Search
  • Follow NativePlanet
Share
» »ಹಂಪಿಯಲ್ಲಿರುವ ಮಾತುಂಗ ಬೆಟ್ಟವನ್ನು ಹತ್ತಿದ್ದೀರಾ?

ಹಂಪಿಯಲ್ಲಿರುವ ಮಾತುಂಗ ಬೆಟ್ಟವನ್ನು ಹತ್ತಿದ್ದೀರಾ?

ಮಾತುಂಗ ಬೆಟ್ಟ ಹಂಪಿಯ ಅತ್ಯಂತ ಜನಪ್ರಿಯ ಬೆಟ್ಟವಾಗಿದೆ. ಇದು ನಗರದ ಹೃದಯ ಭಾಗದಲ್ಲಿದೆ ಮತ್ತು ಇಲ್ಲಿನ ಅತಿ ಎತ್ತರದ ಸ್ಥಳವಾಗಿದೆ.

ಹಂಪಿಯು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದ್ದುಇಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ. ಪ್ರತಿಯೊಂದು ಸ್ಥಳವು ಪೌರಾಣಿಕ ಹಾಗೂ ಐತಿಹಾಸಿ ಕಥೆಯನ್ನು ಹೊಂದಿದೆ. ಇಂದು ನಾವು ಹಂಪಿಯಲ್ಲಿರುವ ಮಾತುಂಗ ಬೆಟ್ಟದ ಬಗ್ಗೆ ತಿಳಿಸಲಿದ್ದೇವೆ. ಸುಗ್ರೀವನು ತನ್ನ ಸಹೋದರ ವಾಲಿಯಿಂದ ಬಚ್ಚಿಟ್ಟುಕೊಂಡಿದ್ದ ಸ್ಥಳ ಇದಾಗಿದೆಯಂತೆ.

ಮಾತುಂಗ ಬೆಟ್ಟ

ಮಾತುಂಗ ಬೆಟ್ಟ

PC:Vaishakh k p
ಮಾತುಂಗ ಬೆಟ್ಟ ಹಂಪಿಯ ಅತ್ಯಂತ ಜನಪ್ರಿಯ ಬೆಟ್ಟವಾಗಿದೆ. ಇದು ನಗರದ ಹೃದಯ ಭಾಗದಲ್ಲಿದೆ ಮತ್ತು ಇಲ್ಲಿನ ಅತಿ ಎತ್ತರದ ಸ್ಥಳವಾಗಿದೆ. ಇಡೀ ನಗರದ ಅತ್ಯುತ್ತಮ ನೋಟವನ್ನು ಒದಗಿಸುವ ಕಾರಣದಿಂದಾಗಿ ಇದು ಜನಪ್ರಿಯತೆಗೆ ಮುಖ್ಯ ಕಾರಣವಾಗಿದೆ. ಇಲ್ಲಿನ ಇನ್ನೊಂದು ಆಕರ್ಷಣೆ ಎಂದರೆ ಬೆಟ್ಟದ ಮೇಲಿನಿಂದ ಮುಂಜಾನೆ ಮತ್ತು ಮುಸ್ಸಂಜೆಯ ಸುಂದರ ನೋಟವನ್ನು ಕಣ್ತುಂಬಿಸಿಕೊಳ್ಳ ಬಹುದು.

ಹುಣ್ಣಿಮೆಯಂದು ಅರಸಿಕೆರೆಯ ಅಜ್ಜಯ್ಯನ ದರ್ಶನ ಪಡೆದ್ರೆ ನೀವೇ ಪುಣ್ಯವಂತರುಹುಣ್ಣಿಮೆಯಂದು ಅರಸಿಕೆರೆಯ ಅಜ್ಜಯ್ಯನ ದರ್ಶನ ಪಡೆದ್ರೆ ನೀವೇ ಪುಣ್ಯವಂತರು

ತುದಿಯಲ್ಲಿದೆ ವೀರಭದ್ರ ದೇವಾಲಯ

ತುದಿಯಲ್ಲಿದೆ ವೀರಭದ್ರ ದೇವಾಲಯ

PC:Ramnath Bhat
ದೇವಾಲಯದ ಉತ್ತರ ಭಾಗವು ತುಂಗಭದ್ರ ನದಿಯ ದಕ್ಷಿಣದ ದಡದಲ್ಲಿ ಬರುತ್ತದೆ. ಸುಂದರವಾದ ಕೊದಂಡ ರಾಮ ದೇವಾಲಯವು ಇಲ್ಲಿ ನೆಲೆಗೊಂಡಿದೆ. ಬೆಟ್ಟದ ಪೂರ್ವ ಭಾಗವು ಅಚ್ಯುತ ರಾಯ ದೇವಾಲಯದ ಭಾಗವಾಗಿ ಕೊನೆಗೊಳ್ಳುತ್ತದೆ. ಬೆಟ್ಟದ ತುದಿಯಲ್ಲಿ ಪ್ರಸಿದ್ಧ ವೀರಭದ್ರ ದೇವಾಲಯವಿದೆ.

ಟ್ರಕ್ಕಿಂಗ್ ಮೂಲಕ ತಲುಪಬಹುದು

ಟ್ರಕ್ಕಿಂಗ್ ಮೂಲಕ ತಲುಪಬಹುದು

PC:Vu2sga
ಮಾತುಂಗಾ ಬೆಟ್ಟದ ತುದಿಯನ್ನು ತಲುಪಲು ಏಕೈಕ ಮಾರ್ಗವೆಂದರೆ, ಕಡಿದಾದ ಬಂಡೆಗಳ ಉದ್ದಕ್ಕೂ ಟ್ರೆಕಿಂಗ್ ಮಾಡುವುದು. ಈ ಪ್ರದೇಶವು ವಿಜಯನಗರ ಸಾಮ್ರಾಜ್ಯದಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಇಲ್ಲಿಗೆ ಹೋಗುವ ಪ್ರವಾಸಿಗರಿಗೆ ಹಲವಾರು ಮೆಟ್ಟಿಲು ಮಾರ್ಗಗಳು ಮತ್ತು ಟ್ರೆಕ್ಕಿಂಗ್ ದಾರಿಗಳು ಇವೆ.

ಕುಣಿಗಲ್‌ ಕೆರೆ ಜೊತೆ ಸುತ್ತಮುತ್ತಲಿನ ಈ ತಾಣಗಳನ್ನೆಲ್ಲಾ ನೋಡಿಕುಣಿಗಲ್‌ ಕೆರೆ ಜೊತೆ ಸುತ್ತಮುತ್ತಲಿನ ಈ ತಾಣಗಳನ್ನೆಲ್ಲಾ ನೋಡಿ

ಪ್ರವೇಶ ದ್ವಾರ

ಪ್ರವೇಶ ದ್ವಾರ

PC: Sajith T S
ಇಲ್ಲಿನ ಅತ್ಯಂತ ಜನಪ್ರಿಯ ಪ್ರವೇಶ ದ್ವಾರವು ಕಡಲೆ ಕಾಳು ಗಣೇಶನ ಪ್ರತಿಮೆ ಹತ್ತಿರವಿರುವ ಪ್ರಮುಖ ರಸ್ತೆಯಿಂದ ಹೊರಬರುತ್ತದೆ. ಹಂಪಿ ಬಜಾರ್‌ನ ಪೂರ್ವ ತುದಿಯಿಂದ ಪ್ರಾರಂಭವಾಗುವ ರಸ್ತೆ ಮೂಲಕ ಇನ್ನೊಂದು ಮಾರ್ಗವಿದೆ. ಮೂರನೆಯ ಮಾರ್ಗವು ಮಾತುಂಗಾ ಬೆಟ್ಟದ ದಕ್ಷಿಣಭಾಗದಲ್ಲಿ ಹಾದುಹೋಗುತ್ತದೆ ಮತ್ತು ಇದು ಬಹಳ ಕಡಿಮೆ ಬಳಕೆಯಲ್ಲಿದೆ.

ಪೌರಾಣಿಕ ಕಥೆ

ಪೌರಾಣಿಕ ಕಥೆ

PC:Vtanurag

ಪೌರಾಣಿಕ ಕಥೆಗಳಲ್ಲಿ ವಿಶೇಷವಾಗಿ ರಾಮಾಯಣದಲ್ಲಿ ಮಾತುಂಗ ಬೆಟ್ಟ ಪ್ರಮುಖ ಸ್ಥಳವಾಗಿದೆ. ಪುರಾಣದ ಪ್ರಕಾರ, ಈ ಬೆಟ್ಟವು ಮಾತುಂಗ ಋಷಿಯ ವಾಸಸ್ಥಾನವಾಗಿತ್ತು. ಒಮ್ಮೆ, ಮಂಕಿ ರಾಜ ವಾಲಿಯುಇಲ್ಲಿ ಧುಂಧುವಾ ಎಂಬ ಎಮ್ಮೆ ರಾಕ್ಷಸನನ್ನು ಕೊಂದು ಈ ಬೆಟ್ಟದ ಮೇಲೆ ಆತನ ಶವವನ್ನು ಎಸೆದನು. ಈ ಕಾರ್ಯದಿಂದಾಗಿ ಋಷಿಯು ಬಹಳ ಕೋಪಗೊಂಡುವಾಲಿಗೆ ಈ ಬೆಟ್ಟ ಹತ್ತಲು ಸಾಧ್ಯವಾಗದಂತಹ ಶಾಪವನ್ನು ನೀಡುತ್ತಾರೆ. ನಂತರ, ಮಾತುಂಗ ಋಷಿಯ ಮಗ ವಾಲಿಯ ಮೇಲೆ ಸೇಡು ತೀರಿಸಿಕೊಳ್ಳಲು ಆಕ್ರಮಣ ಮಾಡಿದನು. ಆದ್ದರಿಂದ ಕೋಪಗೊಂಡ ವಾಲಿ ತನ್ನ ಸಹೋದರ ಸುಗ್ರೀವನೊಂದಿಗೆ ಋಷಿ ಮಗನ ಗುಹೆಗೆ ಹೋಗಿ ಯುದ್ದ ಮಾಡುತ್ತಾನೆ.

ಗುಹೆ

ಗುಹೆ

PC:Vtanurag
ಗುಹೆ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿದ್ದ ಸುಗ್ರೀವಾ ತನ್ನ ಸಹೋದರ ಬಹಳ ಸಮಯದಿಂದ ಹೊರಬಂದಿಲ್ಲದ್ದನ್ನು ನೋಡಿ ಸತ್ತುಹೋಗಿರಬೇಕೆಂದು ತಿಳಿದು ಗುಹೆಯನ್ನು ಮುಚ್ಚಲು ನಿರ್ಧರಿಸಿದನು. ನಂತರ ವಾಲಿಯು ಗುಹೆಯಿಂದ ಹೇಗೋ ಹೊರ ಬಂದು ಕೋಪದಿಂದ ತನ್ನ ಸಹೋದರನನ್ನು ಸಾಮ್ರಾಜ್ಯದಿಂದ ಹೊರ ಹಾಕಿದನು.

ವಾನರ ಸಾಮ್ರಾಜ್ಯ

ವಾನರ ಸಾಮ್ರಾಜ್ಯ

PC: Mathew Chandy
ಸುಗ್ರೀವ ಮತ್ತು ಅವನ ಜೊತೆ ಹನುಮಾನ್ ಮಾತುಂಗ ಬೆಟ್ಟದ ಮೇಲೆ ಆಶ್ರಯ ಪಡೆದರು. ವಾಲಿಯು ಋಷಿಯ ಶಾಪದಿಂದಾಗಿ ಅಲ್ಲಿಗೆ ಬರಲು ಸಾಧ್ಯವಿಲ್ಲ ಎಂದು ತಿಳಿದು ಬೆಟ್ಟದಲ್ಲಿರುವ ಸಣ್ಣ ಗುಹೆಯ ಒಳಗೆ ಸುಗ್ರೀವ ಹಾಗೂ ಹನುಮಾನ್ ಅಲ್ಲಿಯೇ ತಂಗಿದ್ದರು. ನಂತರ, ರಾಮನು ವಾಲಿಯನ್ನು ಕೊಂದು ಸುಗ್ರೀವನನ್ನು ಮಂಕಿ ಸಾಮ್ರಾಜ್ಯದ ರಾಜನಾಗಿ ಮಾಡಿದನು.ಇದಲ್ಲದೇ ಈ ಬೆಟ್ಟದ ಮೇಲಿರುವ ವೀರಭದ್ರ ದೇವಸ್ಥಾನವು ಶಿವನ ಅವತಾರವಾಗಿದೆ ಎಂದೂ ಹೇಳಲಾಗುತ್ತದೆ. ಹಂಪಿಗೆ ಪ್ರವಾಸ ಕೈಗೊಂಡವರು ಅಲ್ಲಿನ ಮಾತುಂಗ ಬೆಟ್ಟವನ್ನು ಭೇಟಿ ನೀಡದಿದ್ದಲ್ಲಿ ಹಂಪಿ ಪ್ರವಾಸ ಪೂರ್ಣವಾಗದು ಎನ್ನಲಾಗುತ್ತದೆ.

ಹಂಪಿ ಬಜಾರ್

ಹಂಪಿ ಬಜಾರ್

PC:Ssenthilkumaran
ಮಾತುಂಗ ಬೆಟ್ಟದ ಸಮೀಪದಲ್ಲಿರುವ ಇತರ ತಾಣಗಳೆಂದರೆ ಹಂಪಿ ಬಜಾರ್, ಇದು ಹಂಪಿಯ ವಿಶಿಷ್ಟ ಆಕರ್ಷಣೆಯಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಹಳೆಯ ಪೆವಿಲಿಯನ್‌ಗಳ ಸರಣಿ ಇದೆ. ಕೆಲವು ಏಕೈಕ ಕಟ್ಟಡಗಳು ಮತ್ತು ಇತರ ಎರಡು ಕಟ್ಟಡಗಳು. ಈ ಕಟ್ಟಡಗಳು ಒಮ್ಮೆ ಒಂದು ಸುಧಾರಿತ ಮಾರುಕಟ್ಟೆ ಮತ್ತು ಮೇಲ್ವರ್ಗದ ವ್ಯಾಪಾರಿಗಳ ಮನೆಗಳ ಭಾಗವಾಗಿತ್ತು. ಆರ್ಕೇಡ್‌ಗಳು ಬಾಗಿಲುಗಳಿಲ್ಲದ ತೆರೆದ ರಚನೆಗಳು. ವಿಜಯನಗರ ಆಳ್ವಿಕೆಯಲ್ಲಿ ವ್ಯಾಪಾರಿಗಳು ಬೆಲೆಬಾಳುವ ಕಲ್ಲುಗಳು, ಆಭರಣಗಳು, ರೇಷ್ಮೆಯ ಬಟ್ಟೆ ಇತ್ಯಾದಿಗಳನ್ನು ಮಾರಾಟ ಮಾಡಲು ಬಳಸಿದ ಸ್ಥಳವಾಗಿತ್ತು. ಹಸುಗಳು ಮತ್ತು ಕುದುರೆಗಳು ಮಾರಾಟವಾದ ಮಾರುಕಟ್ಟೆಯೂ ಸಹ ಇದಾಗಿತ್ತು.

ಹೇಮಕೂಟ

ಹೇಮಕೂಟ

ಹೇಮಕೂಟ ಗುಂಪಿನ ದೇವಾಲಯಗಳು ವಿರೂಪಾಕ್ಷ ದೇವಾಲಯದ ಪಕ್ಕದಲ್ಲಿರುವ ಹಂಪಿಯಲ್ಲಿನ ಹೆಮಕೂಟ ಬೆಟ್ಟದ ಮೇಲೆ ಇರುವ ಪ್ರಾಚೀನ ದೇವಾಲಯಗಳ ಸಮೂಹವಾಗಿದೆ. ಹೇಮಕೂಟ ಹಂಪಿಯಲ್ಲಿರುವ ಅತ್ಯಂತ ಆಕರ್ಷಕ ಬೆಟ್ಟಗಳಲ್ಲಿ ಒಂದಾಗಿದೆ. ದೇವಸ್ಥಾನಗಳು, ಮಂಟಪಗಳು, ಗ್ಯಾಲರಿಗಳು ಮತ್ತು ವಿವಿಧ ಗಾತ್ರದ ಗೇಟ್ವೇಗಳು ಸೇರಿದಂತೆ ಐವತ್ತುಕ್ಕೂ ಹೆಚ್ಚಿನ ರಚನೆಗಳ ಮೂಲಕ ಇದನ್ನು ನಿರ್ಮಿಸಲಾಗಿದೆ. ಹೇಮಕೂಟ ಬೆಟ್ಟ ಹಂಪಿ ಬಜಾರ್ ಮತ್ತು ವಿರೂಪಾಕ್ಷ ದೇವಾಲಯದ ಅತ್ಯುತ್ತಮ ನೋಟವನ್ನು ನೀಡುತ್ತದೆ. ಪಾರ್ವತಿಯನ್ನು ವಿವಾಹವಾಗುವ ಮೊದಲು ಶಿವನು ಹೇಮಕೂಟ ಬೆಟ್ಟದ ಮೇಲೆ ಪ್ರಾಯಶ್ಚಿತ್ತ ಮಾಡಿದನು ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ ಶಿವನು ಮನ್ಮಥನನ್ನು ಸುಟ್ಟುಹಾಕಿದ ಸ್ಥಳವೂ ಇದೇ ಎನ್ನಲಾಗುತ್ತದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಈ ಬೆಟ್ಟದ ಬಳಿ ವಿದ್ಯುತ್ ಸೌಲಭ್ಯವಿಲ್ಲದೇ ಇರುವುದರಿಂದ ನೀವು ಸಣ್ಣ ಟಾರ್ಚ್‌ನ್ನು ಕೊಂಡೊಯ್ಯುವುದು ಸೂಕ್ತ. ಹೆಚ್ಚು ಪ್ರವಾಸಿಗರು ಇದ್ದಾಗ ಬೆಟ್ಟವನ್ನು ಹತ್ತಿ. ಗುಂಪಾಗಿ ಸ್ನೇಹಿತರೊಂದಿಗೆ ಇಲ್ಲಿಗೆ ಭೇಟಿ ನೀಡುವುದು ಸೂಕ್ತ. ಬಿಸಲಿದ್ದಾಗ ಬೆಟ್ಟ ಹತ್ತಲು ಹೋಗಬೇಡಿ. ಬೆಳಗ್ಗೆ ೬ ರಿಂದ ೭ ಗಂಟೆಯೊಳಗೆ ಈ ಬೆಟ್ಟ ಹತ್ತುವುದು ಸೂಕ್ತ. ಇಲ್ಲಿ ಜಾಸ್ತಿಯೆಂದರೆ ಎರಡರಿಂದ ಮೂರು ಗಂಟೆ ಕಾಲ ಕಳೆಯಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಇಲ್ಲಿಗೆ ತಲುಪಲು ಸಮೀಪದ ವಿಮಾನ ನಿಲ್ದಾಣವೆಂದರೆ ಬಳ್ಳಾರಿ ವಿಮಾನ ನಿಲ್ದಾನ . ಇನ್ನು ಸಮೀಪದ ರೈಲು ನಿಲ್ದಾಣವೆಂದರೆ ಹೊಸಪೇಟೆ ರೈಲು ನಿಲ್ದಾಣ. ಇನ್ನು ಹಂಪಿಗೆ ರಾಜ್ಯದ ಎಲ್ಲಾ ಮೂಲೆಗಳಿಂದಲೂ ಬಸ್‌ ವ್ಯವಸ್ಥೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X