ಚಿಕ್ಕಬಳ್ಳಾಪುರವು ಕರ್ನಾಟಕದ ಹೊಸ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಹಿಂದೆ ಕೋಲಾರ ಜಿಲ್ಲೆಯ ಭಾಗವಾಗಿದ್ದ ಈ ಜಿಲ್ಲೆ ಹಲವು ಆಕರ್ಷಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ.
ಚಿಕ್ಕಬಳ್ಳಾಪುರ ಪಟ್ಟಣವು ಚಿಕ್ಕಬಳ್ಳಾಪುರದ ಜಿಲ್ಲಾ ಕೇಂದ್ರವಾಗಿದ್ದು, ಇದು ಬೆಂಗಳೂರಿನಿಂದ ಸುಮಾರು 50 ಕಿ.ಮೀ ಅಂತರದಲ್ಲಿದೆ. ಈ ಜಿಲ್ಲೆಯು ಇಂಜಿನಿಯರ್/ರಾಜ್ಯಾಧಿಕಾರಿ ಶ್ರೀ ವಿಶ್ವೇಶ್ವರಯ್ಯನವರ ಜನ್ಮಸ್ಥಳವಾಗಿದೆ ಮತ್ತು ಇದು ಶೈಕ್ಷಣಿಕ ಕೇಂದ್ರವಾಗಿದೆ, ಐಐಟಿ ಮುದ್ದೇನಹಳ್ಳಿ, ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ ಮತ್ತು ಶ್ರೀ ಸತ್ಯ ಸಾಯಿ ಬಾಬಾ ವಿಶ್ವವಿದ್ಯಾಲಯದಂತಹ ಅಸ್ತಿತ್ವದಲ್ಲಿರುವ ಮತ್ತು ಪ್ರಸ್ತುತ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ.
ಚಿಕ್ಕಬಳ್ಳಾಪುರದ ಸುತ್ತಮುತ್ತಲಿರುವ ಆಕರ್ಷಣೆಯ ಸ್ಥಳಗಳು ಮತ್ತು ಪ್ರವಾಸಿ ತಾಣಗಳು
ಚಿಕ್ಕಬಳ್ಳಾಪುರವು ತನ್ನಲ್ಲಿ ನೈಸರ್ಗಿಕ ಆಕರ್ಷಣೆಗಳು ಮತ್ತು ಮಾನವ ನಿರ್ಮಿತ ಸ್ಮಾರಕಗಳನ್ನು ಹೊಂದಿದ್ದು, ಇದು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಹೆಸರುವಾಸಿಯಾದ ನಂದಿಬೆಟ್ಟವು ಚಿಕ್ಕಬಳ್ಳಾಪುರ ತಾಲೂಕಿನಲ್ಲಿದ್ದು, ಬೆಟ್ಟದ ಮೇಲಿರುವ ಯೋಗ ನಂದೀಶ್ವರ ದೇವಾಲಯ ಮತ್ತು ಬೆಟ್ಟದ ಬುಡದಲ್ಲಿರುವ ಗ್ರಾಮದಲ್ಲಿರುವ ಭೋಗ ನಂದೀಶ್ವರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
ಚಿಕ್ಕಬಳ್ಳಾಪುರ ಪಟ್ಟಣದಿಂದ 12 ಕಿ.ಮೀ ದೂರದಲ್ಲಿ ವಿವೇಕಾನಂದ ಜಲಪಾತವಿದ್ದು, ರಮಣೀಯವಾದ ಜಲಪಾತವನ್ನು ಹೊಂದಿರುವ ಈ ಸ್ಥಳವು ಮಳೆಗಾಲದಲ್ಲಿ ಇನ್ನೂ ಸುಂದರವಾಗಿ ಕಾಣುತ್ತದೆ. ಚಿಕ್ಕಬಳ್ಳಾಪುರದ ಹತ್ತಿರವಿರುವ ರಂಗಸ್ಥಳವು ಕಪ್ಪುಕಲ್ಲುಗಳಿಂದ ನಿರ್ಮಿತವಾದ ವಿಜಯನಗರ ಶೈಲಿಯ ಭವ್ಯವಾದ ವಿಷ್ಣು ದೇವರ ವಿಗ್ರಹವನ್ನೊಳಗೊಂಡ ಸುಂದರವಾದ ದೇವಾಲಯಕ್ಕೆ ನೆಲೆಯಾಗಿದೆ. ಈ ಪ್ರದೇಶದ ಸಮೀಪದಲ್ಲಿರುವ ಮುದ್ದೇನಹಳ್ಳಿಯು ವಿಶ್ವೇಶ್ವರಯ್ಯನವರ ಹುಟ್ಟೂರಾಗಿದ್ದು, ಅವರ ಮನೆಯನ್ನು ಈಗ ವಸ್ತುಸಂಗ್ರಹಾಲಯವಾಗಿ ಸಂರಕ್ಷಿಸಲಾಗಿದೆ.ಚಿತ್ರಾವತಿಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಎಲ್ಲೋಡ್ ಶ್ರೀ ಲಕ್ಷ್ಮೀ ಆದಿನಾರಾಯಣ ಸ್ವಾಮಿ ದೇವಸ್ಥಾನ ಮತ್ತು ಕಂದಾವರ ಸರೋವರ ಮುಂತಾದವುಗಳು ಇಲ್ಲಿಯ ಇನ್ನಿತರ ಪ್ರೇಕ್ಷಣೀಯ ಸ್ಥಳಗಳಾಗಿವೆ. ಇಷ್ಟೇ ಅಲ್ಲದೆ ಇಲ್ಲಿಯ ಕೆಲವು ಬೆಟ್ಟಗಳು ರಾಕ್ ಕ್ಲೈಂಬಿಂಗ್ ಮತ್ತು ಪರ್ವತಾರೋಹಣದಂತಹ ಚಟುವಟಿಕೆಗಳಿಗೆ ಅವಕಾಶಗಳನ್ನು ನೀಡುತ್ತವೆ.
ಚಿಕ್ಕಬಳ್ಳಾಪುರ ತಲುಪುವುದು ಹೇಗೆ?
ಬೆಂಗಳೂರಿನ ಪ್ರಮುಖ ನಗರಕ್ಕೆ ಇದು ಸಮೀಪದಲ್ಲಿರುವುದರಿಂದ, ಚಿಕ್ಕಬಳ್ಳಾಪುರಕ್ಕೆ ಪ್ರಯಾಣಿಸಲು ಎಂದಿಗೂ ಸಮಸ್ಯೆಯಾಗುವುದಿಲ್ಲ ಏಕೆಂದರೆ ಪ್ರವಾಸಿಗರಿಗೆ ರಸ್ತೆ ಮತ್ತು ರೈಲು ಮೂಲಕ ಇಲ್ಲಿಗೆ ಪ್ರಯಾಣಿಸಲು ಅನೇಕ ಆಯ್ಕೆಗಳು ಲಭ್ಯವಿವೆ.