ಗುಹಾಘರ್ ಕಡಲ ಕಿನಾರೆ ಒಂದು ಪ್ರಶಾಂತವಾದ ಸ್ಥಳವಾಗಿದ್ದು ತನ್ನ ಅಂಚಿನ ಗುಂಟ ಸುರು ಮರಗಳನ್ನು ಹೊಂದಿದೆ. ಇದು ಮಹಾರಾಷ್ಟ್ರ ರಾಜ್ಯ ಸರಕಾರದ ಗುಹಾಘರ್ ಸಾರಿಗೆ ಡಿಪೋದಿಂದ ಕೇವಲ 200 ಮೀ ದೂರದಲ್ಲಿದೆ.
ಇಲ್ಲಿನ ಕಡಲ ಕಿನಾರೆ ಬಿಳಿ ಮರಳು ಮತ್ತು ಮೋಡಿ ಮಾಡುವ ದೃಶ್ಯಾವಳಿಗೆ ಪ್ರಸಿದ್ಧವಾಗಿದೆ. ಇದು ಗುಹಾಘರ್ ಮುಖ್ಯ...
ಹೆಡ್ವಿ ಗುಹಾಘರ್ ಸಮೀಪದಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿದೆ.
ಈ ಹಳ್ಳಿಯು ಇಲ್ಲಿರುವ ಗಣಪತಿ ದೇವಾಲಯ ಹಾಗೂ ಶ್ರೀ ದಶಭುಜ ಲಕ್ಷ್ಮೀ ಗಣೇಶ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ದಶಭುಜ ಗಣಪತಿ ದೇವಸ್ಥಾನ ಇಲ್ಲಿನ ಮೂರ್ತಿಯಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿರುವ ಗಣಪತಿ ಮೂರ್ತಿ...
ವೈದ್ವೇಶ್ವರ ದೇವಾಲಯ ರತ್ನಾಗಿರಿ ತಾಲೂಕಿನ ಗುಹಾಘರ್ ನಲ್ಲಿದೆ. ಗುಹಾಘರ್ ದೇವಾಲಯದಂತೆ ವೈದ್ಯೇಶ್ವರ ದೇವಾಲಯವೂ ರಾಜ್ಯ ಸರಕಾರದ ಗುಹಾಘರ್ ಸಾರಿಗೆ ಡಿಪೋದ ಸಮೀಪದಲ್ಲಿದೆ.
ಇದು ಶಿವನ ಆರಾಧಕರ ದೇವಾಲಯವಾಗಿದ್ದು ಇಲ್ಲಿ ತಾಳಕೇಶ್ವರ, ಉದಾಳೇಶ್ವರ ಮತ್ತು ಬಾಲಕೇಶ್ವರ ದೇವರ ಮೂರ್ತಿಗಳಿವೆ. ಇದರ ಜೊತೆಗೆ ಗಣೇಶ, ಶ್ರೀದೇವಿ,...
ಗೋಪಾಲಗಡ ಬೆಟ್ಟ ಅಂಜನವೇಲ್ ಗ್ರಾಮದಲ್ಲಿದೆ ಹಾಗೂ ಇದು ತನ್ನ ನಿಸರ್ಗ ಸಹಜ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ಇಲ್ಲಿಯೆ ಅಂಜನವೇಲ್ ಕೋಟೆ ಇದ್ದು ಇದನ್ನು ಬಿಜಾಪುರದ ಅರಸರಿಂದ 16 ನೇಯ ಶತಮಾನದಲ್ಲಿ ಕಟ್ಟಲಾಗಿದೆ ಎಂದು ನಂಬಲಾಗಿದೆ. ನಂತರ ಶಿವಾಜಿಯ ಆಳ್ವಿಕೆಯ ಅವಧಿಯಲ್ಲಿ ಸುಮಾರು 1660 ರಲ್ಲಿ ಆತನ ವಶಕ್ಕೆ...
ಚಂಡಿಕಾ ದೇವಿ ಮಂದಿರ ಭೂಮಿಯಡಿಯಲ್ಲಿನ ದೇವಾಲಯವಾಗಿದ್ದು ಭೂಮಿಯ 15-20 ಅಡಿ ಕೆಳಗೆ ಇದೆ. ಇದು ಗುಹಾಘರ್ ಮುಖ್ಯ ಪಟ್ಟಣದಿಂದ ಉತ್ತರಕ್ಕೆ ಸುಮಾರು 15 ಕಿ.ಮೀ ದೂರದಲ್ಲಿದೆ.
ಇದು ಸುಮಾರು ಮೂರು ಶತಮಾನಗಳ ಹಿಂದೆ ಪತ್ತೆಯಾಗಿದ್ದು ಇದರ ಸ್ಥಾಪನೆ ಅದಕ್ಕಿಂತಲೂ ಎಷ್ಟೋ ವರ್ಷಗಳ ಹಿಂದೆ ಆಗಿರಬಹುದು. ಇಲ್ಲಿ ಆರಾಧನೆ ಮಾಡುವ...
ಅಂಜನವೇಲ್ ವಶಿಶ್ಥಿ ನದಿಯು ಅರಬ್ಬೀ ಸಮುದ್ರವನ್ನು ಸೇರುವ ಸ್ಥಳದಲ್ಲಿದೆ. ಇಲ್ಲಿ ಮೀನುಗಾರಿಕೆ ಪ್ರಮುಖ ಕಸುಬಾಗಿದ್ದು ಇದು ಒಂದು ಸಮುದ್ರ ದಂಡೆಯೂ ಆಗಿದೆ.
ಇದೊಂದು ಬಂದರು ಆಗಿರುವ ಕಾರಣ ಹಡಗು ನಿರ್ಮಾಣ, ಹಡಗು ನಿರ್ವಹಣೆ ಮತ್ತು ಹಳೆಯ ಹಡಗುಗಳನ್ನು ಕೆಡವುವ ಕೆಲಸಗಳಿಗೆ ಅವಕಾಶ ಕಲ್ಪಿಸಿಕೊಡುತ್ತದೆ
ಅಳಿವೆ...
ಎನ್ರೋನ್ ಯೋಜನೆ ಗುಹಾಘರ್-ವೆಲ್ದೂರ್ ದಾರಿಯ ಮಧ್ಯೆ ಇದೆ. ಅನಿಲದ ಮೂಲಕ ವಿದ್ಯುತ್ ತಯಾರು ಮಾಡಲಾಗುತ್ತದೆ ಎನ್ನಲಾಗಿರುವ ಇಲ್ಲಿನ ಯೋಜನೆ ವಿವಾದಾತ್ಮಕವಾಗಿದೆ. ಇನ್ನೂ ಯೋಜನೆ ಪೂರ್ತಿಯಾಗದಿದ್ದರೂ ಅಂಜನವೇಲ್ ಕಡೆಗೆ ಸಾಗಿದಂತೆ ಈ ಯೋಜನೆಯನ್ನು ಕಾಣಬಹುದಾಗಿದೆ.
ವೆಲ್ನೇಶ್ವರ ಗುಹಾಘರ್ ನಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಇದು ತನ್ನ ಊರಿನ ಹೆಸರುನಿಂದಲೇ ಹೆಸರುವಾಸಿಯಾಗಿರುವ ಕಡಲ ಕಿನಾರೆಗೆ ಪ್ರಸಿದ್ಧವಾಗಿದೆ. ವೆಲ್ನೇಶ್ವರ ಶಾಸ್ತ್ರೀ ನದಿಯ ದಡದಲ್ಲಿರುವ ಕಾರಣ ಮುಖ್ಯವಾಗಿ ಮೀನುಗಾರಿಕೆಗೆ ಪ್ರಸಿದ್ಧ. ಈ ಗ್ರಾಮವು ಅತ್ಯಂತ ಸ್ವಚ್ಛವಾಗಿದೆ ಹಾಗೂ ವೆಲ್ನೇಶ್ವರ ಕಡಲ ಕಿನಾರೆ ಇಲ್ಲಿನ...