ಪ್ರಶಾಂತಿ ನಿಲಯ ಸತ್ಯ ಸಾಯಿ ಬಾಬಾರ ಪವಿತ್ರ ವಾಸಸ್ಥಾನ. ಪ್ರಶಾಂತಿ ನಿಲಯದ ನಿಜ ಅರ್ಥವೆಂದರೆ ಶಾಂತಿಯ ನಿವಾಸ ಎಂದು. ಹೀಗಾಗಿಯೇ ಪ್ರತಿವರ್ಷ ಸಾವಿರಾರು ಭಕ್ತರು ಈ ಆಶ್ರಮಕ್ಕೆ ಮನಸ್ಸು ಮತ್ತು ಆತ್ಮದ ಶಾಂತಿಯನ್ನು ಅರಸಿ ಬರುತ್ತಾರೆ. ಆಶ್ರಮವು ಉದ್ಘಾಟನೆಯಾಗಿದ್ದು 1950 ರಲ್ಲಿ.
ಆಶ್ರಮವು ಎಲ್ಲ ರೀತಿಯ ಆಧುನಿಕ...
ಅನಂತವಾದ ಪಾರಂಪರಿಕ ಸಂಗ್ರಹಾಲಯ ಸತ್ಯ ಸಾಯಿಬಾಬಾರ ನಿರಂತರವಾದ ಸಹಜ ದೈವತ್ವದ ಅನ್ವೇಷಣೆಗೆ ಅರ್ಪಿಸಲ್ಪಟ್ಟಿದೆ. ಇದು ಮೂರು ಮಾಳಿಗೆಗಳಲ್ಲಿ ಹರಡಿಕೊಂಡಿದ್ದು ಹಲವಾರು ಧರ್ಮಗಳ ಧಾರ್ಮಿಕ ಪುಸ್ತಕಗಳ ಶಿಕ್ಷಣದಿಂದ ರೂಪಿಸಲ್ಪಿಟ್ಟಿದೆ. ಇಲ್ಲಿ ಭಾರತದ ಪ್ರಸಿದ್ದ ದೇವಾಲಯಗಳ ಸಣ್ಣದಾದ ಪ್ರತಿರೂಪಗಳನ್ನು ಮೋಹಕವಾಗಿ...
ಸತ್ಯಭಾಮಾ ಮಂದಿರ ಸ್ಥಾಪನೆ ಮಾಡಿದ್ದು ಸತ್ಯ ಸಾಯಿಬಾಬಾ ಅವರ ಅಜ್ಜ ದಿವಂಗತ ಕೊಂಡಮರಾಜು. ಈ ದೇವಸ್ಥಾನ ಶ್ರೀಕೃಷ್ಣನ ಪತ್ನಿಯಾದ ಸತ್ಯಭಾಮೆಗೆ ಅರ್ಪಿತವಾಗಿದೆ. ದೇವಸ್ಥಾನವು ಶ್ರೀಕೃಷ್ಣನ ಹಲವಾರು ಚಿತ್ರಗಳನ್ನು ಹೊಂದಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಮೂರಡಿ ಎತ್ತರದ ಸತ್ಯಭಾಮಾ ಮೂರ್ತಿಯಿದೆ.
ಇದು ಸತ್ಯಭಾಮೆಯ ಏಕೈಕ...
ವಟ ವೃಕ್ಷ ಅಥವಾ ಧ್ಯಾನದ ಮರವೊಂದು ಆಲದ ಮರವಾಗಿದ್ದು ಆಶ್ರಮದೊಳಗೆ ಇದನ್ನು ಸಾಯಿಬಾಬಾರೇ ನೆಟ್ಟಿದ್ದು. ಆಶ್ರಮದೊಳಗೆ ಧ್ಯಾನ ಮಾಡುವವರಿಗೆ ಈ ಮರ ಉತ್ಸಾಹದ ಚಿಲುಮೆಯನ್ನೇ ತುಂಬುತ್ತದೆ. ಮರದ ತಳಭಾಗದಲ್ಲಿ ಭಾರವಾದ ಲೋಹದ ಹಲಗೆಯನ್ನು ಕೂರಿಸಲಾಗಿದೆ. ಇದು ಧ್ಯಾನದ ವಲಯವೆಂದೇ ಗುರುತಿಸಲ್ಪಡುತ್ತದೆ. ಈ ಪ್ರದೇಶದಲ್ಲಿ ಪುರುಷ ಮತ್ತು...
ಪೂರ್ಣಚಂದ್ರ ಆಡಿಟೋರಿಯಂ ಅನ್ನು 1973 ರಲ್ಲಿ ಕಟ್ಟಲಾಗಿದ್ದು, ಇದರ 60ಮೀ*40ಮೀ ವಿಸ್ತೀರ್ಣದಲ್ಲಿ ಸುಮಾರು 15,000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿದ್ದು ಖಂಬಗಳಿಲ್ಲದ ರಚನೆಯನ್ನು ಹೊಂದಿದೆ. ದೇವರ ರೂಪ ಹಾಗೂ ವಿವಿಧ ಅವತಾರಗಳ, ಎಲ್ಲ ಧರ್ಮಗಳ ಸಾಧು ಸಂತರ ಭಿತ್ತಿಚಿತ್ರಗಳನ್ನು ಇಲ್ಲಿ ಕಾಣಬಹುದು. ಆಡಿಟೋರಿಯಂ ಅನ್ನು...
ಆಂಜನೇಯ ಸ್ವಾಮಿ ದೇವಸ್ಥಾನ ಗುರುಪುರಂ ರಸ್ತೆಯಲ್ಲಿದ್ದು ಶಿವಲಿಂಗದಿಂದ ಗುರುತಿಸಲಾದ ದ್ವಾರದಿಂದ ಒಳಗೆ ಹೋಗಬಹುದು. ಸತ್ಯ ಸಾಯಿಬಾಬಾ ಈ ಶಿವಲಿಂಗವನ್ನು ಕಾಸಿಂ ನಿಂದ ತಂದಿದ್ದಾರೆ. ಈ ದೇವಸ್ಥಾನಕ್ಕೊಂದು ಪಾವಿತ್ರ್ಯತೆ ಇದ್ದು ಇಲ್ಲಿ ಪೂಜಿಸಲ್ಪಡುವ ದೇವರು ಗುಹೆಯಲ್ಲಿರುವಂತೆ ಅಚ್ಚೊತ್ತಿ ಪ್ರತಿಷ್ಠಾಪಿಸಲಾಗಿದೆ. ದೇವರ ಪಾದಗಳ...
ಸತ್ಯ ಸಾಯಿ ಬಾಬಾ ಹುಟ್ಟಿದ ಸ್ಥಳದಲ್ಲಿ ಈಗ ಶಿವ ಮಂದಿರವಿದ್ದು 1979 ರಲ್ಲಿ ಬಾಬಾರಿಂದಲೇ ಇದು ಪವಿತ್ರಗೊಂಡಿತು. ದೇವಸ್ಥಾನವನ್ನು ನಿರ್ಮಿಸಲಾದ ಪುಟ್ಟದಾದ ಮನೆಯಲ್ಲಿಯೇ ನವೆಂಬರ್ 23, 1926 ರಂದು ಸತ್ಯ ಸಾಯಿಬಾಬಾ ಜನಿಸಿದ್ದು. ಪ್ರತಿ ಸೋಮವಾರ ಬೆಳಗ್ಗೆ ದೇವಸ್ಥಾನದ ಎಲ್ಲ ಮೂರ್ತಿಗಳಿಗೂ ಅಭಿಷೇಕದ ಆಚರಣೆ ನಡೆಸಲಾಗುತ್ತದೆ....
ಗಾಯತ್ರಿ ದೇವಿ ದೇವಸ್ಥಾನವೊಂದು ಪವಿತ್ರ ಸ್ಥಳವಾಗಿದ್ದು ದುರ್ಗಾ ದೇವಿಯ ಮತ್ತೊಂದು ರೂಪವಾದ ಗಾಯತ್ರಿ ದೇವತೆಗೆ ಇದು ಅರ್ಪಿತವಾಗಿದೆ.1998 ರ ಪುದಕ ಮಹೋತ್ಸವದ ಸಂದರ್ಭದಲ್ಲಿ ಈ ದೇವಸ್ಥಾನವನ್ನು ಪ್ರತಿಷ್ಠಾಪಿಸಲಾಯಿತು. ಇಲ್ಲಿ ಐದು ತಲೆ ಮತ್ತು ಹತ್ತು ಕೈಗಳನ್ನು ಹೊಂದಿರುವ ತಿಳಿವು ಮತ್ತು ಬುದ್ದಿವಂತಿಕೆಯ ದೇವತೆಯ...
ಕಲ್ಪ ವೃಕ್ಷವೆಂದರೆ ತೆಂಗಿನ ಮರವಾಗಿದ್ದು ಇದರ ಮೇಲೆ ಸತ್ಯ ಸಾಯಿ ಬಾಬಾ ತಮ್ಮ ಬಾಲ್ಯಾವಸ್ಥೆಯಲ್ಲಿ ಸ್ನೇಹಿತರಿಗೆ ಆಧ್ಯಾತ್ಮಿಕ ಶಕ್ತಿಗಳ ಪ್ರದರ್ಶನವನ್ನು ತೋರಿದ್ದರು. ಈ ಮರ ಚಿತ್ರಾವತಿ ನದಿದಂಡೆಯ ಮೇಲೆ ಓಬುಳದೇವರ ಗುಟ್ಟ ಬೆಟ್ಟದ ಇಳಿಜಾರಿನಲ್ಲಿ ನಿಂತಿದೆ. ಚಿತ್ರಾವತಿ ನದಿಯ ಬಳಿಯಿರುವ ಮೆಟ್ಟಿಲುಗಳು ಈ ಪವಿತ್ರ ಸ್ಥಳಕ್ಕೆ...
ಪ್ರಶಾಂತಿ ನಿಲಯವನ್ನು ಸ್ಥಾಪಿಸಿದ ವರ್ಷದಲ್ಲಿಯೇ ಅಂದರೆ 1949 ರಲ್ಲಿಯೇ ಗಣೇಶ ದೇವಸ್ಥಾನವನ್ನೂ ನಿರ್ಮಿಸಲಾಯಿತು. ಮುಖ್ಯ ದೇವಸ್ಥಾನದ ಮುಂಬಾಗಿಲಿನಲ್ಲಿಯೇ ಗಣೇಶ ದೇವಾಲಯವಿದ್ದು ಎಲ್ಲ ದೇವರಿಗೂ ಪ್ರಾರ್ಥನೆ ಸಲ್ಲಿಸುವ ಮುಂಚೆ ಗಣಪತಿಗೆ ವಂದಿಸಬೇಕೆಂದು ನಂಬಿಕೆಯಿದೆ. ಗಣೇಶ ಶಿವನ ಸೇನೆಯ ಮುಖ್ಯಸ್ಥ ಹಾಗೂ ಗಣೇಶನನ್ನು...
ಸತ್ಯ ಸಾಯಿಬಾಬಾರ ಹೆತ್ತವರ ಸಮಾಧಿಯನ್ನು ಗೋರಿಯ ರೂಪದಲ್ಲಿ ಸಂರಕ್ಷಿಸಲಾಗಿದ್ದು, ಮುಖ್ಯ ರಸ್ತೆ ಮತ್ತು ಸಮಾಧಿ ರಸ್ತೆಯ ನಡುವಿದೆ. ಈ ಗೋರಿಮನೆ ಕಪ್ಪುಕಲ್ಲಿನಿಂದ ಕಟ್ಟಲಾಗಿದ್ದು ಯಾವತ್ತೂ ವ್ಯವಸ್ಥಿತ ಮತ್ತು ಸ್ವಚ್ಚವಾಗಿರುತ್ತದೆ. ಇಲ್ಲಿಯೇ ಹತ್ತಿರದಲ್ಲಿ ಸುಂದರವಾದ ಗಣೇಶ ಮೂರ್ತಿಯನ್ನು ಸ್ಥಾಪಿಸಲಾಗಿದೆ.
ಸರ್ವ ಧರ್ಮ ಐಕ್ಯ ಸ್ಥಂಭ 50 ಅಡಿ ಎತ್ತರದ ಕಂಬವಾಗಿದ್ದು, ಇದು ಎಲ್ಲ ಧರ್ಮಗಳ ಐಕ್ಯತೆಯ ಸಂಭ್ರಮಾಚರಣೆಯ ಸಂಕೇತ. ಭಗವಂತನ ಅವತಾರದ ಆಗಮನದ ಸಂಕೇತಾರ್ಥವಾಗಿ ನವೆಂಬರ್ 1975 ರಲ್ಲಿ ಇದನ್ನು ನಿರ್ಮಿಸಲಾಯಿತು. ಶ್ರೀ ಭಗವಾನ್ ಸತ್ಯ ಸಾಯಿ ಸೇವಾ ಸಂಸ್ಥೆಯ ವತಿಯಿಂದ ಪ್ರಶಾಂತಿ ನಿಲಯದಲ್ಲಿ ನಡೆದ ಜಾಗತೀಕ ಸಮಾವೇಶದ ಸಮಯದಲ್ಲಿಯೇ...
ಸತ್ಯ ಸಾಯಿಬಾಬಾರ ನಿರ್ದೇಶನದ ಮೇರೆಗೆ 1978 ರಲ್ಲಿ ಗ್ರಾಮ ಮಸೀದಿಯನ್ನು ಕಟ್ಟಲಾಯಿತು. ಮಸೀದಿ ನೆಲೆ ನಿಂತ ಸ್ಥಳದಲ್ಲಿ ಮುಸ್ಲಿಂ ಲಿಪಿಗಳಿದ್ದ ತಟ್ಟೆ ದೊರಕಿತ್ತು. ಅದರಲ್ಲಿ ಹೇಳಲಾದ ಪ್ರಕಾರ ಆ ತಟ್ಟೆ ದೊರಕಿದ ಸ್ಥಳದಲ್ಲಿ ಹಲವಾರು ದುರಾದೃಷ್ಟ ಘಟನೆಗಳು ಮತ್ತು ಆಕಸ್ಮಿಕಗಳು ನಂಭವಿಸುತ್ತಿದ್ದು ಅಲ್ಲಿ ಅಗೆಯಬೇಕಾಗಿ...
ವೇಣುಗೋಪಾಲ ಮಂದಿರ ಸಣ್ಣದಾಗಿದೆ. ಆದರೆ ಹಳ್ಳಿಯ ಜಾನಪದ ಶೈಲಿಯ ದೇವಸ್ಥಾನವೆಂದು ಗುರುತಿಸಲ್ಪಡುತ್ತದೆ. ದೇವಸ್ಥಾನದಲ್ಲಿ ಶ್ರೀಕೃಷ್ಣನ ಮೂರ್ತಿಯಿದೆ. ಇಲ್ಲಿಗೆ ತಲುಪಲು ರಸ್ತೆ ಸಂಪರ್ಕವು ಉತ್ತಮವಾಗಿದ್ದು, ಹೊಟೇಲುಗಳ ವ್ಯವಸ್ಥೆ ಚೆನ್ನಾಗಿದೆ.