ನಾಗರಹೊಳೆ -ನದಿಯ ಜೊತೆಗೆ ಒಂದಿಷ್ಟು ಮೈನವಿರೇಳಿಸುವ ಸಮಯ
ನಾಗರಹೊಳೆ ಎಂದರೆ “ ಹಾವಿನ ಕೆರೆ “ ಎಂದರ್ಥ. ಈ ಸ್ಥಳವು ಅಲ್ಲಿರುವ ದಟ್ಟವಾದ ಕಾಡುಗಳಲ್ಲಿ ಹಾವಿನ ಚಲನೆಯಂತೆ ಪ್ರಶಾಂತವಾಗಿ ಹರಿಯುವ ನದಿಯಿಂದ ತನ್ನ ಹೆಸರನ್ನು ಪಡೆದಿದೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ನಾಗರಹೊಳೆಯು ನಿಸರ್ಗ ಪ್ರಿಯರಿಗೆ ಮತ್ತು ಕಾಡು ಪ್ರಾಣಿಗಳ ಆಸಕ್ತರಿಗೆ ಪ್ರಿಯವಾದ ಸ್ಥಳ .
ನಾಗರಹೊಳೆಯು ಏಕೆ ಪ್ರಸಿದ್ಧವಾಗಿದೆ.
ನಾಗರಹೊಳೆಯು ಬೃಹತ್ತಾಗಿ ಚಾಚಿಕೊಡಿರುವ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಒಂದು ಭಾಗವಾಗಿದೆ. ಮನೋಹರವಾದ ವಾತಾವರಣ , ಸಮೃದ್ಧವಾದ ಸಸ್ಯ ರಾಶಿ ಮತ್ತು ಜೀವ ರಾಶಿ ಹಾಗೂ ದಟ್ಟವಾದ ಹಸಿರಿನಿಂದ ತುಂಬಿದ ಕಾಡುಗಳು ಪ್ರವಾಸಿಗರನ್ನು ವರ್ಷ ಪೂರಾ ಈ ಸ್ಥಳಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ನಾಗರಹೊಳೆಯು ಪ್ರಾಚೀನದಿಂದಲೂ ತನ್ನ ಕಾಡು ಪ್ರಾಣಿಗಳಿಂದ ಪ್ರಸಿದ್ಧಿ ಹೊಂದಿದೆ. ಸ್ಥಳೀಯ ದಂತ ಕಥೆಯ ಪ್ರಕಾರ ಮೈಸೂರಿನ ಅರಸರು ಈ ಕಾಡಿನಲ್ಲಿ ಆನೆಗಳು ಮತ್ತು ಕಾಡು ಕೋಣಗಳಿಗಾಗಿ ಬೇಟೆಯಾಡುತ್ತಿದರು. ಈಗಲೂ ಈ ವನದಲ್ಲಿ ವೈವಿಧ್ಯಮಯ ಪ್ರಾಣಿ ಸಂಕುಲವನ್ನು ಕಾಣಬಹುದು
ನಾಗರಹೊಳೆಯ ಪ್ರವಾಸ ಸಾರ್ಥಕವೆನಿಸುವುದು ಅಲ್ಲಿನ ಬ್ರಹ್ಮಗಿರಿ ಬೆಟ್ಟ ಮತ್ತು ಇರ್ಪು ಜಲಪಾತವನ್ನು ಕಂಡಾಗ ಮಾತ್ರ . ಈ ಜಲಪಾತದ ಮೂಲ ಲಕ್ಷ್ಮಣ ತೀರ್ಥ ನದಿಯ ನೀರೆಂದರೆ ತಪ್ಪಾಗಲಾರದು. ಇಲ್ಲಿನ ಜನರ ನಂಬಿಕೆಯ ಪ್ರಕಾರ ಈ ನದಿಯು ಸೀತಾ ಮಾತೆಯ ಕೃಪೆಯಿಂದ ಜನ್ಮ ತಾಳಿದೆ. ರಾಮ ಮತ್ತು ಲಕ್ಷ್ಮಣರ ಜೊತೆಗೆ ವನವಾಸದಲ್ಲಿರುವಾಗ, ಸೀತಾ ಮಾತೆಯೂ ಬಾಯಾರಿಕೆಯಿಂದ ಬಳಲುತ್ತಿರಲು ನೀರಿಗಾಗಿ ಲಕ್ಷ್ಮಣನು ಭೂಮಿಗೆ ಬಾಣವನ್ನು ಬಿಡಲು ಅದೇ ಸ್ಥಳದಲ್ಲಿ ಈ ನದಿಯು ಚಿಮ್ಮಿತು ಎನ್ನುವುದು ಪುರಾಣ.
ನಾಗರಹೊಳೆಯು ಮಂಗಳೂರಿಗೆ ಸಮೀಪವಿದ್ದು ಸುಲಭವಾಗಿ ತಲುಪಬಹುದಾಗಿದೆ