ತಡಿಯಾಂಡಮೋಲ್ ಕರ್ನಾಟಕದ ಎರಡನೇ ಅತೀ ಎತ್ತರದ ಶಿಖರ. ತಡಿಯಾಂಡಮೋಲ್, ಪಶ್ಚಿಮ ಘಟ್ಟದಲ್ಲಿರುವ ಈ ಶಿಖರ ಕೊಡಗು ಜಿಲ್ಲೆಯ ಕಕ್ಕಬ್ಬೆ ಪಟ್ಟಣದ ಸನಿಹದಲ್ಲಿದೆ. ಇದು ಕರ್ನಾಟಕ - ಕೇರಳ ಗಡಿಯಲ್ಲಿದ್ದು, ಸಮುದ್ರಮಟ್ಟದಿಂದ 1748 ಮೀಟರ್ ಎತ್ತರದಲ್ಲಿ ಭವ್ಯವಾಗಿ ನಿಂತಿದೆ. ಶಿಖರಗಾಮಿಗಳು ಮತ್ತು ಆರೋಹಿಗಳಿಗೆ ಈ ಶಿಖರ ಕಠಿಣ ಸವಾಲಾಗಿದೆ - ಚಾರಣಪ್ರಿಯರಿಗೂ ಸಹ ಇದೊಂದು ಸವಾಲೇ!
ನೀವು ಇಲ್ಲಿಗೆ ಭೇಟಿ ನೀಡಲೇಬೇಕು - ಏಕೆ?
ತಡಿಯಾಂಡಮೋಲ್ ಮಲೆಯಾಳಂ ಮೂಲದ ಪದವಾಗಿದ್ದು, ಇದರ ಅರ್ಥ “ಬೃಹತ್ ಪರ್ವತ “ ಎಂದು. ಚಾರಣದ ಬಗ್ಗೆ ತೀರಾ ಉತ್ಸುಕತೆ ಇಲ್ಲದಿದ್ದರೆ ಅರ್ಧದಷ್ಟು ದೂರವನ್ನು ನಾಲ್ಕು ಚಕ್ರದ ವಾಹನದಲ್ಲಿ ಕ್ರಮಿಸಬಹುದು.ಮುಂದಿನ ದಾರಿ ದುರ್ಗಮವಾಗಿದ್ದರೂ, ಶಿಖರದ ಮೇಲಿನ ನಯನ ಮನೋಹರ ದೃಶ್ಯ, ನಾವು ಪಟ್ಟ ಶ್ರಮ ಸಾರ್ಥಕ ಎನಿಸುವಂತೆ ಮಾಡುತ್ತದೆ.
ಶಿಖರದ ಕೆಳಗಿರುವ ನಲಕ್ನಾಡು ಆರಮನೆಗೆ ಚಾರಿತ್ರಿಕ ಮಹತ್ವವಿದೆ. ತನ್ನ ಸೈನ್ಯಕ್ಕೆ ಸುರಕ್ಷಿತ ತಂಗುದಾಣವಾಗಿ ಇದನ್ನು ಮಹಾರಾಜಾ ದೊಡ್ಡ ವೀರರಾಜೇಂದ್ರರು 1792ರಲ್ಲಿ ಕಟ್ಟಿಸಿದರು. ಶಿಖರಾಗ್ರ ತಲುಪುವ ಕೆಲವೇ ಕಿಲೋಮೀಟರ್ಗಳ ಮೊದಲು ಚಾರಣಿಗರು ಪಡಿ ಇಗ್ಗುತ್ತಪ್ಪ ದೇಗುಲದಲ್ಲಿ ವಿಶ್ರಮಿಸಬಹುದು. ಈ ದೇಗುಲ ಇಲ್ಲಿನ ಸ್ಥಳೀಯರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಶಿಖರದ ಇಳಿಜಾರಿನಲ್ಲಿರುವ ಶೋಲಾ ಅರಣ್ಯವು ನಿರ್ಮಲ ಮತ್ತು ನಿರ್ಭಿಡವಾಗಿದೆ.
ತಡಿಯಾಂಡಮೋಲ್ ಗೆ ಕರ್ನಾಟಕ - ಕೇರಳಗಳೆರಡೂ ಕಡೆಯಿಂದಲೂ ತಲುಪಬಹುದಾಗಿದೆ. ಸಮೀಪದ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ 200 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರು. ಬೆಂಗಳೂರು -ತಡಿಯಾಂಡಮೋಲ್ ಐದು ಗಂಟೆಗಳ ಪ್ರಯಾಣಕ್ಕೆ ಬಾಡಿಗೆ ಕಾರುಗಳು ಲಭ್ಯ.