Search
  • Follow NativePlanet
Share
» »ಶಬರಿಮಲೈಗೆ ತೆರಳುತ್ತಿದ್ದೀರಾ?

ಶಬರಿಮಲೈಗೆ ತೆರಳುತ್ತಿದ್ದೀರಾ?

ಶಬರಿಮಲೈ ಪೂರ್ತಿಯಾಗಿ ಒಂದು ದಟ್ಟವಾದ ಅರಣ್ಯ ಪ್ರದೇಶದಲ್ಲಿದೆ. ಹಾಗಾಗಿ ಯಾತ್ರಿಕರು ಗುಂಪು ಗುಂಪುಗಳಾಗಿ ಹೋಗುವುದು ಅಂದಿನಿಂದ ಬಂದ ಪದ್ಧತಿಯಾಗಿದೆ. ಇಂದಿಗೂ ಅಯ್ಯಪ್ಪ ಭಕ್ತರು ಹಾಗೆಯೇ ಮಾಡುತ್ತಾ ಬಂದಿದ್ದಾರೆ. ಆದರೆ ಪ್ರಸ್ತುತ ಶಬರಿಮಲೈಗೆ ಭೇಟಿ ನೀಡಿ ಬರುವುದೆಂದರೆ ನೀರು ಕುಡಿದ ಹಾಗೆಯೇ ಆಗಿದೆ. ಆದರೆ ಒಂದು ಕಾಲದಲ್ಲಿ ಶಬರಿಮಲೈನ ಯಾತ್ರೆ ಎಂದರೆ ಭಕ್ತರು ಭಯದಿಂದ ಹೋಗುತ್ತಿದ್ದರು. ಯಾವ ಸಮಯದಲ್ಲಿ ಯಾವ ಅವಘಡ ಸಂಭವಿಸುತ್ತದೆಯೋ ಯಾರಿಗೂ ತಿಳಿಯುತ್ತಿರಲಿಲ್ಲ. ಅಂದು ಶಬರಿಮಲೈಗೆ ತೆರಳುವುದಕ್ಕೆ ಎರುಮೆಲಿಮಾರ್ಗ ಎಂಬ ದಾರಿಯನ್ನು ಉಪಯೋಗಿಸುತ್ತಿದ್ದರಂತೆ.

ಈ ದಾರಿಯ ಮುಖಾಂತರವೇ ಪೂಜಾರಿಗಳು, ಸಿಬ್ಬಂದಿಗಳು ದೇವಾಲಯಕ್ಕೆ ತಲುಪುತ್ತಿದ್ದರಂತೆ. ಪೂಜಾರಿಗಳು ಸ್ವಾಮಿಗೆ ಪ್ರತ್ಯೇಕವಾದ ಪೂಜೆಗಳು ಮಾಡುತ್ತಿದ್ದರು. ಇವರು ಯಾವ ಸಮಯದಲ್ಲಿ ಹೋಗಬೇಕಾದರು ಗುಂಪು-ಗುಂಪುಗಳಾಗಿ ಹೋಗುತ್ತಿದ್ದರಂತೆ.

ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಶಬರಿಮಲೆ ದೇವಸ್ಥಾನದ ಪೂಜಾ ವೇಳಾಪಟ್ಟಿ:

ಡಿಸೆಂಬರ್ ತಿಂಗಳಲ್ಲಿ 27-12-2023 ರಂದು ಮಂಡಲ ಪೂಜೆ ನಡೆಯಲಿದೆ. 30-12-2023 ರಿಂದ 20-01-2024 ರವರೆಗೆ ಮಕರವಿಲ್ಲಕ್ಕು ಮಹೋತ್ಸವ ನಡೆಯಲಿದೆ.

ಜನವರಿ 2024 ರಲ್ಲಿ 15-01-2024 ರಂದು ಮಕರ ವಿಳಕ್ಕು ನಡೆಯಲಿದೆ.

ಸಬರಿಮಲೆ ಪವಿತ್ರ ದೇವಸ್ಥಾನಕ್ಕೆ ಭಕ್ತರಾಳಿ ಹರಿದು ಬರುವಂತೆ ಕರೆ ನೀಡುತ್ತೇವೆ. ಈ ವರ್ಷದ ಪವಿತ್ರ ಯಾತ್ರೆ ಸ್ವಾಮಿ ಅಯ್ಯಪ್ಪನ ಆಶೀರ್ವಾದವನ್ನು ಪಡೆಯಲು ಸುವರ್ಣ ಅವಕಾಶವಾಗಿದೆ. ಮಂಡಲ ಪೂಜೆ ಮತ್ತು ಮಕರವಿಲ್ಲಕ್ಕು ಮಹೋತ್ಸವದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಲು ಭಕ್ತರನ್ನು ಆಹ್ವಾನಿಸುತ್ತೇವೆ. ದೇವರ ದರ್ಶನದಿಂದ ಲಭಿಸುವ ಪುಣ್ಯವು ಅನನ್ಯವಾಗಿದೆ.

ನೀವು ಸಬರಿಮಲೆಗೆ ಯಾತ್ರೆ ಹೋಗಲು ಯೋಜಿಸುತ್ತಿದ್ದರೆ, ದಯವಿಟ್ಟು ಮುಂಜಾಗ್ರೆ ನಿಮ್ಮ ಯಾತ್ರೆಗೆ ದಾಖಲಾತಿ ಮಾಡಿ. ಯಾತ್ರೆಗೆ ತೆಗೆದುಕೊಳ್ಳಬೇಕಾದ ವಸ್ತುಗಳನ್ನು ಪಟ್ಟಿ ಮಾಡಿ ಮತ್ತು ಅವುಗಳನ್ನು ಸರಿಯಾಗಿ ಪ್ಯಾಕ್ ಮಾಡಿ. ಯಾತ್ರೆಯ ಸಮಯದಲ್ಲಿ ಸುರಕ್ಷಿತವಾಗಿರಿ ಮತ್ತು ದೇವಸ್ಥಾನದ ನಿಯಮಗಳನ್ನು ಪಾಲಿಸಿ.

ಸಬರಿಮಲೆ ಯಾತ್ರೆ ನಿಮಗೆ ಶಾಂತಿ, ಸಂತೋಷ ಮತ್ತು ಮೋಕ್ಷವನ್ನು ನೀಡಲಿ. ಸ್ವಾಮಿ ಅಯ್ಯಪ್ಪನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ಎರಡು ಸಾವಿರ ವರ್ಷಗಳ ಹಿಂದೆ 70 ಮಂದಿ ಶಬರಿಮಲೈ ಯಾತ್ರೆಗೆ ಹೋದರು ಎಂದೂ, ಆ ವರ್ಷದ ಆದಾಯ 7 ರೂಪಾಯಿಗಳೆಂದು ರೆಕಾರ್ಡ್‍ನಲ್ಲಿ ನಮೂದಿಸಲಾಗಿದೆ. 1907 ರಲ್ಲಿ ಶಬರಿಮಲೈ ಗರ್ಭಗುಡಿಯ ಶಿಖರವು ಆನೇಕ ಎಲೆಗಳಿಂದ ತುಂಬಿತ್ತಂತೆ. ಅಂದು ಗರ್ಭಗುಡಿಯಲ್ಲಿ ಏಕಶಿಲಾ ವಿಗ್ರಹಕ್ಕೆ ಪೂಜೆಗಳನ್ನು ಮಾಡುತ್ತಿದ್ದರು. 1909 ರಲ್ಲಿ ದೇವಾಲಯದಲ್ಲಿ ಅಗ್ನಿ ಪ್ರಮಾದ ಸಂಭವಿಸಿತು.

PC:sreenisreedharan


ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ದೇವಾಲಯವನ್ನು 1909-1910 ವರ್ಷದಲ್ಲಿ ಪುನರ್ ನಿರ್ಮಾಣ ಮಾಡಿದರು ಎಂದು ಹೇಳಲಾಗಿದೆ. ಅಂದು ಶಿಲಾ ವಿಗ್ರಹಕ್ಕೆ ಬದಲಿಗೆ, ಪಂಚಲೋಹದಲ್ಲಿ ತಯಾರು ಮಾಡಿರುವ ಅಯ್ಯಪ್ಪ ವಿಗ್ರಹವನ್ನು ಪ್ರತಿಷ್ಟಾಪಿದರು. ಅಂದಿನಿಂದ ಪಂಚಲೋಹ ವಿಗ್ರಹಕ್ಕೆ ಪೂಜೆಯನ್ನು ಮಾಡುವುದು ಗಮನಾರ್ಹ.

PC:gallery.oneindia.com

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

1935ರ ನಂತರ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಮಕರ ಜ್ಯೋತಿಯನ್ನು ದರ್ಶನವೇ ಅಲ್ಲದೇ ಮಂಡಲ ಪೂಜೆಗೂ ಕೂಡ ಭಕ್ತರು ಪಾಲ್ಗೊಳ್ಳುತ್ತಿದ್ದರು.

PC:Challiyan

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ಚಾಲಕ್ಕಾಯಮಾರ್ಗ, ವಡಿಪೆರಿಯಾರ್ ಮಾರ್ಗ ಏರ್ಪಾಟು ಆದ್ದರಿಂದ ಶಬರಿಮಲೈ ಯಾತ್ರೆಗೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಕೇವಲ ಮಕರ ಜ್ಯೋತಿ ಸಮಯದಲ್ಲಿಯೇ ಅಲ್ಲದೇ ಮಳಿಯಾಳಿಗರ ವಿಶೇಷವಾದ ಹಬ್ಬಗಳ ಸಮಯದಲ್ಲಿಯೂ ಕೂಡ ದೇವಾಲಯದ ಪ್ರವೇಶವನ್ನು ನೀಡಬೇಕು ಎಂದು 1945 ರಲ್ಲಿ ದೇವಾಲಯದ ಬೋರ್ಡ್ ತೀರ್ಮಾನಿಸಿದರು.

PC:ragesh ev


ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

1950ರಲ್ಲಿ ಪರಶುರಾಮ ನಿರ್ಮಾಣ ಮಾಡಿದ ದೇವಾಲಯವು ಮೂರು ಬಾರಿ ಅಗ್ನಿಗೆ ಆಹುತಿಯಾಯಿತು. 1951 ರಲ್ಲಿ ಪಂಚಲೋಹ ವಿಗ್ರಹವನ್ನು ಚೆಂಗನೂರಿನಿಂದ ತರಿಸಿ ವೇದ ಪಂಡಿತರು ಮಂತ್ರ ಉಚ್ಛಾರಣೆಯ ಮಧ್ಯದಲ್ಲಿ ಪ್ರತಿಷ್ಟಾಪಿಸಿದರು. ಅಂದಿನವರೆವಿಗೂ ಕೇರಳಿ ವಿಗ್ರಹವಾಗಿ ಕೀರ್ತಿಯನ್ನು ಪಡೆದ ಅಯ್ಯಪ್ಪ ಸ್ವಾಮಿ ಭಾರತೀಕೇರಳಿ ವಿಗ್ರಹವಾಗಿ ಕೀರ್ತಿಯನ್ನು ಹೊಂದಿತು.

PC:Jaya jaya


ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ಬೆಂಗಳೂರಿನ ಒಬ್ಬ ಭಕ್ತನು ಅಯ್ಯಪ್ಪ ಸ್ವಾಮಿ ದೇವಾಲಯದ ಗರ್ಭಗುಡಿಯ ಮೇಲೆ ಅದರ ಸುತ್ತ ಬಂಗಾರದ ಶೀಟ್ ಅನ್ನು ಹಾಕಿಸದರಂತೆ. ಇದರಿಂದಾಗಿ ಶಬರಿಮಲೈನ ಅಯ್ಯಪ್ಪ ದೇವಾಲಯವು ಸ್ವರ್ಣ ದೇವಾಲಯವಾಗಿ ಮಾರ್ಪಟಾಯಿತು.

PC:: AnjanaMenon

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

1984 ಕ್ಕಿಂತ ಪೂರ್ವದಲ್ಲಿ ಶಬರಿಮಲೈಗೆ ತೆರಳಲು ಭಕ್ತರು ಪರಶುರಾಮರಿಂದ ನಿರ್ಮಾಣವಾದ ಕಲ್ಲಿನ ಮೆಟ್ಟಿಲುಗಳನ್ನು ಬಳಸುತ್ತಿದ್ದರು. ಮೆಟ್ಟಿಲುಗಳನ್ನು ಹತ್ತುವ ಸಮಯದಲ್ಲಿ ಪ್ರತಿ ಮೆಟ್ಟಿಲಿನ ಮೇಲೆ ಒಂದೊಂದು ಕೊಬ್ಬರಿಕಾಯಿಯನ್ನು ಹೊಡೆಯುತ್ತಿದ್ದರು. ಅದರಿಂದ ಭಕ್ತರು ಮೆಟ್ಟಿಲುಗಳನ್ನು ಏರುವುದಕ್ಕೆ ಕಷ್ಟವಾಗುತ್ತಿತ್ತು.

PC:Aruna

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ಇಂದಿಗೂ ಅಯ್ಯಪ್ಪ ಸ್ವಾಮಿಯ ಆಭರಣಗಳನ್ನು ಭದ್ರವಾಗಿ ಇಟ್ಟಿದ್ದಾರೆ. ಅಲ್ಲಿನಿಂದ ಪ್ರತಿ ವರ್ಷ ಮಕರಸಂಕ್ರಾತಿಯ ದಿನದಂದು ಮೂರು ಪೆಟ್ಟಿಗೆಗಳಲ್ಲಿ ಭದ್ರವಾಗಿಟ್ಟ ಆ ಆಭರಣಗಳನ್ನು 11 ಮಂದಿ ಮೂರು ದಿನಗಳ ಕಾಲ ಹೊತ್ತುಕೊಂಡು ಬಂದು 84 ಕಿ.ಮೀ ದೂರದಲ್ಲಿರುವ ಶಬರಿಮಲೈಗೆ ಸೇರುತ್ತಾರೆ.

PC:telugu native planet

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ತೆಗೆದುಕೊಂಡ ಬಂದ ಆಭರಣಗಳನ್ನು ಸ್ವಾಮಿಗೆ ಅಲಂಕಾರ ಮಾಡಿ, ಕರ್ಪೂರ ಹಾರತಿ ಬೆಳಗಿದ ನಂತರ ದೇವಾಲಯದ ಪೂರ್ವ ದಿಕ್ಕಿನಲ್ಲಿ ಉದಯಿಸುವ ಮಕರ ಜ್ಯೋತಿಯ ದರ್ಶನವನ್ನು ಭಕ್ತರು ಕಣ್ಣುತುಂಬಿಕೊಳ್ಳುತ್ತಾರೆ.

PC:gallery.oneindia.com

ಸ್ವಾಮಿಯೇ ಶರಣಮಯ್ಯಪ್ಪ!

ಸ್ವಾಮಿಯೇ ಶರಣಮಯ್ಯಪ್ಪ!

ಆಭರಣದ ಹಿಂದೆ ಪಂಢಲ ರಾಜರ ವಂಶಸ್ಥರಲ್ಲಿ ಒಬ್ಬರು (ದೊಡ್ಡವರು) ಕತ್ತಿ ಹಿಡಿದುಕೊಂಡು ನೀಲಿಮಲದವರೆವಿಗೂ ಬಂದು ಅಲ್ಲಿ ವಿಶ್ರಮಿಸುತ್ತಾರೆ. ನಂತರ ಜನವರಿ 20ರಲ್ಲಿ ಆಭರಣಗಳ ಹಿಂದೆ ಪಂದಳಂನವರೆವಿಗೆ ತೆರಳಿ ಅವುಗಳನ್ನು ನೀಡಿ ಬರುತ್ತಾರೆ.

PC:: sreenisreedharan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X