ಶ್ರೀ ಗುರು ನಾನಕ್ ದೇವ್ಜೀ ಗುರುದ್ವಾರವು ಮನಿಕರನ್ನ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಗ್ಯಾನಿ ಸಿಂಗ್ರವರು ರಚಿಸಿದ ಗ್ರಂಥ "ತ್ವಾರಿಖ್ ಗುರು ಖಾಲ್ಸ"ದ ಪ್ರಕಾರ, ಗುರು ನಾನಕ್ ದೇವ್ರವರು ಇಲ್ಲಿಗೆ ತಮ್ಮ ಐದು ಜನ ಅನುಯಾಯಿಗಳ ಜೊತೆಗೆ ಭೇಟಿಕೊಟ್ಟಿದ್ದರಂತೆ.
ಇಲ್ಲಿ ಗುರು ನಾನಕರು ತಮ್ಮ...
ಕುಲಂತ್ ಪೀಠವು ಹಿಮಾಚಲ್ ಪ್ರದೇಶದಲ್ಲಿರುವ ವಿಷ್ಣು ಕುಂಡದಲ್ಲಿದ್ದು, ದೇಶದ ಅತ್ಯಂತ ಪ್ರತಿಷ್ಠಿತ ಪೀಠಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಜನಪದ ಕತೆಯ ಪ್ರಕಾರ, ಲಯಕಾರಕನಾದ ಪರಶಿವನು ಇಲ್ಲಿ ವಾಸಿಸುತ್ತಿದ್ದಾನಂತೆ. ಹಾಗಾಗಿ ಇದು ಹಲವಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.
ಈ ಪೀಠವು ಒಂದು ಪವಿತ್ರ...
ಹರೀಂಧರ್ ಪರ್ವತ ಮತ್ತು ಪಾರ್ವತಿ ನದಿಗಳು ಹಿಮಾಚಲ್ ಪ್ರದೇಶದ ಮನಿಕರನ್ನಲ್ಲಿರುವ ಪ್ರಸಿದ್ಧ ಸ್ಥಳಗಳಾಗಿದ್ದು, ಪ್ರತಿ ವರ್ಷ ಹಲವಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಹಿಮಚ್ಚಾಧಿತ ಹರೀಂಧರ್ ಪರ್ವತ ಮತ್ತು ಹಚ್ಚ ಹಸಿರಿನಿಂದ ಕೂಡಿದ ಕಣಿವೆಗಳು ಮನಿಕರನ್ಗೆ ತಮ್ಮದೇ ಆದ ಮೆರಗನ್ನು ಒದಗಿಸಿವೆ.
ಶ್ರೀ ರಾಮಚಂದ್ರನ ದೇವಾಲಯವು ಹಿಮಾಚಲ್ ಪ್ರದೇಶದ ಮನಿಕರನ್ನಲ್ಲಿರುವ ಪ್ರಸಿದ್ಧ ಸ್ಥಳವಾಗಿದೆ. ಇದು ರಾಜ ಜಗತ್ ಸಿಂಗ್ರಿಂದ ಸುಮಾರು 17ನೇ ಶತಮಾನದಲ್ಲಿ ನಿರ್ಮಾಣಗೊಂಡಿತು. ದಂತಕತೆಗಳ ಪ್ರಕಾರ, ಸ್ವಾಮಿ ರಾಮಚಂದ್ರನು ಈ ದೇವಾಲಯವನ್ನು ಅಯೋಧ್ಯೆಯಿಂದ ಮನಿಕರನ್ಗೆ ಸ್ಥಳಾಂತರಿಸಿದನಂತೆ.
ಈ ದೇವಾಲಯದ...
ಹಿಮಾಚಲ್ ಪ್ರದೇಶದಲ್ಲಿರುವ ಮನಿಕರನ್ನಲ್ಲಿ ಪ್ರಾಚೀನ ಶಿವನ ದೇವಾಲಯವಿದೆ. ಇಲ್ಲಿ ಶಿವನ ಜೊತೆಗೆ ತ್ರಿಮೂರ್ತಿಗಳಲ್ಲಿ ಒಬ್ಬರಾದ ಸೃಷ್ಟಿಕಾರಕನಾದ ಬ್ರಹ್ಮ, ಸ್ಥಿತಿಕಾರಕನಾದ ವಿಷ್ಣು ದೇವರುಗಳ ವಿಗ್ರಹಗಳನ್ನೂ ನೋಡಬಹುದು. ಈ ದೇವಾಲಯವು 1905 ರಲ್ಲಿ ಈ ಪ್ರಾಂತ್ಯದಲ್ಲಿ ಸಂಭವಿಸಿದ 8.0 ಪ್ರಮಾಣದ ಭೀಕರ ಭೂಕಂಪದ...
ಮನಿಕರನ್ನ ಪ್ರಸಿದ್ಧ ಯಾತ್ರಾ ಸ್ಥಳಗಳೆಂದರೆ ಇಲ್ಲಿನ ಬಿಸಿನೀರಿನ ಬುಗ್ಗೆಗಳು. ಇವುಗಳಲ್ಲಿ ಒಂದು ಗುರು ನಾನಕ್ ದೇವ್ಜೀ ಗುರುದ್ವಾರದಲ್ಲಿದೆ ಮತ್ತು ಇನ್ನೊಂದು ಪಾರ್ವತಿ ನದಿಯ ದಂಡೆಯಲ್ಲಿದೆ.
ಪಾರ್ವತಿ ನದಿಯ ದಂಡೆಯಲ್ಲಿರುವ ಬಿಸಿ ನೀರಿನ ಬುಗ್ಗೆಯು ಪ್ರವಾಸಿಗರ ವಲಯದಲ್ಲಿ ಭಾರೀ ಖ್ಯಾತಿ ಪಡೆದಿದೆ. ಹಲವಾರು...
ಖಿರ್ ಗಂಗಾ ಎಂಬುದು ಮನಿಕರನ್ನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ನಂಬಿಕೆಗಳ ಪ್ರಕಾರ, ಈ ಬಿಸಿ ನೀರಿನ ಬುಗ್ಗೆಯಿಂದ ಬರುವ ಶ್ವೇತ ವರ್ಣದ ನೀರು ಹಲವಾರು ಔಷಧೀಯ ಗುಣಗಳನ್ನು ಹೊಂದಿರುತ್ತದೆಯಂತೆ. ಅರ್ಥಾನುಸಾರ "ಖಿರ್ ಗಂಗಾ" ಎಂದರೆ ಬಿಸಿನೀರಿನ ಬುಗ್ಗೆಯಿಂದ ಬರುವ ಬಿಳಿಯ ನೀರು ಎಂದರ್ಥವಾಗುತ್ತದೆ. ಈ...
ಪುಲ್ಗ ಎಂಬುದು ಮನಿಕರನ್ನಿಂದ 18 ಕಿ.ಮೀ ದೂರವಿರುವ ಒಂದು ಸ್ಥಳವಾಗಿದ್ದು ಮನಿಕರನ್ನ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ತನ್ನ ಸುತ್ತಲು ಇರುವ ಸುಂದರವಾದ ಪೈನ್ ಕಾಡುಗಳು ಮತ್ತು ಹಲವಾರು ಚಾರಣದ ಹಾದಿಗಳ ಸಲುವಾಗಿ ಇದು ಪ್ರಾಕೃತಿಕ ಸ್ವರ್ಗವೆಂದು ಪರಿಗಣಿಸಲ್ಪಟ್ಟಿದೆ. ಚಾರಣದ ಕುರಿತಾದ ಆಸಕ್ತಿ ಇರುವ ಪ್ರವಾಸಿಗರು...