ರಾನಿಖೇತ್ನಲ್ಲಿರುವ ಈ ದೇವಾಲಯವು ದೇಶದಲ್ಲಿರುವ ಎರಡು ವೈಷ್ಣವಿ ಶಕ್ತಿಯ ಪೀಠಗಳಲ್ಲಿ ಒಂದಾಗಿದೆ. ದುನಾಗಿರಿಯಲ್ಲಿರುವ ಈ ದೇವಾಲಯವನ್ನು ಮಾಂಗಲಿಕಾ ದೇವಾಲಯ ಎಂದೂ ಕರೆಯುತ್ತಾರೆ. ಈ ದೇವಾಲಯವು ವಿಶೇಷತೆ ಹಾಗೂ ಇತಿಹಾಸಗಳ ಬಗ್ಗೆ ತಿಳಿಯೋಣ.
ಎಲ್ಲಿದೆ ದುನಾಗಿರಿ ದೇವಸ್ಥಾನ
ದ್ವಾರಹತ್ನಿಂದ 14 ಕಿ.ಮೀ ದೂರದಲ್ಲಿ, ರಾನಿಖೇತ್ ನಿಂದ 48 ಕಿ.ಮೀ ಮತ್ತು ಅಲ್ಮೋರಾದಿಂದ 78 ಕಿ.ಮೀ ದೂರದಲ್ಲಿ, ದುನಾಗಿರಿ ದೇವಸ್ಥಾನ ಅಥವಾ ಡೂನಗಿರಿ ದೇವಸ್ಥಾನವು ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ದುನಾಗಿರಿಯಲ್ಲಿ ನೆಲೆಗೊಂಡಿದೆ.
ದುನಾಗಿರಿ ದೇವಿ
PC: Piyush Kumar
ದೆಹಲಿಯಿಂದ ಸುಮಾರು 400 ಕಿಮೀ ದೂರದಲ್ಲಿದೆ, ಆರು ಸಣ್ಣ ಹಳ್ಳಿಗಳ ಕ್ಲಸ್ಟರ್ನ್ನುಒಳಗೊಂಡಿರುವ ಸ್ಥಳವನ್ನು ದುನಾಗಿರಿ, ಡ್ರೊಂಗಿರಿ ಮತ್ತು ಡೂನಗಿರಿ ಎಂದು ಕರೆಯಲಾಗುತ್ತದೆ. 116 ಇಂತಹ ಗ್ರಾಮಗಳು ಅಲ್ಮೋರಾ ಜಿಲ್ಲೆಯ ಕೆಳಗಿರುವ ದ್ವಾರಹತ್ನ ಅಭಿವೃದ್ಧಿ ಬ್ಲಾಕ್ಗಳನ್ನು ರೂಪಿಸಲು ಸೇರಿಕೊಳ್ಳುತ್ತವೆ. ಸಮುದ್ರ ಮಟ್ಟದಿಂದ 8,000 ಅಡಿ ಎತ್ತರದಲ್ಲಿರುವ ದುನಾಗಿರಿ ಕುಮಾವೂನ್ ನಲ್ಲಿ ಶಕ್ತಿ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಇದನ್ನು ದುನಾಗಿರಿ ದೇವಿ ಎಂದು ಕರೆಯಲಾಗುತ್ತದೆ.
ದಂತಕಥೆಯ ಪ್ರಕಾರ
ಈ ದೇವಸ್ಥಾನವು ದುರ್ಗಾ ದೇವಿಯ ದೇವತೆ ವೈಷ್ಣವಿ ದೇವಿಯ ರೂಪದಲ್ಲಿ ಅರ್ಪಿತವಾಗಿದೆ ಮತ್ತು ಕುಮಾನ್ ಬೆಟ್ಟಗಳ ಸಣ್ಣ ಗುಡ್ಡದ ಮೇಲೆ ಇದೆ. ದಂತಕಥೆಯ ಪ್ರಕಾರ, ರಾಮಾಯಣದ ಯುದ್ಧದಲ್ಲಿ ಗಾಯಗೊಂಡ ಲಕ್ಷ್ಮಣನನ್ನು ಉಲಿಸಲು ಹನುಮಾನ್ ಅವರು ಸಂಜೀವನಿಯಿರುವ ಬೆಟ್ಟವನ್ನು ಹೊತ್ತುಕೊಂಡು ಹೋದಾಗ, ಬೆಟ್ಟದ ಒಂದು ತುಂಡು ಇಲ್ಲಿ ಬಿದ್ದಿತ್ತು. ಈ ಘಟನೆಯಿಂದಾಗಿ ಈ ಸ್ಥಳಕ್ಕೆ ಡೂನಗಿರಿ ಎಂದು ಹೆಸರಿಸಲಾಯಿತು ಎನ್ನಲಾಗುತ್ತದೆ.
ಋಷಿಮುನಿಗಳು ಭೇಟಿ ನೀಡುತ್ತಿದ್ದರು
PC:Twitter
ಸ್ಥಳೀಯ ಸಂಪ್ರದಾಯದ ಪ್ರಕಾರ, ಈ ಪಟ್ಟಣವು ಪ್ರಕೃತಿಯ ಮಧ್ಯದಲ್ಲಿರುವ ಈ ಸ್ಥಳಕ್ಕೆ ಋಷಿಮುನಿಗಳು ಭೇಟಿ ನೀಡುತ್ತಿದ್ದರು. ತಮ್ಮ ಆಶ್ರಮಗಳನ್ನು ಸ್ಥಾಪಿಸಿದ್ದರಯ. ಗಾರ್ಗಾ ಮುನಿಯ ಆಶ್ರಮವು ದುನಾಗಿರಿಯಲ್ಲಿದ್ದು, ನಂತರ ಗಾಗಸ್ ನದಿಯ ಹೆಸರನ್ನು ಇಡಲಾಗಿದೆ ಎಂದು ಹೇಳಲಾಗುತ್ತದೆ. ಋಷಿ ವೇದ ವ್ಯಾಸರ ಮಗ ಸುಖದೇವ್ ಮುನಿಯವರ ಆಶ್ರಮ ಕೂಡಾ ಇಲ್ಲಿತ್ತು ಇದೀಗ "ಸುಖ ದೇವಿ" ಎನ್ನಲಾಗುತ್ತಿದೆ.
ವೈಷ್ಣವಿ ಶಕ್ತಿಯ ಪೀಠಗಳಲ್ಲಿ ಒಂದು
ಈ ದೇವಾಲಯವನ್ನು ಸ್ಥಳೀಯರು ಮಾಂಗಲಿಕಾ ಎಂದು ಕರೆಯಲಾಗುತ್ತದೆ. ಜಮ್ಮು ಕಾಶ್ಮೀರದ ವೈಷ್ಣೋ ದೇವಿ ದೇವಸ್ಥಾನವು ಭಾರತದಲ್ಲಿನ ಎರಡು ವೈಷ್ಣವಿ ಶಕ್ತಿಯ ಪೀಠಗಳಲ್ಲಿ ಒಂದಾಗಿದೆ. ದೇವಸ್ಥಾನದ ಒಳಗಿನ ಕಂಚಿನ ಫಲಕವು ಕ್ರಿ.ಶ. 1181 ರಲ್ಲಿ ನಿರ್ಮಿಸಿದ್ದು ಎಂದು ನಂಬಲಾಗಿದೆ. ಪ್ರಬಲ ಶಕ್ತಿ ಪೀಠಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿರುವ ಈ ದೇವಾಲಯವು ಗೋಗಾಸ್ ಕಣಿವೆಯ ವಿಹಂಗಮ ನೋಟವನ್ನು ನೀಡುತ್ತದೆ. ದೇವಸ್ಥಾನವನ್ನು ತಲುಪಲು ಪ್ರವಾಸಿಗರು 500 ಮೆಟ್ಟಿಲುಗಳನ್ನು ಹತ್ತಬೇಕಾದ ಅಗತ್ಯವಿದೆ. ಈ ದೇವಸ್ಥಾನವು ನವರಾತ್ರಿಗಳ ಚೈತ್ರ ಮತ್ತು ಅಶ್ವಿನಿ ತಿಂಗಳುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳನ್ನು ಆಕರ್ಷಿಸುತ್ತದೆ.
ಪಾಂಡವರು ಕಾಲ ಕಳೆದಿದ್ದರು
PC: Lalitnaitik
ದುನಾಗಿರಿಕ್ಕೆ ಭೇಟಿ ನೀಡುವ ಪ್ರವಾಸಿಗರು ದ್ವಾರಹತ್ ಮತ್ತು ಪಾಂಡವ್ಕೋಲಿ ಕೂಡಾ ಭೇಟಿ ನೀಡಬಹುದು. ಮಹಾಭಾರತದ ಪಾಂಡವರು ತಮ್ಮ ದೇಶಭ್ರಷ್ಟ ಸಮಯದಲ್ಲಿ ಸ್ವಲ್ಪ ಸಮಯವನ್ನು ಪಾಂಡವಕೋಳಿಯಲ್ಲಿ ಕಳೆದಿದ್ದರು. ದುನಾಗಿರಿ ಹಿಲ್ ಪರ್ವತಗಳ ಮಧ್ಯೆ ಇರುವ ಪಾಂಡವಕೋಳಿ ಗುಹೆಗಳು ಸುತ್ತಮುತ್ತಲಿನ ಹಿಮಾಲಯ ಪರ್ವತಗಳ ವಿಹಂಗಮ ನೋಟವನ್ನು ನೀಡುತ್ತವೆ. ಪಾಂಡವಕೋಳಿಯನ್ನು ತಲುಪಲು, ಕುಕುಚಿನಾದಿಂದ ಸಣ್ಣ ಟ್ರೆಕ್ ಅನ್ನು ಏರುವ ಅಗತ್ಯವಿದೆ, ಇದು ದುನಾಗಿರಿಯಿಂದ ತಲುಪಬಹುದು.
ತಲುಪುವುದು ಹೇಗೆ?
ರಾನಿಖೇತ್ಗೆ ಮುಖ್ಯ ರಸ್ತೆಯಾಗಿದ್ದು, ದಕ್ಷಿಣದ 85 ಕಿಮೀ ಕಾತ್ಗೋಡಮ್ನಿಂದ ಎನ್ಎಚ್ 87 ಮೂಲಕ ಮೇಲಕ್ಕೇರಬೇಕು. ನೈನಿತಾಲ್ ಸಮೀಪದಲ್ಲಿರುವ ಮುಖ್ಯ ಹೆದ್ದಾರಿ ಹಾದುಹೋಗುವ ಬದಲು, ಭೀಮತಲ್ ಮೂಲಕ ನೀವು ಹೆಚ್ಚು ಸುಂದರವಾದ ಮಾರ್ಗವನ್ನು ಪರಿಗಣಿಸಬಹುದು. ಖೈರ್ನಾ ಸೇತುವೆಯ ನಂತರ ಪೈನ್ ಕಾಡುಗಳ ಮೂಲಕ ಇರುವ ಕೊನೆಯ ವಿಸ್ತಾರವು ಅದ್ಭುತವಾಗಿದೆ.
ರಾಣಿಖೇತ್ಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಪಂತ್ ನಗರ, ಇದು 112 ಕಿ. ದೂರದಲ್ಲಿದೆ.
ಹತ್ತಿರದ ರೈಲು ನಿಲ್ದಾಣ ಕತ್ಗೋಡಮ್, ಇದು 85 ಕಿ.ಮೀ ದೂರದಲ್ಲಿದೆ. ಇನ್ನೊಂದು ರಾಮನಗರ್ ರೈಲು ನಿಲ್ದಾಣ ಇದು 96 ಕಿಮೀ. ದೂರದಲ್ಲಿದೆ.
ಪಾಟ್ ಗಾಲ್ಫ್ ಕೋರ್ಸ್
ರಾಣಿಖೇತ್ ಸಮೀಪದ ಉಪತ್ ಗ್ರಾಮದಲ್ಲಿ ಏಷ್ಯಾದ ಅತ್ಯುನ್ನತ ಗಾಲ್ಫ್ ಕೋರ್ಸ್ಗಳಲ್ಲಿ ಪಾಟ್ ಗಾಲ್ಫ್ ಕೋರ್ಸ್ ಕೂಡ ಒಂದು. ಈ ಗಾಲ್ಫ್ ಕೋರ್ಸ್ 9-ಹೋಲ್ ಕೋರ್ಸ್ ಆಗಿದ್ದು, ರಾನಿಖೇತ್ನ ಪ್ರಮುಖ ಆಕರ್ಷಣೆಯಾಗಿದೆ. ಇದನ್ನು ಕುಮಾನ್ ರೆಜಿಮೆಂಟ್ ನಿರ್ವಹಿಸುತ್ತದೆ. ಅಂತಹ ಎತ್ತರದ ಗಾಲ್ಫ್ ಕೋರ್ಸ್ ನ ಹಸಿರು ಹುಲ್ಲುಗಾವಲು ವಿಸ್ಮಯಕಾರಿ. ಈ ಸ್ಥಳವು ಸುತ್ತಲಿನ ಹಿಮಾಚ್ಛಾದಿತ ಹಿಮಾಲಯ ಪರ್ವತದ ವಿಹಂಗಮ ದೃಶ್ಯಗಳನ್ನು ಒದಗಿಸುತ್ತದೆ.
ಕುಮೌನ್ ರೆಜಿಮೆಂಟಲ್ ಸೆಂಟರ್ ಮ್ಯೂಸಿಯಂ
ರಾನಿಖೇತ್ ಬಸ್ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿರುವ ಕುಮೌನ್ ರೆಜಿಮೆಂಟಲ್ ಸೆಂಟರ್ ಮ್ಯೂಸಿಯಂ ಮತ್ತು ಸ್ಮಾರಕವು ಸೋಮನಾಥ್ ಗ್ರೌಂಡ್ ಬಳಿ ಇದೆ. ಈ ಸ್ಮಾರಕವನ್ನು 1974 ರಲ್ಲಿ ನಿರ್ಮಿಸಲಾಯಿತು, ಈ ಸ್ಥಳದ ಸೈನಿಕರು ಮಾಡಿದ ಶೌರ್ಯ ಮತ್ತು ತ್ಯಾಗದ ಸಂಕೇತದ ಪ್ರತೀಕವಾಗಿ ಇದನ್ನು ನಿರ್ಮಿಸಲಾಗಿದೆ.