Search
  • Follow NativePlanet
Share
» » ಈ ಸೀಸನ್‌ನಲ್ಲಿ ಚಿಕ್ಕಮಗಳೂರಿಗೆ ಹೋದ್ರೆ ಈ ತಾಣಗಳನ್ನು ಮಿಸ್ ಮಾಡ್ಲೇಬಾರದು

ಈ ಸೀಸನ್‌ನಲ್ಲಿ ಚಿಕ್ಕಮಗಳೂರಿಗೆ ಹೋದ್ರೆ ಈ ತಾಣಗಳನ್ನು ಮಿಸ್ ಮಾಡ್ಲೇಬಾರದು

ಚಿಕ್ಕಮಗಳೂರಿಗೆ ಹೋದರೆ ಎಷ್ಟೆಲ್ಲಾ ಸ್ಥಳಗಳಿವೆ ಸುತ್ತಾಡಲು. ಇನ್ನು ಪ್ರಕೃತಿ ಪ್ರಿಯರಿಗಂತೂ ರಸದೌತಣವೇ ಸರಿ. ಅದರಲ್ಲೂ ಚಿಕ್ಕಮಗಳೂರಿಗೆ ಹೋದರೆ ಅಲ್ಲಿನ ವಾತಾವರಣ ನಿಮಗೆ ತುಂಬಾನೇ ಇಷ್ಟವಾಗುತ್ತದೆ. ಹಚ್ಚ ಹಸಿರಿನ ಬೆಟ್ಟಗುಡ್ಡಗಳ ನಡುವೆ ಕಾಣುವ ಈ ತಾಣಗಳು ನಿಮಗೆ ಅದ್ಭುತ ಅನುಭವವನ್ನು ನೀಡುತ್ತದೆ. ಟ್ರಕ್ಕಿಂಗ್‌ಗೆ ಹಾಗೂ ಎರಡು ದಿನಗಳ ರಜೆಯನ್ನು ಆರಾಮವಾಗಿ ಇಲ್ಲಿ ಕಳೆಯಬಹುದು.

ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ

ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ

PC:Srinivasa83

ಮೈಸೂರಿನ ಮಹಾರಾಜಾ ನಾಲ್ಕನೇ ಕೃಷ್ಣರಾಜ ಒಡೆಯರ್ ಅವರ ವಿಶ್ರಾಂತಿ ಧಾಮವಾಗಿದ್ದ ಕೆಮ್ಮಣ್ಣುಗುಂಡಿಯನ್ನು ಬಹಳಷ್ಟು ಅಭಿವೃದ್ಧಿ ಮಾಡಲಾಗಿದೆ. ಈ ಕಾರಣದಿಂದಲೇ ಮಹಾರಾಜರ ನೆನಪಿಗಾಗಿ ಕೆಮ್ಮಣ್ಣುಗುಂಡಿಯನ್ನು ಕೆ.ಆರ್.ಹಿಲ್ಸ್,ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ" ಎಂದು ಕರೆಯಲಾಗಿದೆ.

ಝೆಡ್ ಪಾಯಿಂಟ್

ಝೆಡ್ ಪಾಯಿಂಟ್

ಝೆಡ್ ಪಾಯಿಂಟ್ ಕೆಮ್ಮಣ್ಣುಗುಂಡಿಯಲ್ಲಿ ಒಂದು ಅನುಕೂಲಕರ ತಾಣವಾಗಿದ್ದು, ರಾಜ್ ಭವನದಿಂದ ಸುಮಾರು 45 ನಿಮಿಷಗಳ ಒಂದು ಕಡಿದಾದ ಚಾರಣದ ಮೂಲಕ ತಲುಪಬಹುದು. ಇದು ಸೂರ್ಯೋದಯವನ್ನು ವೀಕ್ಷಿಸುವ ಸ್ಥಳವಾಗಿದೆ. ಸಾವಿರಾರು ಜನ ಇಲ್ಲಿ ಸೂರ್ಯೋದಯವನ್ನು ನೋಡಲು ಬರುತ್ತಾರೆ. ಇದು ಪ್ರಕೃತಿ ಪ್ರೀಯರಿಗೆ ಒಂದು ವಿಹಂಗಮ ನೋಟವನ್ನು ನೀಡುತ್ತದೆ.

ಹೆಬ್ಬೆ ಜಲಪಾತ

ಹೆಬ್ಬೆ ಜಲಪಾತ

PC:Likhith N.P

ರಾಜ್ ಭವನದಿಂದ ಸುಮಾರು 8 ಕಿ.ಮೀ.ನಷ್ಟು ಇಳಿಜಾರಿನ ಚಾರಣವು ಹೆಬ್ಬೆ ಜಲಪಾತಕ್ಕೆ ಕೊಂಡೊಯ್ಯುತ್ತದೆ. ಇಲ್ಲಿ ಎರಡು ಹಂತಗಳಲ್ಲಿ 168 ಮೀಟರುಗಳಷ್ಟು ಎತ್ತರವಿರುವ ನೀರಿನ ತೊರೆಗಳು ದೊಡ್ಡ ಹೆಬ್ಬೆ ಮತ್ತು ಚಿಕ್ಕಾ ಹೆಬ್ಬೆ ಗಳನ್ನು ಕಾಣಬಹುದು. ಹೆಬ್ಬೆ ಪಾಲ್ಸ್‌ಗೆ ಜೀಪ್‌ ಸೌಲಭ್ಯವಿದ್ದು ಸುಮಾರು 700ರೂ. ಯಿಂದ 1200ರೂ. ವರೆಗೆ ಶುಲ್ಕ ವಿಧಿಸುತ್ತಾರೆ.

12 ವರ್ಷಕ್ಕೊಮ್ಮೆ ಅರಳುವ ಹೂವು ; ನೀಲಗಿರಿ ಬೆಟ್ಟಕ್ಕೆ ಈ ಹೆಸರು ಬರಲು ಕಾರಣವೇನು? 12 ವರ್ಷಕ್ಕೊಮ್ಮೆ ಅರಳುವ ಹೂವು ; ನೀಲಗಿರಿ ಬೆಟ್ಟಕ್ಕೆ ಈ ಹೆಸರು ಬರಲು ಕಾರಣವೇನು?

ಕಲ್ಲಟ್ಟಿ ಜಲಪಾತ:

ಕಲ್ಲಟ್ಟಿ ಜಲಪಾತ:

PC:Vinayak Kulkarni

ಕಲ್ಲಟ್ಟಿ ಜಲಪಾತವು ಕೆಮ್ಮಣ್ಣುಗುಂಡಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಕೆಮ್ಮಣ್ಣುಗುಂಡಿ ತರೀಕೆರೆಗೆ ಹೋಗುವ ದಾರಿಯಲ್ಲಿ, ಒಂದು ವಿಚಲನವನ್ನು ಕಲ್ಲಟ್ಟಿ ಜಲಪಾತಕ್ಕೆ ಹೋಗುತ್ತದೆ. ಇದನ್ನು ಕಲ್ಲಟ್ಟಿಗಿರಿ ಜಲಪಾತ ಮತ್ತು ಕಾಳಹಸ್ತಿ ಜಲಪಾತ ಎಂದು ಕೂಡ ಕರೆಯಲಾಗುತ್ತದೆ. 122 ಮೀಟರ್ ಎತ್ತರದಿಂದ ಇಲ್ಲಿನ ಜಲಪಾತಗಳು ಮತ್ತು ಇಲ್ಲಿನ ದೇವಾಲಯವು ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಕಾರಣವಾಗಿದೆ. ಸ್ಥಳೀಯ ದಂತಕಥೆಯ ಪ್ರಕಾರ, ಈ ಸ್ಥಳವು ಹಿಂದೂ ಋಷಿ ಅಗಸ್ತ್ಯರೊಂದಿಗೆ ಸಂಬಂಧಿಸಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Rathindra

ಕೆಮ್ಮಣ್ಣುಗುಂಡಿ ಚಿಕ್ಕಮಗಳೂರುದಿಂದ 53 ಕಿ.ಮೀ ದೂರವಿದ್ದು ಲಿಂಗಾಡಹಳ್ಳಿಯಿಂದ 17 ಕಿ.ಮೀ. ದೂರದಲ್ಲಿದೆ. ಹತ್ತಿರದ ರಾಷ್ಟ್ರೀಯ ಹೆದ್ದಾರಿಗಳು, NH-206 ಅಥವಾ NH-48, ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತವೆ.

ನೀವು ವಿಮಾನದ ಮೂಲಕ ತೆರಳುವುದಾದರೆ ಸಮೀಪದ ವಿಮಾನ ನಿಲ್ದಾಣ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ನಂತರ ಬಸ್ ಮೂಲಕ ಪ್ರಯಾಣ ಬೆಳೆಸಬಹುದು.

ರೈಲು ಮೂಲಕ ಹೋಗುವುದಾದರೆ ಬೀರೂರು ಅಥವಾ ಕಡೂರು ರೈಲ್ವೆ ಸ್ಟೇಶನ್ ಸಮೀಪದಲ್ಲಿದೆ. ಅಲ್ಲಿಂದ ೩೩ ಕಿ.ಮೀ ದೂರದಲ್ಲಿ ಕೆಮ್ಮಣ್ಣುಗುಂಡಿ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X