ಹೌದು, ಕೃಷ್ಣಾ ಅಭಯಾರಣ್ಯವು ಅನೇಕ ಪರಿಸರ ಸಂರಕ್ಷಣಾವಾದಿಗಳ ಪ್ರಕಾರ, ದಕ್ಷಿಣ ಭಾರತದಲ್ಲೆ ದಟ್ಟನೆಯ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿರುವ ಏಕೈಕ ಅಭಯಾರಣ್ಯವಾಗಿದೆ. ಅಲ್ಲದೆ ಇದೊಂದು ಅಪರೂಪದ ಜೈವಿಕ ಪರಿಸರದ ತಾಣವೂ ಸಹ ಆಗಿದೆ. ಆಂಧ್ರ ಪ್ರದೇಶ ರಾಜ್ಯದ ಕೃಷ್ಣಾ ನದಿ ಮುಖಜ ಭೂಮಿಯಲ್ಲಿ ಕಂಡುಬರುವ ಈ ಅಭಯಾರಣ್ಯವು ಆಂಧ್ರದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣಂ ನಗರಕ್ಕೆ ಹತ್ತಿರದಲ್ಲಿದೆ.
ವಿಶೇಷ ಲೇಖನ : ನಾಗರಹೊಳೆ ಅಭಯಾರಣ್ಯ
ಈ ಒಂದು ಅದ್ಭುತ ಅಭಯಾರಣ್ಯದಲ್ಲಿ ಸೊರ್ಲಗೊಂಡಿ ಮೀಸಲು ಅರಣ್ಯ, ಅದಾವುಲದಿವಿ ಮೀಸಲು ಅರಣ್ಯ, ಲಂಕಿವನಿದಿಬ್ಬ ಹೀಗೆ ಅನೇಕ ಮೀಸಲು ಅರಣ್ಯಗಳನ್ನು ಕಾಣಬಹುದು. ಈ ಮೀಸಲು ಕಾಡುಗಳು ಕೃಷ್ಣಾ ನದಿ ಮುಖಜ ಭೂಮಿಯ ಸಣ್ಣ ಪುಟ್ಟ ನಡುಗಡ್ಡೆಗಳಲ್ಲಿ ಅವ್ಯಾಹತವಾಗಿ ಹರಡಿವೆ. ಈ ಪ್ರದೇಶದ ನದಿಗಳ ದಂಡೆಯ ಗುಂಟ ಮ್ಯಾಂಗ್ರೋವ್ ಕಾಡುಗಳನ್ನು ಕಾಣಬಹುದಾಗಿದೆ.
ವಿಶೇಷ ಲೇಖನ : ಸುಂದರಬನ್ಸ್ ಮ್ಯಾಂಗ್ರೋವ್ ಕಾಡು
ಚಿತ್ರಕೃಪೆ: J.M.Garg
ಕೃಷ್ಣಾ ನದಿಯ ನದಿ ಮುಖವು ಈ ಪ್ರದೇಶದಿಂದ ಹಾದು ಹೋಗಿದ್ದು ಇದರ ತುಂಬ ಮ್ಯಾಂಗ್ರೋವ್ ಕಾಡುಗಳನ್ನು ನೋಡಬಹುದು. ಒಂದು ಮೂಲದಂತೆ ಈ ಒಂದು ನಿರ್ದಿಷ್ಟ ಭಾಗದಲ್ಲಿ ಅಪಾರವಾದ ಸಂಖ್ಯೆಯಲ್ಲಿ ಮೀನು ಹಿಡಿಯುವ ಬೆಕ್ಕುಗಳನ್ನು ಕಾಣಬಹುದಾಗಿದೆಯಂತೆ. ಆದರೆ ಇದಕ್ಕೆ ನಿರ್ದಿಷ್ಟ ಪುರಾವೆಗಳಿಲ್ಲ. ಏಕೆಂದರೆ ಈ ರೀತಿಯ ಬೆಕ್ಕುಗಳು ಕಂಡುಬರುವುದು ಬಲು ಅಪರೂಪ.
ಚಿತ್ರಕೃಪೆ: J.M.Garg
ಅಲ್ಲದೆ ಈ ಅಭಯಾರಣ್ಯದ ತುಂಬ ವಿವಿಧ ಬಗೆಯ ಸಸ್ಯಗಳು ಹಾಗೂ ಪಕ್ಷಿಗಳನ್ನು ಕಾಣಬಹುದಾಗಿದೆ. ಅಷ್ಟೆ ಅಲ್ಲ ಆಟರ್, ನರಿ, ಕರಡಿ ಹಾಗೂ ಹೈನಾದಂತಹ ಪ್ರಾಣಿಗಳನ್ನೂ ಸಹ ಈ ಅಭಯಾರಣ್ಯದಲ್ಲಿ ಕಾಣಬಹುದಾಗಿದೆ. ಇದು ಆಂಧ್ರದ ಕೃಷ್ಣಾ ಹಾಗೂ ಗುಂಟೂರು ಪ್ರದೇಶಗಳಲ್ಲಿ ಆವರಿಸಿದೆ. ವಿಜಯವಾಡಾದಿಂದ ಸುಮಾರು 80 ಕಿ.ಮೀ ಗಳಷ್ಟು ದೂರದಲ್ಲಿದೆ ಈ ಅಭಯಾರಣ್ಯ.
ವಿಶೇಷ ಲೇಖನ : ಭದ್ರಾ ಜಲಾಶಯ ಕಡು
ಚಿತ್ರಕೃಪೆ: J.M.Garg
http://commons.wikimedia.org/wiki/File:Excoecaria_agallocha_(Blind_Your_Eye)_W_IMG_6949.jpg
ಇಲ್ಲಿಗೆ ತಲುಪಲು ವಿಜಯವಾಡಾ ಅತಿ ಹತ್ತಿರದಲ್ಲಿರುವ ರೈಲು ನಿಲ್ದಾಣ. ವಿಜಯವಾಡಾ ದೇಶದ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕ ಹೊಂದಿದೆ. ಹಾಗಾಗಿ ಈ ಅಭಯಾರಣ್ಯಕ್ಕೆ ಬರುವುದು ಅಷ್ಟೊಂದು ಕಷ್ಟಕರವಾಗೇನಿಲ್ಲ. ಇನ್ನು ತಂಗಲು ಅರಣ್ಯ ಇಲಾಖೆಯ ಅತಿಥಿ ಗೃಹವಿದ್ದು ಅದು ಇದಕ್ಕೆ ಹತ್ತಿರದಲ್ಲಿರುವ ಮಚಲಿಪಟ್ಟಣ ನಗರದಲ್ಲಿ ಲಭ್ಯವಿದೆ.
ಚಿತ್ರಕೃಪೆ: J.M.Garg
ಈ ಅಭಯಾರಣ್ಯಕ್ಕೆ ತೆರಳಲು ಅಕ್ಟೋಬರ್ ನಿಂದ ಹಿಡಿದು ಫೆಬ್ರುವರಿಯವರೆಗೂ ಉತ್ತಮ ಸಮಯವಾಗಿದೆ. ನಮಗೆ ಅಪರೂಪ ಎನ್ನಬಹುದಾದ ಮ್ಯಾಂಗ್ರೋವ್ ಕಾಡುಗಳು ಹಾಗೂ ಅತಿ ಅಪರೂಪ ಮತ್ತು ಅಳಿವಿನಂಚಿನಲ್ಲಿರುವ ಮೀನು ಹಿಡಿಯುವ ಬೆಕ್ಕುಗಳನ್ನು ನೋಡುವ ಬಯಕೆಯಿದ್ದರೆ ಕೃಷ್ಣಾ ಅಭಯಾರಣ್ಯವು ನಿಮ್ಮನ್ನು ಕೈಬಿಸಿ ಕರೆಯುತ್ತಿದೆ.