ಸೇವಾಗ್ರಾಮ ಎನ್ನುವುದು ಮಹಾರಾಷ್ಟ್ರದಲ್ಲಿರುವ ಒಂದು ಪುಟ್ಟ ಹಳ್ಳಿ. ಇದು ವಾರ್ಧಾದಿಂದ 8 ಕಿ.ಮೀ ದೂರದಲ್ಲಿದೆ. ಈ ಸೇವಾ ಗ್ರಾಮವು ಗಾಂಧೀಜಿಯವರಿಗೆ ಸಂಬಂಧಿಸಿದ್ದು. ಮಹಾತ್ಮ ಗಾಂಧಿಯವರು ಆಶ್ರಮವನ್ನು ಸ್ಥಾಪಿಸಿದ ಇಲ್ಲಿ ಕೇವಲ 1,000 ಜನರು ವಾಸಿಸುತ್ತಿದ್ದಾರೆ. ಈ ಸೇವಾಗ್ರಾಮದ ಬಳಿ ಒಂದು ಮ್ಯೂಸಿಯಂ ಇದೆ. ಇಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಸಂರಕ್ಷಿಸಿಡಲಾಗಿದೆ.
ಸೇವಾಗ್ರಾಮವು ಮಹಾರಾಷ್ಟ್ರದ ಪ್ರಸಿದ್ಧ ಗ್ರಾಮವಾಗಿದೆ. ಇಲ್ಲಿಂದ ಪಟ್ಟಣವು ಸುಮಾರು 85 ಕಿಲೋಮೀಟರ್ ದೂರದಲ್ಲಿದೆ ಮತ್ತು ಭಾರತೀಯ ಸ್ವಾತಂತ್ರ್ಯ ಸಮಯದಲ್ಲಿ ಮಹಾತ್ಮಾ ಗಾಂಧಿಯವರು ಇದನ್ನು ತನ್ನ ಮೂಲವಾಗಿ ಆಯ್ಕೆ ಮಾಡಿಕೊಂಡಿದ್ದರು.
67ನೇ ವರ್ಷಕ್ಕೆ ಸೇವಾ ಗ್ರಾಮಕ್ಕೆ ಬಂದ ಗಾಂಧಿ
PC: Muk.khan
ಏಪ್ರಿಲ್ 1936 ರಲ್ಲಿ, ಗಾಂಧೀಜಿಯು ವಾರ್ಧಾದ ಹೊರವಲಯದಲ್ಲಿರುವ ಸೆಗಾನ್ ಎಂಬ ಹಳ್ಳಿಯಲ್ಲಿ ತನ್ನ ನಿವಾಸವನ್ನು ಸ್ಥಾಪಿಸಿದನು, ಇದನ್ನು ಸೇವಾಗ್ರಾಮ ಎಂದು ಮರುನಾಮಕರಣ ಮಾಡಲಾಯಿತು, ಸೇವಾ ಗ್ರಾಮ ಅಂದರೆ 'ಗ್ರಾಮದ ಸೇವೆ' ಎಂದರ್ಥ. ಅವರು ಸೇವಾಗ್ರಾಮಕ್ಕೆ ಬಂದಾಗ ಗಾಂಧೀಜಿ 67 ವರ್ಷ ವಯಸ್ಸಾಗಿತ್ತು. ಗಾಂಧಿ ಮತ್ತು ಕಸ್ತೂರ್ಬಾರಿಗೆ ಆಶ್ರಮದಲ್ಲಿ ಸಣ್ಣ ಮನೆಯನ್ನು ನಿರ್ಮಿಸಲಾಗಿತ್ತು. ಜೊತೆಗೆ ಗಾಂಧೀಜಿಯ ಅನುಯಾಯಿಗಳಿಗೂ ಇಲ್ಲಿ ಪಕ್ಕಾ ಹಳ್ಳಿ ರೀತಿಯ ಮನೆಗಳನ್ನು ನಿರ್ಮಿಸಲಾಗಿದೆ.
500 ರೂ. ಖರ್ಚಲ್ಲಿ ಮನೆ ನಿರ್ಮಾಣ
ಈ ಗ್ರಾಮದಲ್ಲಿ ಗಾಂಧೀಜಿಗಾಗಿ ಹಾಗೂ ಅನುಯಾಯಿಗಳಿಗಾಗಿ ಮನೆಯನ್ನು ನಿರ್ಮಿಸುವಾಗ ಗಾಂಧೀಜಿ ಒಂದು ಷರತ್ತನ್ನಿಟ್ಟಿದ್ದರು. ಅದೇನೆಂದರೆ ಮನೆ ನಿರ್ಮಾಣದ ಖರ್ಚು 500 ರೂ.ಗಿಂತ ಹೆಚ್ಚಾಗ ಬಾರದು.
ಇಲ್ಲಿ ನಿರ್ಮಿಸಲಾದ ಮೊದಲ ಕಟ್ಟಡ
ಸ್ವಾತಂತ್ರ್ಯ ಚಳುವಳಿ ಹೋರಾಟದ ಸಮಯದಲ್ಲಿ ಈ ಹಳ್ಳಿಯು ಹಲವು ರಾಷ್ಟ್ರೀಯತಾವಾದಿ ನಾಯಕರ ಅಧಿಪತ್ಯ ವಹಿಸಿತು. ಸೇವಾಗ್ರಾಮ ಆಶ್ರಮವು ಈ ಸ್ಥಳದಲ್ಲಿ ನಿರ್ಮಿಸಲಾದ ಮೊದಲ ಕಟ್ಟಡವಾಗಿದೆ. 40 ಹೆಕ್ಟೇರ್ ಕೃಷಿಭೂಮಿಯ ಮೇಲೆ ನಿರ್ಮಿಸಲ್ಪಟ್ಟ ಸೇವಾಗ್ರಾಮ ಒಂದು ಶಾಂತಿಯುತ ಆಶ್ರಮವಾಗಿದ್ದು, ಗಾಂಧಿಯವರು ವಾಸಿಸುತ್ತಿದ್ದ ಮತ್ತು ಕೆಲಸ ಮಾಡಿದ್ದ ಮೂಲ ಸ್ಥಳಗಳೊಂದಿಗೆ ಎಚ್ಚರಿಕೆಯಿಂದ ಪುನಃ ಸ್ಥಾಪಿಸಲ್ಪಟ್ಟಿದೆ. ಅಲ್ಲದೆ, ಈ ಪ್ರದೇಶದಲ್ಲಿ ನೀವು ಇತರ ಪ್ರಮುಖ ಗುಡಿಸಲುಗಳು ಮತ್ತು ಕುಟೀರಗಳನ್ನು ನೋಡಬಹುದು. ಅವುಗಳೆಂದರೆ ಕಿಶೋರ್ ಕುಟಿ, ಮಹಾದೇವ್ ಕುಟಿ ಮತ್ತು ಪಾರಚೂರ್ ಕುಟಿ.
ಹಲವಾರು ಸಂಸ್ಥೆಗಳ ಕೇಂದ್ರ
PC: Kailash Mohankar
ಸೇವಾಗ್ರಾಮ ಸ್ಪೂರ್ತಿದಾಯಕ ಸ್ಥಳವಾಗಿದೆ. ರಾಷ್ಟ್ರೀಯ ವಿಷಯಗಳು ಮತ್ತು ಚಳುವಳಿಗಳ ಮೇಲೆ ಅನೇಕ ನಿರ್ಧಾರಗಳನ್ನು ಸೇವಾಗ್ರಾಮದಲ್ಲಿ ತೆಗೆದುಕೊಳ್ಳಲಾಗಿದೆ. ಈ ದೇಶದ ಸ್ವಾಭಾವಿಕ ಶಕ್ತಿಯನ್ನು ಸರಿಹೊಂದಿಸಲು ಗಾಂಧೀಜಿಯಿಂದ ರೂಪಿಸಲ್ಪಟ್ಟ ರಾಷ್ಟ್ರದ ಅನೇಕ ಚಟುವಟಿಕೆಗಳಿಗೆ ಸಂಬಂಧಿಸಿದ ಹಲವಾರು ಸಂಸ್ಥೆಗಳಿಗೆ ಕೇಂದ್ರ ಸ್ಥಳವಾಯಿತು.
ಸೇವಾಗ್ರಾಮ ಆಶ್ರಮ
ಸೇವಾಗ್ರಾಮ ಆಶ್ರಮವು 1936 ರಿಂದ 1948 ರವರೆಗೆ 13 ವರ್ಷಗಳ ಕಾಲ ಗಾಂಧೀಜಿ ವಾಸವಾಗಿದ್ದ ಸ್ಥಳವೆಂದು ಹೆಸರಿಸಲ್ಪಟ್ಟಿದೆ. ಸೇವಾಗ್ರಾಮ ಆಶ್ರಮವು ಮಹಾತ್ಮಾ ಗಾಂಧಿಯವರು 1930 ರ ಮಾರ್ಚ್ 12 ರಂದು ಧಂಡಿ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಸಬರಮತಿ ಆಶ್ರಮದಿಂದ ದಂಡಿಗೆ ತೆರಳುವ ಸಂದರ್ಭದಲ್ಲಿ ಸ್ವಾತಂತ್ರ್ಯ ದೊರೆಯದೆ ಸಬರಮತಿಗೆ ಕಾಲಿಡುವುದಿಲ್ಲ ಎಂದಿದ್ದರಂತೆ. ಆಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಗಾಂಧೀಜಿಯವರನ್ನು ಬಂಧಿಸಲಾಯಿತು. ಈ ಆಶ್ರಮದಲ್ಲಿ ಮಹಾತ್ಮ ಗಾಂಧೀಜಿಗೆ ಸಂಬಂಧಿಸಿದ ಸಾಕಷ್ಟು ವಸ್ತುಗಳು ಇವೆ.
ಆದಿ ನಿವಾಸ ಅಥವಾ ಪ್ರಾರ್ಥನಾ ಮಂದಿರ
ಸೇವಾಗ್ರಾಮ ಆಶ್ರಮದಲ್ಲಿ ನಿರ್ಮಿಸಿದ ಮೊಟ್ಟಮೊದಲ ಗುಡಿಸಲು ಆದಿ ನಿವಾಸ. ಇದು ಒಂದು ಸುಂದರವಾದ ಮರಳು ಹಾಸಿಗೆ ಅಥವಾ ಪ್ರಾರ್ಥನಾ ಮಂದಿರವಾಗಿದೆ. ಈ ಆಶ್ರಮದ ಉತ್ತರದ ವರಾಂಡಾವನ್ನು ಊಟದ ಸಭಾಂಗಣವಾಗಿ ಬಳಸಲಾಗುತ್ತಿತ್ತು. ವಿವಿಧ ಧರ್ಮಗಳ ಬೆಳಿಗ್ಗಿನ ಮತ್ತು ಸಂಜೆಯ ಪ್ರಾರ್ಥನೆಗಳು ಇಲ್ಲಿ ನಡೆಯುತ್ತವೆ. ಇಂದಿಗೂ ಇದು ಮುಂದುವರೆದಿದೆ.
ಗ್ರಾಮೀಣ ವೈದ್ಯಕೀಯ ಕಾಲೇಜು
PC: youtube
ಭಾರತದ ಮೊದಲ ಗ್ರಾಮೀಣ ವೈದ್ಯಕೀಯ ಕಾಲೇಜು ಎಂದು ಹೆಸರಾದ ಮಹಾತ್ಮಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇದನ್ನು ಕಸ್ತೂರ್ಬಾ ಗಾಂಧಿ ನಿರ್ವಹಿಸುತ್ತಿದ್ದರು. ಈ ಕಾಲೇಜು ಮೊದಲು ನಾಗಪುರ್ ವಿಶ್ವವಿದ್ಯಾನಿಲಯ (1997-1998) ಮತ್ತು ಮಹಾರಾಷ್ಟ್ರ ಮಹಾವಿದ್ಯಾಲಯ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದೆ. ಡಾ. ಸುಶಿಲಾ ನಯ್ಯರ್ ಈ ಕಾಲೇಜನ್ನು ಪ್ರಾರಂಭಿಸಿದರು. 1944 ರಲ್ಲಿ 'ಮಹಾತ್ಮ ಗಾಂಧಿಯವರು MGIMS ನ ಕಸ್ತೂರ್ಬಾ ಆಸ್ಪತ್ರೆಯನ್ನು ಪ್ರಾರಂಭಿಸಿದರು.
ತಲುಪುವುದು ಹೇಗೆ?
ಸೇವಾಗ್ರಾಮವು ರೈಲು ಮತ್ತು ಬಸ್ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ವಾರ್ಧಾ ರೈಲು ನಿಲ್ದಾಣವು ಹೌರಾ-ನಾಗಪುರ್-ಮುಂಬೈ ಮಾರ್ಗದಲ್ಲಿ ಚಲಿಸುವ ಪ್ರಮುಖ ರೈಲು ನಿಲ್ದಾಣವನ್ನು ಹೊಂದಿದೆ. ಮುಂಬೈ, ಪುಣೆ, ನಾಗಪುರ್ ಮತ್ತು ಹೈದರಾಬಾದ್ ಪ್ರಮುಖ ನಗರಗಳಿಂದ ನಿರಂತರ ರೈಲು ಸೇವೆಗಳು ಇವೆ. ವಾರ್ಧಾ ರೈಲು ನಿಲ್ದಾಣದಿಂದ ಸೇವಾಗ್ರಾಮಕ್ಕೆ ನೀವು ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆಯಬಹುದು.
ವಿಮಾನದ ಮೂಲಕ
ಸೇವಾಗ್ರಾಮಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು ಮುಂಬೈ, ಪುಣೆ ಮತ್ತು ಹೈದರಾಬಾದ್ ಮುಂತಾದ ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ನಂತರ, ನಾಗ್ಪುರ್ ವಿಮಾನ ನಿಲ್ದಾಣದಿಂದ ಸೇವಾಗ್ರಾಮಕ್ಕೆ ಬಸ್ ಅನ್ನು ನೀವು ಹಿಡಿಯಬಹುದು.
ರಸ್ತೆ ಮೂಲಕ
ರಾಷ್ಟ್ರೀಯ ಹೆದ್ದಾರಿ 7 ಹೈದರಾಬಾದ್ ಮತ್ತು ಸೇವಾಗ್ರಾಮವನ್ನು ಸಂಪರ್ಕಿಸುತ್ತದೆ. ಹೈದರಾಬಾದ್ನಿಂದ ಸೇವಾಗ್ರಾಮಕ್ಕೆ ಹೋಗುವ ರಸ್ತೆ ಪ್ರಯಾಣವು ಸುಮಾರು 6.5 ಗಂಟೆಗಳ ಕಾಲ ಹಿಡಿಯುತ್ತದೆ. ಹೈದರಾಬಾದ್ ಮತ್ತು ಸೇವಾಗ್ರಾಮ ನಡುವೆ ನೇರ ಬಸ್ ಸಂಪರ್ಕವಿಲ್ಲ. ಸೇವಾಗ್ರಾಮ ಮತ್ತು ಹೈದರಾಬಾದ್, ಭೋಪಾಲ್, ನಾಗ್ಪುರ್, ನಾಸಿಕ್, ಮುಂಬೈ, ಕಾನ್ಪುರ್ ಮತ್ತು ಪುಣೆಯಂತಹ ಪ್ರಮುಖ ನಗರಗಳ ನಡುವೆ ಡಿಲಕ್ಸ್ ಮತ್ತು ಅರೆ-ಡೀಲಕ್ಸ್ ಬಸ್ಸುಗಳು ಚಲಿಸುತ್ತದೆ.