ಪ್ರಮುಖ ಪುಣ್ಯಕ್ಷೇತ್ರವಾದ ತಿರುಮಲಕ್ಕೆ ದೇಶ-ವಿದೇಶದಿಂದ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಹಾಗಾಗಿಯೇ ಯಾವಾಗ ನೋಡಿದರು ಕೂಡ ಶೇಷಾಚಲ ಬೆಟ್ಟದ ಮೇಲೆ ತಿರುನಾಮಸ್ಮರಣದಲ್ಲಿ ಲೀನರಾಗಿರುತ್ತಾರೆ. ಬ್ರಹ್ಮೋತ್ಸವದ ಸಮುದಲ್ಲಿ ಹೆಚ್ಚು ಭಕ್ತರು ಭಾಗವಹಿಸುತ್ತಾರೆ. ಭಕ್ತರು ಹಾಕುವ ಕಾಣಿಕೆಯ ರೂಪದಲ್ಲಿ ಪ್ರತಿದಿನ ವೆಂಕಟೇಶ್ವರಸ್ವಾಮಿಗೆ ಆದಾಯವು ಕೋಟಿಗಟ್ಟಲೇ ಇರುತ್ತದೆ.
ಆಂಧ್ರ ಪ್ರದೇಶದಲ್ಲಿನ ಚಿತ್ತೂರು ಜಿಲ್ಲೆಯಲ್ಲಿನ ಪೂರ್ವ ದಿಕ್ಕಿಗೆ ಇರುವ ತಿರುಪತಿಯು ಭಾರತ ದೇಶದಲ್ಲಿಯೇ ಸಾಂಸ್ಕøತಿಕವಾಗಿ ಅತ್ಯಂತ ವೈಭವವಾಗಿರುವ ನಗರದಲ್ಲಿ ಇದು ಕೂಡ ಒಂದು. ಸುಪ್ರಸಿದ್ಧ ತಿರುಪತಿ ದೇವಾಲಯ ಬೆಂಗಳೂರಿನಿಂದ ಸಮೀಪದಲ್ಲಿಯೇ ಇರುವುದರಿಂದ ಇದು ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಇಷ್ಟವಾದ ನಗರವೇ ಆಗಿದೆ. ತಿರುಪತಿ ಎಂಬ ಪದಕ್ಕೆ ಮೂಲ ಅರ್ಥ ಏನು ಎಂದು ಖಚಿತವಾಗಿ ಇಲ್ಲದೇ ಇದ್ದರು ಕೂಡ. "ತಿರು", "ಪತಿ" ಎಂಬ 2 ಪದಗಳ ಮೂಲಕ ಉತ್ಪತ್ತಿಯಾಗಿದೆ. ತಿರು ಎಂದರೆ ಗೌರವ ಪ್ರಧಾನವಾದುದು ಎಂದೂ, ಪತಿ ಎಂದರೆ ಗಂಡ ಎಂಬ ಅರ್ಥವೂ ಬರುತ್ತದೆ. ಹೀಗಾಗಿ "ಗೌರವ ಪ್ರಧಾನವಾದ ಪತಿ" ಎಂಬ ಅರ್ಥವೇ ಆಗಿದೆ.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ತಿರುಪತಿ ದೇವಾಲಯವನ್ನು ಯಾರು ನಿರ್ಮಾಣ ಮಾಡಿದರು ಎಂಬುದಕ್ಕೆ ಬಲವಾದ ಸಾಕ್ಷ್ಯಿಗಳು ಇಲ್ಲವಾದ್ದರಿಂದ ಕ್ರಿ.ಶ 4 ನೇ ಶತಮಾನದಿಂದ ವಿವಿಧ ರಾಜವಂಶಿಕರು ದೇವಾಲಯವನ್ನು ನಿರ್ವಹಿಸಿ, ಪುನರ್ ನಿರ್ಮಾಣ ಮಾಡಿದ್ದಾರೆ. 14 ಮತ್ತು 15 ನೇ ಶತಮಾನದಲ್ಲಿ ಈ ದೇವಾಲಯವು ಮುಸ್ಲಿಂ ದಂಡಯಾತ್ರೆಯನ್ನು ವಿಜಯವಂತವಾಗಿ ಆಚರಿಸಲಾಯಿತು. ಹಾಗೆಯೇ ಬ್ರಿಟೀಷ್ ದಾಳಿಗಳಿಂದ ಕೂಡ ತನ್ನನ್ನು ತಾನು ಕಾಪಾಡಿಕೊಂಡು ಈ ಕಟ್ಟಡವನ್ನು ಪ್ರಪಂಚದಲ್ಲಿಯೇ ಸಂರಕ್ಷಿತ ಪ್ರಾಚೀನ ಕಟ್ಟಡವಾಗಿ ನೆಲೆಗೊಂಡಿದೆ.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
1933 ರಲ್ಲಿ ಮದ್ರಾಸ್ ಸರ್ಕಾರ ನೇಮಿಸಿದ ಕಮಿಷನರ್ ಅಧೀನದಲ್ಲಿ ತಿರುಮಲ ತಿರುಪತಿ ದೇವಾಲಯದ ಕಮಿಟಿ ಏರ್ಪಟ್ಟು ಪಾರಿಪಾಲನೆಯ ವ್ಯವಹಾರಗಳನ್ನು ನೋಡಿಕೊಳ್ಳುವ ಸಲುವಾಗಿ ಮದ್ರಾಸ್ ಶಾಸನಸಭೆಯು ಒಂದು ಕಾನೂನನ್ನು ಜಾರಿಗೊಳಿಸಿತು. ಇದರಿಂದಾಗಿ ತಿರುಮಲ ತಿರುಪತಿ ದೇವಾಲಯದ ವ್ಯವಹಾರಗಳು ನಿರ್ವಹಣೆಗಾಗಿ ತಿರುಮಲ ತಿರುಪತಿ ದೇವಾಲಯವು ಏರ್ಪಾಟಾಯಿತು.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ಧಾರ್ಮಿಕ ವಿಷಯಗಳಲ್ಲಿ ಧಾರ್ಮಿಕ ಸಲಹ ಮಂಡಳಿಯು ತಿರುಮಲ ತಿರುಪತಿ ದೇವಾಲಯಕ್ಕೆ ಸಲಹೆಗಳನ್ನು ನೀಡಿತು. ತಿರುಪತಿ ನಗರವು ಇಂದಿಗೂ ಕೆ.ಟಿ. ರಸ್ತೆಯಲ್ಲಿ ಕೊತ್ತೂರಿನಲ್ಲಿ ಇತ್ತು. ತದನಂತರ ಅದು ಗೋವಿಂದರಾಜಸ್ವಾಮಿ ದೇವಾಲಯದ ಸಮೀಪದಲ್ಲಿ ಮಾರ್ಪಾಟಾಯಿತು. ಇಂದು ನಗರದ ಸುತ್ತಮುತ್ತ ಪ್ರದೇಶಕ್ಕೂ ಕೂಡ ವಿಸ್ತಾರಗೊಂಡಿದೆ.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಬಗ್ಗೆ ಎಷ್ಟೇ ಹೇಳಿದರು ಇನ್ನು ಅನೇಕ ರಹಸ್ಯಗಳನ್ನು ಆ ಸ್ವಾಮಿಯು ತನ್ನಲ್ಲಿ ಅಡಗಿಸಿಕೊಂಡಿದ್ದಾನೆ. ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯಕ್ಕೆ ಪ್ರತಿದಿನ 1 ಲಕ್ಷದಿಂದ 2 ಲಕ್ಷದವರೆವಿಗೂ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಪ್ರತ್ಯೇಕವಾದ ದಿನಗಳಲ್ಲಿ ಸುಮಾರು 5 ಲಕ್ಷಮಂದಿ ಭಕ್ತರು ಸ್ವಾಮಿಯ ದರ್ಶನ ಕೋರಿ ಭೇಟಿ ನೀಡಲು ತಿರುಮಲ ತಿರುಪತಿಗೆ ಭೇಟಿ ನೀಡುತ್ತಾರೆ. ಆ 7 ಬೆಟ್ಟಗಳ ಒಡೆಯನ ಹೆಸರು ಕಿವಿಗೆ ಬಿದ್ದರೆ ಸಾಕು ಭಕ್ತರಿಗೆ ಭಕ್ತಿ-ಭಾವವು ಹೆಚ್ಚಾಗದೇ ಇರದು.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ಈ ಪವಿತ್ರ ಪುಣ್ಯ ಕ್ಷೇತ್ರವಾದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ಮುಂದೆ ಹಂದಿಗಳು ಸಂಚರಿಸುತ್ತವೆ. ಬೆಳಗ್ಗೆ 7 ಗಂಟೆಯ ಸಮಯದಲ್ಲಿ ಹಂದಿಗಳು ಸ್ವಾಮಿಯ ದೇವಾಲಯದ ಮುಂದೆ ಬಂದು ಅಡ್ಡಾಡುವುದು ಟಿ,ಟಿ,ಡಿ ಅಧಿಕಾರಗಳು ಗಮನಿಸಿದ್ದಾರೆ.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
7 ಹಂದಿಗಳ ಮಂದಿ ಬೇಡಿ ಆಂಜನೇಯಸ್ವಾಮಿ ದೇವಾಲಯದಿಂದ ಮೆಟ್ಟಿಲು ಇಳಿದು ಅಲ್ಲಿಂದ ದಕ್ಷಿಣದ ಮೂರು ಭಾಗಗಳಿಗೆ ಓಡಿ ಹೋಗುತ್ತದೆ ಎಂತೆ. ಅತ್ಯಂತ ಪವಿತ್ರ ಎಂದೂ ಭಾವಿಸುವ ತಿರುಮಲದಲ್ಲಿ ಈ ಹಂದಿಗಳು ತಿರುಗುತ್ತಿರುವುದು ಭಕ್ತರಿಗೆ ವಿಸ್ಮಯವಾಗಿ ಕಾಣಿಸುತ್ತಿದೆ.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ಸಾಧಾರಣವಾಗಿ ಭಕ್ತರಿಗೆ ಈ ಸ್ಥಳದಲ್ಲಿ ಚಪ್ಪಲಿಯನ್ನು ಧರಿಸಿ ಓಡಾಡುವುದಕ್ಕೆ ಬಿಡುವುದಿಲ್ಲ. ಅಂಥಹದರಲ್ಲಿ ಸುತ್ತಲೂ ಹಂದಿಗಳು ತಿರುಗುತ್ತಿರುವುದು ಎಲ್ಲರಿಗೂ ಆಶ್ಚರ್ಯಕ್ಕೆ ಗುರಿಯಾಗುವಂತೆ ಮಾಡಿದೆ. ಟಿ.ಟಿ.ಡಿ ಈ ಕುರಿತು ಏನು ಮಾಡುತ್ತಿದೆ ಎಂದು ಭಕ್ತರು ಪ್ರಶ್ನಿಸುತ್ತಿದ್ದಾರೆ. ಬೇಡಿ ಆಂಜನೇಯ ಸ್ವಾಮಿ ದೇವಾಲಯದ ಮುಂದೆಯಿಂದ ದಕ್ಷಣದ ಮೂರು ಬೀದಿಗಳಲ್ಲಿಯೂ ಹಂದಿಗಳು ಓಡಾಡುತ್ತಿರುತ್ತವೆ ಎಂತೆ. ತಿರುಮಲದಲ್ಲಿ ಹಂದಿಗಳನ್ನು ನಿಯಂತ್ರಿಸಲು ಈ ಮೊದಲೇ ಹೇಳಿದ್ದರು ಕೂಡ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಗಮನಾರ್ಹ.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ಆಕರ್ಷಣೆಗಳು ತಿರುಪತಿ, ವರಹಾಸ್ವಾಮಿ, ವೆಂಕಟೇಶ್ವರ ಸ್ವಾಮಿ, ಪದ್ಮಾವತಿ ದೇವಿ ದೇವಾಲಯ, ಗೋವಿಂದರಾಜ ಸ್ವಾಮಿ ದೇವಾಲಯ, ಶ್ರೀನಿವಾಸ ಮಂಗಾಪುರದಂತಹ ಪ್ರಸಿದ್ಧವಾದ ದೇವಾಲಯಗಳ ಜೊತೆ ಜೊತೆಗೆ ವಿವಿಧ ಪಶು, ವೃಕ್ಷಗಳಿಗೆ ಅವಾಸ ಸ್ಥಾನವಾದ ಶ್ರೀ ವೆಂಕಟೇಶ್ವರ ಪಾರ್ಕ್ ಕೂಡ ಇಲ್ಲಿ ಕಾಣಬಹುದು. ಶಿಲಾತೋರಣ ಎನ್ನುವ ಇಲ್ಲಿನ ಕಲ್ಲಿನ ಉದ್ಯಾನವನ ವನ್ನು ಕೂಡ ನೋಡಬಹುದು.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ಕಾಂಚಿಪುರಂ ಕಾಂಚಿಪುರಂ ರೇಷ್ಮೇ ಸೀರೆಗಳು ಪ್ರಪಂಚ ವ್ಯಾಪಕವಾಗಿ ಹೆಸರುವಾಸಿಯಾಗಿದೆ. ಆಧುನಿಕ ಕಾಲದಲ್ಲಿ ಮಹಿಳೆಯರಿಗೆ ಇಷ್ಟವಾಗುವ ಬಂಗಾರದ ಜರಿ, ರೇಷ್ಮೇ ಜರಿಯಿಂದ ಗತ ವೈಭವವನ್ನು ಪ್ರದರ್ಶಿಸುತ್ತದೆ. ಇದು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಗುರುತಿಸಲಾದ ವಸ್ತ್ರಗಳು. ಇದು ತಮಿಳರಿಗೆ ಒಂದು ಸಂಪ್ರದಾಯ ಮತ್ತು ಸಾಂಸ್ಕøತಿಕ ಉಡುಪು ಆಗಿದೆ.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ಈ ಪವಿತ್ರವಾದ ನಗರದಲ್ಲಿ ಕಾಮಾಕ್ಷಿ ದೇವಿಯ ದೇವಾಲಯ, ಏಕಂಬರೇಶ್ವರ ದೇವಾಲಯ, ದೇವರಾಜಸ್ವಾಮಿ ದೇವಾಲಯ ಮತ್ತು ಕೈಲಾಸನಾಥರ್ ದೇವಾಲಯದಂತಹ ಸುಪ್ರಸಿದ್ಧವಾಗಿದೆ. ಈ ಎಲ್ಲಾ ದೇವಾಲಯಕ್ಕೆ ವರ್ಷಾದಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ವೆಲ್ಲೂರು ಗೋಲ್ಡ್ನ್ ಟೆಂಪಲ್ ಎಂದೇ ಖ್ಯಾತಿಯಾಗಿರುವ ಮಹಾಲಕ್ಷ್ಮೀ ದೇವಾಲಯ ಅತ್ಯಂತ ಪ್ರಸಿದ್ಧವಾದುದು. ಇಲ್ಲಿನ ತಾಯಿಯನ್ನು ಕಣ್ಣಾರೆ ಕಂಡೇ ಆನಂದಿಸಬೇಕು. ವೆಲ್ಲೂರಿಗೆ ಭೇಟಿ ನೀಡಿದರೆ ತಪ್ಪದೇ ಈ ದೇವಾಲಯಕ್ಕೆ ಭೇಟಿ ನೀಡಲೇಬೇಕು. ಇಲ್ಲಿನ ಮತ್ತಷ್ಟು ಆಕರ್ಷಣೆಗಳೆಂದರೆ ಬಾಲಮತಿ, ವಿರಿಚಿಪುರಂ, ಮೆಟ್ಟುಕುಲಂ ಇನ್ನು ಹಲವಾರು. ಈ ಪ್ರದೇಶಗಳು ನಿಮಗೆ ಚಿರಸ್ಮರಣಿಯವಾಗಿ ಉಳಿದ ಬಿಡುವಂತೆ ಮಾಡುತ್ತದೆ.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ಉತ್ತಮ ಸಮಯ ತಿರುಪತಿಗೆ ತೆರಳಲು ಅತ್ಯಂತ ಉತ್ತಮವಾದ ಸಮಯವೆಂದರೆ ಅದು ಚಳಿಗಾಲದಲ್ಲಿ ತಿರುಪತಿಗೆ ಭೇಟಿ ನೀಡುವುದು ಅತ್ಯುತ್ತಮವಾದ ಸಮಯವಾಗಿದೆ. ನವೆಂಬರ್ ತಿಂಗಳಿನಿಂದ ಫೆಬ್ರವರಿಯವರೆಗೆ ಉತ್ತಮ. ಆದರೆ ಜೂನ್ನಿಂದ ಸೆಪ್ಟೆಂಬರ್ ತಿಂಗಳ ಮಧ್ಯೆಯಲ್ಲಿ ನಡೆಯುವ ಪ್ರಧಾನವಾದ ಹಬ್ಬ ಬ್ರಹ್ಮೋತ್ಸವ ಸಮಯದಲ್ಲಿ ಅನೇಕ ಯಾತ್ರಿಕರು ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.
ಈ ಪುಣ್ಯಕ್ಷೇತ್ರದಲ್ಲಿ ಹಂದಿಗಳದೇ ಕಾರುಬಾರು
ರೈಲು ಮಾರ್ಗದ ಮೂಲಕ ತಿರುಪತಿ ಎಕ್ಸ್ಪ್ರೆಸ್ ನೇರವಾದ ಸಂಪರ್ಕ ವ್ಯವಸ್ಥೆ ಇದ್ದು, ಸುಮಾರು 250 ಕಿ,ಮೀ ದೂರ ಪ್ರಯಾಣಿಸಬೇಕಾಗುತ್ತದೆ.