ಸೌರಾಷ್ಟ್ರ ವ್ಯಾಪ್ತಿಯಲ್ಲಿರುವ ಈ ಪುರಾತನ ಮ್ಯೂಸಿಯಂ ಗುಜರಾತ್ ನಲ್ಲಿ ನೋಡಲೇಬೇಕಾದ ಪ್ರವಾಸಿ ತಾಣ. ಇದು ಹಸಿರು ಪರಿಸರವನ್ನು ಹೊಂದಿದೆ ಮತ್ತು ಕಲಾಕೃತಿ ಹಾಗೂ ವರ್ಣಚಿತ್ರಗಳ ಸಂಗ್ರಹಗಳು ಇಲ್ಲಿವೆ. ಜುಬ್ಲಿ ಗಾರ್ಡನ್ ನಲ್ಲಿರುವ ಕ್ವೀನ್ ವಿಕ್ಟೋರಿಯಾ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಕಟ್ಟಡದಲ್ಲಿರುವ ಇದಕ್ಕೆ 1881ರಿಂದ 1889ರ...
ಮಹಾತ್ಮ ಗಾಂಧಿ ಅವರ ತಂದೆ, ಕಾಬಾ ಗಾಂಧಿ ಎಂದು ಕರೆಯಲ್ಪಡುತ್ತಿದ್ದ ಕರಮಚಂದ್ ಗಾಂಧಿ ಅವರು ರಾಜ್ ಕೋಟ್ ನ ಘೀ ಕಾಂತ ರಸ್ತೆಯಲ್ಲಿರುವ ಈ ಮನೆಯಲ್ಲಿ ವಾಸಿಸುತ್ತಿದ್ದರು. ಮಹಾತ್ಮ ಗಾಂಧಿ ಅವರು ತನ್ನ ಬಾಲ್ಯದ ದಿನಗಳನ್ನು ಕಳೆದಿರುವುದು ಇದೇ ಮನೆಯಲ್ಲಿ. ಗಾಂಧಿ ಅವರ ಜೀವನದ ಬಗ್ಗೆ ಈಗ ಮನೆಯನ್ನು ಮ್ಯೂಸಿಯಂ ಆಗಿ...
ಸಾಹಿತ್ಯ ಮತ್ತು ಓದುವುದರಲ್ಲಿ ಆಸಕ್ತಿಯಿರುವವರು ಇಲ್ಲಿಗೆ ಭೇಟಿ ನೀಡಿದರೆ ಅವರಿಗೆ ಅದೊಂದು ಹಬ್ಬ. ರಾಜ್ ಕೋಟ್ ನ ಲಾಂಗ್ ಲೈಬ್ರರಿಯಲ್ಲಿ ಅತ್ಯಂತ ಅಪರೂಪದ ಪುಸ್ತಕಗಳಿವೆ. ಜುಬ್ಲಿ ಗಾರ್ಡನ್ ನಲ್ಲಿರುವ ಪುಸ್ತಕ ಭಂಡಾರದಲ್ಲಿ ಕಥಿವಾಡಿ ಮತ್ತು ಗುಜರಾತಿ ಸಾಹಿತ್ಯಕ್ಕೆ ಸಂಬಂಧಿಸಿದ ತುಂಬಾ ಹಳೆಯ ಪುಸ್ತಕಗಳಿವೆ. ವಸಾಹತುಶಾಹಿ...
ದೇಶದಲ್ಲಿರುವ ಇತರ ಗುಹೆಗಳಂತೆ ಇದು ಕೂಡ ವಾಸ್ತುಶಿಲ್ಪದ ಅದ್ಭುತವಾಗಿದೆ. ರಾಜ್ ಕೋಟ್ ನ ಗೊಂಡಾಲ್ ಸಮೀಪ ಪ್ರಸಕ್ತ ಮೂರು ಗುಹೆಗಳಿದ್ದು, ಮೊದಲನೇಯದು ಸ್ತೂಪವನ್ನು ಒಳಗೊಂಡಿರುವ `ಚೈತ್ಯ'. ಸುಣ್ಣದ ಕಲ್ಲಿನ ಕೆತ್ತನೆಯಿರುವ ಈ ಗುಹೆಗಳು ಸುಮಾರು ಕ್ರಿ.ಶ. 4 ಮತ್ತು 5ನೇ ಶತಮಾನದೆಂದು ಹೇಳಲಾಗುತ್ತಿದೆ.
ಈ ಮಾರುಕಟ್ಟೆಗೆ ಭೇಟಿ ನೀಡುವ ಪ್ರತಿಯೊಬ್ಬ ಮಹಿಳೆಯೂ ಇದನ್ನು ಪ್ರೀತಿಸಲು ಆರಂಭಿಸುತ್ತಾಳೆ. ಹಳೆ ರಾಜ್ ಕೋಟ್ ನಲ್ಲಿರುವ ಈ ಬಜಾರ್ ನಲ್ಲಿ ಬೆಳ್ಳಿಯ ಆಭರಣ, ಗಾಜಿನ ಬಲೆ, ಆಕರ್ಷಕ ಬಟ್ಟೆ, ಚಪ್ಪಲಿ, ಕೈಗಡಿಯಾರ, ಬಂಗಾರದ ಆಭರಣ ಮತ್ತು ಇತರ ವಸ್ತುಗಳನ್ನು ಮಾರುವ ಬಣ್ಣಬಣ್ಣದ ಅಂಗಡಿಗಳು ಖಂಡಿತವಾಗಿಯೂ ಮಹಿಳೆಯರನ್ನು...
ರಾಜ್ ಕೋಟ್ ಗೆ ಭೇಟಿ ನೀಡುವ ಪ್ರವಾಸಿಗರಿಗೆ ಡಾ. ಯಾಗ್ನಿಕ್ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮ ಭೇಟಿಗೆ ಯೋಗ್ಯ ತಾಣ. ಹಚ್ಚ ಹಸಿರಿನಿಂದ ಸುತ್ತವರಿದಿರುವ ಆಶ್ರಮದಲ್ಲಿ ಸಾರ್ವಜನಿಕ ಗ್ರಂಥಾಲಯ, ಒಂದು ಆಯುರ್ವೇದಿಕ್ ಕೇಂದ್ರ ಮತ್ತು ಸ್ವಾಮಿ ರಾಮಕೃಷ್ಣ ಪರಮಹಂಸರ ಜೀವನ ಸಂಬಂಧಿ ಪ್ರದರ್ಶನ ಮಳಿಗೆಯಿದೆ.
ರಾಜ್ ಕೋಟ್ ನ ಹೃದಯ ಭಾಗದಲ್ಲಿರುವ ರಾಜ್ ಕುಮಾರ್ ಕಾಲೇಜು ದೇಶದ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಯುವ ಕಥಿವಾರ ರಾಣಿಗೆ ಶಿಕ್ಷಣ ನೀಡಿ ಆಕೆಯನ್ನು ಆಡಳಿತ ನಡೆಸಲು ಸಮರ್ಥವನ್ನಾಗಿ ಮಾಡಲು ಹುಟ್ಟಿಕೊಂಡ ಈ ಶಿಕ್ಷಣ ಸಂಸ್ಥೆಯು ಬ್ರಿಟಿಷರ ಆಡಳಿತದಲ್ಲಿ 1868ರಲ್ಲಿ ನಿರ್ಮಿಸಲಾಯಿತು ಮತ್ತು 1870ರಲ್ಲಿ ಇದನ್ನು...
ರಾಜ್ ಕೋಟ್ ನಿಂದ 53 ಕಿ.ಮೀ. ದೂರದಲ್ಲಿರುವ ವಿರ್ಪುರ ನಗರವು ಭಗವಂತ ರಾಮನ ಪರಮ ಭಕ್ತರಾಗಿದ್ದ ಸನ್ಯಾಸಿ ಜಲರಾಮ ಬಾಪ ಅವರ ಹುಟ್ಟೂರು. ಅವರು ಜೀವನ ಸಾಗಿಸಿದ ಮನೆಯನ್ನು ಈಗ ದೇವಸ್ಥಾನವನ್ನಾಗಿ ಮಾಡಲಾಗಿದ್ದು, ಇದರಲ್ಲಿ ಜಲರಾಮ್ ಮಂದಿರವೂ ಇದೆ. ಈ ಮಂದಿರದ ವಿಶೇಷವೆಂದರೆ ಇಲ್ಲಿಯವರೆಗೆ ಭಕ್ತರಿಂದ ಒಂದು ಪೈಸೆಯನ್ನು ಸ್ವೀಕರಿಸಿದ...
ತನ್ಕರ್ ಹಲವಾರು ಕಾರಣಗಳಿವೆ ಪ್ರಸಿದ್ಧಿ ಪಡೆದಿರುವಂತಹ ಸ್ಥಳ. ಆರ್ಯ ಸಮಾಜದ ಸ್ಥಾಪಕ ಮತ್ತು ಸಮಾಜಸುಧಾರಕ ಸ್ವಾಮಿ ದಯಾನಂದ ಸರಸ್ವತಿ ಅವರ ಹುಟ್ಟೂರು, ಹತ್ತಿ ತಯಾರಿ ಮತ್ತು ಬೆಳ್ಳಿ ಆಭರಣಗಳಿಗೆ ಇದು ಜನಪ್ರಿಯ. ಈ ಸಣ್ಣ ನಗರವು ರಾಜ್ ಕೋಟ್ ನಿಂದ 40 ಕಿ.ಮೀ. ದೂರದಲ್ಲಿದೆ.
ರಾಜ್ ಕೋಟ್ ನಲ್ಲಿರುವ ಈ ಅಮೋಘ ಅಭಯಾರಣ್ಯಕ್ಕೆ ವನ್ಯಜೀವಿ ಪ್ರೇಮಿಗಳು ಒಮ್ಮೆ ಭೇಟಿ ನೀಡಿದರೆ ಸಾಹಸದ ಹೆಸರಿನಲ್ಲೇ ಇದಕ್ಕಿಂತ ಹೆಚ್ಚಿನದನ್ನು ಕೇಳಲಿಕ್ಕಿಲ್ಲ. ಸುತ್ತಲೂ ಹಬ್ಬಿರುವ ಹಚ್ಚ ಹಸಿರು, ಅಪರೂಪದ ಹಾಗೂ ಆಸಕ್ತಿದಾಯಕ ವನ್ಯಜೀವಿ ಪ್ರಾಣಿಗಳು ಮತ್ತು ಬಣ್ಣಬಣ್ಣದ ಪಕ್ಷಿಗಳಿಂದ ಈ ಅಭಯಾರಣ್ಯವು ನಗರದ ಜನಪ್ರಿಯ ಪ್ರವಾಸಿ...
ಸ್ವಾತಂತ್ರ್ಯ ಭಾರತಕ್ಕೆ ಮೊದಲು ಬ್ರಿಟಿಷರ ಆಳ್ವಿಕೆಗೆ ಒಳಪಡದ ಭಾರತದ ಕೆಲವು ರಾಜ್ಯಗಳಲ್ಲಿ ಒಂದಾಗಿರುವ ಸೌರಾಷ್ಟ್ರದಲ್ಲಿ ಬಜಾರ ಇದೆ. ಬಜಾನ ರಾಜ್ ಕೋಟ್ ನ ಜನಪ್ರಿಯ ಪ್ರವಾಸಿ ಕೇಂದ್ರ ಮತ್ತು ಕಛ್ ನಲ್ಲಿರುವ ಲಿಟ್ಲ್ ರನ್ ವನ್ಯಜೀವಿ ಅಭಯಾರಣ್ಯದಲ್ಲಿ ನಡೆಯುವ ರಾಯಲ್ ಸಫಾರಿ ಕ್ಯಾಂಪ್ ಗೆ ಇದು ಜನಪ್ರಿಯ.
ರಾಷ್ಟ್ರೀಯಶಾಲಾವು ರಾಜ್ ಕೋಟ್ ನ ಆಸಕ್ತಿದಾಯಕ ಪ್ರವಾಸಿ ತಾಣ. 1921ರಲ್ಲಿ ಮಹಾತ್ಮ ಗಾಂಧಿ ಅವರಿಂದ ಆರಂಭಿಸಲ್ಪಟ್ಟ ಈ ಶಾಲೆಯು ಬ್ರಿಟಿಷ್ ಸರ್ಕಾರದ ವಿರುದ್ಧ ಅಸಹಕಾರ ಚಳುವಳಿ ಮತ್ತು ಸ್ವದೇಶಿ ವಸ್ತುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿತ್ತು. ಈಗ ರಾಷ್ಟ್ರೀಯಶಾಲಾವು ಕೈಚಾಲಿತ ಎಣ್ಣೆ ತೆಗೆಯುವ ಮತ್ತು ಹತ್ತಿ...
ಬಣ್ಣಬಣ್ಣದ ಮತ್ತು ಬ್ಲಾಕ್ ಮುದ್ರಿತ ಜವಳಿಗೆ ಹೆಸರುವಾಸಿಯಾಗಿರುವ ಜುನಾಗಢ್ ಸಮೀಪವಿರುವ ಈ ಸಣ್ಣ ನಗರವು ಮಹಿಳೆಯರಿಗೆ ಮತ್ತು ಜವಳಿ ಪ್ರಿಯರಿಗೆ ಆಸಕ್ತಿಯ ತಾಣ. `ಮಿನಿ ದುಬೈ' ಎಂದು ಕರೆಯಲ್ಪಡುವ ಇಲ್ಲಿ ನೂಲುಹುರಿ ಬಣ್ಣ ಕೊಡುವ, ಪರದೆ ಮತ್ತು ಬ್ಲಾಕ್ ಮುದ್ರಣ ಕಾರ್ಯಾಗಾರಗಳಿಗೆ ಭೇಟಿ ನೀಡಿ ಬಟ್ಟೆಗಳಿಗೆ ಬಣ್ಣ ಕೊಡುವ ಮತ್ತು...
ಹಿಂಗೊಲ್ಗಢ್ ವನ್ಯಜೀವಿ ಪ್ರಿಯರಿಗೆ ಹೆಚ್ಚಿನ ಆಸಕ್ತಿ ಮೂಡಿಸುತ್ತದೆ. ಇದರೊಳಗೆ ಇರುವ ಆಕರ್ಷಕ ಪ್ರಕೃತಿ ಶಿಕ್ಷಣ ಅಭಯಾರಣ್ಯಕ್ಕೆ ಇದು ತುಂಬಾ ಹೆಸರುವಾಸಿ. ಹಲವಾರು ವಿಧದ ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ಹೊಂದಿರುವ ಈ ಅಭಯಾರಣ್ಯ. 1984ರಲ್ಲಿ ಇದನ್ನು ಪರಿಸರ ಶಿಕ್ಷಣ ಕೇಂದ್ರ ಎಂದು ಘೋಷಿಸಲಾಯಿತು ಮತ್ತು ಗುಜರಾತ್...