ಕಂಡರಿಯ ಮಹಾದೇವ್ ದೇವಾಲಯವು ಖಜುರಾಹೊದ ಪಶ್ಚಿಮ ಸಮೂಹದ ದೇಗುಲಗಳಲ್ಲಿ ಕಂಡು ಬರುವ ಅತಿ ದೊಡ್ಡ ದೇವಾಲಯವಾಗಿದೆ. ಸಾಮಾನ್ಯ ವೇದಿಕೆಯ ಮೇಲೆ ನಿರ್ಮಾಣಗೊಂಡ ಪ್ರಥಮ ದೇವಾಲಯ ಇದಾಗಿದೆ. ಈ ದೇವಾಲಯವನ್ನು ಚಂಡೇಲ ರಾಜರು ಸುಮಾರು 1025- 1050ರಲ್ಲಿ ನಿರ್ಮಿಸಿದರೆಂದು ತಿಳಿದುಬಂದಿದೆ. ಶಿವನಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯದಲ್ಲಿನ...
ಚಿತ್ರಗುಪ್ತ ದೇವಾಲಯವು ಅತ್ಯಂತ ಹಳೆಯ ದೇವಾಲಯವಾಗಿದೆ. 11 ಶತಮಾನದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವನ್ನು ಸೂರ್ಯನಿಗಾಗಿ ನಿರ್ಮಿಸಲಾಗಿದೆ. ಏಳು ಅಶ್ವಗಳ ಮೇಲೆ ಸವಾರಿ ಮಾಡಿಕೊಂಡು ಬರುತ್ತಿರುವ ಸೂರ್ಯನ ವಿಗ್ರಹವು ಈ ದೇವಾಲಯದ ಪ್ರಮುಖ ಆಕರ್ಷಣೆಯಾಗಿದೆ. ಈ ದೇಗುಲದ ಗೋಡೆಗಳು ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳಿಂದ ಕೂಡಿದೆ....
ಕ್ರಿ.ಶ.1100ರಲ್ಲಿ ನಿರ್ಮಾಣಗೊಂಡ ಚತುರ್ಭುಜ್ ದೇವಾಲಯವು ಖಜುರಾಹೊದ ದಕ್ಷಿಣ ಸಮೂಹದಲ್ಲಿ ಬರುತ್ತದೆ. ಚೌಕಾಕರದ ವೇದಿಕೆಯ ಮೇಲೆ ನಿರ್ಮಾಣಗೊಂಡಿರುವ ಈ ದೇವಾಲಯವು ಪಶ್ಚಿಮಾಭಿಮುಖವಾಗಿ ನೆಲೆಗೊಂಡಿದ್ದು, ಹತ್ತು ಮೆಟ್ಟಿಲುಗಳನ್ನು ಹೊಂದಿದೆ. ಈ ದೇವಾಲಯವು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ವಿಗ್ರಹಗಳನ್ನು...
ಖಜುರಾಹೊದ ಪ್ರಾಚ್ಯ ವಸ್ತು ಸಂಗ್ರಹಾಲಯವನ್ನು ಸಾಮಾನ್ಯವಾಗಿ ಜರ್ಡೈನ್ ವಸ್ತು ಸಂಗ್ರಹಾಲಯವೆಂದೆ ಗುರುತಿಸಲ್ಪಡುತ್ತದೆ. ಭಾರತೀಯ ಪ್ರಾಚ್ಯವಸ್ತು ಸರ್ವೇ ಇಲಾಖೆಯು ಇದನ್ನು 1952ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡ ನಂತರ, ಇದಕ್ಕೆ ಖಜುರಾಹೊ ಪ್ರಾಚ್ಯ ವಸ್ತು ಸಂಗ್ರಹಾಲಯವೆಂದು ನಾಮಕರಣ ಮಾಡಿತು.
ಈ ಸಂಗ್ರಹಾಲಯವನ್ನು...
ಕಲ್ಲಿನಲ್ಲಿ ಕೆತ್ತಲಾಗಿರುವ ನಯನ ಮನೋಹರವಾದ ಲಕ್ಷ್ಮಣ ದೇವಾಲಯವು ವಿಷ್ಣುವಿನ ದೇವಾಲಯವಾಗಿದೆ. ಇದೊಂದು ಪ್ರಾಚೀನ ದೇವಾಲಯವಾಗಿದ್ದು, ಪಶ್ಚಿಮ ಸಮೂಹದ ದೇಗುಲಗಳ ಸಾಲಿನಲ್ಲಿ ಕಂಡು ಬರುತ್ತದೆ. ಇದನ್ನು ಕ್ರಿ.ಶ 930 ರಿಂದ 950ರ ಸುಮಾರಿಗೆ ನಿರ್ಮಿಸಲಾಗಿದೆ. ಈ ದೇವಾಲಯವು ಗತಕಾಲದ ವಾಸ್ತುಶಿಲ್ಪಕ್ಕೆ ಜೀವಂತ ಉದಾಹರಣೆಯಾಗಿ...
ದೇವಿ ಜಗದಾಂಬಾ ದೇವಾಲಯವು ಖಜುರಾಹೊದ ಮತ್ತೊಂದು ಪ್ರಸಿದ್ಧ ದೇವಾಲಯವಾಗಿದೆ.ಈ ದೇಗುಲದ ಗರ್ಭ ಗೃಹದಲ್ಲಿ ಜಗನ್ಮಾತೆ ದೇವಿ ಜಗದಾಂಬಾಳ ವಿಗ್ರಹವನ್ನು ನಾವು ನೋಡಬಹುದು. ಇಲ್ಲಿನ ಗೋಡೆಗಳಲ್ಲಿನ ಶಿಲ್ಪಗಳನ್ನು ಅತ್ಯಂತ ಕುಶಲತೆಯಿಂದ ಮತ್ತು ಚಮತ್ಕಾರದಿಂದ ಕೆತ್ತನೆ ಮಾಡಿ ಸುಂದರಗೊಳಿಸಿದ್ದಾರೆ. ನಂಬಿಕೆಗಳ ಪ್ರಕಾರ ಈ ದೇವಾಲಯವನ್ನು...
ವಿಶ್ವನಾಥ್ ದೇವಾಲಯವು ಶಿವನ ದೇವಾಲಯವಾಗಿದೆ. ನೋಡುಗರನ್ನು ಮಂತ್ರಮುಗ್ಧಗೊಳಿಸುವಂತಹ ಅಮೃತಶಿಲೆಯ ಶಿವಲಿಂಗವನ್ನು ಇಲ್ಲಿ ಮುಖ್ಯದೇವರಾಗಿ ಪೂಜಿಸಲಾಗುತ್ತದೆ. ಪಶ್ಚಿಮ ದೇಗುಲಗಳ ಸಮೂಹಕ್ಕೆ ಸೇರಿದ ಈ ದೇವಾಲಯವನ್ನು ಧಂಗ ದೇವನು ಕಟ್ಟಿದನು. ಈ ದೇವಾಲಯವನ್ನು ಪಂಚಯತನ್ ದೇವಾಲಯದ ರಚನೆಯನ್ನನುಸರಿಸಿ ನಿರ್ಮಿಸಲಾಗಿದೆ. ಇದರ ಜೊತೆಗೆ...
ರಾಜ್ಯ ಬುಡಕಟ್ಟು ಮತ್ತು ಜನಪದ ಕಲೆಗಳ ವಸ್ತು ಸಂಗ್ರಹಾಲಯವು ಖಜುರಾಹೊದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ವಸ್ತು ಸಂಗ್ರಹಾಲಯವು ಖಜುರಾಹೊದಲ್ಲಿರುವ ಚಂಡೇಲ ಸಾಂಸ್ಕೃತಿಕ ಸಂಕೀರ್ಣದಲ್ಲಿ ನೆಲೆಗೊಂಡಿದೆ. ಈ ವಸ್ತು ಸಂಗ್ರಹಾಲಯವು ಅಷ್ಟೇನು ದೊಡ್ಡದಲ್ಲ. ಆದರೂ ಇದರಲ್ಲಿರುವ ಶ್ರೀಮಂತ ಸಂಗ್ರಹವು ಗಮನ...
ರನೆಹ್ ಜಲಪಾತವು ಖಜುರಾಹೊ ಪಟ್ಟಣದಿಂದ 22 ಕಿ.ಮೀ ದೂರದಲ್ಲಿರುವ ಛತ್ರಪುರ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಈ ಜಲಪಾತವು ನೋಡಲು ಅತ್ಯಂತ ಭವ್ಯವಾಗಿದ್ದು, ಕೆ ನದಿಯಿಂದ ಉದ್ಭವವಾಗುತ್ತದೆ. ಈ ಕೆನ್ ನದಿಯು 5 ಕಿ.ಮೀ ಉದ್ದ ಮತ್ತು 30 ಮೀಟರ್ ಆಳವಿರುವ ಒಂದು ದೊಡ್ಡ ಕಮರಿಯನ್ನು ನಿರ್ಮಾಣ ಮಾಡಿದೆ. ಈ ಕಮರಿಯು ಸ್ಫಟಿಕದಂತಹ...
ಲಕ್ಷ್ಮೀ ದೇವಾಲಯವು ಸಂಪತ್ತು ಮತ್ತು ಸೌಭಾಗ್ಯದ ದೇವತೆಯಾದ ಲಕ್ಷ್ಮೀ ದೇವಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. ಈ ದೇವಾಲಯವು ಪಶ್ಚಿಮ ಸಮೂಹದ ದೇವಾಲಯಗಳಲ್ಲಿ ಕಂಡು ಬರುತ್ತದೆ. ಈ ದೇವಾಲಯವನ್ನು ಕ್ರಿ.ಶ 900- 925ರ ಸುಮಾರಿಗೆ ನಿರ್ಮಿಸಲಾಗಿದೆ. ಹಿತ ಮಿತವಾದ ಶಿಲ್ಪಗಳಿಂದ ಈ ದೇಗುಲವನ್ನು ಅಲಂಕರಿಸಲಾಗಿದೆ. ಹಳದಿ ಬಣ್ಣದ...
ಜೈನ ವಸ್ತು ಸಂಗ್ರಹಾಲಯವು ಜೈನ ಶಿಲ್ಪಗಳನ್ನು ಸಂರಕ್ಷಿಸಲೆಂದು ಸ್ಥಾಪಿಸಿರುವ ಒಂದು ಕಟ್ಟಡವಾಗಿದೆ. ಇದು 1987ರಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆಯಲ್ಪಟ್ಟಿತು. ಇದು ಜೈನ ದೇವಾಲಯದ ಆವರಣದೊಳಗೆ ನೆಲೆಗೊಂಡಿದೆ. ಈ ವೃತ್ತಾಕಾರದ ವಸ್ತು ಸಂಗ್ರಹಾಲಯವು ಸ್ಥಳೀಯರ ವಲಯದಲ್ಲಿ ಸಾಹು ಶಾಂತಿ ಪ್ರಸಾದ್ ಜೈನ್ ಕಲಾ ಸಂಗ್ರಹಾಲಯವೆಂದು...
ಮಾತಂಗೇಶ್ವರ್ ದೇವಾಲಯವು ಶಿವನಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಮನಮೋಹಕವಾದ ಎಂಟು ಅಡಿ ಎತ್ತರವಿರುವ ಶಿವಲಿಂಗವನ್ನು ನಾವು ಕಾಣಬಹುದು. ಮಹಾಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ಜನಜಾತ್ರೆಯೆ ನೆರೆಯುತ್ತದೆ. ಈ ದೇಗುಲದಲ್ಲಿರುವ ಲಿಂಗವು ದೇಶದ ಉತ್ತರ ಭಾಗದಲ್ಲಿರುವ ಲಿಂಗಗಳಲ್ಲಿಯೇ ಅತ್ಯಂತ ದೊಡ್ಡದೆಂಬ...
ಅಜಯ್ಘಡ್ ಕೋಟೆಯು ಖಜುರಾಹೊದಿಂದ 80 ಕಿ.ಮೀ ದೂರದಲ್ಲಿದೆ. ಇದು ವಿಂಧ್ಯ ಪರ್ವತ ಶ್ರೇಣಿಯಲ್ಲಿರುವ ಒಂದು ಏಕಾಂತವಾದ ಬೆಟ್ಟದ ಮೇಲೆ ನೆಲೆಗೊಂಡಿದೆ. ಚಂಡೇಲ ರಾಜರು ತಮ್ಮ ರಾಜ್ಯವನ್ನು ಶತ್ರುಗಳ ದಾಳಿ ಮತ್ತು ಮುತ್ತಿಗೆಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಈ ಕೋಟೆಯನ್ನು ನಿರ್ಮಿಸಿದರು. ಅಜಯ್ಘಡ್ ಕೋಟೆಯು...
ಕಲಿಂಜರ್ ಕೋಟೆಯು ಖಜುರಾಹೊದಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಕಲಿಂಜರ್ ಕೋಟೆಯು ಒಂದು ಬೆಟ್ಟದ ತುದಿಯಲ್ಲಿ ನೆಲೆಗೊಂಡಿದೆ. ಈ ಕೋಟೆಯು ಸ್ಮಾರಕಗಳ ಮತ್ತು ಶಿಲ್ಪಗಳ ಅದ್ಭುತ ಖಜಾನೆಯಾಗಿದೆ. ಈ ವಸ್ತುಗಳು ಚಂಡೇಲ ರಾಜರ ಇತಿಹಾಸದ ಹಲವು ಮುಖಗಳನ್ನು ನಮಗೆ ಪರಿಚಯಿಸುತ್ತವೆ. ಹಾಗಾಗಿ ಇದು ಚಂಡೇಲ ರಾಜರ ಭವ್ಯ...
ಆದಿನಾಥ್ ದೇವಾಲಯವು ಖಜುರಾಹೊದಲ್ಲಿರುವ ಜೈನ ದೇವಾಲಯಗಳಲ್ಲಿ ಅತ್ಯಂತ ಪ್ರಮುಖವಾದ ದೇವಾಲಯವಾಗಿದೆ. ಇದು ಪಾರ್ಶ್ವನಾಥ ದೇವಾಲಯದ ಉತ್ತರ ಭಾಗದಲಿ ನೆಲೆಗೊಂಡಿದೆ. ಜೈನರ ಸಂತನಾದ ಆದಿನಾಥರಿಗಾಗಿ ನಿರ್ಮಿಸಲಾದ ಈ ದೇವಾಲಯವನ್ನು ಚಂಡೇಲ ರಾಜರು 11 ನೇ ಶತಮಾನದಲ್ಲಿ ನಿರ್ಮಿಸಿದರು. ಈ ದೇವಾಲಯವು ಸಪ್ತ- ರಥ ಸೂತ್ರದ ಆಧಾರದ ಮೇಲೆ...