ಗಣೇಶ್ ಧಾಮ್ ಎಂಬುದು ಭಗವಾನ್ ಗಣೇಶನಿಗೆ ಅರ್ಪಿತವಾದ ಪ್ರಸಿದ್ಧ ದೇವಾಲಯವಾಗಿದೆ. ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ, 35 ಎತ್ತರದ ಬೃಹತ್ ಗಣೇಶ ಮೂರ್ತಿ. ಕೆಲ ವರ್ಷಗಳ ಹಿಂದೆ, ಅಲ್ಲಿನ ಇಬ್ಬರು ಸ್ಥಳೀಯ ಗಣ್ಯರಿಂದ ಈ ಮೂರ್ತಿಯು ಪ್ರ ತಿಷ್ಟಾಪಿಸಲ್ಪತ್ತಿತು. ಎರಡು ನದಿಗಳು ಗಣೇಶ್ ಧಾಮ್ ನ ಸನಿಹದಲ್ಲಿಯೇ...
ಭಗವಾನ್ ಆಂಜನೇಯ ಸ್ವಾಮಿಗೆ ಅರ್ಪಿತವಾದ ಬೃಹತ್ ದೇವಾಲಯವೇ ಹನುಮಾನ್ ಧಾಮ್. 72 ಅಡಿಗಳಷ್ಟು ಎತ್ತರದ ಬೃಹತ್ ಹನುಮಾನ್ ವಿಗ್ರಹವು ಇಲ್ಲಿದೆ. 17 ನೆಯ ಶತಮಾನದ ಉತ್ತರಾರ್ಧಭಾಗದಲ್ಲಿ, ಸುದರ್ಶನ್ ಸಿಂಗ್ ಚಕ್ರ ಮತ್ತು ಇಂದರ್ ಕುಮಾರ್ ಎಂಬ ಇಬ್ಬರು ಗಣ್ಯ ಭಕ್ತರಿಂದ ಈ ವಿಗ್ರಹವು ಪ್ರತಿಷ್ಟಾಪಿಸಲ್ಪಟ್ಟಿತು...
ಭೈರೋನ್ ಕಾ ಮಂದಿರ್, ಮುಜಫರ್ ನಗರದ ಅತಿ ಪ್ರಮುಖ ದೇವಾಲಯಗಳಲ್ಲಿ ಒಂದು. ಇದರ ಪ್ರಸಿದ್ಧಿಗೆ ಕಾರಣ, ಇಲ್ಲಿ 11 ಶಿವಲಿಂಗಗಳಿವೆ. ಈ ದೇವಾಲಯವು ಬ್ರಾಹ್ಮಣ ಕುಟುಂಬವೊಂದರಿಂದ ನಿರ್ವಹಿಸಲ್ಪಡುತ್ತಿದ್ದು, ಅವರು ಇಲ್ಲಿನ ಎಲ್ಲಾ ಆಡಳಿತಾತ್ಮಕ ಹಾಗೂ ಹಬ್ಬಹರಿದಿನಗಳ ಕಾರ್ಯಕ್ರಮಗಳ ಉಸ್ತುವಾರಿಯನ್ನು...
ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯವು ಮುಜಫರ್ ನಗರದಲ್ಲಿ, ಸನಾತನ್ ಧರಮ್ ಕಾಲೇಜಿನ ಪ್ರಾಣಂಗಣದಲ್ಲಿದೆ. ಈ ವಸ್ತುಸಂಗ್ರಹಾಲಯವು 1970 ರಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದಿಂದ, ವಿವಿಧ ಪ್ರಾಣಿಗಳನ್ನು ಪರಿಚಯಿಸುವ ಉದ್ಧೇಶದಿಂದ ಆರಂಭಿಸಲ್ಪಟ್ಟಿತು. ಇಲ್ಲಿರುವ ಕೀಟ ಸಂಗ್ರಹಾಲಯವು ಹಲವು ಪ್ರಮುಖ...
ದೇವಿ ದುರ್ಗಾಮಾತೆಯ ಆರಾಧಕರಿಗೆ, ದುರ್ಗಾ ಧಾಮ್ ಪ್ರಸಿದ್ಧ ಸ್ಥಳವಾಗಿದೆ. ಭಗವಾನ್ ಶಿವನ ಸನಿಹದಲ್ಲಿಯೇ 51 ಅಡಿ ಎತ್ತರದ, ದೊಡ್ಡದಾದ ಮತ್ತು ಸುಂದರವಾದ ದುರ್ಗಾದೇವಿಯ ಮೂರ್ತಿಯಿದೆ. ಅಲ್ಲಿಯೇ ಸಮೀಪದಲ್ಲಿ ಒಂದು ಪ್ರಾಕೃತಿಕ ಗುಹೆಯಿದೆ. ದೇವ, ದೇವಿಯರಿಗೆ ಪ್ರಾರ್ಥನೆಯನ್ನು ಸಲ್ಲಿಸಲು ಅನೇಕ ಭಕ್ತಾದಿಗಳು...
ಕಮ್ಲ ನೆಹ್ರು ವಾಟಿಕವು ಒಂದು ಸುಂದರವಾದ ಮಾನನಿರ್ಮಿತ ಉದ್ಯಾನವನವಾಗಿದ್ದು, ಇದು ತನ್ನ ಹೆಸರನ್ನು ಜವಾಹರಲಾಲ್ ನೆಹರು ಅವರ ಪತ್ನಿಯ ತರುವಾಯ ಪಡೆದುಕೊಂಡಿದೆ. ಈ ಉದ್ಯಾನವನದಲ್ಲಿ ಹಲವಾರು ಫಲಭರಿತ ವೃಕ್ಷಗಳಿವೆ. ಇವುಗಳು ಪಕ್ವವಾದಾಗ ಅವನ್ನು ಹರಾಜು ಹಾಕಲಾಗುತ್ತದೆ. ಸ್ಥಳೀಯ ನಗರಪಾಲಿಕೆಯ ಅಧಿಕಾರಿಗಳು ಈ...
ಅಕ್ಷಯ ವಟ ವೃಕ್ಷವು ಮುಜಫರ್ ನಗರದಲ್ಲಿರುವ ಒಂದು ಮರವಾಗಿದ್ದು, ಇದು ಸಾವಿರಾರು ವರ್ಷಗಳಷ್ಟು ಹಳೆಯದಾದ ವೃಕ್ಷವಾಗಿದೆ. ಮಹರ್ಷಿ ಸುಖದೇವ್ ಅವರು ಶ್ರೀ ಮದ್ಭಾಗವತವನ್ನು ರಾಜಾ ಪರೀಕ್ಷಿತನಿಗೆ ಈ ಮರದ ಕೆಳಗೆಯೇ ಕುಳಿತು ಭೋಧಿಸಿದರು ಎಂದು ಪ್ರತೀತಿ ಇದೆ. ಅಸಂಖ್ಯಾತ ಭಕ್ತಾದಿಗಳು ಈ ವೃಕ್ಷಕ್ಕೆ ಪ್ರದಕ್ಷಿಣೆಗೈ ಯಲು...
ವಹೇಲ್ನ ಎಂಬುದು ಮುಜಫರ್ ನಗರದ ಹೊರವಲಯದಲ್ಲಿರುವ ಒಂದು ಚಿಕ್ಕ ಗ್ರಾಮವಾಗಿದೆ. ಈ ಗ್ರಾಮವು, ಕಬ್ಬಿಣದ ಕಾರ್ಖಾನೆ ಹಾಗೂ ಅಪಾರವಾದ ಕಬ್ಬಿನ ಬೆಳೆಗೆ ಪ್ರಸಿದ್ಧವಾಗಿದೆ. ಮಾತ್ರವಲ್ಲದೇ, ಇಲ್ಲಿ ಜೈನ ಮಂದಿರ್, ಶಿವ್ ಮಂದಿರ್, ಮತ್ತು ಮಸೀದಿಯಂತಹ ಅನೇಕ, ಪ್ರಮುಖ ಧಾರ್ಮಿಕ ಕೇಂದ್ರಗಳಿದ್ದು, ಇವುಗಳನ್ನು ಒಂದೇ...
ಕಾಳಿ-ನದಿ ದೇವಿ ಮಂದಿರ್ ಎಂಬುದು ಜಿಲ್ಲೆಯ ಅತಿ ಪುರಾತನ ದೇವಾಲಯಗಳಲ್ಲೊಂದಾಗಿದ್ದು ಇದಕ್ಕೆ ಐತಿಹಾಸಿಕ ಮಹತ್ವವಿದೆ. ದೇವಿ ಚೌದಾಸ್ ರ ಮೇಲೆ ಬೃಹತ್ ಭಂಡಾರವೊಂದನ್ನು ಪ್ರತೀ ವರ್ಷ ಇರಿಸಲಾಗುತ್ತದೆ. ಹೋಳಿಯ ನಂತರ, ದೇವಸ್ಥಾನದಲ್ಲಿ ದೊಡ್ಡ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಈ ಕ್ಷೇತ್ರವು ವರ್ಷವಿಡೀ...
ಭಗವಾನ್ ಶ್ರೀ ಶಂಕರನ ಬೃಹತ್ ಮೂರ್ತಿಯು ಕೇಂದ್ರಭಾಗದಲ್ಲಿ ಇರುವುದರಿಂದ, ಈ ಮಂದಿರಕ್ಕೆ ಶಿವ್ ಚೌಕ್ ಎಂದು ಹೆಸರಿಸಲಾಗಿದೆ. ಶಿವ್ ಚೌಕ್ ನಗರದ ಹೃದಯ ಭಾಗದಲ್ಲಿದ್ದು, ಜನದಟ್ಟಣೆಯಿಂದ ಕೂಡಿದ ಮಾರುಕಟ್ಟೆಗಳು ಹಾಗೂ ವಾಣಿಜ್ಯ ಸ್ಥಳಗಳಿಂದ ಸುತ್ತುವರೆದಿದೆ. ತಮ್ಮ ತಮ್ಮ ವೃತ್ತಿಗೆ ತೆರಳುವ ಜನರು ಅದಕ್ಕೆ ಮೊದಲು, ಪ್ರತಿದಿನ...
ದರ್ಗಃ ಹರ್ ಶ್ರೀನಾಥ್, ಭಕ್ತಾದಿಗಳಿಗೆ ಪ್ರಸಿದ್ಧ ಸ್ಥಳವಾಗಿದೆ. ಈ ದೇವಸ್ಥಾನದ ಟ್ರಸ್ಟ್ ಗೆ ಸೇರಿದ ಹಲವಾರು ಶಾಖೆಗಳು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಇದರ ಕೇಂದ್ರ ಕಾರ್ಯಸ್ಥಾನವು ದೆಹಲಿಯಲ್ಲಿದೆ. ಶಿವರಾತ್ರಿಯಂತಹ ಶುಭದಿನಗಳಂದು, ಮಹತ್ವದ ದಿನಗಳಂದು, ಈ ಸ್ಥಳವು...
ಸಂಕೀರ್ತನ್ ಭವನ್ ಒಂದು ಸುಪ್ರಸಿದ್ಧ ದೇವಸ್ಥಾನವಾಗಿದ್ದು, ಇದು ಭಗವಾನ್ ತಿರುಪತಿ ಶ್ರೀ ಬಾಲಾಜಿಗೆ ಅರ್ಪಿತವಾಗಿದೆ. ಪ್ರತಿದಿನ ಮುಸ್ಸಂಜೆಯ ವೇಳೆ ಇಲ್ಲಿ ಕೀರ್ತನೆ ನಡೆಯುವುದರಿಂದ, ಈ ದೇವಾಲಯವನ್ನು, ಸಂಕೀರ್ತನ್ ಭವನ್ ಎಂದೂ ಕರೆಯುತ್ತಾರೆ. ದೇವಳದ ಅಧಿಕಾರಿಗಳು ಪ್ರತಿದಿನ ಮಧ್ಯಾಹ್ನದ ವೇಳೆ, ಬಡವರಿಗಾಗಿ...
ಸರಕಾರೀ ಶೈಕ್ಷಣಿಕ ವಸ್ತುಸಂಗ್ರಹಾಲಯವು 1959 ರಲ್ಲಿ, ಭಾರತದ ಭವ್ಯ ಇತಿಹಾಸವನ್ನು ಪರಿಚಯಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿತು. ಈ ವಸ್ತುಸಂಗ್ರಹಾಲಯವು ಲೋಹದ ಪ್ರತಿಮೆಗಳು, ಪಿಂಗಾಣಿ ಮೂರ್ತಿಗಳು, ನಾಣ್ಯಗಳು, ಮತ್ತು ಶಿಲಾ ಮೂರ್ತಿಗಳ ವಿಶಾಲ ಶ್ರೇಣಿಯ ಸಂಗ್ರಹಕ್ಕೆ ಪ್ರಸಿದ್ಧವಾಗಿದೆ. ನಾನಾ ವಿಧವಾದ...
ಶುಕ್ರತಲವು, ಮುಜಫರ್ ಜಿಲ್ಲೆಯ ಜನಜನಿತವಾದ ಧಾರ್ಮಿಕ ಸ್ಥಳವಾಗಿದೆ. ಮಹರ್ಷಿ ಶುಕನು ಭಗವದ್ ಪುರಾಣವನ್ನು ಪರೀಕ್ಷಿತ ಮಹಾರಾಜನಿಗೆ, ಆತನು ಹಾವಿನಿಂದ ಕಚ್ಚಲ್ಲ್ಪಟ್ಟು ಸಾವಿಗೀಡಾಗುವ ಮುನ್ನ ಸತತ 7 ದಿನಗಳ ಕಾಲ ಈ ಸ್ಥಳದಲ್ಲಿಯೇ ಭೋದಿಸಿದನು ಎಂದು ಸ್ಮೃತಿಗಳು ಸಾರುತ್ತವೆ. ಈ ವಿದ್ಯಮಾನಕ್ಕೆ ಸಾಕ್ಷೀಭೂತವಾದ,...