ಹಿಮಾಚಲ ಪ್ರದೇಶದ ಹಮೀರ್ಪುರ ಜಿಲ್ಲೆಯ ಬಿಯಸ್ ನದಿ ದಡದಲ್ಲಿರುವ ಸುಂದರ ಪ್ರವಾಸಿ ತಾಣವೇ ನಾದೌನ್. ಸಮುದ್ರ ಮಟ್ಟದಿಂದ ಸುಮಾರು 508 ಮೀಟರ್ ಎತ್ತರದಲ್ಲಿರುವ ಈ ಪ್ರದೇಶವು ತನ್ನ ಸುತ್ತಲೂ ನಯನಮನೋಹರ ತಾಣಗಳನ್ನು ಹೊಂದಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ, ನಾದೌನ್, ನಾದೌನ್ ಜಾಗೀರಿನ ಕೇಂದ್ರಸ್ಥಾನವಾಗಿತ್ತು ಮತ್ತು ಕಾಂಗ್ರಾದ ಮಹಾರಾಜ ಸಂಸಾರ್ ಚಾಂದ್ರ ಆಡಳಿತಕ್ಕೆ ಒಳಪಟ್ಟಿತ್ತು.
ಈ ಪ್ರದೇಶದ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿವೆ. ಶ್ರೀ ಗುರುದ್ವಾರ ಸಾಹಿಬ್, ಬಿಲ್-ಕಾಲೇಶ್ವರ ದೇವಸ್ಥಾನ ಮತ್ತು ಅಮ್ತರ್-ನಾದೌನ್ ಕೋಟೆ. ಬಿಯಸ್ ನದಿ ತೀರದಲ್ಲಿರುವ ಶ್ರೀ ಗುರುದ್ವಾರ ಸಾಹಿಬ್ ಸಿಖ್ ಧಾರ್ಮಿಕ ಕೇಂದ್ರ. ನಾದೌನ್ಗೆ ಭೇಟಿ ನೀಡುವ ಪ್ರವಾಸಿಗರು ಬಿಲ್-ಕಾಲೇಶ್ವರ ದೇವಸ್ಥಾನಕ್ಕೆ ಒಮ್ಮೆ ಹೋಗಲೇಬೇಕು. ಐತಿಹ್ಯಗಳ ಪ್ರಕಾರ, ಈ ದೇವಸ್ಥಾನವು ಪಾಂಡವರಿಂದ ನಿರ್ಮಾಣವಾಗಿದ್ದು. ಶಿವನಿಗೆ ಈ ದೇವಸ್ಥಾನವನ್ನು ಅರ್ಪಿಸಲಾಗಿದೆ. ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಅಮ್ತರ್-ನಾದೌನ್ ಕೋಟೆಯಲ್ಲಿ ಕಟೋಚ್ ರಾಜಮನೆತನದ ರಾಜನಾಗಿದ್ದ ಮಹಾರಾಜ ಸಂಸಾರ್ ಚಂದ್ರ ಕಾಲದ ಪೇಂಟಿಂಗ್ಗಳನ್ನು ನೋಡಬಹುದು. ನಾದೌನ್ನಲ್ಲಿರುವ ಇನ್ನೊಂದು ಪ್ರಮುಖ ಆಕರ್ಷಕ ತಾಣವೆಂದರೆ ಪೀರ್-ಸಾಹಿಬ್ ಸಮಾಧಿ. ಇದು ಭರ್ಮೋತಿ ಹಳ್ಳಿಯಲ್ಲಿದೆ. ಪ್ರವಾಸಿಗರು ಬಿಯಸ್ ನದಿಯಲ್ಲಿ ಮೀನು ಹಿಡಿಯುವುದು ಮತ್ತು ತೆಪ್ಪದ ಮೇಲೆ ಪ್ರಯಾಣಿಸುವ ಖುಷಿ ಅನುಭವಿಸಬಹುದು.
ಪ್ರವಾಸಿಗರು ರೈಲು, ರಸ್ತೆ ಮತ್ತು ವಿಮಾನದ ಮೂಲಕ ನಾದೌನ್ಗೆ ತಲುಪಬಹುದು. ಗಗ್ಗಲ್ ವಿಮಾನ ನಿಲ್ದಾಣ ಮತ್ತು ಜ್ವಾಲಾಮುಖಿ ರಸ್ತೆ ರೈಲ್ವೆ ನಿಲ್ದಾಣಗಳು ನಾದೌನ್ಗೆ ಸಮೀಪದ ರೈಲು ನಿಲ್ದಾಣ. ಪ್ರವಾಸಿಗರು ನಾದೌನ್ಗೆ ಬೇಸಿಗೆ ಕಾಲದಲ್ಲಿ ಭೇಟಿ ನೀಡಬಹುದು. ಮೇ ನಿಂದ ಜುಲೈವರೆಗೆ ಇಲ್ಲಿ ಬೇಸಿಗೆ ಕಾಲವಿರುತ್ತದೆ. ಚಳಿಗಾಲವೂ ಕೂಡಾ ಇಲ್ಲಿನ ಪ್ರವಾಸಕ್ಕೆ ಉತ್ತಮ ಕಾಲವಾಗಿದ್ದು, ಈ ಅವಧಿಯಲ್ಲಿ ಪ್ರಶಾಂತ ವಾತಾವರಣವಿರುತ್ತದೆ.