ಸ್ವಾಮಿಮಲೈ ದಕ್ಷಿಣ ಭಾರತದ ಒಂದು ರಾಜ್ಯವಾದ ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ನ ಬಳಿಯಲ್ಲಿರುವ ನಗರವಾಗಿದೆ. ಇದರ ಆಕ್ಷರಶಃ ಅನುವಾದ ದೇವರ ಬೆಟ್ಟ ಎಂದುದಾಗಿದೆ ಹಾಗೂ ದೇವರ ಪ್ರಭಾವವನ್ನು ಇಲ್ಲಿನ ಸುತ್ತಮುತ್ತಲಿನ ಪರಿಸರದ ಮೇಲೆ ಸ್ಪಷ್ಟವಾಗಿ ಕಾಣಬಹುದಾಗಿದೆ. ಮುರುಗನ(ಸುಬ್ರಹ್ಮಣ್ಯ ದೇವರು) ಪ್ರಸಿದ್ಧ ಆರು ಯುದ್ಧಭೂಮಿಗಳ ಪೈಕಿ ಒಂದು ’ಪಡಾಯಿ ವೀಡುಗಲ್’ ಇಲ್ಲಿದೆ. ಇಡಿ ರಾಜ್ಯದಲಿಯೇ ಏಕಮಾತ್ರ ಕಂಚಿನಿಂದ ನಾಣ್ಯಗಳನ್ನು ತಯಾರಿಸುವ ಕಲೆ ಕಲಿಸುವ ಕಲಾಶಾಲೆ ಇಲ್ಲಿದೆ. ಆರ್ಥಿಕತೆಯ ಬೆಳವಣಿಗೆಗೆ ಈ ಪ್ರದೇಶವು ಕೃಷಿಯನ್ನು ಅವಲಂಬಿಸಿದ್ದು, ಇಲ್ಲಿ ಕಬ್ಬು ಮತ್ತು ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಹಿಂದೆ ಸ್ವಾಮಿಮಲೈ ಅನ್ನು ’ತಿರುವೆರಕಮ್’ ಎಂದು ಕರೆಯಲಾಗುತ್ತಿತ್ತು.
ಐತಿಹಾಸಿಕ ಹಿನ್ನೆಲೆ
ಕಾವೇರಿ ನದಿಯ ಉಪನದಿಯ ದಡದಲ್ಲಿ ಇರುವ ಸ್ವಾಮಿಮಲೈ ಕಾರ್ತಿಕೇಯ ದೇವರ (ಮುರುಗನ್ ದೇವರು ಎಂದೂ ಕರೆಯಲಾಗುತ್ತದೆ) ಆರು ದೇವಸ್ಥಾನಗಳಲ್ಲಿ ನಾಲ್ಕನೆಯದನ್ನು (ಪಾಡಲ್ ಪೆಟ್ರಾ ಸ್ಥಾಲಂಗಲ್) ಹೊಂದಿದೆ. ಇಲ್ಲಿನ ಸ್ಥಳದ ಪ್ರತೀತಿಯ ಪ್ರಕಾರ, ಈ ಸ್ಥಳದಲ್ಲಿ ಪವಿತ್ರವಾದ ಪ್ರಣವ ಮಂತ್ರದ 'ಓಂ' ನ ಅರ್ಥವನ್ನು ಕಾರ್ತಿಕೇಯನು ತನ್ನ ತಂದೆ ಶಿವನಿಗೆ ವಿವರಿಸಿದನು.
ದೇವಸ್ಥಾನ ಸಂಕೀರ್ಣದ ರಾಜ ಗೋಪುರಂ ದಲ್ಲಿ ಮುರುಗನ್ ದೇವರನ್ನು ಗುರು ಅಥವಾ ಶಿಕ್ಷಕ ಎಂಬುದಾಗಿ ಸೂಚಿಸಲಾಗಿದೆ ಮತ್ತು ಆತನಿಂದ ವಿದ್ಯೆಯನ್ನು ಜ್ಞಾನವನ್ನು ಸ್ವೀಕರಿಸುವ ಶಿವನನ್ನು ಶಿಷ್ಯ ಅಥವಾ ವಿದ್ಯಾರ್ಥಿ ಎಂಬುದಾಗಿ ತೋರಿಸಲಾಗಿದೆ. ಈ ಸನ್ನಿವೇಶದ ಕಾರಣದಿಂದ ಈ ಸ್ಥಳಕ್ಕೆ ಸ್ವಾಮಿಮಲೈ ಎಂಬ ಹೆಸರು ಬಂತು. ಇಲ್ಲಿನ ದೇವರನ್ನು ಸ್ವಾಮಿನಾಥಂ ಎಂದು ಕರೆಯುತ್ತಾರೆ.
ಹಬ್ಬಗಳು ಮತ್ತು ಉತ್ಸವಗಳು
ಕುಂಭಕೋಣಂ ಗೆ ಸ್ವಾಮಿಮಲೈ ಸಮೀಪವಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಸ್ವಾಮಿಮಲೈ ನಲ್ಲಿ ಹಲವು ಪ್ರಮುಖ ಉತ್ಸವಗಳನ್ನು ಆಚರಿಸಲಾಗುತ್ತದೆ, ಇವುಗಳಲ್ಲಿ ಪ್ರಮುಖವಾದುವು ಎಪ್ರಿಲ್ ನಲ್ಲಿ ನಡೆಯುವ ರಥೋತ್ಸವ, ಮಾರ್ಚ್ ನಲ್ಲಿ ನಡೆಯುವ ಪಂಕುನಿ ಉತ್ತಿರಾಮ್ ಉತ್ಸವ. ಇಲ್ಲಿ ನಡೆಯುವ ಇತರೆ ಪ್ರಮುಖ ಉತ್ಸವಗಳೆಂದರೆ ವಿಸಾಕಂ ಉತ್ಸವ (ಮೇ ತಿಂಗಳಿನಲ್ಲಿ) ಹಾಗೂ ಅಕ್ಟೋಬರ್ ನಲ್ಲಿ ನಡೆಯುವ ಸ್ಕಂದ ಶಾಸ್ತಿ ಉತ್ಸವ.