ಮೈಸೂರು ಬಳಿಯಿರುವ ಭೂವರಾಹಸ್ವಾಮಿ ದೇವಸ್ಥಾನವು ವಿಷ್ಣುವಿನ ಮೂರನೇ ಅವತಾರವಾಗಿದೆ. ಈ ದೇವಾಲಯವು ಕರ್ನಾಟಕದ ಮೈಸೂರು ಸಮೀಪವಿರುವ ಕಲ್ಲಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿದೆ. ಈ ದೇವಾಲಯವು ಹೇಮಾವತಿ ನದಿಯ ದಡದಲ್ಲಿದೆ.
18 ಅಡಿ ಎತ್ತರದ ವರಾಹ ಸ್ವಾಮಿ ವಿಗ್ರಹ
PC:Official website
ವಿಷ್ಣುವಿನ ಮೂರನೆಯ ಅವತಾರವಾದ ವರಾಹ ಸ್ವಾಮಿ ಎಂದು ಕರೆಯಲ್ಪಡುವ ಕಾಡು ಹಂದಿಯ ರೂಪವಾಗಿದೆ. ಈ ವಿಗ್ರಹ 18 ಅಡಿ ಎತ್ತರದಲ್ಲಿದೆ ಮತ್ತು ಬೂದು ಕಲ್ಲಿನಿಂದ ಮಾಡಲ್ಪಟ್ಟಿದೆ. ಈ ವಿಗ್ರಹವು ತನ್ನ ಎಡ ತೊಡೆಯ ಮೇಲೆ ಭೂದೇವಿಯು ಕುಳಿತಿದ್ದಾಳೆ. ಭೂದೇವಿ ವಿಗ್ರಹವು 3.5 ಅಡಿ ಉದ್ದವಿದೆ. ಭಗವಾನ್ ಹನುಮಾನ್ ನ ಮೂರ್ತಿ ಕೂಡ ಪ್ರಮುಖ ವಿಗ್ರಹದ ಅಡಿಯಲ್ಲಿ ಕೆತ್ತಲಾಗಿದೆ.
ತೊಡೆಯ ಮೇಲೆ ಭೂದೇವಿ
PC: Official site
ದೇವರ ಮೇಲ್ಭಾಗದ ಕೈಯಲ್ಲಿ ಶಂಖ ಮತ್ತೊಂದು ಕೈಯಲ್ಲಿ ಸುದರ್ಶನ ಚಕ್ರವನ್ನು ಹಿಡಿದಿದ್ದರೆ ಕೆಳಗಿನ ಕೈಗಳಲ್ಲಿ ಸುದರ್ಶನ ಚಕ್ರವನ್ನು ವಿಗ್ರಹದ ಹಿಂದೆ ಕೆತ್ತಲಾಗಿದೆ. ವಿಗ್ರಹದ ಕೆಳಗಿನ ಎಡಗಡೆಯ ಕೈ ಭೂದೇವಿಯನ್ನು ಆವರಿಸಿಕೊಂಡಿದೆ ಮತ್ತು ಕೆಳಗಿನ ಬಲಗೈ ಅಭಿಯಾನ ಮುದ್ರೆಯಲ್ಲಿದೆ. ಭೂವರಾಹಸ್ವಾಮಿ ದೇವಸ್ಥಾನವು ಸ್ಥಳೀಯರಲ್ಲಿ ಅತ್ಯಂತ ಪ್ರಸಿದ್ಧವಾಗಿದೆ . ಈ ದೇವರಿಗೆ ನಿಗೂಢ ಶಕ್ತಿಗಳಿವೆ ಎಂದು ನಂಬಲಾಗಿದೆ.
ಹಮಾವತಿ ನದಿ ಪಕ್ಕದಲ್ಲಿದೆ
PC: Official website
ಭೂವರಾಹಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹಮಾವತಿ ನದಿ ಇದೆ. ಇದರಿಂದಾಗಿ ಬಲವಾದ ಒಳಹರಿವು ಇದೆ. ಹಾಗಾಗಿ ನದಿಯಲ್ಲಿ ಈಜಲು ಸಾಧ್ಯವಿಲ್ಲ. ಮಾನ್ಸೂನ್ ಸಮಯದಲ್ಲಿ ದೇವಾಲಯದ ಗೋಡೆಗೆ ನೀರು ತಲುಪುತ್ತದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನೀರು ಕಡಿಮೆಯಾದ ನಂತರ ವಾರ್ಷಿಕ ಉತ್ಸವ ನಡೆಯುತ್ತದೆ. ಪ್ರತಿವರ್ಷ ವರಾಹ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹತ್ತಿರದ ಪ್ರದೇಶಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
2500 ವರ್ಷಗಳ ಇತಿಹಾಸ
PC: Official website
ಭೂವರಾಹಸ್ವಾಮಿ ದೇವಸ್ಥಾನವು 2500 ಕ್ಕಿಂತಲೂ ಹೆಚ್ಚು ವರ್ಷಗಳಷ್ಟು ಹಳೆಯದಾಗಿದೆ ಎಂದು ಹೇಳಲಾಗುತ್ತದೆ. ಗೌತಮ ಋಷಿ ಈ ದೇವಸ್ಥಾನದಲ್ಲಿ ತಪಸ್ಸು ಮಾಡಿದ್ದರೆಂದು ಹೇಳಲಾಗುತ್ತದೆ. ಈ ದೇವಸ್ಥಾನದ ಹಿಂದೆ ರಾಜ ವೀರ ಬಲ್ಲಾಳ ದಂತಕಥೆ ಇದೆ. ಬೇಟೆಯಾಡುವಾಗ, ರಾಜನು ಕಾಡಿನಲ್ಲಿ ಕಳೆದುಹೋದನು ನಂತರ ಮರದ ಕೆಳಗೆ ವಿಶ್ರಾಂತಿ ಪಡೆದನು. ವಿಶ್ರಾಂತಿ ಸಂದರ್ಭದಲ್ಲಿ, ಅವರು ವಿಚಿತ್ರವಾದ ವಿಷಯ ಸಂಭವಿಸುತ್ತಿರುವುದನ್ನು ಗಮನಿಸಿದರು. ಮೊಲವನ್ನು ಬೆನ್ನಟ್ಟಿದ ನಾಯಿಯನ್ನು ನೋಡಿದ, ಒಂದು ನಿರ್ದಿಷ್ಟ ಹಂತ ತಲುಪಿದ ನಂತರ, ಮೊಲವು ನಾಯಿಯನ್ನು ಬೆನ್ನಟ್ಟಲು ಆರಂಭಿಸಿತು.
ಭೂಮಿಯನ್ನು ಅಗೆದಾಗ ದೊರೆತ ವರಾಹ
ಈ ಸ್ಥಳವು ಕೆಲವು ಮಾಂತ್ರಿಕ ಶಕ್ತಿಯನ್ನು ಹೊಂದಿದೆಯೆಂದು ರಾಜನು ನಂಬಿದನು ಮತ್ತು ಭೂಮಿಯ ಪದರಗಳ ಅಡಿಯಲ್ಲಿ ಅಡಗಿರುವ ವರಾಹಸ್ವಾಮಿಯ ವಿಗ್ರಹವನ್ನು ಕಂಡುಕೊಳ್ಳಲು ಅವನು ಆ ಸ್ಥಳವನ್ನು ಅಗೆದನು. ಈ ಘಟನೆಯ ನಂತರ ರಾಜ ವರಾಹಸ್ವಾಮಿಯ ದೇವಸ್ಥಾನವೊಂದನ್ನು ನಿರ್ಮಿಸಿ ಪ್ರತಿದಿನ ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದನು.
ತಲುಪುವುದು ಹೇಗೆ?
PC: Youtube
ಕಲ್ಹಲ್ಲಿ ಎನ್ನುವ ಪುಟ್ಟಯ ಹಳ್ಳಿಯು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿದೆ. ಈ ಗ್ರಾಮವು ಮಂಡ್ಯ ಜಿಲ್ಲೆಯ ಪಾಂಡುವಪುರದಿಂದ 32 ಕಿ.ಮೀ ದೂರದಲ್ಲಿದೆ. ಹತ್ತಿರದ ಬಸ್ ನಿಲ್ದಾಣವು ಕಲ್ಹಲ್ಲಿಯಿಂದ 2 ಕಿ.ಮೀ ದೂರದಲ್ಲಿದೆ.ಸ್ಥಳವನ್ನು ತಲುಪುವುದು ತುಂಬಾ ಸುಲಭ. ಈ ಗ್ರಾಮವು ಮಂಡ್ಯದ ಪಾಂಡವಪುರದಿಂದ ಕೇವಲ 32 ಕಿಮೀ ದೂರದಲ್ಲಿದೆ. ಇಲ್ಲಿಗೆ ನೀವು ಸಾಕಷ್ಟು ಬಸ್ಸುಗಳನ್ನು ಪಡೆಯಬಹುದು, ಆದರೆ ಬಸ್ಗಳು ದೇವಸ್ಥಾನದಿಂದ 2 ಕಿಮೀ ದೂರದ ವರೆಗೆ ಮಾತ್ರ ಇರುತ್ತದೆ. ಅಲ್ಲಿಂದ ನೀವು ರಸ್ತೆಯ ಚಾರಣವನ್ನು ಮಾಡಬಹುದು ಅಥವಾ ನೀವು ವಾಹನವನ್ನು ಬಾಡಿಗೆಗೆ ಪಡೆದುಕೊಳ್ಳಬಹುದು.