ಹರಿಸಿದ್ಧಿ ದೇವಾಲಯ ಒಂದು ಮಹತ್ವದ ದೇವಾಲಯವಾಗಿದ್ದು, ದೇವಾಲಯ ನಗರಿ ಉಜ್ಜಯಿನಿಯಲ್ಲಿ ಒಂದು ಮಹತ್ವದ ಸ್ಥಾನ ಪಡೆದಿದೆ. ಈ ದೇವತೆ ಬಹಳ ಶಕ್ತಿಶಾಲಿ ಎಂದು ಇಲ್ಲಿನ ಸ್ಥಳೀಯರು ನಂಬುತ್ತಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಹರಿಸಿದ್ಧಿ ದೇವಾಲಯವು ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿರುವ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಪುರಾಣದ ಕಥೆಗಳೊಂದಿಗೆ ನಂಟು ಹೊಂದಿರುವ ಕಾರಣ ಬಹಳ ಪ್ರಮುಖವಾಗಿದೆ.
ಸತಿಯ 51 ಶಕ್ತಿ ಪೀಠಗಳಲ್ಲಿ ಇದೂ ಒಂದು
PC: Gyanendra_Singh_Chauhan
ಉಜ್ಜಯಿನಿ ಶ್ರೀ ಹರಿಸಿದ್ಧಿ ದೇವಿ ದೇವಸ್ಥಾನ ಮಧ್ಯ ಪ್ರದೇಶ ಭಾರತದ ಪುರಾತನ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಇದು ಮಾ ಸತಿಯ 51 ಶಕ್ತಿ ಪೀಠಗಳಲ್ಲಿ 13 ನೇ ಶಕ್ತಿ ಪೀಠವಾಗಿದೆ. ಮಾ ಹರಿಸಿದ್ಧಿ ದೇವಿಯು, ಸಾಮ್ರಾಟ ವಿಕ್ರಮಾದಿತ್ಯನ ಕಾಲದಲ್ಲಿ 'ಮಂಗಲ್ಚಾಂಡಿಕಿ' ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಉಜ್ಜಯಿನಿಗೆ ಸೇರಿದ ಹರಿಸಿದ್ಧಿ ಶಕ್ತಿಪೀಠವು ವರ್ಷಪೂರ್ತಿ ಭಕ್ತರಿಂದ ಭೇಟಿ ನೀಡಲ್ಪಡುತ್ತದೆ. ನವರಾತ್ರಿಯ ಉತ್ಸವವನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅನೇಕ ದೀಪಗಳು ಮತ್ತು ಮೇಣದ ಬತ್ತಿಗಳನ್ನು ಹಚ್ಚಲಾಗುತ್ತದೆ. ಇದು ದೈವಿಕ ದೃಶ್ಯಗಳನ್ನು ಸೃಷ್ಟಿಸುತ್ತದೆ.
ವಿಕ್ರಮಾದಿತ್ಯ ದೇವಿಯನ್ನು ಪೂಜಿಸುತ್ತಿದ್ದ
PC: Bernard Gagnon
ಪುರಾತನ ಭಾರತದ ಪೌರಾಣಿಕ ಚಕ್ರವರ್ತಿ ರಾಜ ವಿಕ್ರಮಾದಿತ್ಯ ದೇವಿ ಹರಿಸಿದ್ಧಿ ಯನ್ನು ಆರಾಧಿಸುತ್ತಿದ್ದನು.. ದೇವಿಯ ಪಾದದಲ್ಲಿ ಹನ್ನೊಂದು ಬಾರಿ ತನ್ನ ತಲೆಯನ್ನು ಅರ್ಪಿಸಿದ್ದನು ಆದರೆ ದೇವಿಯು ಪ್ರತಿಬಾರಿ ಆತನಿಗೆ ಮರು ಜೀವ ನೀಡಿದ್ದಳು. ಆದರ್ಶ ರಾಜನಾಗಿ ನಿರೂಪಿಸಲಾಗಿರುವ ವಿಕ್ರಮಾದಿತ್ಯನು ತನ್ನ ಔದಾರ್ಯ, ಧೈರ್ಯ, ಮತ್ತು ವಿದ್ವಾಂಸರ ಪ್ರೋತ್ಸಾಹಕ್ಕಾಗಿ ಹೆಸರುವಾಸಿಯಾಗಿದ್ದನು.
ಅನ್ನಪೂರ್ಣಾ ದೇವಿ
PC:Bernard Gagnon
ಕಡು ಕೆಂಪು ಬಣ್ಣದಲ್ಲಿ ಇಲ್ಲಿ ಚಿತ್ರಿಸಲಾದ ಅನ್ನಪೂರ್ಣಾ ದೇವಿ ಇಲ್ಲಿನ ಅಧಿದೇವತೆ. ದೇವಿ ಮಹಾಲಕ್ಷ್ಮಿ ಹಾಗೂ ದೇವಿ ಸರಸ್ವತಿ ವಿಗ್ರಹಗಳ ನಡುವೆ ಅನ್ನಪೂರ್ಣಾ ದೇವಿಯ ವಿಗ್ರಹವಿದೆ. ಶಕ್ತಿಯ ಗುರುತಾದ ಶ್ರೀ ಯಂತ್ರ ಈ ದೇವಾಲಯದಲ್ಲಿದೆ. ಶಿವ ದೇವರು ಸತಿಯ ದೇಹವನ್ನು ಹೊತ್ತೊಯ್ಯುವಾಗ ಆಕೆಯ ಮೊಣಕೈ ಈ ಸ್ಥಳದಲ್ಲಿ ಬಿದ್ದಿತ್ತು ಎನ್ನುವ ಕಥೆಯಿದೆ.
ಮರಾಠ ಶೈಲಿಯ ವಾಸ್ತುಶಿಲ್ಪ
PC: Bernard Gagnon
ಇಲ್ಲಿನ ಎರಡು ಸ್ಥಂಭಗಳು ದೀಪಗಳಿಂದ ಅಲಂಕೃತವಾಗಿವೆ. ಇದು ಮರಾಠ ಶೈಲಿಯ ಪ್ರಮುಖ ಅಂಶವಾಗಿದೆ. ಇದಕ್ಕೆ ಕಾರಣ ಈ ದೇವಸ್ಥಾನದ ಪುನರ್ ನಿರ್ಮಾಣ ಮರಾಠರ ಅವಧಿಯಲ್ಲಿ ನಡೆದಿತ್ತು. ಈ ದೇವಾಲಯದ ಆವರಣದಲ್ಲಿ ಹಳೆಯ ಕಾಲದ ಒಂದು ಬಾವಿಯೂ ಇದೆ. ಜೊತೆಗೆ ವಾಸ್ತು ಶಿಲ್ಪದಿಂದ ಶ್ರೀಮಂತವಾದ ಸ್ಥಂಭಗಳು ಹಾಗೂ ದೇವಾಲಯದ ಮೇಲಿನ ರಚನೆಯು ಬಹಳ ಆಕರ್ಷಕವಾಗಿದೆ.
ಸಂಪತ್ತು, ಸಮೃದ್ಧಿ ಕರುಣಿಸುವವಳು
PC: Bernard Gagnon
ಹರಿಸಿದ್ಧಿಯ ದೇವಸ್ಥಾನ, ಅನ್ನಪೂರ್ಣ ದೇವಿಯ ವಿಗ್ರಹದೊಂದಿಗೆ ಧಯೆ ಮತ್ತು ಯಶಸ್ಸನ್ನು ಸಂಕೇತಿಸುತ್ತದೆ. ದೇವತೆ ಅನ್ನಪೂರ್ಣೇ ವಿಷ್ಣುವಿನ ಅರ್ಧಾಂಗಿಯಾಗಿದ್ದು, ಅನ್ನಪೂರ್ಣೇಯು ಮನುಷ್ಯನ ಜೀವನಕ್ಕೆ ಸಂಪತ್ತು ಮತ್ತು ಸಮೃದ್ಧಿಯ ಯನ್ನು ಕರುಣಿಸುವವಳಾಗಿದ್ದಾಳೆ. ಹಾಗಾಗಿ, ಹರಿಸಿದ್ಧಿ ಮಂದಿರದಲ್ಲಿ, ಸಾವಿರಾರು ಮಂದಿ ಭಕ್ತರು ಅನ್ನಪೂರ್ಣೇಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ದೇವಿಯು ಭಕ್ತರಿಗೆ ಒಳಿತನ್ನೇ ಮಾಡುವಳು ಎನ್ನುವ ನಂಬಿಕೆ ಭಕ್ತರದ್ದು.
ಯಾವಾಗ ಭೇಟಿ ನೀಡುವುದು ಸೂಕ್ತ
PC: Bernard Gagnon
ಉಜ್ಜಯಿನಿಯಲ್ಲಿ ಬೇಸಿಗೆ ಕಾಲದಲ್ಲಿ 31 ಡಿಗ್ರಿ ಸೆಲ್ಶಿಯಸ್ನಿಂದ 45 ಡಿಗ್ರಿ ಸೆಲ್ಶಿಯಸ್ವರೆಗೆ ಉಷ್ಣತೆ ಇರುತ್ತದೆ. ಹಾಗಾಗಿ ಉಜ್ಜೈನಿಗೆ ಈ ಸಮಯದಲ್ಲಿ ಪ್ರವಾಸವನ್ನು ಕೈಗೊಳ್ಳುವುದು ಸೂಕ್ತವಲ್ಲ. ಮಳೆಗಾಲ ಉಜ್ಜಯಿನಿಗೆ ಭೇಟಿ ನೀಡಲು ಸೂಕ್ತ ಸಮಯ. ಈ ಋತುವಿನಲ್ಲಿ ಉಜ್ಜಯಿನಿಯಲ್ಲಿ ಮಿತವಾದ ಮಳೆ ಬೀಳುತ್ತದೆ. ನೀವು ಸುಲಭವಾಗಿ ನಿಮ್ಮ ಪ್ರವಾಸವನ್ನು ಆನಂದಿಸಬಹುದು. ಮಹಾಕಾಲೇಶ್ವರ ದೇವಸ್ಥಾನ, ಬಡೆ ಗಣೇಶಜೀ ದೇವಸ್ಥಾನ, ಕಾಲ ಭೈರವ ದೇವಸ್ಥಾನ ಮುಂತಾದ ಸ್ಥಳಗಳಿಗೆ ಭೇಟಿ ನೀಡುವುದನ್ನು ಮರೆಯದಿರಿ.
ಉಜ್ಜಯಿನಿಗೆ ತಲುಪುವುದು ಹೇಗೆ
ಉಜ್ಜಯಿನಿಗೆ ಹತ್ತಿರದ ವಿಮಾನ ನಿಲ್ದಾಣ ಇಂದೋರ್. ಇಂದೋರ್ನಿಂದ ಮುಂಬೈ, ಕೊಲ್ಕತ್ತಾ, ದೆಹಲಿ, ಭೋಪಾಲ್ ಮತ್ತು ಅಹಮದಾಬಾದ್ಗೆ ದಿನನಿತ್ಯದ ವಿಮಾನಗಳಿವೆ. ಉಜ್ಜಯಿನಿ ನಗರ ಜಂಕ್ಷನ್, ವಿಕ್ರಮ್ ನಗರ ಮತ್ತು ಚಿಂತಾಮನ್ ಅನ್ನು ಒಳಗೊಂಡಂತೆ ಉಜ್ಜಯಿನಿಯಲ್ಲಿ ಮುಖ್ಯವಾಗಿ ಮೂರು ಪ್ರಮುಖ ರೈಲು ನಿಲ್ದಾಣಗಳಿವೆ. ಉಜ್ಜಯಿನಿಗೆ ಭಾರತದ ಇತರ ಪ್ರಮುಖ ನಗರಗಳಿಗೆ ಸಂಪರ್ಕಿಸುವ ಸಾಮಾನ್ಯ ರೈಲುಗಳು ಇವೆ.
ಉಜ್ಜಯಿನಿಗೆ ತಲುಪುವುದು ಹೇಗೆ
ಉಜ್ಜಯನಿಯಲ್ಲಿರುವ ಪ್ರಸಿದ್ಧ ಬಸ್ ನಿಲ್ದಾಣಗಳು ದೆವಾಸ್ ಗೇಟ್ ಮತ್ತು ನಾನಾಖೇಡಾ. ಅಜಾರ್ ರೋಡ್, ಇಂದೋರ್ ರಸ್ತೆ, ದೇವಸ್ ರಸ್ತೆ, ಮಕ್ಷಿ ರಸ್ತೆಗಳು ಉಜ್ಜಯಿನಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು. ಈ ರಸ್ತೆಗಳಲ್ಲಿ ಬೃಹತ್ ಸಂಖ್ಯೆಯ ಖಾಸಗಿ ಬಸ್ಸುಗಳು ಚಲಿಸುತ್ತವೆ.
ಮಹಾಕಾಲೇಶ್ವರ ದೇವಾಲಯ
PC: Gyanendra_Singh_Chau
ರುದ್ರ ಸಾಗರ್ ಸರೋವರದ ಬದಿಯಲ್ಲಿ ಮಹಾಕಾಲೇಶ್ವರ ದೇವಾಲಯವಿದೆ. ಮಹಾಕಾಲೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾದ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ, ಶಿವನು ಇಲ್ಲಿ ಲಿಂಗ ರೂಪದಲ್ಲಿ ಪೂಜಿಸಲ್ಪಡುತ್ತಾನೆ. ಇಲ್ಲಿನ ಶಿವಲಿಂಗವನ್ನು ಸ್ವಯಂ ಭೂ ಎನ್ನಲಾಗುತ್ತದೆ.
ರಾಮ್ ಘಾಟ್
PC:Bernard Gagnon
ರಾಮ್ ಘಾಟ್, ಉಜ್ಜಯಿನಿ ಕುಂಭಮೇಳಕ್ಕೆ ಹೆಸರುವಾಸಿಯಾಗಿದೆ. ಉಜ್ಜೈನ್ ಅನ್ನು ಭಾರತದ ಗ್ರೀನ್ವಿಚ್ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದಕ್ಕೆ ಮೊದಲ ರೇಖಾಂಶವು ಇದರ ಮೂಲಕ ಹಾದುಹೋಗುತ್ತದೆ. ರಾಮ್ ಘಾಟ್, ಮಧ್ಯ ಪ್ರದೇಶವು ಉಜ್ಜಯಿನಿಯಲ್ಲಿ ಕುಂಭ ಮೇಳದ ಸಂದರ್ಭದಲ್ಲಿ ಸ್ನಾನಕ್ಕಾಗಿ ಬಳಸುವ ಅತ್ಯಂತ ಹಳೆಯ ಘಾಟ್ ಆಗಿದೆ.
ಬಡೆ ಗಣೇಶ್ಜೀ ಕಾ ಮಂದಿರ
ಬಡೆ ಗಣೇಶ್ ಜೀ ಕಾ ಮಂದಿರ ಉಜ್ಜಯಿನಿ ನಗರವನ್ನು ಇನ್ನಷ್ಟು ವೈಭವೀಕರಿಸುತ್ತದೆ. ಗಣೇಶನನ್ನು ತನ್ನ ಅನುಯಾಯಿಗಳಿಗೆ ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಆಶೀರ್ವದಿಸುವ ಅತ್ಯಂತ ಉದಾರವಾದ ದೇವರು ಎಂದು ಪರಿಗಣಿಸಲಾಗುತ್ತದೆ. ಪಾರ್ವತಿಯ ನೆಚ್ಚಿನ ಮಗ ಎಂದು ಪರಿಗಣಿಸಲಾಗಿದೆ. ಈ ಮಂದಿರವು ಮಹಾಕಾಲೇಶ್ವರ ದೇವಸ್ಥಾನದ ಹತ್ತಿರ ಇದೆ. ಬಡೆ ಗಣೇಶ್ ಜೀ ಕಾ ಮಂದಿರದ ದ್ವಾರ ಮಧ್ಯದಲ್ಲಿ ಹನುಮಂತನ ಪಂಚಮುಖಿ ಚಿತ್ರದೊಂದಿಗೆ ಅಲಂಕರಿಸಲಾಗಿದೆ.