ಬ್ರಹ್ಮ ಕುಂಡ್ ಎಂದು ಪ್ರಸಿದ್ಧವಾಗಿರುವ ಹರ್ ಕೀ ಪೌರಿ, ಹರಿದ್ವಾರದ ಅತ್ಯಂತ ಪವಿತ್ರ ಮತ್ತು ಜನಪ್ರಿಯ ಸ್ಥಳ ಎಂದು ಪರಿಗಣಿಸಲಾಗುತ್ತದೆ. ಇದು ಗಂಗಾ ನದಿಯು ಪರ್ವತಗಳಲ್ಲಿ ಹುಟ್ಟಿ, ನಂತರ ಹರಿದು ಬಯಲು ಸೇರುವ ಸ್ಥಳವಾಗಿದೆ. ಇದನ್ನು ಪ್ರಸಿದ್ಧ ರಾಜ ವಿಕ್ರಮಾದಿತ್ಯ ತನ್ನ ಸಹೋದರನಾದ ಬ್ರಿತಹರಿಯು ಇಲ್ಲಿ ಧ್ಯಾನಿಸುತ್ತಿದ್ದರ...
ಮಾನಸ ದೇವಿ ದೇವಾಲಯ, ಒಂದು ಜನಪ್ರಿಯ ಧಾರ್ಮಿಕ ಸ್ಥಳವಾಗಿದೆ. ಹರಿದ್ವಾರ ನಗರದಿಂದ ಸುಮಾರು 3 ಕಿಮೀ ದೂರದಲ್ಲಿ ಇದೆ. ದೇವಾಲಯವು, ಪುರಾತನ ವೇದ ಕಾಲದ ಮಹಾನ್ ಋಷಿ ಮುನಿ ಕಶ್ಯಪ ನ ಮಾನಸ ಪುತ್ರಿ ಹಿಂದೂ ದೇವತೆ, ಮಾನಸ ದೇವಿಗೆ ಸಮರ್ಪಿತವಾಗಿದೆ. ಈ ದೇವತೆ ಸರ್ಪಗಳ ರಾಜ ನಾಗ ವಾಸುಕಿಯ ಪತ್ನಿಯಾಗಿದ್ದಳು.
ದೇವಾಲಯವು...
ಹರಿದ್ವಾರದಲ್ಲಿನ ನೀಲ ಪರ್ವತದ ಮೇಲೆ ನೆಲೆಗೊಂಡಿದೆ ಈ ಚಂಡಿ ದೇವಿ ದೇವಸ್ಥಾನ. ದೇಶದ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು 52 ಶಕ್ತಿ ಪೀಠಗಳಲ್ಲಿ ಒಂದು ಮತ್ತು ಇದನ್ನು1929 ರಲ್ಲಿ ಕಾಶ್ಮೀರದ ಮುಂಚಿನ ರಾಜ ನಿರ್ಮಿಸಿದನು. ಆದಾಗ್ಯೂ, ಈ ದೇವಾಲಯದ ಪ್ರಸ್ತುತ ದೇವತೆಯ ವಿಗ್ರಹವು 8 ನೆಯ ಶತಮಾನದಲ್ಲಿ...
ಉಡನ್ ಕಟೋಲಾ, ಹಗ್ಗದ ಮೂಲಕ ತಲುಪುವ ಮಾರ್ಗವಾಗಿದ್ದು ಬೆಟ್ಟದ ತುದಿಯವರೆಗೆ ದೇವಾಲಯಗಳಿಗೆ ಭಕ್ತರನ್ನು ಕೊಂಡೊಯ್ಯುತ್ತದೆ. ಇದು ನಡೆಯುವುದು ಅಥವಾ ಹತ್ತುವ ಮಾರ್ಗಗಳಿಗೆ ಹೋಲಿಸಿದರೆ ಇದು ದೇವಾಲಯಗಳನ್ನು ತಲುಪುವ, ಒಂದು ವೇಗವಾದ ಮತ್ತು ಅನುಕೂಲಕರವಾದ ಮಾರ್ಗವಾಗಿದೆ. ಈ ಕೇಬಲ್ ಕಾರುಗಳು ಆರಂಭದಲ್ಲಿ ಚಂಡಿ ದೇವಿ ದೇವಾಲಯದ...
ಮದರ್ ಇಂಡಿಯಾ ದೇವಾಲಯ ಎಂದೇ ಜನಪ್ರಿಯವಾಗಿರುವ ಭಾರತ್ ಮಾತಾ ಮಂದಿರ, ಹರಿದ್ವಾರದ ಒಂದು ಪ್ರಖ್ಯಾತ ಧಾರ್ಮಿಕ ಸ್ಥಳವಾಗಿದೆ. ಈ ದೇವಸ್ಥಾನವು ಭಾರತ ಮಾತೆಗೆ ಮೀಸಲಾಗಿದ್ದು, ಪ್ರಸಿದ್ಧ ಧಾರ್ಮಿಕ ಗುರು, ಸ್ವಾಮಿ ಸತ್ಯಮಿತ್ರಾನಂದ ಗಿರಿ ಇದನ್ನು ನಿರ್ಮಿಸಿದ್ದಾರೆ. ಭಾರತದ ದಿವಂಗತ ಪ್ರಧಾನಿ ಇಂದಿರಾ ಗಾಂಧಿ, 1983 ರಲ್ಲಿ ಈ...
ಮೋತಿ ಬಜಾರ್, ಹರಿದ್ವಾರದ ಪ್ರಮುಖ ಶಾಪಿಂಗ್ ಸೆಂಟರ್ ಆಗಿದೆ. ಹರ್ ಕೀ ಪೌರಿ ಮತ್ತು ಮಾಲ್ ರಸ್ತೆ ನಡುವೆ ಈ ಬಜಾರ್ ಇದೆ. ಈ ಬಜಾರಿನಲ್ಲಿ ಪ್ರಯಾಣಿಕರು/ಪ್ರವಾಸಿಗರು ಗಂಗಾಜಲ, ಗಂಗೆಯ ಪವಿತ್ರ ಜಲ, ರುದ್ರಾಕ್ಷಿ ಅಥವಾ ಪವಿತ್ರ ಮಣಿಗಳು, ಅಮೂಲ್ಯ ಕಲ್ಲುಗಳು ಮತ್ತು ಕುಂಕುಮಗಳನ್ನು ಖರೀದಿಸಬಹುದು. ಅಲ್ಲದೇ...
ಚಿಲ್ಲಾ ಅಭಯಾರಣ್ಯವನ್ನು 1977 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು 249 ಚದರ ಕಿಲೋಮೀಟರ್ ಪ್ರದೇಶದಲ್ಲಿ ವಿಸ್ತರಿಸಿದೆ. ಇದು ಗಂಗಾ ತೀರದಲ್ಲಿ, ಹರಿದ್ವಾರದಿಂದ 10 ಕಿ. ಮೀ ದೂರದಲ್ಲಿದೆ. 1983 ರಲ್ಲಿ, ರಾಜಾಜಿ ರಾಷ್ಟ್ರೀಯ ಉದ್ಯಾನವನ ರೂಪಿಸಲು ಮೊಚ್ಯೂರ್ ಮತ್ತು ರಾಜಾಜಿ ಅಭಯಾರಣ್ಯಗಳನ್ನು...
ಹರಿದ್ವಾರದಲ್ಲಿನ ವೈಷ್ಣೋ ದೇವಿ ದೇವಾಲಯವನ್ನು ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದು ಇದು ಜಮ್ಮುವಿನಲ್ಲಿರುವ ಜನಪ್ರಿಯ ವೈಷ್ಣೋ ದೇವಿ ದೇವಾಲಯ ಒಂದು ಪ್ರತಿರೂಪದಂತಿದೆ. ದೇವಾಲಯದ ಕಡೆಗೆ ಹೋಗುವ ಮಾರ್ಗ ಜಮ್ಮುವಿನ ವೈಷ್ಣೋ ದೇವಿ ದೇವಸ್ಥಾನದ ದಾರಿಯ ಮೂಲ ಮಾರ್ಗವನ್ನೆ ಹೋಲುತ್ತದೆ. ದಾರಿಯು ವಿವಿಧ ಗುಹೆಗಳು ಮತ್ತು ಸುರಂಗಗಳ ಮೂಲಕ...
ಹರ್ ಕೀ ಪೌರಿ ಯಿಂದ 5 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಸಪ್ತ ಋಷಿ ಆಶ್ರಮ, ಹರಿದ್ವಾರದ ಪ್ರಖ್ಯಾತ ಆಧ್ಯಾತ್ಮಿಕ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಒಂದು ಹಿಂದೂ ಜಾನಪದ ಪ್ರಕಾರ, ಈ ಆಶ್ರಮದಲ್ಲಿ ವೇದಗಳ ಕಾಲದ ಸಪ್ತರ್ಷಿಗಳಾದ ಅತ್ರಿ, ಕಷ್ಯಪ, ಜಮದಗ್ನಿ, ಭಾರದ್ವಾಜ, ವಸಿಷ್ಠ, ವಿಶ್ವಾಮಿತ್ರ ಮತ್ತು ಗೌತಮ ಋಷಿ ಮುನಿಗಳು ಧ್ಯಾನ...
ಮಾಯಾ ದೇವಿ ದೇವಾಲಯ ಹರಿದ್ವಾರದ ಜನಪ್ರಿಯ ಧಾರ್ಮಿಕ ಕೇಂದ್ರವಾಗಿದೆ. ಇದು 52 ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಈ ಭಕ್ತಿ ಸ್ಥಳವು ಹಿಂದೂ ದೇವತೆ ಸತಿ ಅಥವಾ ಶಕ್ತಿಗೆ ಸಮರ್ಪಿಸಲಾಗಿದೆ. ಹಿಂದೂ ದೇವತೆ ಆದಿಶಕ್ತಿಗೆ ಸಮರ್ಪಿತವಾದ ಈ ದೇವಾಲಯ 11 ನೇ ಶತಮಾನದ, ಹಿಂದಿನ ಇತಿಹಾಸವನ್ನು ಹೊಂದಿದೆ.
ಪುರಾಣದ ಪ್ರಕಾರ,...
ಕುಶವರ್ಥ ಘಾಟ್ ಅನ್ನು ಮರಾಠಾ ರಾಣಿ, ಅಹಲ್ಯಾಬಾಯಿ ಹೋಳ್ಕರ ನಿರ್ಮಿಸಿದಳು. ಇಲ್ಲಿ ಜನರು ತಮ್ಮ ಆತ್ಮೀಯ ಆತ್ಮಗಳ ಶಾಂತಿಗಾಗಿ 'ಶ್ರಾದ್ಧ' ಆಚರಣೆ ಮಾಡಲು ಇಲ್ಲಿಗೆ ಆಗಮಿಸುತ್ತಾರೆ.
ಪ್ರಾಚೀನ ಕಾಲದ ಮಹಾನ್ ಸಂತ, ಶ್ರೀ ದತ್ತಾತ್ರೇಯ, ಇಲ್ಲಿ ಧ್ಯಾನ ಮಾಡುತ್ತಿದ್ದರು ಎಂದು ನಂಬಲಾಗಿದೆ. ದಂತಕಥೆಗಳ ಪ್ರಕಾರ, ದತ್ತಾತ್ರೇಯರು...
ವಿಷ್ಣು ಘಾಟ್ ಹರಿದ್ವಾರದಲ್ಲಿರುವ ಅತ್ಯಂತ ಪವಿತ್ರ ಮತ್ತು ಹೆಸರಾಂತ ಆಧ್ಯಾತ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದು ಹಿಂದೂ ಭಗವಾನ್ ವಿಷ್ಣು ಸ್ನಾನ ಮಾಡಿದ ಸ್ಥಳವಾಗಿದೆ. ಈ ಘಾಟ್ ನ ನೀರಿನಲ್ಲಿ ಸ್ನಾನ ಮಾಡುವ ಮನುಷ್ಯನ ಎಲ್ಲಾ ಪಾಪಕರ್ಮಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತವೆ ಎಂದು ನಂಬಲಾಗಿದೆ.
ಗೌ ಘಾಟ್ ಹರಿದ್ವಾರದ ಅತ್ಯಂತ ಪೂಜ್ಯ ಸ್ಥಳಗಳಲ್ಲಿ ಒಂದಾಗಿದೆ. ಜನರು ಹಸುಗಳನ್ನು ಕೊಂದಿದ ಫಲವಾಗಿ ತಮಗೆ ಅಂಟಿದ ಪಾಪಗವನ್ನು ತೊಳೆದುಕೊಳ್ಳಲು ಇಲ್ಲಿಗೆ ಬರುವ ಕಾರಣ ಈ ಘಾಟ್ ಅನ್ನು ಗೌ ಘಾಟ್ ಎಂಬ ಹೆಸರನ್ನು ಪಡೆದಿದೆ. ಜನರು ಅಗಲಿದ ಆತ್ಮಗಳ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುವ ಸ್ಥಳವೂ ಇದಾಗಿದೆ. ಪ್ರಮುಖ ವ್ಯಕ್ತಿಗಳ...
ಕಾಮರಾಜ ಕೀ ಕಾಳಿ ದೇವಾಲಯ, ಹರಿದ್ವಾರ ರೈಲ್ವೆ ನಿಲ್ದಾಣದಿಂದ 7 ಕಿ. ಮೀ ದೂರದಲ್ಲಿ ನೆಲೆಸಿದ ಜನಪ್ರಿಯ ದೇವಾಲಯ. ಈ ದೇವಾಲಯವು ಕಾಲ ಮತ್ತು ಪರಿವರ್ತನೆಯ ದೇವತೆ ಮತ್ತು ವಿನಾಶ ಮತ್ತು ರಾಕ್ಷಸರ ಸಂಹಾರಕ ತಾಯಿ ಎಂದು ಕರೆಯಲ್ಪಡುವ ಹಿಂದೂ ದೇವತೆ ಕಾಳಿಗೆ ಸಮರ್ಪಿತವಾಗಿದೆ.
ಹಿಂದೂ ಶಿವ ದೇವರಿಗೆ ಮೀಸಲಾಗಿದೆ ಗೌರೀಶಂಕರ ಮಹಾದೇವ ದೇವಾಲಯ. ಹರಿದ್ವಾರದ ಪ್ರಸಿದ್ಧ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಈ ದೇವಸ್ಥಾನವು ಚಂಡಿ ದೇವಿ ದೇವಸ್ಥಾನದ ಹತ್ತಿರದಲ್ಲಿಯೇ ಸ್ಥಾಪಿತವಾಗಿದೆ. ಒಂದು ಜನಪದ ಕಥೆಗಳ ಪ್ರಕಾರ, ಜನರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುವುದರ ಮೂಲಕ ತಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಬಹುದು ಎಂದು...