ಜಗತ್ತಿನ ಅತಿ ಉದ್ದ ಸೇತುವೆಗಳಲ್ಲಿ ಒಂದಾದ ಮಹಾತ್ಮಾ ಗಾಂಧಿ ಸೇತುವನ್ನು 1982 ಮೇ ಯಲ್ಲಿ ಉದ್ಘಾಟಿಸಲಾಯಿತು. ಈ ಸೇತುವೆಯನ್ನು ಗಂಗಾ ನದಿಗೆ ಕಟ್ಟಲಾಗಿದ್ದು ಇದು ಬಿಹಾರದ ಹಾಜಿಪುರದಿಂದ ಪಾಟ್ನಾ ವನ್ನು ತಲುಪಿಸುತ್ತದೆ. 48 ಕಂಬಗಳ ಆಸರೆಯನ್ನು ಪಡೆದಿರುವ ಇದು 5575 ಮೀಟರ್ ಉದ್ದವಿದೆ. ಈ ಸೇತುವೆ ಇಡೀ ಪ್ರದೇಶದ ಸಂಚಾರ...
ಹಾಜಿಪುರದ ವಿರುದ್ಧ ದಿಕ್ಕಿನಲ್ಲಿ ಈ ಸೋನೆಪುರ ಇದೆ.ಪ್ರತಿವರ್ಷ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಬರುವ ಹುಣ್ಣಿಮೆ ದಿನ ಕಾರ್ತಿಕ ದಿವಸದಿಂದ 15 ದಿನ ಜಾತ್ರೆಯನ್ನು ಇಲ್ಲಿ ಆಚರಿಸಲಾಗುತ್ತದೆ. ಸೋನೆ ಪುರದ ಈ ಜಾನುವಾರು ಜಾತ್ರೆ ಏಷ್ಯಾದಲ್ಲೇ ಹೆಸರುವಾಸಿಯಾಗಿದೆ. ಇದು ಕೇವಲ ಜಾನುವಾರುಗಳಿಗೆ ಮಾತ್ರವಲ್ಲ, ಜಾನಪದ ನಾಟಕಗಳು,...
ಹಾಜಿಪುರ ಪ್ರವಾಸಕ್ಕೆ ರಾಮಚೌರ ಮಂದಿರ ಲ್ಯಾಂಡ್ ಮಾರ್ಕ್ ಇದ್ದಂತೆ. ಈ ದೇವಾಲಯ ರಾಮ ದೇವರಿಗೆ ಸಂಬಂಧಿಸಿದ ದೇವಾಲಯ.ರಾಮನು ಜಾನಕಾಪುರಕ್ಕೆ ಹೋಗುವ ಮಾರ್ಗದಲ್ಲಿ ಹಾಜಿಪುರವನ್ನು ಭೇಟಿ ನೀಡಿದ್ದ ಎಂಬುದಕ್ಕೆ ಪಾದದ ಗುರುತನ್ನು ಇಲ್ಲಿ ಕಾಣಲಾಗಿದೆ. ರಾಮನು ಪ್ರಥಮ ಭಾರಿಗೆ ತನ್ನ ತಲೆಯ ಕ್ಷೌರವನ್ನು ಇಲ್ಲಿ ಮಾಡಿಕೊಂಡನು...
ಜೈನರ 24 ನೆ ತೀರ್ಥಂಕರ ಭಗವಾನ್ ಮಹಾವೀರನ ಗೌರವಾರ್ಥವಾಗಿ ಆಚರಿಸುವ ಆಚರಣೆ ಈ ವೈಶಾಲಿ ಮಹೋತ್ಸವ. ಹಾಜಿಪುರದಿಂದ ವಾಯುವ್ಯ ಭಾಗದಲ್ಲಿ 35 ಕಿ ಮೀ ಅಂತರದಲ್ಲಿರುವ ವೈಶಾಲಿ ಒಂದು ಪುರಾತನ ಗ್ರಾಮ. ಈ ಸ್ಥಳವು ಪುರಾತನ ಸ್ಥಾನವಾದ ಅಶೋಕ ಸ್ಥಂಭ,ಬೌದ್ಧ ಸ್ತೂಪ, ಅಭಿಷೇಕ ಪುಷ್ಕರಣಿ ಇವುಗಳಿಗೆ ಹೆಸರುವಾಸಿಯಾಗಿದೆ. ವೈಶಾಲಿಯಿಂದ 4 ಕಿ...
ಶತಮಾನಗಳಿಂದ ನೆರವೆರಿಸಿಕೊಂಡು ಬರುತ್ತಿರುವ ಹಿಂದೂ ಆಚರಣೆಗಳು ಮತ್ತು ಸಂಸ್ಕಾರವನ್ನು ನಡೆಸುವ ಗಂಗಾ ಮತ್ತು ಗಂಡಕ್ ನದಿಗಳ ಪ್ರಮುಖ ಘಟ್ಟದ ಒಂದು ಸ್ಥಿತಿ ಈ ಕೌನ್ ಹಾರಾ ಘಾಟ್.ಈ ಘಾಟ್ ಗೆ ಈ ಹೆಸರು ಬರಲು ಕಾರಣ ಹಿಂದೂ ದೇವರಾದ ವಿಷ್ಣುವು ಆನೆ ಮತ್ತು ಮೊಸಳೆಯ ನಡುವೆ ನಡೆದ ಕದನದಲ್ಲಿ ತನ್ನ ಭಕ್ತನಾದ ಆನೆಯನ್ನು ಉಳಿಸುವ...
ಪಾತಾಳೇಶ್ವರ ದೇವಾಲಯವು ಹಾಜಿಪುರದ ಬೆರಗುಗೊಳಿಸುವ ಅದ್ಬುತಗಳಲ್ಲಿ ಒಂದಾಗಿದೆ. ದೇವತೆಗಳ ದೇವನಾದ ಶಿವನಿಗೆ ಮೀಸಲಾಗಿರುವ ಈ ದೇವಾಲಯವು ಜಡುವ ರಸ್ತೆಯಲ್ಲಿದೆ. ಈ ದೇವಾಲಯದ ಅಸ್ತಿತ್ವ ಪ್ರಾಚೀನ ಕಾಲದಿಂದಲೂ ಇದೆ. ಒಂದು ಹಂತದಲ್ಲಿ ಇಲ್ಲಿ ಶಿವ ಪ್ರತ್ಯಕ್ಷವಾದ ಮತ್ತು ಲಿಂಗರೂಪದಲ್ಲಿ ಶಾಶ್ವತವಾಗಿ ಇಲ್ಲಿ ನೆಲೆಸಲು ಪ್ರಾರಂಭಿಸಿದ...
ಶಿವ ದೇವರಿಗೆ ಸಂಬಂಧಿಸಿದ ದೇವಾಲಯವಾದ ಬತೇಶ್ವರ ನಾಥ ದೇವಾಲಯ ಬಿಹಾರದಲ್ಲಿರುವ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಇದು ಹಾಜಿಪುರದಿಂದ ಪೂರ್ವ ದಿಕ್ಕಿನಲ್ಲಿದೆ. ಈ ದೇವಾಲಯ ಮೊಘಲರ ಕಾಲದ್ದು ಎನ್ನಲಾಗುತ್ತದೆ. ಈ ದೇವಾಲಯವು ಸಾವಿರಾರು ವರ್ಷ ಹಳೆಯ ಆಲದ ಮರದ ಮಧ್ಯದಲ್ಲಿ ತಾನಾಗಿಯೇ ಉದ್ಭವವಾಗಿದೆ ಎನ್ನಲಾಗುತ್ತದೆ. ಪರಿಣಾಮವಾಗಿ...
ಹಾಜಿಪುರದ ಪಶ್ಚಿಮ ವಲಯದಲ್ಲಿ ಈ ದೇವಾಲಯವಿದೆ ಮತ್ತು ಇದು ವಿಶೇಷ ಶೈವ ದೇವಾಲಯ. ಈ ಭವ್ಯವಾದ ದೇವಾಲಯವನ್ನು ಮಧ್ಯಕಾಲೀನ ಅವಧಿಯ ನೇಪಾಳಿ ದಂಡನಾಯಕ ಮತ್ಬಾರ್ ಸಿಂಗ್ ತಾಪಾ ಎಂಬುವವರಿಂದ ಕಟ್ಟಲಾಯಿತು. ಈ ದೇವಾಲಯವು ಹೊಂದಿರುವ ಪಗೋಡ ವಾಸ್ತುಶಿಲ್ಪವನ್ನು ಮೆಚ್ಚಲೇಬೇಕು. ಉತ್ತಮ ಮರದ ಕೆತ್ತನೆ ಮೂಲಕ ದೇವಾಲಯಕ್ಕೆ ಒಂದು ಹೊಸ ಆಯಾಮ...
ಇದು ಮಹಾ ಪ್ರಭು ಜಿ ಆಡಳಿತ ಕಾಲದಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯ. ಭಾರತದಲ್ಲಿ ಒಟ್ಟಾರೆಯಾಗಿ 84 ಮಹಾ ಪ್ರಭುಜಿ ಬೈತಕ್ ಗಳಿವೆ. ಈ ದೇವಾಲಯ ಕೃಷ್ಣನ ದೇವಾಲಯವಾಗಿದ್ದು, ಪ್ರಪಂಚದಾದ್ಯಂತ ಅಧಿಕ ಸಂಖ್ಯೆಯಲ್ಲಿ ವೈಷ್ಣವರು ಇಲ್ಲಿ ಆಗಮಿಸುತ್ತಾರೆ.