Search
  • Follow NativePlanet
Share
» »ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ

ಓಂಕಾರನಾದ ಕೇಳಿಸುವ ಇಲ್ಲಿ ರಾತ್ರಿ ವೇಳೆ ಏನೆಲ್ಲಾ ನಡೆಯುತ್ತೆ ಗೊತ್ತಾ

ದುದ್ದೆಡ ಸ್ವಯಂಭೂ ದೇವಾಲಯವನ್ನು ಶಂಭು ದೇವಾಲಯ ಅಥವಾ ಶಿವ ದೇವಾಲಯ ಎಂದೂ ಕರೆಯುತ್ತಾರೆ. ಕಾಕತೀಯರಿಂದ ಈ ದೇವಾಲಯದ ಪುನಃ ನಿರ್ಮಾಣ ನಡೆದಿದೆ ಎನ್ನಲಾಗುತ್ತದೆ. ಇಲ್ಲಿನ ಶಿವಲಿಂಗವೂ ಪುರಾಣ ಕಾಲಕ್ಕೂ ಮೊದಲೇ ಇದೆ ಎನ್ನಲಾಗುತ್ತದೆ.

 ಶಿವಲಿಂಗ

ಶಿವಲಿಂಗ

Pc: youtube

ಅನಾದಿಕಾಲದಿಂದಲೂ ಇಲ್ಲಿ ಶಿವಲಿಂಗವಿದೆ. ಆದರೆ ದೇವಾಲಯವನ್ನು 9ರಿಂದ 12ನೇ ಶತಮಾನದ ಮಧ್ಯದಲ್ಲಿ ನಿರ್ಮಿಸಿದ್ದು ಎನ್ನುತ್ತದೆ ಇಲ್ಲಿನ ಕ್ಷೇತ್ರ ಪುರಾಣ. ಆ ಕಾಲದಲ್ಲಿ ದುದ್ದಡ ಗ್ರಾಮವು ಸಂಪದ್ಭರಿತವಾಗಿತ್ತು ಎಂದು ನಂಬುತ್ತಾರೆ.

30 ಅಡಿ ಎತ್ತರದ ಕಬ್ಬಿನ ಗಣೇಶನ ಜೊತೆ 4ಸಾವಿರ ಕೆ.ಜಿಯ ಲಡ್ಡು ನೋಡೋ ಭಾಗ್ಯ ನಿಮಗೆ30 ಅಡಿ ಎತ್ತರದ ಕಬ್ಬಿನ ಗಣೇಶನ ಜೊತೆ 4ಸಾವಿರ ಕೆ.ಜಿಯ ಲಡ್ಡು ನೋಡೋ ಭಾಗ್ಯ ನಿಮಗೆ

ಸಪ್ತಮಾತೃಕೆಯರು

ಸಪ್ತಮಾತೃಕೆಯರು

PC: youtube
ಆ ಕಾಲದಲ್ಲಿನ ಸಪ್ತಮಾತೃಕೆಯರ ವಿಗ್ರಹವನ್ನು ಇಂದಿಗೂ ನಾವು ಇಲ್ಲಿನ ದೇವಾಲಯದಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಅಲ್ಲಿ ದೊರೆತಿರುವ ಶಾಸನಗಳಲ್ಲೂ ಈ ವಿಷಯಗಳಿವೆ.

ಕಾಕತೀಯ ವಾಸ್ತು ಶೈಲಿ

ಕಾಕತೀಯ ವಾಸ್ತು ಶೈಲಿ

PC: youtube
ಕಾಕತೀಯರ ಕಾಲದಲ್ಲಿ ಇದರ ಪುನನಿರ್ಮಾಣ ನಡೆದಿದೆ ಎನ್ನಲಾಗುತ್ತದೆ. . ಹಾಗಾಗಿ ಇಲ್ಲಿನ ದೇವಾಲಯದಲ್ಲಿ ಕಾಕತೀಯ ವಾಸ್ತು ಶೈಲಿಯನ್ನು ಕಾಣಬಹುದು. ಇಲ್ಲಿನ ಶಿಲ್ಪಕಲಾಕೃತಿಯಗಳು ಸುಂದರವಾಗಿದೆ.

ಓಂ ನಮಃ ಶಿವಾಯ್ ಹೇಳಿದ್ರೆ ಇಲ್ಲಿ ಏನೆಲ್ಲಾ ಚಮತ್ಕಾರ ನಡೆಯುತ್ತೆ ಗೊತ್ತಾ?ಓಂ ನಮಃ ಶಿವಾಯ್ ಹೇಳಿದ್ರೆ ಇಲ್ಲಿ ಏನೆಲ್ಲಾ ಚಮತ್ಕಾರ ನಡೆಯುತ್ತೆ ಗೊತ್ತಾ?

ಕಷ್ಟಗಳೆಲ್ಲಾ ಪರಿಹಾರ

ಕಷ್ಟಗಳೆಲ್ಲಾ ಪರಿಹಾರ

PC: youtube
ಆಗಮ ಶಾಸ್ತ್ರದ ಪ್ರಕಾರ ನಿರ್ಮಿಸಲಾಗಿರುವ ಈ ದೇವಾಲಯದ ದೇವತೆಯರ ದರ್ಶನ ಪಡೆದ್ರೆ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಇಲ್ಲಿ ಅಧಿಕ ಸಂಖ್ಯೆಯಲ್ಲ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ..

 16 ಏಕ ಶಿಲಾ ಸ್ತಂಭ

16 ಏಕ ಶಿಲಾ ಸ್ತಂಭ

PC: youtube
ಇಲ್ಲಿ ಗರ್ಭಗುಡಿಯ ಮುಂದೆ 16 ಏಕ ಶಿಲಾ ಸ್ತಂಭಗಳಿಂದ ನಿರ್ಮಿಸಲಾಗಿರುವ ಕಲ್ಯಾಣ ಮಂಟಪವಿದೆ. ಈ ಗರ್ಭಗುಡಿಯ ಕಲ್ಯಾಣ ಮಂಟಪದ ಮಧ್ಯೆ ಸುಂದರವಾದ ನಂದಿಯ ವಿಗ್ರವನ್ನು ಪ್ರತಿಷ್ಠಾಪಿಸಲಾಗಿದೆ. ನಮ್ಮ ದೇಶದಲ್ಲಿರುವ ಕೆಲವೇ ಕೆಲವು ದಕ್ಷಿಣಾಭಿಮುಖವಾಗಿರುವ ದೇವಿಯ ದೇವಸ್ಥಾನಗಳಲ್ಲಿ ದುದ್ದಡ ಸ್ವಯಂ ಭೂ ಲಿಂಗೇಶ್ವರಾಲಯ ಕೂಡಾ ಒಂದು.

ಇಲ್ಲಿ ಮದುವೆಯಾದವರು ಕೆಲವೇ ಗಂಟೆಯಲ್ಲಿ ವಿಧವೆಯರಾಗ್ತಾರೆ !ಇಲ್ಲಿ ಮದುವೆಯಾದವರು ಕೆಲವೇ ಗಂಟೆಯಲ್ಲಿ ವಿಧವೆಯರಾಗ್ತಾರೆ !

ಭವಾನಿ ಎಂದು ಕರೆಯಲಾಗುತ್ತದೆ

ಭವಾನಿ ಎಂದು ಕರೆಯಲಾಗುತ್ತದೆ

PC: youtube
ಇಲ್ಲಿ ದೇವಿಯನ್ನು ಭವಾನಿ ಎನ್ನುವ ಹೆಸರಿನಿಂದ ಕರೆಯುತ್ತಾರೆ. ಚತುರ್ಭುಜವನ್ನು ಹೊಂದಿದ್ದು. ಏಕ ಶಿಲೆಯಲ್ಲಿ ನಿರ್ಮಿಸಲಾಗಿರುವ ಈ ಮೂರ್ತಿಯೂ ಸ್ವಲ್ಪ ಭಯಾನಕವಾಗಿದೆ. . ಇಲ್ಲಿ ದೇವಿಯನ್ನು ಪೂಜಿಸಿದವರು ಅದ್ಭುತ ಶಕ್ತಿಯನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಇಲ್ಲಿ ಕ್ಷುದ್ರಪೂಜೆಯನ್ನು ಮಾಡಲು ದೂರದೂರದ ಊರಿಗಳಿಂದ ನಾಗಸಾಧುಗಳು ಇಲ್ಲಿಗೆ ಆಗಮಿಸುತ್ತಾರೆ.

 ವೀರಭದ್ರಸ್ವಾಮಿ

ವೀರಭದ್ರಸ್ವಾಮಿ

PC: youtube
ಇಲ್ಲಿ ಭದ್ರಕಾಳಿ ಜೊತೆ ವೀರಭದ್ರಸ್ವಾಮಿ ಕೂಡಾ ಇದ್ದಾರೆ. ಪ್ರತಿದಿನ ಮುಂಜಾನೆ 3 ಗಂಟೆಯಿಂದ 4 ಗಂಟೆಯೊಳಗೆ ಓರ್ವ ಯೋಗಿ ವೀರಭದ್ರಸ್ವಾಮಿ ದೇವಾಲಯದಿಂದ ಸರ್ಪ ರೂಪದಲ್ಲಿ ಬಂದು ಲಿಂಗರೂಪದಲ್ಲಿರುವ ಸ್ವಾಮಿಯನ್ನು ಪೂಜಿಸಿ ಹೋಗುತ್ತಾರೆ .

ಎಡಕಲ್ಲು ಗುಡ್ಡ ಸಿನಿಮಾದ ಶೂಟಿಂಗ್ ನಡೆದ ಎಡಕಲ್ಲು ಗುಹೆಗೆ ಹೋಗಿದ್ದೀರಾ?ಎಡಕಲ್ಲು ಗುಡ್ಡ ಸಿನಿಮಾದ ಶೂಟಿಂಗ್ ನಡೆದ ಎಡಕಲ್ಲು ಗುಹೆಗೆ ಹೋಗಿದ್ದೀರಾ?

ರಾತ್ರಿ ವೇಳೆ ಪೂಜೆ

ರಾತ್ರಿ ವೇಳೆ ಪೂಜೆ

PC: youtube
ರಾತ್ರಿ ಸಮಯದಲ್ಲಿ ಇಲ್ಲಿ ಯಾಗ, ಪೂಜೆಗಳು ನಡೆಯುತ್ತದೆ ಎನ್ನುವುದಕ್ಕೆ ರಾತ್ರಿ ಹೊತ್ತಿನಲ್ಲಿ ಓಂಕಾರಾನಾದಗಳು ಕೇಳಿಸುತ್ತವೆ ಎಂದು ಅಲ್ಲಿನ ಭಕ್ತರೂ ಹೇಳುತ್ತಾರೆ. ಈ ದೇವಾಲಯದ ಆವರಣದಲ್ಲಿರುವ ಸಂತಾನ ನಾಗೇಂದ್ರನನ್ನು ಪ್ರಾರ್ಥಿಸಿದರೆ ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X