ಬಡ್ಗಮ್ ಹತ್ತಿರದಲ್ಲಿರುವ ಈ ದೇವಸ್ಥಾನವು ಪುಲ್ವಾಮಾ ಜಿಲ್ಲೆಯಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಹಳ್ಳಿಯ ಹೆಸರನ್ನೆ ಹೊಂದಿರುವ ಈ ದೇವಸ್ಥಾನವು ಪಯೇರ್ ಎಂಬ ಹಳ್ಳಿಯಲ್ಲಿ ನೆಲೆಸಿದೆ. ಸ್ಥಳೀಯರು ಈ ದೇವಸ್ಥಾನವನ್ನು ಪಯೇಚ್ ದೇವಸ್ಥಾನ ಎಂತಲೂ ಕರೆಯುತ್ತಾರೆ. ಈ ದೇಗುಲವನ್ನು ಒಂದೆ ಕಲ್ಲಿನಲ್ಲಿ ನಿರ್ಮಾಣಮಾಡಲಾಗಿದೆ ಎಂದು...
ಪುಲ್ವಾಮಾ ಜಿಲ್ಲೆಯ ಜವಾಬ್ರರಿ ಹಳ್ಳಿಯಲ್ಲಿರುವ ಧಾರ್ಮಿಕ ಮತ್ತು ಐತಿಹಾಸಿಕ ತಾಣ ಅವಂತೀಶ್ವರ ದೇವಸ್ಥಾನ. ಈ ದೇವಸ್ಥಾನವು ವಿಷ್ಣುವಿಗೆ ಅರ್ಪಿತವಾಗಿದೆ. ರಾಜ ಅವಂತಿವರ್ಮ ಈ ದೇವಸ್ಥಾನವನ್ನು 9ನೇ ಶತಮಾನದಲ್ಲಿ ಕಟ್ಟಿಸಿದ್ದ. ಈತ ಉತ್ಪಲರ ಮೊದಲ ರಾಜ. ಈತ ಈ ಪ್ರದೇಶವನ್ನು ತನ್ನ ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ....
ಪುಲ್ವಾಮಾ ಜಿಲ್ಲೆಯಲ್ಲೆ ಅತಿ ಮಹತ್ವವಾದ ಮತ್ತು ಪಾವಿತ್ರ್ಯತೆಯುಳ್ಳ ಸ್ಥಳವೆಂದರೆ ಅಸರ್ ಶರೀಫ್ ಪಿಂಜೂರಾ. ಈ ಸ್ಥಳವು ಇಸ್ಲಾಂ ಧರ್ಮದ ಮಹಾಗುರುವಾದ ಮೊಹಮ್ಮದ್ ಪೈಗಂಬರರ ಅವಶೇಷಗಳನ್ನು ಒಳಗೊಂಡಿದೆ. ಇವುಗಳನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಈ...
ಪುಲ್ವಾಮಾನಲ್ಲಿರುವ ಜಾಮಾ ಮಸೀದಿ ಶೋಪಿಯನ್ ನಿರ್ಮಾಣವಾಗಿದ್ದು ಮೊಘಲರ ಕಾಲದಲ್ಲಿ ಎಂದು ಹೇಳಲಾಗುತ್ತದೆ. ಈ ಪ್ರದೇಶವನ್ನು ಮೊಘಲರು ಉಪಯೋಗಿಸುತ್ತಿದ್ದರು. ಕಾಶ್ಮೀರಕ್ಕೆ ಮೊಘಲರು ಪ್ರವಾಸ ಕೈಗೊಳ್ಳುವಾಗ ಇವರಿಗೆ ಪ್ರಮುಖ ತಂಗುದಾಣವಾಗಿ ಈ ಪ್ರದೇಶವನ್ನು ಅವರು ಬಳಸಿದ್ದರು.
ಪುಲ್ವಾಮಾದಲ್ಲಿಯೇ ಅತ್ಯಂತ ಜನಪ್ರಿಯ ತಾಣವೆಂದರೆ ತರ್ಸರ್ ಮತ್ತು ಮರ್ಸರ್ ಕೆರೆ. ನಾಗ್ಬರೇನ್ನಿಂದ ಕ್ರಮವಾಗಿ 3 ಮತ್ತು 5 ಕಿ.ಮೀ ದೂರದಲ್ಲಿವೆ ಈ ಎರಡು ಕೆರೆಗಳು. ಇಲ್ಲಿನ ಸ್ಥಳೀಯರ ನಂಬಿಕೆ ಮತ್ತು ಜನಜೀವನದಲ್ಲಿ ಈ ಕೆರೆ ತುಂಬಾ ಪ್ರಮುಖ ಸ್ಥಾನವನ್ನು ಪಡೆದಿದೆ.
ಪುಲ್ವಾಮಾದ ಟ್ರಾಲ್ನಿಂದ ಇಲ್ಲಿಗೆ ಕೇವಲ 3 ಕಿ.ಮೀ ದೂರ. ಶಿಕರ್ಗಢ ಒಂದು ಸುಂದರವಾದ ಪ್ರವಾಸಿ ತಾಣ. ಜಮ್ಮ ಮತ್ತು ಕಾಶ್ಮೀರದ ಕೊನೆಯ ಆಡಳಿತಗಾರ ಮಹಾರಾಜ ಹರಿ ಸಿಂಗ್ ಇಲ್ಲಿಗೆ ಆಗಾಗ ಆಗಮಿಸುತ್ತಿದ್ದರು ಎಂದು ಹೇಳಲಾಗಿದೆ. ಇಲ್ಲಿನ ಪ್ರಾಣಿಗಳ ವೈವಿಧ್ಯತೆಯು ರಾಜನನ್ನು ಮೋಹಗೊಳಿಸಿತ್ತು.
ಅರಿಪಾಲ್ ನಾಗ್, ಇದು ಸುಂದರವಾದ ನೈಸರ್ಗಿಕ ನೀರಿನ ಒರತೆ. ಪುಲ್ವಾಮಾದ ಟ್ರಾಲ್ ಪಟ್ಟಣದಿಂದ 11 ಕಿ.ಮೀ ದೂರದಲ್ಲಿ ಈ ತಾಣವಿದೆ. ಪುಟ್ಟ ಗುಡ್ಡವಾದ ವಸ್ತೂರ್ ವ್ಯಾನ್ನ ಒಂದು ಮೂಲೆಯಿಂದ ಈ ನೀರು ಹರಿಯುತ್ತದೆ. ಈ ನೀರನ್ನು ಸುತ್ತಲಿನ ಹಳ್ಳಿಗಳ ಕೃಷಿಕರು ಕೃಷಿ ಉಪಯೋಗಕ್ಕೆ ಮತ್ತು ಕುಡಿಯುವ...
ಪುಲ್ವಾಮಾ ಜಿಲ್ಲೆಯ ಶೋಪಿಯನ್ನಿಂದ ಸುಮಾರು 12 ಕಿ.ಮೀ ದೂರದಲ್ಲಿ ಈ ಹರ್ಪೋರಾ ಎಂಬ ಆಕರ್ಷಕ ತಾಣವಿದೆ. ಜನಪ್ರಿಯ ಮೊಘಲ್ ರಸ್ತೆಯಲ್ಲಿರುವ ಈ ತಾಣ ಸುಂದರ ದೃಶ್ಯವೈಭವವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಇಲ್ಲಿಗೆ ಕಾರು ಅಥವಾ ಬಸ್ ಮೂಲಕ ತಲುಪಬಹುದು.
ಪುಲ್ವಾಮಾ ಜಿಲ್ಲೆಯ ಟ್ರಾಲ್ ಪಟ್ಟಣದಲ್ಲಿ 2 ಕಿ.ಮೀ ದೂರದಲ್ಲಿರುವ ಸುಂದರ ತಾಣವೇ ನಾಗ್ಬರೆನ್. ಪ್ರವಾಸಿಗರಿಗೆ ಒಂದಷ್ಟು ಹೊತ್ತು ಖುಷಿಯಿಂದ ಕಾಲಕಳೆಯಲು ಇದು ಸೂಕ್ತ ತಾಣ. ಈ ಪ್ರದೇಶದ ಪ್ರಶಾಂತ ವಾತಾವರಣವು ಮನಸ್ಸಿಗೆ ಮುದ ನೀಡುತ್ತದೆ.