ಸುಮಾರು ಅರ್ಧ ಶತಮಾನದ ಹಿಂದೆ ಜೆಕೆ ಟ್ರಸ್ಟಿನ ಸಿಂಘಾನಿಯಾ ಕುಟುಂಬವು ಈ ರಾಧಾಕೃಷ್ಣ ಮಂದಿರವನ್ನು ಕಟ್ಟಿಸಿತು. ಈ ಮಂದಿರ ಅನನ್ಯವಾದ ಪ್ರಾಚೀನ ಮತ್ತು ಆಧುನಿಕ ಶಿಲ್ಪಕಲೆಯನ್ನು ಪ್ರತಿಬಿಂಬಿಸುತ್ತದೆ. ಇದರ ಮಂಟಪವು ಎತ್ತರವಾದ ಮೇಲ್ಛಾವಣಿಯನ್ನು ಹೊಂದಿದೆ. ಇದರಿಂದಾಗಿ ಸ್ವಚ್ಛಂದವಾದ ಗಾಳಿ ಮತ್ತು ಬೆಳಕು ಆಡಲು...
ದ್ವಾರಕಾಧೀಶ ಎಂದರೆ ದ್ವಾರಕಾದ ದೊರೆ ಶ್ರೀಕೃಷ್ಣ ಪರಮಾತ್ಮ ಎಂದರ್ಥ. ಅದಕ್ಕಾಗಿ ಮಂದಿರ ಅವನಿಗೆ ಸಮರ್ಪಿಸಲಾಗಿದೆ. ಇದು ಕಾನ್ಪುರದ ಕಮಲಾ ಗೋಪುರದ ಬಳಿಯಿದೆ. ಹಿಂದೂ ಪಂಚಾಂಗದ ಪ್ರಕಾರ, ಅನೇಕ ಹಬ್ಬಗಳು ಜುಲೈ, ಆಗಸ್ಟ್ ನಲ್ಲಿ ಬರುವ ಶ್ರಾವಣ ಮಾಸದಲ್ಲಿ ಬರುತ್ತವೆ. ಉತ್ತರ ಭಾರತದ ಜನರು ಈ ಮಾಸವನ್ನು ಅತ್ಯಂತ ಪವಿತ್ರ ಹಾಗು...
19ನೇ ಶತಮಾನದಲ್ಲಿ ಜಜೆಸ್ ಮಾವು ಎಂದೂ ಇದನ್ನು ಕರೆಯುತ್ತಿದ್ದರು. ಜಜ್ ಮಾವು ಉಪನಗರ ಗಂಗಾನದಿಯ ತಟದಲ್ಲಿರುವ ಕಾನ್ಪುರದ ಹೊರವಲಯದಲ್ಲಿದೆ. ಪ್ರಸ್ತುತ ಒಂದು ಕೈಗಾರಿಕಾ ಕ್ಷೇತ್ರವಾಗಿರುವ ಇದು, ಭಾರತದ ಸಂಶೋಧಕರ ಸರ್ವೇ ಪ್ರಕಾರ, ಈ ಪ್ರದೇಶ ಮಾನವನ ಅತ್ಯಂತ ಪುರಾತನ ಬೀಡಾಗಿತ್ತು.
ನಗರದಲ್ಲಿ ಸಂಶೋಧನಕಾರರಿಗೆ ಸಿಕ್ಕ...
ಮೋತಿ ಝೀಲ್ ಎಂಬುದರ ಅಕ್ಷರಶಃ ಅರ್ಥ 'ಮುತ್ತಿನ ಕೆರೆ' ಎಂದು. ಇದು ಕಾನ್ಪುರದ ಸ್ವರೂಪನಗರ ಎಂಬ ಸ್ಥಳದಲ್ಲಿ ಇದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಈ ಕೆರೆಯನ್ನು ಕುಡಿಯುವ ನೀರಿನ ಅನುಕೂಲಕ್ಕಾಗಿ ಅಣೆಕಟ್ಟು ಕಟ್ಟಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಪ್ರಸ್ತುತ ಈ ಕೆರೆ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಏಕೆಂದರೆ, ಇಲ್ಲಿ...
ಗಣೇಶ ವಿದ್ಯಾರ್ಥಿ ಉದ್ಯಾನ್ ಎಂದೂ ಕರೆಯಲಾಗುವ ಈ ಫೂಲ್ ಬಾಗ್ ನಗರದ ಹೃದ್ಭಾಗದಲ್ಲಿ, ಕಾನ್ಪುರ ರೈಲು ನಿಲ್ದಾಣ, ಎಲ್ಐಸಿ ಬಿಲ್ಡಿಂಗ್ ಮತ್ತು ನಾನಾರಾವ್ ಪಾರ್ಕ್ ಹತ್ತಿರದಲ್ಲಿ ಇದೆ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಈ ಉದ್ಯಾನವನವನ್ನು ಕ್ವೀನ್ ವಿಕ್ಟೋರಿಯಾ ಗಾರ್ಡನ್ ಎಂದೂ ಕರೆಯುತ್ತಿದ್ದರು.
ಈ ಫೂಲ್ ಬಾಗ್ ನಲ್ಲಿಯೇ...
ಹೆಸರೇ ಸೂಚಿಸುವ ಹಾಗೆ ಭೀತರ್ ಗಾಂವ್ ಮಂದಿರವು ತನ್ನ ನೆಲೆಯನ್ನು ಸೂಚಿಸುತ್ತದೆ. ಒಂದು ದಂತಕಥೆಯ ಪ್ರಕಾರ, ಈ ದೇವಸ್ಥಾನ ಹಿಂದಿನ ಕಾಲದಲ್ಲಿ ಪುಷ್ಪಪುರ ಅಥವಾ ಫೂಲ್ ಪುರ ಎಂದು ಕರೆಯಲಾಗುತ್ತಿದ್ದ ಹಳ್ಳಿಯ ಒಳಭಾಗದಲ್ಲಿ ಇತ್ತು. ಭೀತರ್ಗಾಂವ್ ಹಳ್ಳಿ 6ನೇ ಶತಮಾನದಲ್ಲಿ ಗುಪ್ತರ ಗತವೈಭವದ ಕಾಲದಲ್ಲಿ ಕಟ್ಟಿಸಲಾದ ಒಂದು...
ಅಲೆನ್ ಫಾರೆಸ್ಟ್ ಝೂವನ್ನು ಕಾನ್ಪುರ ಝೂ ಎಂದಲೂ ಕರೆಯುತ್ತಾರೆ. ಸಹಜವಾದ ದೊಡ್ಡ ಅರಣ್ಯಪ್ರದೇಶದಲ್ಲಿ ಈ ಮೃಗಾಲಯ ಉಪಸ್ಥಿತವಿದೆ. ಸಾಮಾನ್ಯವಾಗಿ ಇತರ ಝೂಗಳಲ್ಲಿ ಪ್ರಾಣಿಗಳನ್ನು ಪಂಜರದಲ್ಲಿ ಅಥವಾ ಬೋನಿನಲ್ಲಿ ಇಟ್ಟಿರುವುದನ್ನು ಕಾಣುತ್ತೇವೆ. ಆದರೆ, ಇಲ್ಲಿ ಪ್ರಾಣಿಗಳು ಸಹಜವಾಗಿ ಕಾಡಿನಲ್ಲಿ ವಿಹರಿಸುತ್ತವೆಯೋ ಎಂಬಂತೆ...
ಕಾನ್ಪುರ ಸಂಗ್ರಹಾಲಯ ಅಥವಾ ಕಾನ್ಪುರ ಮ್ಯೂಸಿಯಂ ನಗರದ ಅಧಿಕೃತ ಸಂಗ್ರಹಾಲಯವಾಗಿದೆ. ಇದು ಅನೇಕ ಪ್ರದರ್ಶಕ ವಸ್ತುಗಳು, ಸ್ಮರಣಿಕೆಗಳ, ಕರಕುಶಲ ವಸ್ತುಗಳ ಬೀಡಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿದ ಭಾರತೀಯರ ಗತಕಾಲದ ಇತಿಹಾಸದ ಪುಟಗಳನ್ನು ತೆರೆದಿಡುತ್ತದೆ. ಈ ಮ್ಯೂಸಿಯಂನಲ್ಲಿರುವ ಒಂದು ಪ್ರಮುಖವಾದ ಆಕರ್ಷಣೆಯೆಂದರೆ...
ನಾನಾರಾವ್ ಪಾರ್ಕ್ ಅನ್ನು ಕಂಪನಿ ಬಾಗ್ ಎಂದೂ ಕರೆಯುತ್ತಾರೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇದನ್ನು ಮೆಮೋರಿಯಲ್ ವೆಲ್ ಎಂದು ಸಹ ಕರೆಯುತ್ತಿದ್ದರು. ಏಕೆಂದರೆ, ಭಾರತೀಯ ಸ್ವಾತಂತ್ರ್ಯ ಚಳವಳಿಗಾರರು ನಾನಾ ಸಾಹೀಬ್ ನೇತೃತ್ವದಲ್ಲಿ 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಸುಮಾರು 200 ಬ್ರಿಟಿಷ್...
ಜೈನ್ ಸಮುದಾಯದವರು 24ನೇ ತೀರ್ಥಂಕರರ ಗೌರವ ಸೂಚಕವಾಗಿ ಈ ಜೈನ್ ಗ್ಲಾಸ್ ಟೆಂಪಲ್ ಅನ್ನು ಕಟ್ಟಿಸಿದ್ದಾರೆ. ಈ ಮಂದಿರದಲ್ಲಿ ಭಗವಾನ್ ಮಹಾವೀರ ಹಾಗು ತೀರ್ಥಂಕರರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಅತಿ ಎತ್ತರ ಮೇಲ್ಛಾವಣಿಯನ್ನು ಹೊಂದಿರುವ ಮಂದಿರದಲ್ಲಿ ಈ ಪ್ರತಿಮೆಗಳು ಅಮೃತಶಿಲೆಯ ವೇದಿಕೆಯ ಮೇಲೆ ನಿಂತಿವೆ.
ಕಮಲ...
1875ರಲ್ಲಿ ಭಾರತದಲ್ಲಿದ್ದ ಬ್ರಿಟಿಷ್ ಸರಕಾರ ಈ ಕಾನ್ಪುರ ಮೆಮೋರಿಯಲ್ ಚರ್ಚನ್ನು ಕಟ್ಟಿಸಿತು. ಕಾನ್ಪುರದಲ್ಲಿ ಬ್ರಿಟಿಷರ ಮೇಲೆ ನಡೆದ ಹತ್ಯಾಕಾಂಡದ ಸ್ಮಾರಕವಾಗಿ ಈ ಚರ್ಚನ್ನು ಕಟ್ಟಿಸಲಾಯಿತು.
ಈ ವೈಭವೋಪೇತ ಚರ್ಚನ್ನು ಆಲ್ ಸೋಲ್ಸ್ ಕೆಥೆಡ್ರಲ್ ಎಂದು ಕರೆಯಲಾಗುತ್ತಿತ್ತು. ಕೌನ್ಪುರ ಕ್ಲಬ್ ಬಳಿಯ ಅಲ್ಬರ್ಟ್ ಲೇನ್...
ಗ್ರೀನ್ ಪಾರ್ಕ್ ಅನ್ನು ಗ್ರೀನ್ ಪಾರ್ಕ್ ಸ್ಟೇಡಿಯಂ ಅಂತಲೂ ಕರೆಯುತ್ತಾರೆ. ಇದು ಗಂಗಾನದಿಯ ತಟದ ಸಮೀಪದಲ್ಲಿ ಉಪಸ್ಥಿತವಿದೆ. ಸ್ವಾತಂತ್ರ್ಯಪೂರ್ವದಲ್ಲಿ ಮ್ಯಾಡಮ್ ಗ್ರೀನ್ ಎಂಬ ಒಬ್ಬ ಆಂಗ್ಲ ಮಹಿಳೆ ಈ ಪಾರ್ಕಿನಲ್ಲಿ ಕುದುರೆ ಸವಾರಿ ಅಭ್ಯಾಸ ಮಾಡುತ್ತಿದ್ದಳಂತೆ. ಹೀಗಾಗಿ ಈ ಪಾರ್ಕಿಗೆ ಆಕೆಯ ಹೆಸರನ್ನೇ...
ಕಮಲ ರಿಟ್ರೀಟ್ ಒಂದು ಜನಪ್ರಿಯ ಟೂರಿಸ್ಟ್ ರೆಸಾರ್ಟ್ ಆಗಿದೆ. ಇದನ್ನು ಖ್ಯಾತ ಉದ್ಯಮಿ ಎಂದು ಹೆಸರು ಪಡೆದಿದ್ದ ಪದಮ್ ಪತ್ ಸಿಂಘಾನಿಯಾ ಅವರು 1960ರಲ್ಲಿ ನಿರ್ಮಿಸಿದ್ದು. ಈ ರಿಟ್ರೀಟ್ ಕಮಲಾ ನೆಹರೂ ರಸ್ತೆಯಲ್ಲಿದೆ.
ಈ ಪಾರ್ಕ್ ವಾಸ್ತವವಾಗಿ ಸಿಂಘಾನಿಯಾ ಕುಟುಂಬದ ಒಡೆತನದಲ್ಲಿರುವ ಖಾಸಗಿ ಎಸ್ಟೇಟ್. ಇದು ಪ್ರವಾಸಿಗರ...