ಇಲ್ಲಿರುವ ಹುಲಿ ಮೀಸಲು ಪ್ರದೇಶವು, ಹಿಮಾಲಯದ ತಪ್ಪಲಿನ, ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತದೆ. ಇದು ಭಾರತದಲ್ಲಿ ಕಂಡುಬರುವ 41 ಹುಲಿ ಮೀಸಲು ಪ್ರದೇಶಗಳಲ್ಲಿ ಒಂದಾಗಿದೆ. ಈ ಮೀಸಲು ಪ್ರದೇಶವು 800 ಚದರ ಕಿಲೋಮೀಟರ್ ಅರಣ್ಯ ಪ್ರದೇಶದಷ್ಟು ವ್ಯಾಪಿಸಿದೆ. ಈ ಮೀಸಲು ಅರಣ್ಯ ಪ್ರದೇಶವು ಕನಿಷ್ಠ 36 ಹುಲಿಗಳನ್ನು ಹೊಂದಿದ್ದು,...
ಖಹರಾ ನದಿ ದಡದಲ್ಲಿರುವ, 450 ವರ್ಷದ ಹಳೆಯ ಗೌರಿ ಶಂಕರ್ ದೇವಸ್ಥಾನವು, ಶಿವ ಮತ್ತು ಅವನ ಪತ್ನಿ, ಪಾರ್ವತಿ ದೇವತೆಗೆ ಸಮರ್ಪಿತವಾಗಿದೆ. ಇದು ಹಿಂದೂ ಸಮುದಾಯದ ಪ್ರಮುಖ ಯಾತ್ರಾಸ್ಥಳವಾಗಿದೆ ಮತ್ತು ಪಂಡಿತ್ ಹರ್ ಪ್ರಸಾದ್ ಸೇರಿದಂತೆ ಹಲವಾರು ಅನೇಕ ಸಂತರು ಹಾಗು ವಿಶೇಷ ಜನರು ಇಲ್ಲಿಗೆ ಭೇಟಿ ನೀಡಿದ್ದರು ಎಂದು...
ಪಿಲಿಭಿಟ್ನಲ್ಲಿ ಸಾಮಾಜಿಕ ಸಾಮರಸ್ಯವನ್ನು ಕಾಣಬಹುದು. ಭಕ್ತರಿಗೆ ನೆಮ್ಮದಿ ಒದಗಿಸುವ ಹಲವಾರು ಹಿಂದೂ ದೇವಾಲಯಗಳ ಹೊರತಾಗಿಯೂ ಇಲ್ಲಿ ಮುಸ್ಲಿಮ್ ಬಾಂಧವರು ಪ್ರಾರ್ಥನೆ ಮಾಡುತ್ತ ನೆಮ್ಮದಿ ಕಾಣುವ ಜಾಮಾ ಮಸೀದಿಯೂ ಇದೆ. 250ಕ್ಕೂ ಹಚ್ಚು ವರ್ಷಗಳ ಹಳೆಯ ಮಸೀದಿ ಹಫೀಜ್ ರಹಮತ್ ಖಾನ್ ಎಂಬುವವರಿಂದ ಮೊಘಲ್ ಅವಧಿಯಲ್ಲಿ...
ಮೆಥೋಡಿಸ್ಟ್ ಚರ್ಚ್ ಕ್ರಿಶ್ಚಿಯನ್ ಸಮುದಾಯದ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಎಲ್ಲಾ ಧರ್ಮಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಈ ಗುರುದ್ವಾರವನ್ನು, ಸಿಖ್ ಧರ್ಮದ ಆರನೇ ಗುರುವಿಗೆ ಸಮರ್ಪಿಸಲಾಗಿದೆ. ಪ್ರತಿ ವರ್ಷ, ತಮ್ಮ ನಮನವನ್ನು ಸಲ್ಲಿಸಲು ಮತ್ತು ಆಶೀರ್ವಾದ ಪಡೆಯಲು ಇಲ್ಲಿ ಬರುವ ಎಲ್ಲಾ ಧರ್ಮಗಳ ಭಕ್ತರನ್ನು ಆಕರ್ಷಿಸುತ್ತದೆ. ಗುರುದ್ವಾರ ಸುಮಾರು 400 ವರ್ಷಗಳಷ್ಟು ಹಳೆಯದು. ಗುರು ಗೋವಿಂದ್ ಸಿಂಗ್ಜಿಯವರು ನಾನಕಮಠಕ್ಕೆ ಹೋಗುವ ಸಮಯದಲ್ಲಿ ಇಲ್ಲಿ...
ಛಟವಿ ಪದ್ಶಾಹಿ ಗುರುದ್ವಾರದಂತೆಯೇ, ಈ ದರ್ಗಾವು ಕೂಡ ಯಾವುದೇ ಧರ್ಮ ಅಥವಾ ಜಾತಿ ಭೇದವಿಲ್ಲದೆ ಎಲ್ಲರಿಂದಲೂ ಗೌರವಿಸಲ್ಪಡುತ್ತದೆ. ಇಲ್ಲಿನ ಮಜ಼ರ್ ಜೊತೆಗೆ ಹಲವು ಉಪಕಥೆಗಳು ಇವೆ. ಆದರೆ ಇಲ್ಲಿ ಬರುವ ಎಲ್ಲರಲ್ಲೂ ನಂಬಿಕೆ ಹುಟ್ಟಿಸಿದ ಒಂದು ಅಂಶವೆಂದರೆ ಇಲ್ಲಿ ನಿಜವಾದ ಭಕ್ತಿಯಿಂದ ಯಾರು ಪೂಜಿಸುತ್ತಾರೋ ಅವರ ಇಚ್ಛೆಗಳು ಮತ್ತು...
ಈ ಪವಿತ್ರ ದೇವಸ್ಥಾನ ಶಿವ ಮತ್ತು ಅವನ ಪತ್ನಿ ಪಾರ್ವತಿಗೆ ಸಮರ್ಪಿತವಾಗಿದೆ. ಅರ್ಧನಾರೀಶ್ವರ ಪದ ಅರ್ಧ ಪುರುಷ ಹಾಗೂ ಅರ್ಧ ಮಹಿಳೆ ಎಂಬುದನ್ನು ಸೂಚಿಸುತ್ತದೆ ಮತ್ತು ಇದರ ಪ್ರಕಾರವಾಗಿ ಶಿವನ ಪ್ರತಿಮೆ ಅರ್ಧ ಪುರುಷ ಅರ್ಧ ಸ್ತ್ರೀಯನ್ನು ಹೊಂದಿದೆ. ಪ್ರತಿಮೆಗೆ ಸಂಬಂಧಿಸಿದ ಕಲ್ಲಿನ ಮೇಲೆ ಆಯಾ ದೇವತೆಗಳ ವಾಹನ ಎಂದು ಹೇಳಲಾಗುವ...
ಪುರಾಣದಲ್ಲ ಹೇಳುವ, ಗೋಮತಿ ನದಿ, ಉತ್ತರ ಪ್ರದೇಶದ ಪ್ರಮುಖ ಪಟ್ಟಣಗಳಲ್ಲಿ ಹರಿಯುವ ಉತ್ತರ ಭಾರತದ ಅತ್ಯಂತ ಪವಿತ್ರ ನದಿಗಳಲ್ಲಿ ಒಂದು. ಇದನ್ನು ಪಿಲಿಭಿಟ್ ನಲ್ಲಿ ಸಂತ ವಸಿಷ್ಟನ ಮಗಳು ಎಂದು ಕರೆಯಲಾಗುತ್ತದೆ. ಗೋಮತ ತಾಲ್ ಹಿಂದೂಗಳಿಗೆ ಅತ್ಯಂತ ಪವಿತ್ರ ಮತ್ತು ಈ ನೀರಿನಲ್ಲಿ ತೀರ್ಥ ಸ್ನಾನವನ್ನು ಮಾಡಲು ವರ್ಷಪೂರ್ತಿ ಅದರಲ್ಲೂ...
ಮಹೋಫ್ ಅರಣ್ಯ ವ್ಯಾಪ್ತಿಯಲ್ಲಿರುವ ಶಾರದಾ ಕಾಲುವೆ ಮತ್ತು ಶಾರದಾ ಸಾಗರ್ ಅಣೆಕಟ್ಟುಗಳ ನಡುವೆ ನೆಲೆಸಿದೆ ಚುಕಾ ಬೀಚ್. ಈ ಬೀಚ್, ಪಿಲಿಭಿಟ್ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಸೂರ್ಯಾಸ್ತದ ಅದ್ಭುತ ದೃಶ್ಯ ಮತ್ತು ಶಾಂತ ಅರಣ್ಯವನ್ನು ನೋಡಲು ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.
ಸಂಗಮ ಅಥವಾ ದೇವಹ್ - ಘಗರಾ ಎರಡು ನದಿಗಳ ಸಂಗಮವು, ಪಿಲಿಭಿಟ್ ನಲ್ಲಿ ಖರ್ಕಾ ಪ್ರದೇಶದಲ್ಲಿ ಆಯುರ್ವೇದಿಕ್ ಕಾಲೇಜು ಬಳಿಯಲ್ಲಿರುವ ಬ್ರಹ್ಮಚಾರಿ ಘಾಟ್ ನಲ್ಲಿ ನಡೆಯುತ್ತದೆ. ಆದರೆ ಸ್ಥಳಕ್ಕೆ ತಲುಪಲು ಸರಿಯಾದ ರಸ್ತೆ ಇಲ್ಲ. ಆದಾಗ್ಯೂ, ಈ ಸ್ಥಾನ ತಲುಪಲು ಎತ್ತಿನ ಬಂಡಿ ತೆಗೆದುಕೊಂಡು ಹೋಗಬಹುದು. ನೀವು ಈ ಎರಡೂ ನದಿಗಳನ್ನೂ ದಾಟಿ...
ನಗರದ ಈಶಾನ್ಯದಲ್ಲಿ, ಘಗರಾ ನದಿಯ ದಡದ ಮೇಲಿದ್ದಾಗ ಈ ಹಳೆಯ ನಗರದ ಅಸ್ತಿತ್ವವು 15 ನೇ ಶತಮಾನದ್ದು ಎಂದು ಪತ್ತೆಹಚ್ಚಲಾಗಿದೆ. ಇಲ್ಲಿ ವಾಸವಾಗಿದ್ದ ಬಂಜಾರರು (ಜಿಪ್ಸಿ) ಪೈರಿಯಾ ಸಮುದಾಯದವರಾಗಿದ್ದು, ಮಣ್ಣಿನ ಮತ್ತು ಕಾಡಿನ ಮೂಲದ ಇತರ ವಸ್ತುಗಳಿಂದ ತಯಾರಿಸಿದ ಮನೆಗಳಲ್ಲಿ ವಾಸಿಸುತ್ತಿದ್ದರು. ಪಿಲಿಭಿಟ್...
ಪಿಲಿಭಿಟ್ ನ ಪುರನ್ ಪುರ ಜಿಲ್ಲೆಯಲ್ಲಿ ರೈಲ್ವೆ ನಿಲ್ದಾಣದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ರಾಜಾ ವೇಣು ಕಾ ತಿಲಾ ಇಂದು ಪಾಳುಬಿದ್ದಿದೆ. ಆದಾಗ್ಯೂ, ಇಲ್ಲಿನ ಅವಶೇಷಗಳು ಈ ಪ್ರದೇಶವು ಒಂದೊಮ್ಮೆ ರಾಜ ವೇಣುವಿನ ಆಡಳಿತದ ಅವಧಿಯಲ್ಲಿ ಉತ್ತುಂಗದಲ್ಲಿದ್ದ ವಿಷಯಗಳ ಬಗ್ಗೆ ಹೇಳುತ್ತವೆ.