದೇವಾಲಯಕ್ಕೆ ಪ್ರತೀವರ್ಷ ಸಾವಿರಾರು ಭಕ್ತಾದಿಗಳು ಭೇಟಿ ಕೊಡುತ್ತಾರೆ.
ಕಾಲ ಭೈರವ ದೇವಾಲಯ , ಮಂಗಳೂರು
ಮಂಗಳೂರು ಜಿಲ್ಲೆಯಲ್ಲಿರುವ ಜೋಗಿ ಮಠದ ಕಾಲಭೈರವ ದೇವಾಲಯವು ಕಡಿಮೆ ಪ್ರಸಿದ್ದಿಯನ್ನು ಹೊಂದಿದ್ದರೂ ಕೂಡಾ ಭಕ್ತರು ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಭೇಟಿ ಕೊಡುತ್ತಾರೆ. ಇಲ್ಲಿಯ ಸುಂದರವಾದ ದೇವಾಲಯದ ಆವರಣವು ಒಮ್ಮೆಯಾದರೂ ಭೇಟಿ ಕೊಡಲೇ ಬೇಕೆನಿಸುವಂತಹದಾಗಿದೆ. ಇಲ್ಲಿ ಕಾಲಭೈರವನ ಪ್ರತಿಮೆಯನ್ನು ಪೂಜಿಸುವುದರ ಹೊರತಾಗಿ ದೇವಾಲಯದ ರಚನೆಯ ಕುರಿತಾದ ಸ್ಥಳೀಯ ದಂತಕಥೆಗಳನ್ನೂಮತ್ತು ಕಾಲಭೈರವನ ಕುರಿತಾದ ಆಸಕ್ತಿಕರ ಕಥೆಗಳನ್ನೂ ಕೂಡಾ ತಿಳಿಯಬಹುದಾಗಿದೆ