ಭಾರತವು ದೇವಾಲಯಗಳ ನೆಲೆಯಾಗಿದೆ. ಈ ದೇಶದಲ್ಲಿ ಮೊದಲ ಪೂಜೆಯನ್ನು ವಿನಾಯಕನಿಗೆ ಅರ್ಪಿಸಲಾಗುತ್ತದೆ. ಇಂದು ನಾವು ಒಂದು ಗಣೇಶನ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿಗೆ ಸಾವಿರಾರು ಭಕ್ತರು ದೇಶ, ವಿದೇಶದಿಂದ ಬರುತ್ತಾರೆ. ಕಾರಣ ಇಲ್ಲಿ ನೀವು ನಿಮ್ಮ ಕೋರಿಕೆಗಳನ್ನು ನೇರವಾಗಿ ದೇವರ ಕಿವಿಯಲ್ಲಿ ಹೇಳಬಹುದಂತೆ.
ದೇವರ ದರ್ಶನ
PC: youtube
ಹೆಚ್ಚಿನ ದೇವಾಲಯಗಳಲ್ಲಿ ಗರ್ಭಗುಡಿಯ ಹೊರಗಿನಿಂದಲೇ ದೇವರ ದರ್ಶನ ಪಡೆಯಬೇಕು. ಇನ್ನು ನಿಮ್ಮ ಕೋರಿಕೆಯನ್ನು ದೇವರ ಕಿವಿಯಲ್ಲಿ ಹೇಳಲು ಬಿಡುತ್ತಾರಾ ಹೇಳಿ. ಆದರೆ ಈ ದೇವಾಲಯದಲ್ಲಿ ಪ್ರತಿಯೊಬ್ಬರು ದೇವರ ಕಿವಿಯಲ್ಲಿ ಕೋರಿಕೆಯನ್ನು ಹೇಳಬಹುದು.
ಎಲ್ಲಿದೆ ಈ ದೇವಾಲಯ
PC: youtube
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಬಿಕಾಬಾಲೋ ಗ್ರಾಮದಲ್ಲಿ ಈ ಗಣಪತಿ ದೇವಾಲಯವಿದೆ. ಅತ್ಯಂತ ಶಕ್ತಿಯುತ ದೇವಾಲಯವಾಗಿದೆ. ಇಲ್ಲಿನ ಮೂರ್ತಿಯು ಸ್ವಯಂಭೂ ವಾಗಿದೆ.
ಚಾಲುಕ್ಯರು ನಿರ್ಮಿಸಿದರು
PC: youtube
ಈ ದೇವಾಲಯವನ್ನು 840 ನೇ ಇಸವಿಯಲ್ಲಿ ಚಾಲುಕ್ಯರು ನಿರ್ಮಿಸಿದ ರು ಎನ್ನಲಾಗುತ್ತದೆ. ಸ್ಥಳೀಯ ಕಥೆಯ ಪ್ರಕಾರ, ಈ ದೇವಾಲಯವನ್ನು ಮೊದಲು ನೆಲಕ್ಕೆ ಇಳಿದಿದೆ ಎಂದು ಹೇಳಲಾಗುತ್ತದೆ.
ಕನಸಿನಲ್ಲಿ ಬಂದ ಗಣೇಶ
PC: youtube
ಒಂದು ದಿನ ಸ್ವಾಮಿ ನೇರವಾಗಿ ಭಕ್ತನ ಕನಸಿನಲ್ಲಿ ಬಂದು ತನ್ನ ಸ್ಥಳವನ್ನು ವಿವರಿಸಿದರು. ನಂತರ ಭಕ್ತ ತನ್ನ ಸ್ನೇಹಿತರ ಮೂಲಕ ಕನಸಿನಲ್ಲಿ ನಡೆದದ್ದನ್ನು ತಿಳಿಸಿದನು. ಗ್ರಾಮಸ್ಥರು ಒಟ್ಟಾಗಿ ಸೇರಿ ಈ ಈ ಪ್ರತಿಮೆಯನ್ನು ಭೂಮಿಯಿಂದ ಹೊರಗೆ ತೆಗೆದರು ಎನ್ನಲಾಗುತ್ತದೆ.
ಬೆಳೆಯುವ ಗಣೇಶ
PC: youtube
ನೆಲದಿಂದ ಹೊರಬಂದ ಈ ಗಣೇಶನ ವಿಗ್ರಹವು ದಿನದಿಂದ ದಿನಕ್ಕೆ ಒಂದಿಷ್ಟು ಬೆಳೆಯುತ್ತಿದೆ ಎನ್ನಲಾಗುತ್ತದೆ. ಗಣಪತಿಯ ಈ ಮೂರ್ತಿ ಬೆಳೆಯುತ್ತಿರುವುದನ್ನೂ ನೀವು ಗಮನಿಸಬಹುದಾಗಿದೆ.
ಕಿವಿಯಲ್ಲಿ ಹೇಳುವುದು
PC: youtube
ಇಲ್ಲಿನ ವಿಶೇಷವೆಂದರೆ ಭಕ್ತರು ತಮ್ಮ ಇಚ್ಛೆಯನ್ನು ದೇವರ ಕಿವಿಯಲ್ಲಿ ಹೇಳುತ್ತಾರೆ. ಹಾಗೆ ಹೇಳಿದ ಬೇಡಿಕೆಗಳೆಲ್ಲಾ ಈಡೇರುತ್ತದೆ ಎನ್ನುವುದು ಭಕ್ತರ ನಂಬಿಕೆ. ಇದಕ್ಕೆ ಸಂಬಂಧಿಸಿದ ಅನೇಕ ಪುರಾವೆಗಳೂ ಇವೆ.
ಪಾಪಗಳು ಪರಿಹಾರವಾಗುತ್ತದೆ
PC: youtube
ಅದೇ ರೀತಿ ಇಲ್ಲಿರುವ ನಂದಿ, ಭುಲಿಂಗೇಶ್ವರ ಸ್ವಾಮಿಗಳ ದರ್ಶನ ಪಡೆದ್ರೆಎಲ್ಲಾ ಪಾಪಗಳು ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು. ಬಿಕಾವೋ ಗ್ರಾಮದಲ್ಲಿ ಪೂರ್ವ ಚಾಲುಕ್ಯರು ನಿರ್ಮಿಸಿದ ಅನೇಕ ದೇವಾಲಯಗಳಿವೆ.
ಹಳ್ಳಿಗೆ ಹೆಸರು ಬಂದಿದ್ದು
PC: youtube
ಈ ಹಳ್ಳಿಯು 849 ಮತ್ತು 892 AD ನಡುವೆ ಪ್ರದೇಶವನ್ನು ಆಳಿದ ಚಾಲುಕ್ಯ ರಾಜ 3 ನೇ ಗುಣ ವಿಜಯಾದಿತ್ಯನ ಹೆಸರಿನಿಂದ ಈ ಗ್ರಾಮಕ್ಕೆ ಆ ಹೆಸರು ಬಂದಿದ್ದು ಎನ್ನಲಾಗುತ್ತದೆ. ಶ್ರೀ ರಾಜಾ ರಾಜೇಶ್ವರಿ ದೇವಸ್ಥಾನ ಮತ್ತು ಶ್ರೀ ಚಂದ್ರಶೇಖರ ಸ್ವಾಮಿ ದೇವಸ್ಥಾನ ಅವರ ಆಳ್ವಿಕೆಯಲ್ಲಿ ಕಟ್ಟಲಾದ ಅನೇಕ ದೇವಾಲಯಗಳಲ್ಲಿ ಒಂದಾಗಿದೆ.
ಗಣಪತಿ ಹೋಮ
PC: youtube
ಗಣಪತಿ ಉತ್ಸವವನ್ನು ನಿರ್ವಹಿಸುವಾಗ ಸುಬ್ರಹ್ಮಣ್ಯ ಸ್ವಾಮಿ ಈ ಸಂದರ್ಭದಲ್ಲಿ ಆಚರಿಸುತ್ತಾರೆ. ಇಲ್ಲಿ ಗಣಪತಿ ಗೌರವಾರ್ಪಣೆ ಮನೆಯಲ್ಲಿ ತೊಂದರೆಗಳಿಲ್ಲ ಎಂದು ಹೇಳಲಾಗುತ್ತದೆ. ಇಲ್ಲಿ ಗಣಪತಿ ಹೋಮ ನಡೆಸಿದ್ರೆ ನಿಮ್ಮ ಮನೆಗೆ ಯಾವುದೇ ಕೆಡುಕಾಗುವುದಿಲ್ಲ ಎನ್ನಲಾಗುತ್ತದೆ.