ದಕ್ಷಿಣ ಭಾರತದಲ್ಲಿ ಗಿರಿಧಾಮಗಳಿರುವುದು ಹೊಸ ವಿಷಯವೇನಲ್ಲ. ಸುಂದರ ಪಶ್ಚಿಮ ಘಟ್ಟಗಳು, ನೀಲಗಿರಿಗಳು, ಪೂರ್ವ ಘಟ್ಟಗಳು ಮತ್ತು ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಈ ಪರ್ವತ ಶ್ರೇಣಿಗಳ ಉಪಸ್ಥಿತಿಯಿಂದಾಗಿ, ದೈವಲೋಕವನ್ನೇ ದಕ್ಷಿಣ ಭಾರತದಲ್ಲಿ ಈ ಗಿರಿಧಾಮಗಳು ಸೃಷ್ಟಿಸಿದಂತಿವೆ. ಈ ಶ್ರೇಣಿಗಳ ಉಪಸ್ಥಿತಿಯು ನಮ್ಮಲ್ಲಿ ಒಂದು ಸಂತೋಷವನ್ನುಂಟು ಮಾಡುತ್ತದೆ.
ಇವುಗಳಲ್ಲಿ ಹೆಚ್ಚಿನ ಗಿರಿಧಾಮಗಳು ನಗರದಿಂದ ಅನುಕೂಲಕರವಾದ ದೂರದಲ್ಲಿರುವುದರಿಂದ ರಜಾ ದಿನಗಳಲ್ಲಿ ಭೇಟಿ ಕೊಡಬಹುದಾದ ಪ್ರಸಿದ್ದ ತಾಣಗಳೆನಿಸಿವೆ. ಕೂರ್ಗ್, ಊಟಿ, ವಯನಾಡ್, ಮುನ್ನಾರ್, ಕೊಡೈಕನಾಲ್ ಮೊದಲಾದವುಗಳು ಜನಪ್ರಿಯವಾಗಿವೆ. ದಕ್ಷಿಣ ಭಾರತದ ಸುಂದರವಾದ ಗಿರಿಧಾಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಓದಿ.
ತೆನ್ಮಾಲ
ಇದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿದೆ. ಇದು ಭಾರತದ ಮೊದಲ ಯೋಜಿತ ಪರಿಸರ ಪ್ರವಾಸೋದ್ಯಮ ತಾಣವೆಂದು ಗುರುತಿಸಲ್ಪಟ್ಟಿದೆ.
ಬೆಟ್ಟದ ಶ್ರೇಣಿಗಳು ನಿಜವಾಗಿಯೂ ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗವಾಗಿದೆ, ಇದು ಜಲಪಾತಗಳು, ನದಿಗಳು, ಅಣೆಕಟ್ಟುಗಳು ಮತ್ತು ಇನ್ನಿತರ ಸುಂದರ ತಾಣಗಳನ್ನು ತುಂಬಿದೆ. ಇಲ್ಲಿ ಜಿಂಕೆ ಉದ್ಯಾನವನ, ಹಲವಾರು ಬಗೆಯ ಸಾಹಸ ಕ್ರೀಡೆಗಳ ಕೇಂದ್ರಗಳು ಮತ್ತು ಕೆಲವು ಸುಂದರವಾದ ಪ್ರದೇಶಗಳಲ್ಲಿ ಹಾದು ಹೋಗುವ ರೈಲ್ವೆ ಮಾರ್ಗಗಳನ್ನು ಕಾಣಬಹುದು.
ಕುದುರೆಮುಖ
ಕರ್ನಾಟಕದ ರಮಣೀಯ ಮತ್ತು ರಮಣೀಯಮಯವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಕುದುರೆಮುಖವು ತನ್ನ ಶ್ರೀಮಂತ ಜೈವಿಕ ವಿಹಾರಕ್ಕೆ ಹೆಸರುವಾಸಿಯಾಗಿದೆ. ಕುದುರೆಮುಖದ ಶಿಖರವು ಕರ್ನಾಟಕ ರಾಜ್ಯದಲ್ಲಿ ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡಾನ್ ಗಿರಿ ನಂತರ 3 ನೇ ಅತೀ ಎತ್ತರದ ಶಿಖರವಾಗಿದೆ.
ಕುದುರೆಮುಖ ಎಂದರೆ ಕುದುರೆಯ ಮುಖ ಎಂದರ್ಥ; ಶಿಖರವು ಕುದುರೆಯ ಮುಖದ ಹೋಲಿಕೆಯನ್ನು ಹೊಂದಿರುವ ಕಾರಣ ಈ ಸ್ಥಳಕ್ಕೆ ಈ ಹೆಸರು ಬಂದಿದೆ. ಈ ಗಿರಿಧಾಮವು ಅತ್ಯಂತ ಜನಪ್ರಿಯ ಟ್ರೆಕ್ಕಿಂಗ್ ತಾಣವಾಗಿದೆ ಮತ್ತು ಹಲವಾರು ಜಲಪಾತಗಳಿಗೆ ನೆಲೆಯಾಗಿದೆ.
ಕೂನೂರು
ಕೂನೂರು ತಮಿಳುನಾಡಿನ ಎರಡನೇ ದೊಡ್ಡ ಗಿರಿಧಾಮವೆಂದು ಗುರುತಿಸಿಕೊಂಡಿದೆ. ಈ ಜಾಗವು ಹಸಿರಿನಿಂದ ಕೂಡಿದ್ದು ವರ್ಷವಿಡೀ ಅತ್ಯುತ್ತಮ ಹವಾಮಾನವನ್ನು ಹೊಂದಿರುತ್ತದೆ.
ಊಟಿಯ ಹತ್ತಿರದಲ್ಲಿರುವ ಈ ಗಿರಿಧಾಮವು ಜನರ ಸದ್ದು ಗದ್ದಲಗಳಿಂದ ದೂರದಲ್ಲಿದೆ ಮತ್ತು ಈ ಪ್ರದೇಶವು ಅತ್ಯಂತ ಪ್ರಶಾಂತವಾದ ಮತ್ತು ಶಾಂತಿಯುತ ಪರಿಸರವನ್ನು ಹೊಂದಿದೆ, ಆದುದರಿಂದ ಇದು ಗುಡ್ಡಗಾಡು ಪ್ರದೇಶದ ಮೋಡಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಅರಕು ಕಣಿವೆ
ಆಂಧ್ರಪ್ರದೇಶದ ಪೂರ್ವ ಘಟ್ಟಗಳ ಮಧ್ಯೆ ಇರುವ ಅರಕು ಕಣಿವೆ ಹಲವಾರು ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ನೆಲೆಯಾಗಿದೆ. ಈ ಕಣಿವೆಯು ಅನಂತಗಿರಿ ಮತ್ತು ಸನ್ಕರಿಮೆಟ್ಟಾ ಮೀಸಲು ಅರಣ್ಯಗಳನ್ನು ಒಳಗೊಂಡಿದೆ, ಇದು ಅತ್ಯಂತ ಶ್ರೀಮಂತ ಜೀವವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ ಮತ್ತು ಇಲ್ಲಿ ಬಾಕ್ಸೈಟ್ ಗಣಿಗಾರಿಕೆ ಮಾಡಲಾಗುತ್ತದೆ.
ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರವಿರುವ ಗಲಿಕೊಂಡ ಬೆಟ್ಟವನ್ನು ಈ ಪ್ರದೇಶದ ಅತ್ಯುನ್ನತ ಶಿಖರವೆಂದು ಪರಿಗಣಿಸಲಾಗಿದೆ.
ಸಕಲೇಶಪುರ
ಬೆಂಗಳೂರಿನ ಜನರು ವಾರಾಂತ್ಯದಲ್ಲಿ ವಿಶ್ರಾಂತಿ ಪಡೆಯಲು ಹೋಗಬಹುದಾದ ಸುಂದರ ತಾಣವಾಗಿದೆ. ಸಕಲೇಶಪುರವು ವಿಶ್ವದ 18 ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿದೆ ಮತ್ತು ವಿವಿಧ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ.
ಈ ಗುಡ್ಡಗಾಡು ಹಿನ್ನಲೆಯಲ್ಲಿನ ಕಣಿವೆಗಳು ಮತ್ತು ಹುಲ್ಲುಗಾವಲುಗಳನ್ನು ಅದರ ಸುತ್ತಲಿನ ಪ್ರದೇಶದಲ್ಲಿ ಒಂದು ಸರಳವಾದ ನಡಿಗೆಗೆ ಹೋಗಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ, ಅದರ ಶಾಂತಿಯುತ ವಾತಾವರಣ ಮತ್ತು ಅತಿವಾಸ್ತವಿಕ ವಾತಾವರಣದಿಂದಾಗಿ, ಅದರ ಭೇಟಿಗಾರರನ್ನು ನಿರಾಸೆಗೊಳಿಸುವುದಿಲ್ಲ.