ಕೃಷ್ಣಗಿರಿ ಜಲಾಶಯ ಯೋಜನೆಯು ಕೃಷ್ಣಗಿರಿ ನಗರದಿಂದ ಕೇವಲ 7 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದನ್ನು ತೆನ್ಪೆನ್ನೈ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಜಲಾಶಯವು ಧರ್ಮಪುರಿ ಮತ್ತು ಕೃಷ್ಣಗಿರಿ ನಡುವೆ ನೆಲೆಗೊಂಡಿದೆ. ಈ ಜಲಾಶಯವು ಕೃಷ್ಣಗಿರಿ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಅಲ್ಲದೆ ಸುತ್ತಮುತ್ತಲ...
ಚೆನ್ನಕೇಸವ ಬೆಟ್ಟಗಳ ಪೂರ್ವ ತಪ್ಪಲಿನಲ್ಲಿ ಉಗಮಗೊಳ್ಳುವ ಪೊನ್ನಿಯರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೆಲವರಪಲ್ಲಿ ಜಲಾಶಯ ಯೋಜನೆ ಮತ್ತು ಸಾತನೂರ್ ಜಲಾಶಯವನ್ನು ನೀರಾವರಿ ಸೌಲಭ್ಯಕ್ಕಾಗಿ ನಿರ್ಮಾಣ ಮಾಡಲಾಗಿದೆ. ಈ ಜಲಾಶಯವು ಸುತ್ತಲಿನ ಪ್ರದೇಶಗಳ ಹೊಲ- ಗದ್ದೆಗಳಿಗೆ ನೀರಾವರಿಯನ್ನು ಮತ್ತು ಕುಡಿಯುವ ನೀರನ್ನು...
ಕೃಷ್ಣಗಿರಿಯ ಗಾಂಧಿ ರಸ್ತೆಯಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯವು ಎಲ್ಲ ವಯೋಮಾನದವರನ್ನು ತನ್ನತ್ತ ಆಕರ್ಷಿಸುತ್ತಿರುವ ಪ್ರವಾಸಿ ಕೇಂದ್ರವಾಗಿದೆ. 1993ರಲ್ಲಿ ಪ್ರಾರಂಭಗೊಂಡ ಈ ವಸ್ತುಸಂಗ್ರಹಾಲಯವು ತನ್ನ ಅಮಿತ ಸಂಗ್ರಹದಿಂದ ಗಮನ ಸೆಳೆಯುತ್ತಿದೆ.ಈ ಸಂಗ್ರಹಾಲಯವು ತಮಿಳು ನಾಡು ರಾಜ್ಯದ ಸಂಪ್ರದಾಯ, ಕಲೆ ಮತ್ತು ವಾಸ್ತು...
ಶ್ರೀ ಪಾರ್ಶ್ವ ಪದ್ಮಾವತಿ ಶಕ್ತಿ ಪೀಠ ತೀರ್ಥಧಾಮವು ಕೃಷ್ಣಗಿರಿಯಿಂದ 7ಕಿ.ಮೀ ದೂರದಲ್ಲಿ ಇರುವ ಒರಪ್ಪಂ ಗ್ರಾಮದಲ್ಲಿ ನೆಲೆಗೊಂಡಿದೆ. ಪರಮಪೂಜ್ಯ ಶ್ರೀ ಶ್ರೀ ಶ್ರೀ ವಸಂತ್ ಗುರುದೇವ್ಜೀಯವರಿಂದ ನಿರ್ಮಾಣಗೊಂಡ ಈ ಆಧ್ಯಾತ್ಮಿಕ ಕೇಂದ್ರವು ಜೈನರ 23 ಮತ್ತು 24ನೇ ತೀರ್ಥಂಕರರನ್ನು ಆರಾಧಿಸುತ್ತದೆ. ಈ ಸಂಸ್ಥೆಯು ಶಾಂತಿ ಮತ್ತು...
ತೋರಪಲ್ಲಿಯ ರಾಜಾಜಿ ಸ್ಮಾರಕವು ಚಕ್ರವರ್ತಿ ರಾಜಗೋಪಾಲಚಾರಿಯವರ ಮನೆಯಾಗಿತ್ತು. ಇಲ್ಲಿ ರಾಜಾಜಿಯವರು ಹುಟ್ಟಿದಾಗಿನಿಂದ 11 ವರ್ಷದವರೆಗೆ ಇದ್ದರು (10 ಡಿಸೆಂಬರ್ 1878 – 25 ಡಿಸೆಂಬರ್ 1972) . ಸಿ. ರಾಜಗೋಪಾಲಚಾರಿ ಅಥವಾ ರಾಜಾಜಿಯವರು ಭಾರತದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಧೀಮಂತ ನಾಯಕರಾಗಿದ್ದವರು.
ಇವರು...
ಥಳಿ ಎಂಬುದು ಒಂದು ಪ್ರಶಾಂತವಾದ ಓಯಸಿಸ್ನಂತಹ ಹಳ್ಳಿಯಾಗಿದೆ. ಇದನ್ನು "ಪುಟ್ಟ ಇಂಗ್ಲೆಂಡ್" ಎಂದು ಸಹ ಪರಿಗಣಿಸಲಾಗಿದೆ. ಏಕೆಂದರೆ ಇಲ್ಲಿ ಅಸಂಖ್ಯಾತ ಕೆರೆಗಳು, ಗುಡ್ಡಗಳು ಮತ್ತು ಕಣಿವೆಗಳೆಲ್ಲ ಸೇರಿ ನೋಡುಗರ ಮನಸ್ಸನ್ನು ಸೂರೆಗೊಳ್ಳುತ್ತವೆ. ಹೊಸೂರಿನಿಂದ 25 ಕಿ.ಮೀ ದೂರದಲ್ಲಿರುವ ಥಳಿಯು ತಮಿಳುನಾಡು ಮತ್ತು...
ಥಳಿಯಲ್ಲಿರುವ ವೇಣುಗೋಪಾಲ ಸ್ವಾಮಿ ದೇವಾಲಯವು ದಕ್ಷಿಣ ಭಾರತದಲ್ಲಿರುವ ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ವೇಣುಗೋಪಾಲ ಸ್ವಾಮಿಯು ವಿಷ್ಣುವಿನ ಅವತಾರ. ಈ ದೇವಾಲಯದಲ್ಲಿ ಈ ಸ್ವಾಮಿಯವರ ಸುಂದರವಾದ ವಿಗ್ರಹವಿದೆ. ವೇಣು ಎಂದರೆ ತೆಲುಗಿನಲ್ಲಿ ಕೊಳಲು ಎಂದರ್ಥ. ಈ ದೇವಾಲಯದಲ್ಲಿ ಆ ವೇಣುವಿನ ಮಾಧುರ್ಯವನ್ನು ನೀವು...
ರಾಯಕೋಟ ಅಥವಾ ರಾಯಕೋಟೈ ಎನ್ನುವುದು ಒಂದು ಪಟ್ಟಣವಾಗಿದ್ದು, ಭಾರತ ಪ್ರಾಚ್ಯ ಸರ್ವೇಕ್ಷಣ ವಿಭಾಗದ ಒಂದು ಸಂರಕ್ಷಿತ ಸ್ಮಾರಕವಾಗಿದೆ. ರಾಯಕೋಟೈ ಬೆಟ್ಟವು ಭೌಗೋಳಿಕವಾಗಿ ಪಾಲ್ಗಾಟ್ ಪ್ರಸ್ಥಭೂಮಿಯಲ್ಲಿ ಬರುತ್ತದೆ. ಈ ಪ್ರಾಚೀನ ಕೋಟೆಯು ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿದೆ.
ಪ್ರಸ್ತುತ ಅವಶೇಷವಾಗಿರುವ ಈ ಕೋಟೆಯು ಗತ...
ಮಲ್ಲಚಂದ್ರನ್ ಎಂಬುದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ವಿಭಾಗದವರಿಂದ ನಿರ್ವಹಿಸಲ್ಪಟ್ಟುತ್ತಿರುವ ಒಂದು ತಾಣವಾಗಿದೆ. ಈ ಸ್ಥಳವು ನೂರಾರು ಡೊಲ್ಮೆನ್ಗಳನ್ನು ಹೊಂದಿರುವುದಕ್ಕೆ ವಿಶ್ವಖ್ಯಾತಿಯನ್ನು ಪಡೆದಿದೆ. ಡೊಲ್ಮೆನ್ ಎಂದರೆ ಶಿಲಾಯುಗದ ಕಲ್ಲಿನ ಸಮಾಧಿಗಳು ಎಂದರ್ಥ. ಅಸಲಿಗೆ ಈ ಕಾಲಕ್ಕೆ ಶಿಲಾಯುಗವೆಂಬ ಹೆಸರು...
ಅರುಲ್ಮಿಗು ಮರಗದಮಿಗೈ ಚಂದ್ರ ಚೂಡೇಶ್ವರ ದೇವಾಲಯವು ಹೊಸೂರಿನಲ್ಲಿ ನೆಲೆಗೊಂಡಿದೆ. ಇದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಒಂದು ಬೆಟ್ಟದ ಮೇಲೆ, ಸುಂದರವಾದ ಪ್ರಕೃತಿಯ ಮಡಿಲಿನಲ್ಲಿ ನೆಲೆಗೊಂಡಿದೆ. ಇಲ್ಲಿನ ಪರಿಸರವು ಇಂದಿಗೂ ನಿಷ್ಕಲ್ಮಷವಾಗಿದೆ. ಇಲ್ಲಿ ತಮಿಳು ನಾಡು ಪ್ರವಾಸೋದ್ಯಮವತಿಯಿಂದ ನಿರ್ವಹಿಸಲ್ಪಡುವ ಒಂದು...