ಹನುಮಾನ್ ಭಗವಂತನಿಗೆ ಸಮರ್ಪಿಸಲಾಗಿರುವ ಪವಿತ್ರ ಮಂದಿರ ಇದಾಗಿದೆ. ಲಕ್ಷಾಂತರ ಮಂದಿ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಉತ್ತರ ಭಾರತದಲ್ಲಿ ಅತೀ ಹೆಚ್ಚು ಭೇಟಿ ನೀಡಲ್ಪಡುವ ಎರಡನೇ ಮಂದಿರ ಮಹಾವೀರ ಮಂದಿರ. ದೇಶವಿಭಜನೆ ವೇಳೆ ಬೃಹತ್ ಸಂಖ್ಯೆಯ ಹಿಂದೂಗಳು ಪಟ್ನಾಗೆ ಹೋದಾಗ 1947ರಲ್ಲಿ ಈ ಮಂದಿರವು...
ಗೋಲ್ಘರ್ ಧಾನ್ಯ ಸಂಗ್ರಹ ಪುನರ್ವರ್ಣನೆ ಒಂದು ನವೀನ ಪ್ರಯತ್ನ. 1786ರಲ್ಲಿ ನಡೆದ ಬೃಹತ್ ಬರಗಾಲ ಹಿನ್ನೆಲೆಯಲ್ಲಿ ಇದನ್ನು ನಿರ್ಮಿಸಲಾಗಿತ್ತು ಮತ್ತು ಇದು ವಿಶಿಷ್ಠ ಶೈಲಿಯ ವಾಸ್ತುಶಿಲ್ಪದ ಹೊರತಾಗಿ ಗೋಲ್ಘರ್ ನಲ್ಲಿ ನಿಂತು ನೋಡಿದರೆ ಗಂಗಾ ಹಿನ್ನೆಲೆಯ ಸಂಪೂರ್ಣ ನಗರದ ಒಂದು ಪರಿದೃಶ್ಯವನ್ನು ನೋಡಬಹುದು. ಈ ನೋಟ ಪದಗಳಿಗೆ...
ದರ್ಭಾಂಗ್ ಮನೆಯನ್ನು ನವ ಲಖ್ ಕಟ್ಟಡವೆಂದೂ ಕರೆಯುತ್ತಾರೆ. ಈ ಕಟ್ಟಡವನ್ನು ದರ್ಭಾಂಗ್ ನ ಮಹಾರಾಜ ಸರ್ ಕಾಮೇಶ್ವರ್ ಸಿಂಗ್ ನಿರ್ಮಿಸಿದರು. ಗಂಗಾ ನದಿಯ ದಂಡೆಯಲ್ಲಿರುವ ಈ ಕಟ್ಟಡದಲ್ಲಿ ಕಾಳಿ ಮಾತೆಯ ಮಂದಿರವಿದೆ. ಇದು ದುರ್ಗಾ ಮಾತೆಯ ಆರಾಧನೆಯ ಪೂಜ್ಯ ಸ್ಥಳ.
ಪಟ್ನಾ ತಾರಾಲಯವು ನಿಸ್ಸಂಶಯವಾಗಿ ಏಶ್ಯಾದ ಅತೀದೊಡ್ಡ ತಾರಾಲಯಗಳಲ್ಲಿ ಒಂದಾಗಿದೆ. ಇದು ಪ್ರವಾಸಿಗಳನ್ನು ಅಯಸ್ಕಾಂತದಂತೆ ಸೆಳೆಯುವ ಸ್ಥಳ ಮತ್ತು ಖಗೋಳ ವಿಷಯಕ್ಕೆ ಸಂಬಂಧಿಸಿದ ವಿಷಯಗಳನ್ನು ಸಾಮಾನ್ಯವಾಗಿ ತೋರಿಸುತ್ತದೆ. ಇದು ಹಲವಾರು ಪ್ರದರ್ಶನಗಳನ್ನು ಏರ್ಪಡಿಸುತ್ತದೆ.
ಪಟಾನ್ ದೇವಿ ಮಂದಿರವು ಪಾಟಲಿಪುತ್ರದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದು. ಈ ಮಂದಿರವನ್ನು ದುರ್ಗಾದೇವಿ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಬರಿ ಪಟಾನ್ ದೇವಿ ಮಂದಿರ ಗಂಗಾ ನದಿಯ ಉತ್ತರಕ್ಕೆ ಮುಖಮಾಡಿದೆ. ಈ ಮಂದಿರದಲ್ಲಿರುವ ಮೂರ್ತಿಯನ್ನು ಕಪ್ಪುಕಲ್ಲಿನಿಂದ ಕೆತ್ತಲಾಗಿದೆ. ಯಾವುದೇ ಜಾತಿ, ಜನಾಂಗದವರು ಈ ಮಂದಿರಕ್ಕೆ ಭೇಟಿ...
ಸ್ಥಳೀಯರಿಂದ ಜಾದುಘರ್ ಎಂದು ಕರೆಯಲ್ಪಡುವ ಪಾಟ್ನಾ ಮ್ಯೂಸಿಯಂ ರಾಜ್ಯ ಮ್ಯೂಸಿಯಂ ಆಗಿದೆ. ಗೌತಮ ಬುದ್ಧನ ಸ್ಮಾರಕಗಳು, 200 ಮಿಲಿಯನ್ ವರ್ಷ ಹಳೆಯ ಮರ ಮತ್ತು ದಿದಾರ್ಗಂಜ್ ಯಕ್ಷಿಯ ಮೂರ್ತಿಯಿದೆ. ಈ ಮ್ಯೂಸಿಯಂ ಖಂಡಿತವಾಗಿಯೂ ಒಂದು ಕಲಿಯುವ ಅನುಭವ ಮತ್ತು ಪಾಟಲಿಪುತ್ರದ ವೈಭವದ ದಿನಗಳನ್ನು ವಿವರಿಸುತ್ತದೆ.
ತಖ್ತ್ ಶ್ರೀ ಹರ್ ಮಂದಿರ ಸಾಹಿಬ್ ಅಥವಾ ಪಾಟಲಿಪುತ್ರದಲ್ಲಿರುವ ಗುರುದ್ವಾರವನ್ನು ಸಿಖ್ ರ ಹತ್ತನೇ ಗುರುಗಳಾಗಿರುವ ಗುರು ಗೋಬಿಂದ ಸಿಂಗ್ ಜಿ ಅವರ ಸ್ಮರಣಾರ್ಥವಾಗಿ ಮಹಾರಾಜ ರಂಜಿತ್ ಸಿಂಗ್ ಅವರು ನಿರ್ಮಿಸಿದ್ದಾರೆ. ಭಾರತದ ಈಶಾನ್ಯ ಭಾಗದ ಸಿಕ್ಕಿಸಂಗೆ ಈ ಗುರುದ್ವಾರವು ಮೂಲ. ಇಲ್ಲಿ ಗುರು ಗೊಬಿಂದ ಸಿಂಗ್ ಜಿ ಅವರು ಬಂಗಾರ...
ಗಾಂಧಿ ಮೈದಾನದ ನಗರದ ನಕ್ಷೆಯ ಪ್ರಮುಖ ಭಾಗ. ಇದನ್ನು ಮೊದಲು ಪಾಟಲಿಪುತ್ರ ಹುಲ್ಲುಗಾವಲು ಎಂದು ಕರೆಯಲಾಗುತ್ತಿತ್ತು. ಗಾಂಧಿ ಮೈದಾನವು ಪಾಟಲಿಪುತ್ರದ ಮಧ್ಯಭಾಗದಲ್ಲಿರುವ ಮೈದಾನ. ಇಲ್ಲಿ ರಾಜಕೀಯ ಮತ್ತು ವಾಣಿಜ್ಯ ಕಾರ್ಯಕ್ರಮಗಳು ನಡೆಯುತ್ತದೆ. ಇದರ ಸುತ್ತಲು ಹಲವಾರು ಕೇಂದ್ರಗಳು ಕೂಡ ಇದೆ.
ಖಿಲಾ ಹೌಸ್ ನ್ನು ಜಲಾನ್ ಹೌಸ್ ಎಂದೂ ಕರೆಯಲಾಗುತ್ತದೆ. ಇದು ಖಾಸಗಿ ನಿವಾಸಿ ತಾಣ. ಖಿಲಾ ಹೌಸ್ 1919ರಿಂದ ಜಲಾನ್ ಕುಟುಂಬದ ಐದು ತಲೆಮಾರುಗಳು ವಾಸಿಸುತ್ತಿರುವ ಮನೆ. ಕಲೆ ಮತ್ತು ಪ್ರಾಚ್ಯವಸ್ತುಗಳ ಸಂಗ್ರಹಕ್ಕೆ ಇದು ಹೆಸರುವಾಸಿ. ಇದು ವೈಯಕ್ತಿಕ ಸಂಗ್ರಹ ಮತ್ತು ರಾಧಾಕೃಷ್ಣ ಜಲಾನ್ ಎನ್ನುವವರು ಇದರ ಉಸ್ತುವಾರಿಯಾಗಿದ್ದಾರೆ....
ಗುರುದ್ವಾರ ಗೋಬಿಂದ ಘಾಟ್ ಗಂಗಾ ನದಿಯ ದಂಡೆಯಲ್ಲಿದೆ ಮತ್ತು ಇದು ತಖ್ತ್ ಶ್ರೀ ಪಟ್ನಾ ಸಾಹಿಬ್ ನ ಸುತ್ತಮುತ್ತಲ ಪ್ರದೇಶದಲ್ಲಿದೆ. ಗುರು ಗೋಬಿಂದ್ ಅವರು ಸಣ್ಣವರಾಗಿದ್ದಾಗ ಬಂಗಾರದ ಬಲೆಯನ್ನು ಬಿಸಾಡಿದ್ದರಿಂದ ಇದನ್ನು ಕಂಗನ್ ಘಾಟ್ ಎಂದೂ ಕರೆಯುತ್ತಾರೆ. ಗುರು ಗೋಬಿಂದ ಸಿಂಗ್ ಅವರ ಬಾಲ್ಯದ ಬಗ್ಗೆ ಜಾನಪದ ಕಥೆಗಳನ್ನು ಈ...
ಪಾಟಲಿಪುತ್ರದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಕುಮ್ಹರಾರ್ ಪ್ರಸಿದ್ಧ ಪ್ರಾಚೀನ ಮತ್ತು ಪಾಟಲಿಪುತ್ರ ನಗರದ ಅವಶೇಷಗಳ ತಾಣ. ಮೌರ್ಯ ಸಭಾಭವನವನ್ನು ಹೊರತುಪಡಿಸಿ ಭವ್ಯತೆ ಮತ್ತು ವೈಭವಕ್ಕೆ ಯಾವುದೇ ಸಾಕ್ಷಿಗಳು ಉಳಿದುಕೊಂಡಿಲ್ಲ. ಕುಮ್ಹರಾರ್ ನಲ್ಲಿ ಹೊಸ ನಿರ್ಮಾಣಗಳ ನಡುವೆ ಅವಶೇಷಗಳಲ್ಲಿ ಉದ್ಯಾನ ಮತ್ತು ಮ್ಯೂಸಿಯಂನ್ನು...
ಶೇರ್ ಶಾಹಿ ಎಂದು ಕರೆಯಲ್ಪಡುವ ಶೇರ್ ಶಾ ಸೂರಿ ಮಸ್ಜಿದಿಯು ಅಫ್ಘಾನ್ ಶೈಲಿಯ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಇದನ್ನು ಶೇರ್ ಶಾ ಸೂರಿ 1540-1545ರಲ್ಲಿ ತನ್ನ ಪ್ರಾಬಲ್ಯ ತೋರಿಸಲು ನಿರ್ಮಿಸಿದರು.
ಮಸೀದಿಯ ಸಂಕೀರ್ಣದ ಒಳಗಡೆಯಿರುವ ಸಮಾಧಿಯನ್ನು ಒಂದು ಅಷ್ಟಭುಜಾಕೃತಿಯ ಕಲ್ಲು ಚಪ್ಪಡಿಯು...
ಭಗತ್ ಜೈತಮಾಲ್ ಮನೆಯಲ್ಲಿ ನಿಂತ ಗುರು ನಾನಕ್ ದೇವ್ ಅವರಿಗೆ ಸಮರ್ಪಿಸಲಾಗಿರುವ ಗುರುದ್ವಾರ ಘಾಯಿ ಘಾಟ್ ನ್ನು ಗುರುದ್ವಾರ ಪಾಹಿಲಾ ಬರಾ ಎಂದು ಕರೆಯಲಾಗುತ್ತದೆ. ಜೈತಮಾಲ್ ಅವರು ಗುರುಗಳ ಕಟ್ಟಾ ಅನುಯಾಯಿ ಮತ್ತು ಬಳಿಕ ಧರ್ಮಶಾಲಾಗೆ ತನ್ನ ಮನೆಯನ್ನು ಸ್ಥಳಾಂತರಿಸಿದ್ದರು. ಭಗತ್ ಜೈತಮಾಲ್ ಮನೆಯಲ್ಲಿ ಮೊದಲು ಗುರು ನಾನಕ್ ಮತ್ತು...
ಅಪಾರ ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಗಮ್ ಕುವಾದ ಅರ್ಥವೆಂದರೆ `ಆಳವರಿಯದ ಬಾವಿ'. ಇದು ಮೌರ್ಯ ಸಾಮ್ರಾಜ್ಯದ ರಾಜ ಅಶೋಕನ ಕಾಲದ್ದು ಮತ್ತು ಪಾಟಲಿಪುತ್ರದಲ್ಲಿರುವ ಅತ್ಯಂತ ಹಳೆಯ ಪುರಾತತ್ವ ತಾಣ. ಈ ತಾಣದ ಬಗ್ಗೆ ಹಲವಾರು ದಂತಕಥೆಗಳಿವೆ. ಇದೊಂದು ಚಿತ್ರಹಿಂಸೆ ನೀಡುವ ಕೋಣೆಯಾಗಿತ್ತೆಂದು ಕೆಲವು ಹೇಳಿದರೆ ಮತ್ತೆ ಕೆಲವು ಅಶೋಕ...
ಬುಲಂದಿ ಬಾಗ್ ಉತ್ಖನನದ ಪ್ರಮುಖ ತಾಣವಾಗಿದ್ದು, ಇಲ್ಲಿ ಟೆರಾಕೊಟಾ ಕಲಾಕೃತಿಗಳು, ನಾಣ್ಯಗಳು ಪತ್ತೆಯಾಗಿದೆ. ಇದು ಮೌರ್ಯ ಸಾಮ್ರಾಜ್ಯದ ಕಾಲ ಮತ್ತು ಜೀವನದ ಬಗ್ಗೆ ಬೆಳಕು ಚೆಲ್ಲಿದೆ.