ಮಧ್ಯಕಾಲೀನ ಯುಗದಲ್ಲಿ ಗುಜರಾತಿನ ರಾಜಧಾನಿಯಾಗಿದ್ದ ಪಟಾನ್ ಇಂದು ಆ ದಿನಗಳ ನೆನಪಾಗಿ ಉಳಿದಿದೆ. 8ನೆಯ ಶತಮಾನದಲ್ಲಿ ಚಾಲುಕ್ಯ ರಜಪೂತರ ಚಾವ್ಡ ಸಾಮ್ರಾಜ್ಯದ ದೊರೆ ವನರಾಜ ಚಾವ್ಡನು ಪಟಾನ್ ನಗರವನ್ನು ಕಟ್ಟಿದನು. ವನರಾಜನ ಗೆಳೆಯನಾಗಿದ್ದ ಕುರಬನಾದ ಅನ್ಹಿಲ್ ಎನ್ನುವವನ ನೆನಪಿಗೆ ಇದನ್ನು ಅನ್ಹಿಲ್ವಾಡ್ ಎಂದು ಕರೆಯಲಾಗುತ್ತಿತ್ತು.
ಇಂದು ಈ ನಗರವು ಒಂದು ಕಾಲದಲ್ಲಿ ದೆಹಲಿಯ ಸುಲ್ತಾನನಾಗಿದ್ದ ಕುತ್ಬುದ್ದೀನ್ ಐಬಕ್ನು ಧ್ವಂಸಮಾಡಿದ ಸಾಮ್ರಾಜ್ಯದ ಅವಶೇಷಗಳ ನಡುವೆ ನಿಂತಿದೆ. ಮುಸ್ಲಿಂರು ಇಲ್ಲಿ ಆಳಿದ್ದರಿಂದ ಪಟಾನ್ನಲ್ಲಿ ಕೆಲವು ಮುಸ್ಲಿಂ ವಾಸ್ತುಕಲೆಯನ್ನು ಕೂಡ ಕಾಣಬಹುದಾಗಿದೆ. ಇವು ಅಹಮದಬಾದಿಗಿಂತ ಹಳೆಯದು. ಇಲ್ಲಿ ಚಾಲುಕ್ಯ ಅಥವ ಸೋಲಂಕಿಯರ ಕಾಲದ ವಾಸ್ತುಶಿಲ್ಪಕಲೆಯನ್ನು ಕೂಡ ಕಾಣಬಹುದಾಗಿದೆ. ರಾಣಿ ಕಿ ವಾವ್, ತ್ರಿಕಂ ಬರೊತ್ನಿ ವಾವ್, ಕಲ್ಕಾ ಸಮೀಪದ ಹಳೆಯ ಕೋಟೆ, ಸಹಸ್ರಲಿಂಗ ಸರೋವರ ಇತ್ಯಾದಿಗಳು ಎಲ್ಲೆಡೆಯಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಪಟಾನಿ ಜೈನಧರ್ಮದ ಮುಖ್ಯ ಕೇಂದ್ರಗಳಲ್ಲಿ ಒಂದು. ಇದನ್ನು ಸೋಲಂಕಿಗಳ ಕಾಲದಲ್ಲಿ ಕಟ್ಟಲಾದ ಹಿಂದೂ ಮತ್ತು ಜೈನ ದೇವಾಲಯಗಳಲ್ಲಿ ಕಾಣಬಹುದಾಗಿದೆ. ಪ್ರಸ್ತುತ ಪಟಾನವು ಪಟಾಲ ಸೀರೆಗಳಿಗೆ ಪ್ರಸಿದ್ಧವಾಗಿದೆ. ಇದನ್ನು ಮಶ್ರು ನೇಯ್ಗೆಕಾರರು ಸಾಲ್ವಿವಾದ್ನಲ್ಲಿ ನೇಯುತ್ತಾರೆ.