ಮಹಾಭಾರತದಲ್ಲಿ ಪಾಂಡವರು ಜಯ ಹಾಗೂ ಯಶಸ್ಸಿನ ದೇವತೆಯಾದ ಜಯಂತಿಗೆ ಗೌರವ ಸೂಚಕವಾಗಿ ಜಯಂತಿ ದೇವಿ ದೇವಸ್ಥಾನ ನಿರ್ಮಿಸಿರುವಂತಹ ಜಯಂತಪುರದಿಂದ ಹೆಸರನ್ನು ಪಡೆದುಕೊಂಡಿರುವ ಹರ್ಯಾಣದ ಒಂದು ಜಿಲ್ಲೆ ಜಿಂದ್. ದೇವಸ್ಥಾನವಿದ್ದ ಕಾರಣ ಜಯಂತಪುರ ಎನ್ನುವ ಹೆಸರನ್ನು ಪಡೆದುಕೊಂಡಿದ್ದ ನಗರವನ್ನು ಈಗ ಜಿಂದ್ ಎಂದು ಕರೆಯಲಾಗುತ್ತಿದೆ.
ಉತ್ಖನನದ ವೇಳೆ ಸಿಕ್ಕ ಸಾಕ್ಷಿಗಳು
PC: Manojkhurana
ಪುರಾಣಕಥೆಗಳನ್ನು ಹೊರತುಪಡಿಸಿದರೆ, ಇಲ್ಲಿ ನಡೆಸಿದ ಉತ್ಖನನದ ವೇಳೆ ಜಿಲ್ಲೆಯ ಪ್ರಾಚೀನ ಇತಿಹಾಸದ ಬಗ್ಗೆ ತಿಳಿದುಬಂದಿದೆ. ಹರಪ್ಪನ ನಾಗರಿಕತೆಗಿಂತ ಮೊದಲಿನ, ಬಳಿಕದ ಮತ್ತು ಬಣ್ಣ ಹಚ್ಚಲಾದ ಮಡಕೆಗಳು ಉತ್ಖನನದ ವೇಳೆ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಪುರಾಣಗಳಲ್ಲಿ ಉಲ್ಲೇಖಿಸಿದಂತಹ ತೀರ್ಥಗಳಿಗೆ ಉತ್ಖನನದ ವೇಳೆ ಸಾಕ್ಷಿಗಳು ಸಿಕ್ಕಿದೆ.
ಪ್ರಮುಖ ಪ್ರವಾಸಿ ತಾಣಗಳು
PC: Shashankduhan
ಜಿಂದ್ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು ಹಲವಾರು ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಜಿಂದ್ ಪ್ರಮುಖ ಯಾತ್ರಾಸ್ಥಳವಾಗಿದ್ದು, ಶಿವನಿಗಾಗಿ ಇರುವ ಭೂತೇಶ್ವರ ಮಂದಿರವನ್ನು ಭೂತನಾಥನೆಂದೂ ಕರೆಯಲಾಗುತ್ತದೆ. ಜಿಂದ್ ನ ರಾಜನಾಗಿದ್ದ ರಘ್ ಬೀರ್ ಸಿಂಗ್ ಈ ಮಂದಿರ ನಿರ್ಮಿಸಿದ್ದ. ಧಾಮತನ್ ಸಾಹಿಬ್ ನಲ್ಲಿ ಪುರಾತನ ಶಿವ ಮಂದಿರ ಹಾಗೂ ಋಷಿ ವಾಲ್ಮೀಕಿಯ ಆಶ್ರಮವಿದೆ. ಇಲ್ಲಿರುವ ಜಯಂತಿ ಮಂದಿರ ಸುಮಾರು 550 ವರ್ಷ ಪುರಾತನವಾದದ್ದು ಎನ್ನಲಾಗುತ್ತದೆ.
ಐದು ಕೊಳಗಳು
PC
ರಾಮರಾಯಿ ಅಥವಾ ರಾಮರ್ಹದಾ ಎನ್ನುವ ಐದು ಕೊಳಗಳನ್ನು ಪರಶುರಾಮ ದೇವರು ನಿರ್ಮಿಸಿದ ಕಾರಣಕ್ಕಾಗಿ ಇದರ ಸಮೀಪವೇ ಪರಶುರಾಮನಿಗಾಗಿ ಕಟ್ಟಿದ ಮಂದಿರವೊಂದಿಗೆ. ಹನ್ಸದೆಹಾರ್ ಎನ್ನುವ ಪುರಾತನ ನಗರಕ್ಕೆ ಭೇಟಿ ನೀಡಿದರೆ ಯೋಗ್ಯವೆನಿಸಲಿದೆ. ತೆಹ್ಸಿಲ ನರ್ವಾನದಲ್ಲಿರುವ ಹಜರತ್ ಗೈಬಿ ಸಾಹಿಬ್ ಸಮಾಧಿ ತನ್ನದೇ ಆದ ಭಕ್ತರನ್ನು ಸೆಳೆಯುತ್ತದೆ. ಸಮಾಧಿಯು ಖ್ಯಾತ ಸೂಫಿ ಸಂತ ಹಜರತ್ ಗಾಯಿಬಿ ಸಾಹಿಬ್ ಅವರ ಅವಶೇಷಗಳ ನೆಲೆಯಾಗಿದೆ.ಮೂರು ಇತಿಹಾಸ ಕೇಂದ್ರ ಹಾಗೂ ನಾಗೇಶ್ವರ ಮಹಾದೇವ, ನಾಗದಮ್ನಿ ದೇವಿ ಮತ್ತು ನಾಗಕ್ಷೇತ್ರಗಳನ್ನು ಹೊಂದಿರುವ ನಗರ ಸಫಿದಾನ್.
ಅಶ್ವಿನಿ ಕುಮಾರ ತೀರ್ಥ
PC: youtube
ಜಿಂದ್ ನಿಂದ ಐದು ಕಿ.ಮೀ. ದೂರದಲ್ಲಿರುವ ಇಕ್ಕಾಸ್ ಎಂಬಲ್ಲಿರುವ ಏಕಹಂಸ ದೇವಾಲಯವು ಮತ್ತೊಂದು ಪ್ರಮುಖ ಯಾತ್ರಾಸ್ಥಳವಾಗಿದೆ. ಹಾಗೆಯೇ ಅಶ್ವಿನಿ ಕುಮಾರ ತೀರ್ಥ ಮತ್ತೊಂದು ಯಾತ್ರಾಸ್ಥಳ. ಮಹಾಭಾರತದಲ್ಲಿ ಉಲ್ಲೇಖವಿರುವ ಅಶ್ವಿನಿ ಕುಮಾರ ತೀರ್ಥದ ಪವಿತ್ರ ನೀರಿನಲ್ಲಿ ಸ್ನಾನ ಮಾಡುವುದರಿಂದ ಭಕ್ತರ ಆತ್ಮಶುದ್ಧಿಯಾಗಿ ಮೋಕ್ಷಕ್ಕೆ ದಾರಿ ಮಾಡುಕೊಡುತ್ತದೆ ಎನ್ನುವುದು ಧರ್ಮಗ್ರಂಥಗಳಲ್ಲಿದೆ. ಪವಿತ್ರ ಸ್ಥಳದಲ್ಲಿರುವ ನೀರಿನಲ್ಲಿ ರೋಗನಿವಾರಕ ಗುಣವಿದೆ. ಗುಣಪಡಿಸಲಾಗದ ಅನೇಕ ರೋಗಗಳನ್ನು ಗುಣಪಡಿಸುತ್ತದೆ ಎನ್ನುವ ನಂಬಿಕೆಯಿದೆ.
ವರಾಹ ತೀರ್ಥ
PC:Jind Tourism
ಬರಾಹ ಗ್ರಾಮದಲ್ಲಿ ವಿಷ್ಣುವಿಗಾಗಿ ಇರುವ ವರಾಹ ತೀರ್ಥವು ಜಿಂದ್ ನಿಂದ ಹತ್ತು ಕಿ.ಮೀ. ದೂರದಲ್ಲಿದೆ. ಹಂದಿಯ ರೂಪದಲ್ಲಿ ವಿಷ್ಣು ಈ ಸ್ಥಳದಲ್ಲಿ ನೆಲೆ ನಿಂತಿದ್ದನೆಂದು ನಂಬಲಾಗಿದೆ. ಜಿಂದ್ ನಿಂದ ಆರು ಕಿ.ಮೀ. ದೂರದಲ್ಲಿರುವ ನಿರ್ಜನ ಗ್ರಾಮದಲ್ಲಿರುವ ದೇವತೆಗಳ ದೇವ ಮಹಾದೇವನಿಗಾಗಿರುವ ಇರುವ ಪವಿತ್ರ ಸ್ಥಳ ಮುಂಜವತಾ ತೀರ್ಥವಿದೆ. ಯಕ್ಷಿನಿ ಮಹಾರ್ಗಹಿಗಾಗಿರುವ ದೇವಸ್ಥಾನವು ಯಕ್ಷಿನಿ ತೀರ್ಥದಲ್ಲಿದೆ. ಇದು ಜಿಂದ್ ನಿಂದ 8 ಕಿ.ಮೀ. ದೂರದಲ್ಲಿರುವ ದಖ್ನಿಖೆರಾದಲ್ಲಿದೆ.
ಪುಷ್ಕರ ಮಂದಿರ ಹಾಗೂ ಫೊಂಕೆರ್ ಮಂದಿರ
PC:Vishal14k
ಜಿಂದ್ ನಿಂದ ದಕ್ಷಿಣಕ್ಕೆ 7 ಕಿ.ಮೀ. ದೂರಲ್ಲಿರುವ ಪೊಂಕರ್ ಖೇರಿ ಗ್ರಾಮದಲ್ಲಿರುವ ಪುಷ್ಕರ ಮಂದಿರವು ಮತ್ತೊಂದು ಪ್ರಸಿದ್ಧ ಯಾತ್ರಾಸ್ಥಳ. ಈ ಮಂದಿರವನ್ನು ಪರಶುರಾಮ ನಿರ್ಮಿಸಿದನೆಂದು ಧರ್ಮಗ್ರಂಥಗಳು ಹೇಳುತ್ತವೆ. ಬಾಬ ಫೊಂಕೆರ್ ಮಂದಿರವು ಜನರ ನಂಬಿಕೆ ಮತ್ತು ವಿಶ್ವಾಸವನ್ನಿಟ್ಟಿರುವ ಮತ್ತೊಂದು ಧಾರ್ಮಿಕ ಕೇಂದ್ರ. ಕಸೋಹನ್ ಗ್ರಾಮದಲ್ಲಿರುವ ಕಾಯಶೋಧನ ಮಂದಿರವು ಜಿಂದ್ ನಿಂದ ಉತ್ತರಕ್ಕೆ 16 ಕಿ.ಮೀ. ದೂರದಲ್ಲಿದೆ. ವಿಷ್ಣು ಈ ಪ್ರದೇಶದಲ್ಲಿ ಸ್ನಾನ ಮಾಡಿ ಕಾಯಶೋಧನ, ಲೋಕೋದ್ಧಾರ ಮಾಡಿದನೆಂದು ಪುರಾಣ ಗ್ರಂಥಗಳಲ್ಲಿದೆ.
ಶ್ರೀ ತೀರ್ಥ
PC: youtube
ಜಿಂದ್ ಜಿಲ್ಲೆಯ ಸಿಮ್ಲಾ ಗ್ರಾಮದಲ್ಲಿರುವ ನರ್ವಾನ ತೆಹ್ಸಿಲನಲ್ಲಿ ಶ್ರೀ ತೀರ್ಥವಿದೆ. ಇದು ಆರಾಧನೆಗೆ ಪರಮೋಚ್ಛ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲೇ ಒಂದು ಪವಿತ್ರ ಕೊಳವಿದೆ. ಇದರಲ್ಲಿ ಸ್ನಾನ ಮಾಡುವುದರಿಂದ ಭಕ್ತರಿಗೆ ಶಾಂತಿ ಮತ್ತು ಸಂತೋಷ ಸಿಗುತ್ತದೆ. ಜಿಂದ್ ನ ನರ್ವಾನ ತೆಹ್ಸಿಲ್ ನಲ್ಲಿರುವ ಸಂಘನ್ ಗ್ರಾಮದಲ್ಲಿ ದೇವತೆಗಾಗಿ ಒಂದು ಮಂದಿರವಿದೆ. ಈ ತೀರ್ಥದಲ್ಲಿ ವಿಶೇಷವಾಗಿ ಮಹಿಳೆಯರು ಪ್ರಾರ್ಥನೆ ಮಾಡುವುದರಿಂದ ಅವರನ್ನು ಶಂಖಿನಿ ಲಕ್ಷಣಗಳು ಆಶೀರ್ವದಿಸುತ್ತದೆ ಎಂದು ನಂಬಲಾಗಿದೆ.
ಯಾವಾಗ ಭೇಟಿ ನೀಡುವುದು ಸೂಕ್ತ
ಜಿಂದ್ ನಲ್ಲಿ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲ ಮೂರು ಋತುಗಳು ಸಮಾನವಾಗಿರುತ್ತದೆ. ನವಂಬರ್ ನಿಂದ ಮಾರ್ಚ್ ಮಧ್ಯೆ ಜಿಂದ್ ಗೆ ಭೇಟಿ ನೀಡಲು ಒಳ್ಳೆಯ ಸಮಯ.
ತಲುಪುವುದು ಹೇಗೆ
ಜಿಂದ್ ಗೆ ರಸ್ತೆ ಮೂಲಕ ಒಳ್ಳೆಯ ಸಂಪರ್ಕವಿದೆ. ಜಿಂದ್ ನಿಲ್ದಾಣವು ಇತರ ದೊಡ್ಡ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ನಿಯಮಿತ ವಿಮಾನ ಮಾರ್ಗಗಳ ಮೂಲಕ ದೇಶದ ಇತರ ಪ್ರಮುಖ ನಗರಗಳೊಂದಿಗೆ ಜಿಂದ್ ಸಂಪರ್ಕ ಹೊಂದಿಲ್ಲ. ಹತ್ತಿರದ ವಿಮಾನ ನಿಲ್ದಾಣವು ನವದೆಹಲಿಯಲ್ಲಿದೆ ಇದು ಜಿಂದ್ನಿಂದ 113 ಕಿ.ಮೀ ದೂರದಲ್ಲಿದೆ.
ದೇಶದ ಪ್ರಮುಖ ನಗರಗಳಿಂದ ಜಿಂದ್ಗೆ ಸಾಮಾನ್ಯ ರೈಲುಗಳು ಇಲ್ಲ. ಹತ್ತಿರದ ರೈಲ್ವೇ ನಿಲ್ದಾಣವು ರೋಹ್ಟಕ್ನಲ್ಲಿದೆ, ಇದು 54 ಕಿ.ಮೀ ದೂರದಲ್ಲಿದೆ.