ಠಾಕೂರ್ ಅನುಕೂಲ ಚಂದ್ರ ಮಂದಿರ ಕಾರಂಜಿಯಾದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಶ್ರೀ ಶ್ರೀ ಠಾಕೂರ್ ಅನುಕೂಲಚಂದ್ರರ ಉಪದೇಶವನ್ನು ಪ್ರಚಾರ ಮಾಡುವ ಸಲುವಾಗಿ ಈ ಮಂದಿರವನ್ನು ಕಟ್ಟಲಾಯಿತು. ಸೌಹಾರ್ದತೆ ಮತ್ತು ಶಾಂತಿಯಿಂದ ಬದುಕಬೇಕೆಂದು ಮಂದಿರವು ತನ್ನ ಭಕ್ತರಿಗೆ ಉಪನ್ಯಾಸ ನೀಡುತ್ತದೆ.
ಇಲ್ಲಿನ ಬೋಧಕರ ನಂಬಿಕೆಯಂತೆ ಮಹಾಶಕ್ತಿಯು ನಮಗೆ ಕಾಣುವುದಿಲ್ಲ. ಆದರೆ ನಮ್ಮ ಚಟುವಟಿಕೆಯನ್ನು ಅದು ನೋಡುತ್ತದೆ ಮತ್ತು ಅದು ನಮ್ಮ ಜೀವನಕ್ಕೆ ಒಂದು ರೂಪ ಕೊಡುವ ಜವಾಬ್ದಾರಿಯನ್ನು ಹೊಂದಿದೆ. ರಾಜ್ಯದೆಲ್ಲೆಡೆಯಿಂದ ಜನರು ಇಲ್ಲಿಗೆ ಆಗಮಿಸಿ ಠಾಕೂರ್ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಅವರ ಬೋಧನೆಗಳನ್ನು ಕೇಳುತ್ತಾರೆ.