Search
  • Follow NativePlanet
Share
» »ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

By Sowmyabhai

ಅಲ್ಲಿನ ಪ್ರದೇಶದಲ್ಲಿ ಚಿಕ್ಕ ಕಳ್ಳತನಕ್ಕೂ ಕೂಡ ಕೈ ಅಥವಾ ಕಾಲುಗಳನ್ನು ತೆಗೆಯುತ್ತಿದ್ದರಂತೆ.

ರಾಜ್ಯದ್ರೋಹಕ್ಕೆ ಕೈ ಹಾಕಿದರೆ ಕಣ್ಣನ್ನು ತೆಗೆದು ಸೂಜಿಗಳಿಂದ ಕೂಡಿದ ಕೋಲಿನಿಂದ ಹೊಡೆದು ಸಾಯಿಸುತ್ತಿದ್ದರಂತೆ.

ಇಷ್ಟಕ್ಕೂ ಇಷ್ಟು ಕ್ರೂರವಾದ ಶಿಕ್ಷೆಗಳು ವಿಧಿಸಿದ ಆ ಆಳ್ವಿಕೆ ಯಾರದ್ದು?

ಆ ಆಳ್ವಿಕೆ ಎಲ್ಲಿ ನಡೆಯಿತು?

ಪ್ರಸ್ತುತ ನಾವು ತಿಳಿದುಕೊಳ್ಳಬೇಕು ಎಂದು ಅಂದಿಕೊಂಡಿರುವ ಗಂಡಿ ಕೋಟೆಯ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ.

ಅಸಲಿಗೆ ಗಂಡಿಕೋಟೆಯಲ್ಲಿ ಏನಿದೆ? ಏಕೆ ಎಲ್ಲರೂ ರಹಸ್ಯವಾಗಿ ಹೇಳುತ್ತಾರೆ.

ಗಂಡಿಕೋಟೆ ರಹಸ್ಯ ಏನು ಎಂಬುದರ ಬಗ್ಗೆ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ.

1.ಎಲ್ಲಿದೆ?

1.ಎಲ್ಲಿದೆ?

ಗಂಡಿಕೋಟೆ ಆಂಧ್ರ ಪ್ರದೇಶ ರಾಜ್ಯದಲ್ಲಿನ ವೈ.ಎಸ್.ಆರ್ ಜಿಲ್ಲೆ ಜಮ್ಮುಲ ಮಡುಗು ತಾಲೂಕಿನ ಪೆನ್ನಾ ನದಿ ತೀರದ ಸಮೀಪ ಒಂದು ಗ್ರಾಮವಿದೆ. ಇಲ್ಲಿ ಕೆಂಪು ಪರ್ವತ ಶ್ರೇಣಿಯಲ್ಲಿ ಗಂಡಿಕೋಟೆ ಇದೆ. ಇದನ್ನು ಗಂಡಿ ಕೊಂಡ ಎಂದು ಕೂಡ ಕರೆಯುತ್ತಾರೆ.

2.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

2.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಕೆಂಪು ಪರ್ವತ ಶ್ರೇಣಿಗೆ, ಪರ್ವತದ ಕೆಳಗೆ ಪ್ರವಹಿಸುವ ಪೆನ್ನಾ ನದಿಯ ಮಧ್ಯೆ ಏರ್ಪಟ್ಟ ಗಂಡಿ ಮೂಲವಾಗಿ ಈ ಕೋಟೆಯನ್ನು ಗಂಡಿ ಕೋಟೆ ಎಂದು ಕರೆಯುತ್ತಾರೆ ಎಂದು ಸ್ಪಷ್ಟವಾಗಿ ಕಾಣುತ್ತದೆ. ಈ ಚಿಕ್ಕದಾದ ಕಣಿವೆಯಲ್ಲಿ ನದಿಯ ಉದ್ದವು ಸುಮಾರು 300 ಅಡಿ ಇದೆ.

3.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

3.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಇಲ್ಲಿನ ಕಣಿವೆಯಲ್ಲಿನ ಸುಂದರವಾದ ದೃಶ್ಯ ವರ್ಣಾನಾತೀತವಾಗಿದೆ. ದಟ್ಟವಾದ ಅರಣ್ಯಗಳು, ಮನೋಹರವಾಗಿ ಕಾಣಿಸುವ ಈ ಕೋಟೆಗೆ ಎಷ್ಟೇ ಬಲಯುತವಾದ ಸೈನ್ಯ ಬಂದರು ಎದುರಿಸಬಹುದಾದ ಭದ್ರವಾದ ಕೋಟೆ ಇದಾಗಿದೆ.

4.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

4.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಸುತ್ತಲೂ ಆಳವಾದ ಪರಿಸರ, ಕೆಂಪು ಬಣ್ಣದ ಗ್ರಾನೈಟ್ ಏರ್ಪಟ್ಟ ಬೆಟ್ಟಗಳು, ಸುಮಾರು 300 ಅಡಿ ಆಳವಾದ ಪಶ್ಚಿಮ, ಉತ್ತರ ದಿಕ್ಕಿನಲ್ಲಿ ಪ್ರವಹಿಸುವ ಪೆನ್ನಾ ನದಿ, ಸಹಜಸಿದ್ಧವಾದ ರಕ್ಷಣ ಕವಚದಂತೆ ಇರುವ ಕೋಟೆ. ಆಹಾ ಅದ್ಭುತವಾದುದು.

5.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

5.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಗಂಡಿಕೋಟೆಯು ಭಾರತ ದೀಪಕಲ್ಪ ಮೂಲೆಯಿಂದ ಒಂದು ಪ್ರಮುಖವಾದ ಗಿರಿದುರ್ಗವಾಗಿದೆ. ಇದರ ಚರಿತ್ರೆ 113 ನೇ ಶತಮಾನದಿಂದ 2 ನೇ ಅರ್ಥಭಾಗದಿಂದ ಪ್ರಾರಂಭವಾಗುತ್ತದೆ. ಗಂಡಿಕೋಟೆಯು ಪಶ್ಚಿಮ ಕಳ್ಯಾಣಿ ಚಾಳುಕ್ಯ ರಾಜನಾದ ಅಹಾವಮಲ್ಲ ಸೋಮೇಶ್ವರನು ಆ ಪ್ರದೇಶಕ್ಕೆ ಸಂರಕ್ಷಕನಾಗಿ ನೇಮಿಸಲಾಯಿತು. ಕಾಕರಾಜು 1044 ರಲ್ಲಿ ಈ ಕೋಟೆಯನ್ನು ನಿರ್ಮಾಣ ಮಾಡಲಾಯಿತು.

6.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

6.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಆದರೆ ಇದು ನಿಜವೆಂದು ನಿರ್ಧರಿಸಲು ಯಾವುದೇ ಆಧಾರಗಳು ಇಲ್ಲ. ತ್ರಿಪುರಾಂತಕಂನ ಸಮೀಪದಲ್ಲಿ 1212 ರ ಶಾಸನದ ಪ್ರಕಾರ, ಅಂಬದೇವ ಎಂಬ ಒಂದು ಕಾಯಸ್ತ ನಾಯಕನು, ತನ್ನ ರಾಜಧಾನಿ ವೆಲ್ಲೂರಿನಿಂದ ಗಂಡಿಕೋಟೆಗೆ ಮಾರ್ಪಾಟು ಮಾಡಿದನು ಎಂದು ಭಾವಿಸಲಾಗುತ್ತಿದೆ.

7.ಶಾಸನ

7.ಶಾಸನ

ಉಪ್ಪರಪಲ್ಲೆ ಸಮೀಪದಲ್ಲಿ 1236ಕ್ಕೆ ಸೇರಿದ ಒಂದು ಶಾಸನದ ಪ್ರಕಾರ ಪ್ರತಾಪರುದ್ರನು ಸಾಮಂತರಲ್ಲಿ ಒಬ್ಬನು ಈ ಕೋಟೆಯನ್ನು ಜಯಿಸಿದನು. ಪ್ರತಾಪರುದ್ರನು ರಾಜ ರೆಡ್ಡಿಯನ್ನು ಗಂಡಿಕೋಟೆಯನ್ನು ಆಳ್ವಿಕೆ ಮಾಡಲು ನೇಮಿಸಿದ ಎಂದು ತಿಳಿದುಬರುತ್ತದೆ.

8.ವಿಜಯನಗರ ಸಾಮ್ರಾಜ್ಯ

8.ವಿಜಯನಗರ ಸಾಮ್ರಾಜ್ಯ

ಗಂಡಿಕೋಟೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಉದಯಗಿರಿ ಮಂಡಲಕ್ಕೆ ಒಂದು ಪ್ರದೇಶವು ರಾಜಧಾನಿಯಾಗಿತ್ತು.

9.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

9.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

16 ನೇ ಶತಮಾನದ 2 ನೇ ಅರ್ಧಭಾಗದಲ್ಲಿ ಗಂಡಿಕೋಟೆಯನ್ನು ಪೆಮ್ಮಸಾನಿ ನಾಯಕರು ತಿಮ್ಮಾನಾಯಕ, ರಾಮಲಿಂಗನಾಯಡು ವಿಜಯನಗರ ರಾಜರು ಸಾಮಂತರಾಗಿ ಆಳ್ವಿಕೆ ಮಾಡಿದ್ದಾರೆ.

10.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

10.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಅವರ ಆಳ್ವಿಕೆಯಲ್ಲಿ ಗ್ರಾಮಗಳು ಮೂರು ವಿಧವಾಗಿ ವಿಭಜಿಸಲಾಗಿತ್ತು. ಅವುಗಳೆಂದರೆ ಬಂಡಾರುವಾಡ, ಅಮರ ಮತ್ತು ಮಾನ್ಯ ವಿಭಾಗಗಳು ವಿಭಜಿಸಿದರು.

11.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

11.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಇದರಲ್ಲಿ ಬಂಡಾರುವಾಡ ಗ್ರಾಮದಲ್ಲಿ ಚಕ್ರವರ್ತಿಗಳ ಅಧೀನದಲ್ಲಿತ್ತು. ಮಾನ್ಯ ಗ್ರಾಮಗಳು, ದೇವಾಲಯಗಳು ಎಲ್ಲವೂ ಬ್ರಾಹ್ಮಣರ ಅಧೀನದಲ್ಲಿ ಇತ್ತು.

12.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

12.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಅಮರ ಗ್ರಾಮವು ಕೋಟೆಯ ಅಧ್ಯಕ್ಷರ ಅಧೀನದಲ್ಲಿ ಇತ್ತು. ಸುಂದರವಾದ ಕಣಿವೆಗಳು, ಎಲ್ಲಿಯೇ ನೋಡಿದರು ಸುಂದರವಾದ ದೃಶ್ಯಗಳು ಎಂಥವರನ್ನು ತನ್ನತ್ತ ಸೆಳೆದುಕೊಳ್ಳುವ ಆಕರ್ಷಣೆ ಹೊಂದಿತ್ತು.

13.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

13.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಎಷ್ಟೋ ಘನ ಚರಿತ್ರೆ ಹೊಂದಿದ್ದ ಈ ಕೋಟೆಯು ತನ್ನದೇ ಆದ ಮಹತ್ವವನ್ನು ಹೊಂದಿತ್ತು, ಅನೇಕ ರಾಜರ, ರಾಜವಂಶಿಕರ ಪರಾಕ್ರಮಗಳು, ಅಂದಿನ ರಾಜಕೀಯ ಹಾಗು ಸಾಮಾಜಿಕ ಪರಿಸ್ಥಿತಿಗಳಿಗೆ ಇದು ನಿದರ್ಶನವಾಗಿತ್ತು ಎಂದೇ ಹೇಳಬಹುದು.

14.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

14.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಈ ಕೋಟೆಗೆ ಭೇಟಿ ನೀಡಿದರೆ ಆ ಕಾಲದ ರಾಜರ ಪೌರಷಗಳು, ಯುದ್ಧಗಳು, ಆ ಕಾಲದ ರಾಜರ ಆಳ್ವಿಕೆಗಳು ನೆನಪಿಗೆ ಬರುತ್ತದೆ. ಜಮ್ಮಲ ಮಡುಗುವಿನಿಂದ ಸುಮಾರು 14 ಕಿ.ಮೀ ದೂರದಲ್ಲಿ ಪೆನ್ನಾ ನದಿ ತೀರದಲ್ಲಿ ನೆಲೆಸಿದ ಈ ಗಂಡಿಕೋಟೆ ಇರುವ ಈ ಪ್ರದೇಶಕ್ಕೆ ಗಿರಿ ದುರ್ಗಾ ಎಂದು ಕರೆಯುತ್ತಿದ್ದರು.

15.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

15.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಕ್ರಿ.ಶ 1123 ರಲ್ಲಿ ಈ ಕೋಟೆಯನ್ನು ಮೊದಲ ಸೋಮೇಶ್ವರ ಮಹಾರಾಜ, ಸಾಮಂತರಾಜನಾಗಿರುವ ಕಾಕರಾಜು ನಿರ್ಮಾಣ ಮಾಡಿರುವುದಾಗಿ "ಗಂಡಿಕೋಟೆ ಕೈಫಿಯತ್" ತಿಳಿದುಬರುತ್ತದೆ.

16.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

16.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಇದರ ಪರಿಸರ ಪ್ರದೇಶದಲ್ಲಿ ಸುಮಾರು 21 ದೇವಾಲಯಗಳಿವೆ. ಪಶ್ಚಿಮ, ಉತ್ತರ ದಿಕ್ಕಿನಲ್ಲಿ ಪೆನ್ನಾನದಿ ಪ್ರವಹಿಸುತ್ತಿದೆ. ಕೋಟೆಯಿಂದ ನೋಡಿದರೆ ಸುಮಾರು 300 ಅಡಿ ಆಳ ಹಾಗು 250 ಅಡಿ ಅಗಲ ಪೆನ್ನಾ ನದಿ ಪ್ರವಹಿಸುವುದು ವಿಶೇಷವೇ ಆಗಿದೆ.

17.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

17.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಎಂಥಹ ಶಿಕ್ಷೆಗೆ ಆಗಲಿ ಕ್ರೂರವಾದ ಶಿಕ್ಷೆಗಳು ಇರುತ್ತಿದ್ದವು. ಚಿಕ್ಕದಾದ ಕಳ್ಳತನಕ್ಕೂ ಕೂಡ ಕಾಲುಗಳನ್ನು ಕೈಗಳನ್ನು ತೆಗೆದುಬಿಡುತ್ತಿದ್ದರು. ರಾಜದ್ರೋಹಕ್ಕೆ ಕೈಹಾಕಿದವರಿಗೆ ಮಾತ್ರ ಕ್ರೂರವಾಗಿ ಕಣ್ಣುಗಳನ್ನು ಕಿತ್ತು ಹಾಕುತ್ತಿದ್ದರು. ಇಂತಹ ಘೋರವಾದ ಶಿಕ್ಷೆಗಳು ಗಂಡಿಕೋಟೆ ರಾಜ್ಯದಲ್ಲಿತ್ತು.

18.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

18.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ವೃತ್ತಾಕಾರದಲ್ಲಿದ್ದ ಗಂಡಿಕೋಟೆಯ ಸುತ್ತಲೂ 5 ಮೈಲಿ ವಿಸ್ತಾರವಾಗಿತ್ತು. ದಟ್ಟವಾದ ಅರಣ್ಯ, ಮನೋಹರವಾಗಿ ಕಾಣಿಸುವ ಕೋಟೆಯು ಎಂಥಹ ಶತ್ರು ಸೈನ್ಯವನ್ನು ಕೂಡ ನುಸುಳಿ ಬಾರದೇ ಇರುವ ಹಾಗೆ ನಿರ್ಮಾಣ ಮಾಡಲಾಗಿತ್ತು.

19.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

19.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಗಂಡಿ ಕೋಟೆಯಲ್ಲಿನ ಮಾಧವರಾಯ ದೇವಾಲಯ. ಪ್ರಸ್ತುತ ಇದು ಶಿಥಿಲಾವಸ್ಥೆಗೆ ತಲುಪಿದೆ.

20.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

20.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ರಂಗನಾಥಾಲಯದ ಬಗ್ಗೆ ಮೊಟ್ಟ ಮೊದಲ ಬಾರಿಗೆ ಪ್ರಸ್ತಾವನೆಯು 1479ರ ಶಾಸನದಲ್ಲಿ ಕಾಣಿಸುತ್ತದೆ. ಆ ಶಾಸನದ ಪ್ರಕಾರ ಗಂಡಿಕೋಟೆಯಲ್ಲಿನ ರಂಗನಾಯಕನ ಗುಡಿಗೆ ಭೂಮಿಯನ್ನು ಕಾಣಿಕೆಯನ್ನು ನೀಡಿದ ಹಾಗೆ ತಿಳಿಯುತ್ತದೆ.

21.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

21.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಈ ದೇವಾಲಯದ ನಿರ್ಮಾಣ ಶೈಲಿಯನ್ನು ನೋಡಿದರೆ ರಂಗನಾಥ ದೇವಾಲಯವು ನೂರಕ್ಕೆ ನೂರರಷ್ಟು ವಿಜಯನಗರ ರಾಜರ ನಿರ್ಮಾಣ ಎಂದು ಸ್ಪಷ್ಟವಾಗಿ ತಿಳಿದುಬರುತ್ತದೆ. ಈ ಆಧಾರಗಳ ಪ್ರಕಾರ ಈ ದೇವಾಲಯವನ್ನು 15 ನೇ ಶತಮಾನದಲ್ಲಿ ನಿರ್ಮಾಣ ಮಾಡಿದ ಹಾಗೆ ತಿಳಿಯುತ್ತದೆ.

22.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

22.ಭಾರತದ ದೀಪಕಲ್ಪವಾದ ಒಂದು ಪ್ರಮುಖವಾದ ಗಿರಿದುರ್ಗ : ಗಂಡಿಕೋಟೆ

ಮಾಧವರಾಯ ದೇವಾಲಯದ ಬಗ್ಗೆ ಮೊಟ್ಟ ಮೊದಲಬಾರಿಗೆ ಪ್ರಸ್ತಾವನೆ ಕ್ರಿ.ಶ 16 ನೇ ಶತಮಾನಕ್ಕೆ ಸೇರಿದ ಶಾಸನದಲ್ಲಿ ಕಾಣಿಸುತ್ತದೆ. ದೇವಾಲಯದಲ್ಲಿ ನಮಗೆ ತಿಳಿಯುವ ಶಿಲ್ಪಕಲೆಗಳು, ದೇವಾಲಯದ ನಿರ್ಮಾಣ ಶೈಲಿ ನೋಡಿದರೆ ದೇವಾಲಯದ ನಿರ್ಮಾಣ ಅದೇ ಕಾಲದಲ್ಲಿ ನಡೆದಿದ್ದು ಎಂದು ತಿಳಿದು ಬರುತ್ತದೆ.

23.ರೈಲ್ವೆ ಮಾರ್ಗದ ಮೂಲಕ

23.ರೈಲ್ವೆ ಮಾರ್ಗದ ಮೂಲಕ

ಗಂಡಿಕೋಟೆಗೆ ಸುಮಾರು 15 ಕಿ.ಮೀ ದೂರದಲ್ಲಿ ಜಮ್ಮಲ ಮಡುಗು ರೈಲ್ವೆ ನಿಲ್ದಾಣವಿದೆ.

24.ರಸ್ತೆ ಮಾರ್ಗದ ಮೂಲಕ

24.ರಸ್ತೆ ಮಾರ್ಗದ ಮೂಲಕ

ಹೈದ್ರಾಬಾದ್‍ನಿಂದ ಸ್ವಂತ ವಾಹನದ ಮುಖಾಂತರ ಬರುವವರು ಎನ್.ಎಚ್ 7 ನ ಮೇಲೆ ಕರ್ನೂಲ್ ಸೇರಿಕೊಳ್ಳಬಹುದು. ಅಲ್ಲಿಂದ ಬನಗಾನಪಲ್ಲಿ, ಕೋವೆಲಕುಂಟ್ಲ, ಗಂಡಿಕೋಟೆಗೆ ಸುಲಭವಾಗಿ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X