ಪಳನಿ ದಂಡಯುತಪಾಣಿ ದೇವಾಲಯ (ಮುರುಗನ ದೇವಾಲಯ)ವು ಬೆಟ್ಟದ ಮೇಲಿದೆ. ಇಲ್ಲಿಗೆ ಯಾತ್ರಾರ್ಥಿಗಳು 600 ಮೆಟ್ಟಿಲುಗಳನ್ನು ಹತ್ತಿ ಹೋಗಬಹುದು ಅಥವ ರೋಪ್ ಕಾರ್ನಲ್ಲಿ ಹೋಗಬಹುದು. ಬೆಟ್ಟದ ಮೇಲೆ ಹತ್ತಿ ನಿಂತಾಗ ಇಡೀ ಪಟ್ಟಣದ ಸುಂದರ ನೋಟವನ್ನು ಕಾಣಬಹುದು. ಈ ದೇವಾಲಯವನ್ನು ಚೇರ ವಂಶಕ್ಕೆ ಸೇರಿದ ಚೇರಮಾನ ಪೆರುಮಾಳ್ ಕಟ್ಟಿಸಿದನೆಂದು...
ಇಡುಂಬನ್ ಬೆಟ್ಟದ ಮೇಲಿರುವ ಇಡುಂಬನ್ ದೇವಾಲಯವು ಅಗಸ್ತ್ಯ ಋಷಿಯ ಕಾಲದಿಂದಲೂ ಪ್ರಸಿದ್ಧವಾಗಿದೆ. ಪುರಾಣಗಳ ಪ್ರಕಾರ ಋಷಿಯು ತನ್ನ ಸಹಾಯಕನಾಗಿದ್ದ ಇಂಡುಬನಿಗೆ ಶಿವಗಿರಿ ಮತ್ತು ಶಕ್ತಿಗಿರಿಯನ್ನು ಭಾರತದಲ್ಲಿ ತನ್ನ ನಿವಾಸಸ್ಥಾನಕ್ಕಾಗಿ ತೆಗೆದುಕೊಳ್ಳಲು ಹೇಳಿದನಂತೆ. ಇಂಡುಬನು ದೇವಾಸುರರ ಯುದ್ಧದಲ್ಲಿ ಬದುಕಿ ಉಳಿದಿದ್ದ...
ತಿರುವಾವಿನಂಕುಡಿ ದೇವಸ್ಥಾನವನ್ನು ಕುಲನಾಥೈ ವೇಲಾಯುಧಸ್ವಾಮಿ ದೇವಸ್ಥಾನ ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ಇದು ಈ ಪ್ರಾಂತ್ಯದ ಪುರಾತನ ದೇವಾಲಯಗಳಲ್ಲೊಂದು. ಇದು ಮುರುಗನ ಆವಾಸ ಸ್ಥಾನವೆಂದು ನಂಬಲಾಗುತ್ತದೆ. ಈ ದೇವಾಲಯವು ತಿರು ಆವಿನಂಕುಡಿ ಬೆಟ್ಟದ ತಪ್ಪಲಿನಲ್ಲಿದೆ. ಹಾಡು ಮತ್ತು ಪುರಾಣಗಳಲ್ಲಿ ಹೇಳಲಾಗಿರುವ ಮೂರು...
ಶರವಣ ಪೋಯ್ಗೈ ಒಂದು ಸಣ್ಣ ಕೊಳ. ಇಲ್ಲಿನ ನೀರಿಗೆ ಅತೀಂದ್ರಿಯ ಶಕ್ತಿಗಳಿವೆ ಎಂದು ನಂಬಲಾಗಿದೆ. ಈ ಕೊಳದಲ್ಲಿ ಸ್ನಾನ ಮಾಡುವುದರಿಂದ ರೋಗರುಜಿನಗಳು ಮತ್ತು ಪಾಪಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ತಿರುವಾವಿನಂಕುಡಿ ದೇವಾಲಯದಲ್ಲಿರುವ ಈ ಕೊಳವು ಹಲವಾರು ಮಂದಿ ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಇಲ್ಲಿನ ಸ್ಥಳ ಪುರಾಣಗಳ...
ಪಳನಿಯಿಂದ 7 ಕಿಮೀ ದೂರದಲ್ಲಿ ವರತಮನತಿ ಆಣೆಕಟ್ಟಿದೆ. ಇದು ತೆಕ್ಕಂತೊಟ್ಟಂಗೆ ಹೋಗುವ ಹಾದಿಯಲ್ಲಿದೆ. ಮಕ್ಕಳಿಗೆ ಇಲ್ಲಿ ಹಲವು ಮನೋರಂಜಕ ಚಟುವಟಿಕೆಗಳಿವೆ. ಕೊಡೈಕೆನಾಲ್ನಿಂದ ಇಲ್ಲಿಗೆ ಬಸ್ ಸೌಕರ್ಯವಿದೆ. ನೀವು ಮಕ್ಕಳೊಂದಿಗೆ ಪಳನಿಗೆ ಪ್ರವಾಸ ಹೊರಟಿರುವಿರಾದರೆ ಈ ಪ್ರದೇಶಕ್ಕೆ ತಪ್ಪದೇ ಹೋಗಿಬನ್ನಿ. ಮಕ್ಕಳಿಗೆ ಖುಷಿ ನೀಡುವ...
ಕುತ್ತಿರೈಯಾರ್ ಆಣೆಕಟ್ಟು ಜಲಪಾತವನ್ನು ಕುಂಬೈನಿಂದ ಸುಮಾರು 1 ಕಿಮೀ ಚಾರಣ ಮಾಡುವುದರ ಮೂಲಕ ತಲುಪಬಹುದು. ಇದು ಆಣೆಕಟ್ಟಿನ ಹಿಂಭಾಗದಲ್ಲಿದ್ದು ಸ್ಥಳೀಯರ ಇಲ್ಲಿಗೆ ತಲುಪಲು ನೆರವು ನೀಡುತ್ತಾರೆ. ಚಾರಣ ಮಾರ್ಗವು ಪ್ರವಾಸಿಗರಿಗೆ ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ಸವಿಯುವ ಅವಕಾಶ ಕಲ್ಪಿಸಿಕೊಡುತ್ತದೆ. ಇದು ಪಳನಿಯ ಅತ್ಯಂತ...
ಬೋಗಾರ್ ಸಮಾಧಿಯು ಮುರುಗನ ದೇವಾಲಯದ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿದೆ. ಬೋಗಾರ್ ಮುರುಗನ ಭಕ್ತ. ಈತನೇ ಮುರುಗನ ಮೂಲ ವಿಗ್ರಹವನ್ನು ಕೆತ್ತಿದ ಎಂದು ನಂಬಲಾಗಿದೆ. ಈತ ಸಿದ್ಧ ವೈದ್ಯಕೀಯ ಪದ್ಧತಿಯನ್ನು ಅಭ್ಯಾಸ ಮಾಡುತ್ತಿದ್ದ. ಈ ಪದ್ಧತಿಯನ್ನು ಪ್ರಚುರಪಡಿಸಲು ಚೀನಾಗೆ ಹೋಗಿಬಂದಿದ್ದ. ಬೋಗಾರನ ಸಮಾಧಿಯಿಂದ ಮುರುಗನ ಮೂಲ...
ತೆಕ್ಕಂತೊಟ್ಟಂ ಹಳ್ಳಿಯ ಸಮೀಪ ಈ ಜಲಪಾತವಿದೆ. ಪಳನಿಯ ಬೆಟ್ಟದ ಮೇಲಿರುವ ಟ್ಯಾಂಕಿಗೆ ಈ ಜಲಪಾತದ ನೀರನ್ನು ಪೈಪುಗಳ ಮೂಲಕ ಹಾಯಿಸಲಾಗುತ್ತದೆ. ಈ ನೀರನ್ನು ಶುದ್ಧೀಕರಣದ ಬಳಿಕ ಪಳನಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತದೆ. ಈ ಟ್ಯಾಂಕನ್ನು ‘ವಾಟರ್ ಡ್ಯಾಂ’ ಎಂದು ಕರೆಯುತ್ತಾರೆ. ತೆಕ್ಕಂತೊಟ್ಟಂನಲ್ಲಿ ಬಸ್ಸಿನಿಂದ...
ಪೆರಿಯನಾಯಕಿ ಅಮ್ಮನ ದೇವಾಸ್ಥಾನವು ಪಾರ್ವತಿಯ ದೇವಸ್ಥಾನ. ಸುಬ್ರಮಣ್ಯನ ತಾಯಾದ್ದರಿಂದ ಈಕೆಗೆ ಇಲ್ಲಿ ವಿಶೇಷ ಮಹತ್ವವಿದೆ. ಇದು ದಕ್ಷಿಣ ಭಾರತೀಯ ಶೈಲಿಯಲ್ಲಿರುವ ದೇವಾಲಯ. ಇಲ್ಲಿ ನಟರಾಜ, ವಿನಾಯಕ, ಮುರುಗ, ಕೈಲಾಸನಾಥ ಮತ್ತು ಮುತ್ತುಕುಮಾರಸ್ವಾಮಿ ಮತ್ತು ಇತರ ಶೈವ ಭಕ್ತರ ಗುಡಿಗಳಿವೆ. ಈ ದೇವಾಸ್ಥಾನದಲ್ಲಿ...