ಬೆಳಗ್ಗೆ ಹೀಗೆ ಹೋಗಿ ಸಂಜೆ ಹಾಗೆ ಮನೆಗೆ ಬರಬೇಕು. ಅಂತಹ ಜಾಗ ಇದ್ರೆ ರವಿವಾರದ ರಜೆ ಸಾರ್ಥಕ ಅಂತ ಹೇಳೋರು ಇಲ್ಲಿಗೆ ಬರಬಹುದು. ಬೆಟ್ಟದ ತುದಿಯಲ್ಲಿ ಇರುವ ಈ ದೇಗುಲದ ಪರಿಸರ ಪ್ರವಾಸಿಗರ ಮನಸ್ಸು ಗೆಲ್ಲದೆ ಇರೊಲ್ಲ.
ಹಿಮವತ್ ಗೋಪಾಲಸ್ವಾಮಿ ದೇಗುಲ
ಗುಂಡ್ಲುಪೇಟೆ ತಾಲೂಕಿನ ಆವೃತ್ತಿಯಲ್ಲಿ ಈ ಹಿಮವತ್ ಗೋಪಾಲಸ್ವಾಮಿ ದೇಗುಲ ಬರುತ್ತದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರ ಇರುವ ಈ ದೇಗುಲ ಸುತ್ತಲೂ ಹಸಿರು ವನದಿಂದ ಕೂಡಿದೆ. ಹೆಸರೇ ಹೇಳುವಂತೆ ಎಂದಿಗೂ ಮಂಜಿನ ಹೊಗೆಯಿಂದ ಆವೃತ್ತವಾಗಿರುತ್ತದೆ.
ಹಿನ್ನೆಲೆ
ಚೋಳರ ಅರಸ ಬಳ್ಳಾಳನ ಕಾಲದ ಈ ದೇವಾಲಯದಲ್ಲಿ ಕೃಷ್ಣನನ್ನು ಆರಧಿಸಲಾಗುತ್ತದೆ. ಚೋಳರ ನಂತರ ಮೈಸೂರು ಒಡೆಯರು ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ.
ದೇಗುಲದ ವಿಚಾರ
ಹೆಸರೇ ಹೇಳುವಂತೆ ಎಲ್ಲಾ ಕಾಲದಲ್ಲೂ ಹಿಮ ಬಿದ್ದಂತೆ ತೋರುವ ಮಂಜಿನ ಹೊಗೆ ಕವಿದಿರುತ್ತದೆ. ಪುರಾತನ ಕಾಲದ ಕೆತ್ತನೆಯನ್ನು ಹೊಂದಿರುವ ಈ ದೇಗುಲದಲ್ಲಿ ಶ್ರೀಕೃಷ್ಣ ನಿಂತಿರುವ ರಚನೆಯಲ್ಲಿದ್ದಾನೆ.
ಚಿತ್ರಕೃಪೆ: Kannanz
ಸೂಕ್ತ ಜಾಗ
ಸೂರ್ಯೋದಯಕ್ಕೂ ಮುಂಚೆ ಈ ಕ್ಷೇತ್ರಕ್ಕೆ ಬಂದರೆ ಸೂರ್ಯೋದಯದ ಸೌಂದರ್ಯ, ಮಂಜಿನ ತಂಪು, ಹಸಿರು ವನದ ಕಂಪನ್ನು ಸವಿಯಬಹುದು. ಸ್ನೇಹಿತರೊಂದಿಗೆ/ಕುಟುಂಬದವರೊಂದಿಗೆ ಕುಳಿತು ಹರಟೆ ಹೊಡೆಯಬಹುದು. ದೇವರ ದರ್ಶನ ಪಡೆದು ಸಂಜೆಯ ಸೂರ್ಯಾಸ್ತ ನೋಡಿಕೊಂಡೇ ಹೋಗುವಂತಹ ಜಾಗ ಇದು.
ಚಿತ್ರಕೃಪೆ: Hari Prasad Nadig
ಬೆಟ್ಟದೊಳಗೆ
ಬಂಡೀಪುರ ಉದ್ಯಾನವನ ಇಲ್ಲೇ ಹತ್ತಿರದಲ್ಲಿರುವುದರಿಂದ ಈ ಕಾಡಿನಲ್ಲಿ ಆನೆ, ಜಿಂಕೆಗಳ ಸಂಖ್ಯೆ ಹೆಚ್ಚಾಗಿಯೇ ಇವೆ. ಆಯುರ್ವೇದಕ್ಕೆ ಸಂಬಂಧಿಸಿದ ಮರಗಿಡಗಳು ಇದರೊಳಗಿರುವುದರಿಂದ ಇಲ್ಲಿಂದ ಬೀಸುವ ಗಾಳಿಯೂ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ.
ಚಿತ್ರಕೃಪೆ: Yathin S Krishnappa
ದೂರದ ವಿಚಾರ
ಬೆಂಗಳೂರಿನಿಂದ 220 ಕಿ.ಮೀ. ದೂರದಲ್ಲಿದ್ದರೆ, ಮೈಸೂರಿನಿಂದ ಹೋಗುವುದಾದರೆ 75 ಕಿ.ಮೀ. ಊಟಿಗೆ ಹೋಗುವ ರಸ್ತೆ ಮಾರ್ಗದಲ್ಲಿಯೇ ಈ ದೇಗುಲ ಸಿಗುತ್ತದೆ.
ಹೀಗೆ ಮಾಡುವಂತಿಲ್ಲ
ಅಲ್ಲಿ ಯಾವುದೇ ಕಾರಣಕ್ಕೂ ಟ್ರೆಕ್ಕಿಂಗ್, ಕಾಡಿನ ಮಧ್ಯೆ ನುಸುಳುವುದು, ಕುಡಿಯುವುದು, ಕಿರುಚಾಡುವುದು, ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದು ನಿಷೇಧ.
ಚಿತ್ರಕೃಪೆ: Antcbe
ಅವಕಾಶವಿಲ್ಲ
ಬೆಟ್ಟದ ತುದಿಗೆ ಹೋಗಬೇಕೆಂದರೆ ಯಾವುದೇ ಖಾಸಗಿ ವಾಹನಗಳನ್ನು ಬಳಸುವಂತಿಲ್ಲ. ಅಲ್ಲಿ ಇರುವ ವಾಹನ ವ್ಯವಸ್ಥೆಯನ್ನೇ ಬಳಸ ಬೇಕು. ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಟ್ಟದ ತುದಿಗೆ ಹೋಗಬೇಕೆಂದರೆ ಒಬ್ಬರಿಗೆ 20 ರೂ. ಟಿಕೆಟ್ ಪಡೆದರಾಯಿತು. ಬರುವಾಗಲೂ ಅಷ್ಟೆ.
ಎಚ್ಚರಿಕೆ
* ಅಲ್ಲಿರುವ ನಿಯಮವನ್ನು ಯಾವುದನ್ನು ಅಲ್ಲಗಳೆಯಬೇಡಿ.
* ಬೆಳಗ್ಗೆ ಬೇಗ ಹೋದರೆ ಸಿಟಿಯ ಟ್ರಾಫಿಕ್ ನಿಂದ ಮುಕ್ತರಾಗಿ ಹೋಗಬಹುದು. ಜೊತೆಗೆ ಸೂರ್ಯೋದಯದ ಸೊಬಗನ್ನು ನೋಡಬಹುದು.