ಇಡೀ ಏಪ್ಯಾ ಖಂಡದಲ್ಲೇ ಏಕೈಕ ಡೈವ್ ಇನ್ ಬೀಚ್ ಎಂಬ ಹೆಗ್ಗಳಿಕೆ ಭಾರತದ ಮುಳುಪಿಳಂಗಡ್ ಬೀಚ್ ಗೆ ಇದೆ. ತಲಚೇರಿಯಿಂದ 8 ಕಿ.ಮೀ. ಹಾಗೂ ಕಣ್ಣೂರು ನಗರದಿಂದ 16 ಕಿ.ಮೀ. ದೂರದಲ್ಲಿ ಇದು ನಲೆಸಿದೆ. ತಲಚೇರಿ ಹಾಗೂ ಕಣ್ನೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 17ರ ರಸ್ತೆ ಮಾರ್ಗವಾಗಿ ಪ್ರತೀ ವರ್ಷ ಸಾವಿರಾರು ಪ್ರವಾಸಿಗರು...
ಕಣ್ಣೂರಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಅತ್ಯಂತ ಜನಪ್ರಿಯ, ಸುಂದರ ತಾಣವಾಗಿರುವ ಪಾಯಂಬಾಲಂ ಬೀಚ್ 'ವೈಟ್ ಶೋರ್' ಎಂದೇ ಹೆಸರುವಾಸಿಯಾಗಿದೆ. ಕಣ್ಣೂರು ನಗರದಿಂದ ಕೇವಲ 2 ಕಿ.ಮೀ. ದೂರದಲ್ಲಿದ್ದು ರಸ್ತೆ ಮಾರ್ಗವಾಗಿ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ. ಬದುಕಿನ ದಿನನಿತ್ಯದ ಜಂಜಾಟದಿಂದ ಬಿಡುಗಡೆ ಹೊಂದಲು ಹಾಗೂ...
ಕಣ್ಣೂರಿನಿಂದ ಕೇವಲ 3 ಕಿ.ಮೀ. ದೂರದಲ್ಲಿರುವ ಸೆಂಟ್ ಏಂಜಲೋ ಫೋರ್ಟ್ ಅನ್ನು ಸ್ಥಳಿಯರು ಕಣ್ಣೂರು ಕೋಟೆ ಅಥವಾ ಕಣ್ಣೂರು ಫೋರ್ಟ್ ಎಂದು ಕರೆಯುತ್ತಾರೆ. ಅರಬ್ಬಿ ಸಮುದ್ರಕ್ಕೆ ಮುಖ ಮಾಡಿಕೊಂಡಿರುವ ಈ ಕೋಟೆಯು ಹಚ್ಚ ಹಸಿರನ್ನೇ ಮೈಗೆ ಹೊದ್ದುಕೊಂಡು ಸುಂದರವಾಗಿ ಕಾಣುತ್ತದೆ.
1505 ರಲ್ಲಿ ಭಾರತದ ಮೊದಲ ಪೋರ್ಚುಗೀಸ್ ವೈಸ್...
ಕಣ್ಣೂರು ನಗರದಿಂದ 3 ಕಿ.ಮೀ.ದೂರದಲ್ಲಿರುವ ಪುಟ್ಟ ಗ್ರಾಮ ಪಾಲಿಕುನ್ನು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಕಣ್ಣೂರು - ಪಾಯನ್ನೂರು ಮಾರ್ಗವಾಗಿ ಬಸ್, ಟ್ಯಾಕ್ಸಿ ಅಥವಾ ಆಟೋ ರಿಕ್ಷಾಗಳ ಮೂಲಕ ಇಲ್ಲಿಗೆ ಹೋಗುವುದು ಸುಲಭ.
1200 ವರ್ಷಗಳ ಇತಿಹಾಸವುಳ್ಳ ಶ್ರೀ ಮೂಕಾಂಬಿಕ ದೇವಸ್ಥಾನ ಈ...
ಕಣ್ಣೂರಿನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪಾರಸಿನಿಕಡವು ಸ್ನೇಕ್ ಪಾರ್ಕ್ ಕೂಡ ಒಂದು. ವಿಶೇಷವಾದ ಜಾತಿಗೆ ಸೇರಿದ ಸರಿಸೃಪಗಳನ್ನು ಇಲ್ಲಿ ಇಡಲಾಗಿದ್ದು ಇಡೀ ದೇಶದಲ್ಲೇ ಇದು ವಿಶೇಷವಾದ ಗಮನವನ್ನು ಸೆಳೆದಿದೆ. ಭಾರತದಲ್ಲಿ ಸರಿಸೃಪಗಳ ರಕ್ಷಣೆಗಾಗಿ ಇರುವ ಏಕೈಕ ಸ್ನೇಕ್ ಪಾರ್ಕ್ ಇದಾಗಿದೆ.
ಕಣ್ಣೂರು ನಗರದಿಂದ 16...
ಧಾರ್ಮಿಕ ಸ್ಥಳಗಳು ಹಾಗೂ ದೇವಾಲಯಗಳಿಗೆ ಹೆಸರುವಾಸಿಯಾಗಿರುವ ಪಾಪಿನ್ನಿಸಿರಿ ಪ್ರದೇಶ ಕಣ್ಣೂರಿನಿಂದ ಸುಮಾರು10ಕಿ.ಮೀ.ದೂರದಲ್ಲಿದೆ. ಬಲಿಯಪಟ್ಟಿ ಎಂಬ ನದಿ ಹಾಗೂ ಅನೇಕ ಚಿಕ್ಕ ಪುಟ್ಟ ಬೆಟ್ಟಗಳಿಂದ ಆವರಿಸಲ್ಪಟ್ಟು ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡಿದೆ. ನದಿಯ ದಂಡೆಯಲ್ಲಿರುವ ಸುಂದರ ಸ್ಥಳ ಪಂಪುರಾತಿ ಹಾಗೂ ಕೇರಳಾದ...
ತನ್ನದೇ ಆದ ವಿಶೇಷ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಂದ ಹೆಸರುವಾಸಿಯಾದ ಶ್ರೀ ಮಾವಿಲಯಿಕ್ಕಾವು ದೇವಸ್ಥಾನ ಹೆಸರಾಂತ ಧಾರ್ಮಿಕ ಸ್ಥಳವಾಗಿದ್ದು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊಂದಿದೆ. ಕೇರಳಾದ ಧೀಮಂತ ಕಮ್ಯೂನಿಸ್ಟ್ ನಾಯಕರಾದ ಎ.ಕೆ.ಗೋಪಾಲನ್ ಅವರ ಜನ್ಮಸ್ಥಳವಾದ ಪುಟ್ಟ ಹಾಗೂ ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿರುವ...
ತಲಚೇರಿಯಿಂದ 35 ಕಿ.ಮೀ. ಹಾಗೂ ಕಣ್ಣೂರಿನಿಂದ 65 ಕಿ.ಮೀ.ದೂರದಲ್ಲಿ ಅರಾಲಾಮ್ ವೈಲ್ಡ್ ಲೈಫ್ ಸ್ಯಾಂಕ್ಚುರಿ ಇದೆ. ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿದ್ದು ಪಶ್ಚಮ ಘಟ್ಟಗಳಿಗೆ ಸೇರಿದ ಈ ಪ್ರದೇಶವನ್ನು 1984 ರಲ್ಲಿ ವನ್ಯಜೀವಿ ಸಂರಕ್ಷಣಾ ಕೇಂದ್ರವನ್ನಾಗಿ ಗುರುತಿಸಿ ಇದರ ಕೇಂದ್ರ ಸ್ಥಾನವನ್ನು 20...
ಅಕ್ಕರಿ ಕೊಟ್ಟಿಯೂರ್ ಹಾಗೂ ಇಕ್ಕರಿ ಕೊಟ್ಟಿಯೂರ್ ಎಂಬ ಅವಳಿ ದೇವಾಲಯಗಳಿಗಿರುವ ಹೆಸರನ್ನೇ ಕೊಟ್ಟಿಯೂರ್ ಶಿವ ದೇವಸ್ಥಾನಕ್ಕೆ ಇಡಲಾಗಿದ್ದು ಇದು ಉತ್ತರ ಕೇರಳಾದ ಪ್ರಮುಖ ಜಾತ್ರಾ ಕೇಂದ್ರವಾಗಿದೆ. ದಕ್ಷಿಣ ಭಾರತದ ವಾರಣಾಸಿ ಅಥವಾ ದಕ್ಷಿಣ ಕಾಶಿ ಎಂದೇ ಕರೆಯುವ ಕೊಟ್ಟಿಯೂರಿನಲ್ಲಿ ಈ ದೇವಸ್ಥಾನವಿದೆ. ಬಾವಲಿ ನದಿಯ ಪೂರ್ವ ಹಾಗೂ...
ಕಣ್ಣರೂನಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಪಾಳಾಸಿ ಜಲಾಶಯ ಬಹಳ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಜಲಾಶಯ ತನ್ನ ಸೌಂದರ್ಯ ಹಾಗೂ ಇಲ್ಲಿನ ಮನರಂಜನೀಯ ಅನುಕೂಲತೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಾಲಪಟ್ಟನಂ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಜಲಾಶಯ ಕಣ್ಣೂರಿಗೆ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ...
ಕಣ್ಣೂರಿನಿಂದ ಕೇವಲ 2 ಕಿ.ಮೀ. ದೂರದಲ್ಲಿರುವ ಸುಂದರೇಶ್ವರ ದೇವಸ್ಥಾನವು ಅತ್ಯಂತ ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ. ಕೇರಳಾದ ಹೆಸರಾಂತ ಧಾರ್ಮಿಕ ನಾಯಕರಾದ ಶ್ರೀ ನಾರಾಯಣ ಗುರು 1916 ರಲ್ಲಿ ಈ ಆರಾಧನಾ ಸ್ಥಳವನ್ನು ಗುರುತಿಸಿದ್ದಾರೆ. ಇತಿಹಾಸ ಹೇಳುವ ಪ್ರಕಾರ ಶ್ರೀ ನಾರಾಯಣ ಗುರು ಪ್ರತಿಷ್ಠಾಪಿಸಿದ ನಾಲ್ಕು ದೇವಾಲಯಗಳಲ್ಲಿ...
ಸುಮಾರು 290 ಮೀಟರ್ ಎತ್ತರದ ಬೆಟ್ಟಗಳ ಸಾಲಿನಲ್ಲಿ ಹಸಿರುಟ್ಟ ಭೂರಮೆ ನಲಿಯುತ್ತಾ ಎಲ್ಲರನ್ನು ಆಕರ್ಷಿಸುವಳು. ಹಿಂದೆ ಈ ಪ್ರದೇಶ ಒಮ್ಮೆ ಮೂಶಿಕ ಸಂಸ್ಥಾನದ ರಾಜಧಾನಿಯಾಗಿದ್ದು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಏಳಿಮಲ ಅತ್ಯಂತ ಪ್ರಾಚೀನ ವಾಣಿಜ್ಯ ಹಾಗೂ ವ್ಯಾಪಾರ ಪ್ರದೇಶವಾಗಿ ಜನಪ್ರಿಯತೆಯನ್ನು ಪಡೆದಿದ್ದು ಇಲ್ಲಿಗೆ ಗೌತಮ...
ಕಣ್ಣೂರು ನಗರದಿಂದ ಸುಮಾರು 60 ಕಿ.ಮೀ. ದೂರದಲ್ಲಿ ಹಾಗೂ ಕೇರಳಾ-ಕರ್ನಾಟಕ ರಾಜ್ಯಗಳ ಗಡಿ ಪ್ರದೇಶದಲ್ಲಿರುವ ಪೈತಾಲ್ ಮಾಲ ತನ್ನ ನೈಸರ್ಗಿಕ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸುತ್ತದೆ. ಇದಕ್ಕೆ ವೈಟಲ್ ಮಾಲ ಎಂಬ ಹೆಸರೂ ಇದೆ. ಈ ಪ್ರದೇಶ ಸಮುದ್ರ ಮಟ್ಟಕ್ಕಿಮತ 4500 ಅಡಿ ಎತ್ತರದಲ್ಲಿದ್ದು ಹಸಿರು ಬೆಟ್ಟದ ಸಾಲುಗಳು...
ಕಣ್ಣೂರಿನಿಂದ 20 ಕಿ.ಮೀ.ಅಂತರದಲ್ಲಿರುವ ಗುಂಡರ್ಟ್ ಬಂಗಲೆ ಒಂದು ಪ್ರಸಿದ್ದ ಪಾರಂಪರಿಕ ಕಟ್ಟಡವಾಗಿದ್ದು ಪ್ರಮುಖ ಪ್ರವಾಸಿ ಆಕರ್ಷಣ ಕೇಂದ್ರವಾಗಿದೆ. ತಲಚೇರಿ ನಗರಕ್ಕೆ ಹತ್ತಿರದಲ್ಲಿರುವ ಇಲ್ಲಿಕುನ್ನೂರು ಎಂಬ ಸುಂದರವಾದ ಬೆಟ್ಟದ ಮೇಲೆ ಈ ಬಂಗಲೆ ಇದೆ. ಇದರ ಸಮೀಪದಲ್ಲೇ ನದಿ ಹರಿದು ಹೋಗಿರುವುದರಿಂದ ಈ ಪ್ರದೇಶದ ಸೌಂದರ್ಯ...
ಕಣ್ಣೂರಿನಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಪಳಾಯಂಗಡಿ ನಗರದಲ್ಲಿರುವ ಮದಾಯಿಪರ ಬೆಟ್ಟಗಳ ಸಾಲು ಹಸಿರು ಹೊದ್ದಿಕೊಂಡು ಕುಪ್ಪಂ ನದಿಯ ದಂಡೆಯ ಹೊರಳಿಕೊಂಡಿರುವುದು ಅತ್ಯಂತ ಮನಮೋಹಕ ದೃಶ್ಯವಾಗಿ ಕಂಗೊಳಿಸುತ್ತದೆ. ಏಳಿಮಾಲ ಸಂಸ್ಥಾನದ ಅನೇಕ ಐತಿಹಾಸಿಕ ಘಟನೆಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ.
ಈ ಬೆಟ್ಟದ...