ಪ್ರವಾಸಿಗರು ಕೋಲಾರ ಜಿಲ್ಲೆಗೆ ಭೇಟಿಕೊಟ್ಟಾಗ ಇಲ್ಲಿನ ಕೋಲಾರಮ್ಮ ದೇವಾಲಯವನ್ನು ತಪ್ಪದೆ ನೋಡಬೇಕು. ಇದು ಪಾರ್ವತಿ (ಕೋಲಾರಮ್ಮ) ದೇವಿಯ ದೇವಾಲಯವಾಗಿದೆ. ಇದು L ಆಕಾರದ ದೇವಾಲಯವಾಗಿದ್ದು ದ್ರಾವಿಡ ವಿಮಾನ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಇದು ಚೋಳರಿಂದ ಸ್ಥಾಪನೆಗೊಂಡಿದ್ದು ಸುಮಾರು 1000 ವರ್ಷಗಳಷ್ಟು ಹಿಂದಿನದು ಎಂದು...
ಸೋಮೇಶ್ವರ ದೇವಾಲಯವು ಕೋಲಾರ ಜಿಲ್ಲೆಯ ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದು ಶಿವನ ಅವತಾರವಾದ ಸೋಮೇಶ್ವರನ ದೇವಾಲಯವಾಗಿದೆ. ಈ ದೇವಾಲಯವು ಕೋಲಾರ ನಗರದ ಮಧ್ಯ ಭಾಗದಲ್ಲಿ ನೆಲೆಸಿದೆ. ಈ ದೇವಾಲಯವು 14 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು ವಿಜಯನಗರ ಶೈಲಿಯನ್ನು ಹೊಂದಿದೆ. ಇಲ್ಲಿ ಒಂದು ಕಲ್ಯಾಣ...
ಪ್ರವಾಸಿಗರು ಕೋಲಾರ ಜಿಲ್ಲೆಗೆ ಹೋದಾಗೊಮ್ಮೆ ಅವನಿ ಗ್ರಾಮಕ್ಕೆ ಒಮ್ಮೆ ಭೇಟಿ ಕೊಡಬಹುದು. ಈ ಊರು ತನ್ನಲ್ಲಿನ ರಾಮಲಿಂಗೇಶ್ವರ ದೇವಾಲಯಗಳ ಸಮೂಹದಿಂದಾಗಿ ಹೆಸರುವಾಸಿಯಾಗಿದೆ. ಅವನಿಯು ದಕ್ಷಿಣದ ಗಯಾ ಎಂದು ಸಹಾ ಖ್ಯಾತಿ ಪಡೆದಿದೆ. ಇದು ಕೋಲಾರ ಗೋಲ್ಡ್ ಫೀಲ್ಡ್ಸ್ ( ಕೆ.ಜಿ.ಎಫ್) ನಿಂದ 10 ಕಿ.ಮೀ ದೂರದಲ್ಲಿದೆ. ಈ...
ಪ್ರವಾಸಿಗರು ಕೋಲಾರಕ್ಕೆ ಬಂದಾಗ ಬಂಗಾರ ಪೇಟೆ ತಾಲ್ಲೂಕಿನಲ್ಲಿರುವ ಕೋಲಾರ ಗೋಲ್ಡ್ ಫೀಲ್ಡ್ಸ್ ಗೆ ಒಮ್ಮೆ ಭೇಟಿಕೊಡಬಹುದು. ಈ ಸ್ಥಳವು ಬ್ರಿಟೀಷರ ಕಾಲದಲ್ಲಿ ಚಿನ್ನದ ಉತ್ಪಾದನೆಗೆ ಹೆಸರುವಾಸಿಯಾಗಿತ್ತು. ವಸಾಹತು ಕಾಲದಲ್ಲಿ ಈ ನಗರವು ಆಂಗ್ಲೋ- ಇಂಡಿಯನ್ ಗಳಲ್ಲದೆ ಇಟಲಿ , ಜರ್ಮನಿ ಮತ್ತು ಯುನೈಟೆಡ್ ಕಿಂಗ್ ಡಮ್...
ಪ್ರವಾಸಿಗರು ಕೋಲಾರ ಜಿಲ್ಲೆಯಲ್ಲಿ ಯೆಲ್ಲೊಡು ಬೆಟ್ಟದ ಮೇಲಿನ ಶ್ರೀ ಆದಿನಾರಾಯಣಸ್ವಾಮಿ ದೇವಾಲಯಕ್ಕೆ ಒಮ್ಮೆ ಭೇಟಿಕೊಡಬಹುದು. ಇದೊಂದು ಗುಹಾಂತರ ದೇವಾಲಯವಾಗಿದ್ದು ಬಾಗೇಪಲ್ಲಿಯಿಂದ 12 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಯಾತ್ರಾ ಸ್ಥಳವು ಒಡವೆ ಆಭರಣಗಳು ರಹಿತವಾದ ಒಂದು ಉದ್ಭವ ಮೂರ್ತಿಯನ್ನು ಹೊಂದಿದೆ. ಇಲ್ಲಿ ಪ್ರತಿ ಭಾನುವಾರ...
ಪ್ರವಾಸಿಗರು ಕೋಲಾರಕ್ಕೆ ಹೋದಾಗ ಈ ನಗರದಿಂದ 2ಕಿ.ಮೀ ದೂರದಲ್ಲಿರುವ ಕೋಲಾರ ಬೆಟ್ಟಕ್ಕೆ ಒಮ್ಮೆ ಭೇಟಿ ಕೊಡಬಹುದು. ಕೋಲಾರ ಬೆಟ್ಟವು ಹಿಂದೆ ಶತಶೃಂಗ ಬೆಟ್ಟವೆಂದು ( ನೂರು ತುದಿಗಳ ಬೆಟ್ಟ) ಕರೆಯಲ್ಪಡುತ್ತಿತ್ತು. ಇದು ಪ್ರವಾಸಿಗರಿಗೆ ಅತ್ಯುತ್ತಮ ವಿಹಾರ ತಾಣವಾಗಿದೆ. ಇಲ್ಲಿ ಪ್ರವಾಸಿಗರು ಬೆಟ್ಟದ ಬೃಹತ್ ತಪ್ಪಲಿನಲ್ಲಿ...
ಕೋಲಾರ ಜಿಲ್ಲೆಯಲ್ಲಿ ಸುತ್ತಾಡಲು ಬಯಸುವ ಪ್ರವಾಸಿಗರು ಕೋಟಿ ಲಿಂಗೇಶ್ವರ ದೇವಾಲಯಕ್ಕೆ ಒಮ್ಮೆ ಭೇಟಿಕೊಡಬಹುದು. ಈ ದೇವಾಲಯವು ಕಮ್ಮಸಂದ್ರ ಗ್ರಾಮದಲ್ಲಿದೆ. ಈ ದೇವಾಲಯದಲ್ಲಿ 108 ಅಡಿಗಳ ಬೃಹತ್ ಲಿಂಗವನ್ನು ಸ್ವಾಮಿ ಸಾಂಬ ಶಿವಮೂರ್ತಿಯವರು ನಿರ್ಮಿಸಿದರು. ಇದು ವಿಶ್ವದಲ್ಲಿಯೆ ಅತ್ಯಂತ ದೊಡ್ಡ ಶಿವಲಿಂಗವೆಂದು...
ಪ್ರವಾಸಿಗರು ಕೋಲಾರ ಜಿಲ್ಲೆಗೆ ಭೇಟಿಕೊಟ್ಟಾಗ ಇಲ್ಲಿನ ಮಾರ್ಕಂಡೇಯ ಬೆಟ್ಟಕ್ಕೆ ಭೇಟಿಕೊಡಬಹುದು. ಇದು ಒಕ್ಕಲೇರಿ ಗ್ರಾಮಕ್ಕೆ ಸನಿಹದಲ್ಲಿದೆ. ಇದು ಮಹರ್ಷಿ ಮಾರ್ಕಂಡೇಯನಿಂದಾಗಿ ಈ ಹೆಸರು ಪಡೆದಿದೆ. ಸ್ಥಳೀಯರ ನಂಬಿಕೆಯ ಪ್ರಕಾರ ಮಾರ್ಕಂಡೇಯನು ಇಲ್ಲಿ ತಪಸ್ಸನ್ನು ಆಚರಿಸದನಂತೆ. ಪ್ರವಾಸಿಗರು ಇಲ್ಲಿಗೆ ಭೇಟಿಕೊಡುವ ಹಾದಿಯಲ್ಲಿ...
ಕೋಲಾರದ ಮೂಲಕ ಹಾದು ಹೋಗುವ ಪ್ರವಾಸಿಗರು ಒಮ್ಮೆ ವಿಧುರಾಶ್ವತ್ಥಕ್ಕೆ ಭೇಟಿಕೊಡಬಹುದು. ಈ ಸ್ಥಳವು ಗೌರಿಬಿದನೂರು ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿದೆ. ಇದು ಭಾರತದ ಪವಿತ್ರ ಸ್ಥಳಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿದೆ. ಈ ಸ್ಥಳಕ್ಕೆ ಹೋದಾಗ ಪ್ರವಾಸಿಗರು ಇಲ್ಲಿ ಮಹಾಭಾರತ ಕಾಲದಲ್ಲಿ (ದ್ವಾಪರ ಯುಗದಲ್ಲಿ) ಮೈತ್ರೇಯ...