ಹೆಸರೆ ಹೇಳುವ ಹಾಗೆ ಆಮೆಯ ಆಕಾರದಲ್ಲಿ ರೂಪಗೊಂಡಿರುವ ಈ ದ್ವೀಪವು ಕಡಲ ತೀರ ಪ್ರದೇಶದಿಂದ 4 ಕಿ.ಮೀ ದೂರದಲ್ಲಿದೆ. ಈ ತಾಣವು ಚಾರಣ ಮಾಡಲು ಯೋಗ್ಯವಾಗಿದ್ದು, ಕ್ರಮಿಸುವಾಗ ಪ್ರಕೃತಿಯ ಮೈಸಿರಿಯ ಜೊತೆ ಪುರಾತನ ಕಾಲದ ಹಾಗು ಅಷ್ಟೆ ವೈವಿಧ್ಯಮಯವಾದ ದೀಪದ ಮನೆಯನ್ನು ಕೂಡ ಇಲ್ಲಿ ಕಾಣಬಹುದು. ಅಕ್ಟೋಬರ ಮತ್ತು ಮೇ ನಡುವಿನ ಅವಧಿಯು...
ಪಶ್ಚಿಮ ದಿಕ್ಕಿನಲ್ಲಿ ಅರೇಬಿಯನ್ ಸಮುದ್ರ ಹಾಗು ಪೂರ್ವ ದಿಕ್ಕಿನಲ್ಲಿ ಪಶ್ಚಿಮ ಘಟ್ಟಗಳ ಸಾಲುಗಳನ್ನೊಳಗೊಂಡ ಕಾರವಾರ ಬಿಚ್ ವು ಕರ್ನಾಟಕದ ಜನಪ್ರಿಯ ಬೀಚ್ ಗಳಲ್ಲಿ ಒಂದಾಗಿದೆ. ನಯನಮನೋಹರವಾದ ಈ ಕಡಲ ತೀರವು ಶಾಂತತೆಯ ಪ್ರತೀಕವಾಗಿದ್ದು ಪ್ರವಾಸಗೈಯಲು ಅನುಕೂಲಕರವಾದ ತಾಣವಾಗಿದೆ. ಇಲ್ಲಿ ಜಲಕ್ರೀಡೆಗಳಿಗೆ ಅವಕಾಶವಿದ್ದು,...
ಕಾರವಾರ ಬೀಚ್ ನೀಂದ 4 ಕಿ.ಮೀ ದೂರದಲ್ಲಿರುವ ದೇವಬಾಗ್ ಬೀಚ್ ಖಂಡಿತವಾಗಿಯು ಭೇಟಿ ನೀಡಲೆ ಬೇಕಾದ ಬೀಚ್ ಆಗಿದೆ. ಇದೊಂದು ದ್ವೀಪ ನಿರ್ಮಿತ ಬೀಚ್ ಆಗಿದ್ದು ಕಾರವಾರ ಬೀಚಿನಲ್ಲಿ ಲಭ್ಯವಿರುವ ಫೆರ್ರಿಯ ಮೂಲಕ ಇದನ್ನು ತಲುಪಬಹುದಾಗಿದೆ. ಇಲ್ಲಿಯ ವಾತಾವರಣವು ಕಲ್ಮಶರಹಿತವಾಗಿದ್ದು, ಸಾಹಸಮಯ ಪ್ರತಿಭೆಯನ್ನು ಅನಾವರಣಗೊಳಿಸುವ...
ವನ್ಯಜೀವನದಲ್ಲಿ ಆಸಕ್ತಿಯುಳ್ಳವರು, ಕಾರವಾರದಿಂದ 60 ಕಿ.ಮೀ ದೂರದಲ್ಲಿರುವ ಅಂಶಿ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು. ಈ ಉದ್ಯಾನವನವು ಸಮುದ್ರ ಮಟ್ಟದಿಂದ 200 ರಿಂದ 925 ಮೀ. ಎತ್ತರದಲ್ಲಿದ್ದು, 340 ಚ.ಕಿ.ಮೀ ವಿಸ್ತಾರ ಹೊಂದಿದೆ. ದಾಂಡೇಲಿ ವನ್ಯಜೀವಿ ನಿಸರ್ಗಧಾಮವದ ಒಂದು ಭಾಗವನ್ನು ರಾಷ್ಟ್ರೀಯ ಉದ್ಯಾನವನವಾಗಿ...
ಈ ದರ್ಗಾವನ್ನು 17 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಭಾರತದ ಕರಾವಳಿ ತೀರದಲ್ಲಿ ಕಾಣಸಿಗುವ ಸುಂದರವಾದ ದೇಗುಲಗಳಲ್ಲಿ ಇದೂ ಒಂದಾಗಿದೆ. ಬಾಗ್ದಾದಿ ಸಂತನೆಂದೆ ಜನಪ್ರಿಯರಾದ ಪೀರ್ ಶಾನ್ ಶಮ್ಸುದ್ದಿನ್ ಖರೋಬತ್ ಅವರಿಗೆ ಈ ದರ್ಗಾವು ಸಮರ್ಪಿತವಾಗಿದ್ದು ಸಾವಿರಾರು ಭಕ್ತಾದಿಗಳು ಇಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ....
ಕಾರವಾರ ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 17 ರ ಹತ್ತಿರದಲ್ಲಿರುವ ಆಕರ್ಷಕ ಕಾಳಿ ಸೇತುವೆಯನ್ನು 1986 ರಲ್ಲಿ ಕಾಳಿ ನದಿಯ ಮೇಲೆ ನಿರ್ಮಿಸಲಾಯಿತು. ಕರ್ನಾಟಕವು ಗೋವಾದೊಂದಿಗೆ ಸಂಪರ್ಕ ಹೊಂದಲು ಕಾರಣವಾಗಿರುವ ಈ ಸೇತುವೆಯು ಕರ್ನಾಟಕದ ಹೇಮ್ಮೆಯ ಪ್ರತೀಕವೂ ಹೌದು. ಕಾರವಾರ ಬೀಚ್, ಸದಾಶಿವಗಡ ಕೋಟೆ, ಗುಡ್ಡಬೆಟ್ಟಗಳ...
ಕಾಳಿ ನದಿಯ ದಡದ ಮೇಲಿರುವ ಜನಪ್ರಿಯವಾದ ಸದಾಶಿವಗಡ ಬೆಟ್ಟದ ಕೋಟೆಯು ಕಾರವಾರ ನಗರದಿಂದ 5 ಕಿ.ಮೀ ದೂರದಲ್ಲಿದೆ. 200 ಅಡಿ ಎತ್ತರದ ಬೆಟ್ಟದ ಮೇಲಿರುವ ಈ ಕೋಟೆಯು ಸೊಂದೆ ರಾಜನಿಂದ 1698 ರಲ್ಲಿ ನಿರ್ಮಿಸಲ್ಪಟ್ಟಿದೆ. ತದನಂತರ ಬಸವಲಿಂಗರಾಜನು ತನ್ನ ತಂದೆಯಾದ ಸದಾಶಿವಲಿಂಗರಾಜನ ಗೌರವಾರ್ಥವಾಗಿ ಇದಕ್ಕೆ 'ಸದಾಶಿವಗಡ' ಎಂಬ ನಾಮಕರಣ...
ಕಾರವಾರಿನಲ್ಲಿರುವ ವೆಂಕಟರಮಣ ದೇವಸ್ಥಾನವು 300 ವರ್ಷಗಳಷ್ಟು ಹಳೆಯದಾದುದಾಗಿದೆ. ಈ ದೇವಸ್ಥಾನವು ತನ್ನ ವಿಶೀಷ್ಠ ಬಗೆಯ ಕಂದು ಬಣ್ಣದ ಕಲೆಗಾಗಿ ಹೆಸರುವಾಸಿಯಾಗಿದೆ. ಕಾರವಾರ ಮುಖ್ಯ ನಗರದಿಂದ ಈ ಸ್ಥಳಕ್ಕೆ ಆಟೊ ಅಥವಾ ಬಸ್ಸಿನ ಮೂಲಕ ನೇರ ಹಾಗು ಸರಳವಾಗಿ ತಲುಪಬಹುದಾಗಿದ್ದು ಭೇಟಿ ನೀಡಲು ಯೋಗ್ಯವಾಗಿದೆ.
ಕಾರವಾರದ ಹತ್ತಿರದಲ್ಲೆ ಇರುವ ಬೈತಕೊಲ ಹಳ್ಳಿಯು ಒಂದು ಕೌತುಕಮಯ ಸ್ಥಳವಾಗಿದೆ. ಸುರಕ್ಷತೆಯ ತೀರ ಎಂಬ ಅರ್ಥ ಕೊಡುವ ಅರೇಬಿಕ್ ಶಬ್ದವಾದ 'ಬೈತ್-ಎಲ್-ಖೊಲ್' ನಿಂದ ಹಳ್ಳಿಗೆ ಈ ಹೆಸರು ಬಂದಿದೆ. ಇಲ್ಲಿ ಹಳೆಯ ಕಾಲದ ವಿವಿಧ ಹಂತಗಳಲ್ಲಿ ಭಾರತವನ್ನಾಳಿದ ಆಂಗ್ಲರು ಮತ್ತು ಯುರೋಪಿಯನ್ನರ ಶೈಲಿಯ ಹಾಗು ಕ್ಯಾಥೋಲಿಕ್ ಶೈಲಿಯ ಹಲವು...
ಕಾರವಾರಿನ ಚೆಂಡಿಯಾ ಜಲಪಾತ-ನಾಗರಮಡಿ ಜಲಪಾತವು ಒಂದು ಸುಂದರವಾಗಿ ಗೋಚರಿಸುವ ಚಿಕ್ಕ ಜಲಪಾತವಾಗಿದ್ದು ದೊಡ್ಡ ಬಂಡೆಯೊಂದರ ಕೆಳಗಿನಿಂದ ಧುಮುಕಿ ಹರಿಯುತ್ತದೆ. ಸಮಯಾವಕಾಶವಿದ್ದರೆ ಇದರ ಆನಂದವನ್ನು ಸವಿಯಲು ಮರೆಯಬೇಡಿ.
ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿರುವ ದೇವಕರ ಜಲಪಾತವನ್ನು ಕಾರವಾರ ಪಟ್ಟಣದ ಹತ್ತಿರ ಕಾಣಬಹುದಾಗಿದ್ದು, ಪ್ರವಾಸಿಗರು ಕದ್ರಾ ಜಲಾಶಯದ ಹಿನ್ನೀರನ್ನು ದಾಟಿ ಇದನ್ನು ತಲುಪಬಹುದಾಗಿದೆ.
ಸದಾಶಿವಗಡ ಬೆಟ್ಟದ ಕೋಟೆಯಲ್ಲಿರುವ 600 ವರ್ಷ ಹಳೆಯದಾದ ದುರ್ಗಾ ದೇವಸ್ಥಾನವು ಕಾರವಾರದ ಮತ್ತೊಂದು ಪ್ರಮುಖ ಯಾತ್ರಾ ಸ್ಥಳವಾಗಿದೆ. ಕಾಳಿ ನದಿಯ ಉತ್ತರ ಭಾಗಕ್ಕೆ ಸದಾಶಿವಗಡವಿದ್ದು ನಗರದಿಂದ 6 ಕಿ.ಮೀ ದೂರದಲ್ಲಿದೆ. ಸ್ಥಳೀಯ ನಂಬಿಕೆ ಪ್ರಕಾರ ರಾಜಾ ಛತ್ರಪತಿ ಶಿವಾಜಿಯು ಈ ಮಂದಿರವನ್ನು ಮೊದಲು ಖೋಜಿಸಿದ್ದು ನಂತರ ಭಂಡಾರಿ...
ಕಾರವಾರದಿಂದ 6 ಕಿ.ಮೀ ದೂರದಲ್ಲಿರುವ ಗುದ್ದಲಿ ಬೆಟ್ಟದ ತುದಿಯು ಪ್ರವಾಸಿಗರು ವರ್ಷದ ಯಾವುದೆ ಸಮಯದಲ್ಲಿ ಭೇಟಿ ನೀಡಬಹುದಾದ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ತನ್ನ ಪೂರ್ವ ಭಾಗಕ್ಕೆ ಕಾಳಿ ನದಿ ಹಾಗು ಪಶ್ಚಿಮ ಭಾಗಕ್ಕೆ ಬೆಲಿಕೇರಿ ನದಿಯನ್ನು ಹೊಂದಿದ್ದು ಹೈದರಘಟ್ಟ ಶ್ರೇಣಿಯಲ್ಲಿ ದೊಡ್ಡದಾಗಿರುವ ಈ ಬೆಟ್ಟದ ತುದಿಯು ಸಮುದ್ರ...
ಪ್ರಯಾಣಿಸುವಾಗ ಈ ಒಂದು ಸ್ಥಳವು ಅತ್ಯಾಕರ್ಷಕ ಪ್ರಕೃತಿ ಸೌಂದರ್ಯ ಒದಗಿಸುವ ಜಾಗವಾಗಿದ್ದು, ಸಮಯವಿದ್ದರೆ ಪ್ರವಾಸಿಗರು ಇದರ ಲಾಭವನ್ನು ಪಡೆಯಬಹುದು.
ಕಾಳಿ ನದಿಯ ದಂಡೆಯ ಮೇಲಿರುವ ಜೈ ಸಂತೋಷಿಮಾತಾ ದೇವಸ್ಥಾನವು ಕಾರವಾರ ನಗರದಿಂದ 4 ಕಿ.ಮೀ ದೂರದಲ್ಲಿದೆ. ಜನಪ್ರಿಯ ಜಾನಪದ ಕಥೆಯ ಪ್ರಕಾರ, ಸಂತೋಷಿಮಾತಾ ದೇವಿಯು, ಶಕ್ತಿ ಹಾಗು ಸನ್ನಡತೆಯ ಸಂಕೇತವಾದ ದುರ್ಗಾ ದೇವಿಯ ಮರು ಅವತಾರವಾಗಿದ್ದಾಳೆ. ಇಲ್ಲಿ ವರ್ಷ ಪೂರ್ತಿ ಜರುಗುವ ಉತ್ಸವಗಳಲ್ಲಿ ಅನೇಕ ಭಕ್ತಾದಿಗಳು...