ಸುಮಾರು ಐವತ್ತೆರಡು ಎಕರೆಯಷ್ಟು ವಿಶಾಲವಾದ ಪ್ರದೇಶದ ನಡುವೆ ಇರುವ ಗೋರಖನಾಥ ದೇವಾಲಯ ನಗರದ ಪ್ರಮುಖ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳವಾಗಿದೆ. ಸಂತ ಗೋರಖನಾಥರು ಈ ಸ್ಥಳದಲ್ಲಿಯೇ ತಪಸ್ಸು ಮಾಡಿದ್ದರು ಎಂಬ ನಂಬಿಕೆಯ ಆಧಾರದಲ್ಲಿ ಅವರ ಭಕ್ತರು ಈ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯದ ಗರ್ಭಗುಡಿಯಲ್ಲಿ ಸಂತ...
ಹಿಂದೂಗಳಿಗೆ ಪವಿತ್ರವಾದ ಶ್ರೀ ಭಗವದ್ಗೀತೆಯನ್ನು ಮುದ್ರಿಸುವ ಗೀತಾ ಪ್ರೆಸ್ 1923 ರಲ್ಲಿ ಆರಂಭವಾಗಿತ್ತು. ಆಗ ಬಾಡಿಗೆಯ ಕೋಣೆಯೊಂದರಲ್ಲಿ ಕೇವಲ ಮೂರು ಮುದ್ರಣ ಯಂತ್ರಗಳ ಮೂಲಕ ಹಾಗೂ ದೇವರ ಸೇವೆಗೆ ಸಮಯವನ್ನು ಮುಡುಪಾಗಿಟ್ಟ ಕೆಲವು ಭಕ್ತರ ಮೂಲಕ ಭಗವದ್ಗೀತೆಯ ಪ್ರತಿಗಳನ್ನು ಮುದ್ರಿಸಿ ದೇಶದಾದ್ಯಂತ...
ನೈಸರ್ಗಿಕ ವಿಧಾನಗಳಿಂದ ಆರೋಗ್ಯವನ್ನು ವೃದ್ಧಿಸುವ ಹಾಗೂ ಚಿಕಿತ್ಸೆ ನೀಡುವ ಆರೋಗ್ಯ ಮಂದಿರ ನಗರ ದೇವಾಲಯದೊಂದಿಗೆ ಒಂದು ಆಸ್ಪತ್ರೆಯೂ ಆಗಿದೆ. ನೈಸರ್ಗಿಕ ವಿಧಾನಗಳ ಹೊರತಾಗಿ ಆಧ್ಯಾತ್ಮಿಕ, ಯೋಗಾಭ್ಯಾಸಗಳ ಮೂಲಕವೂ ಹಲವು ಚಿಕಿತ್ಸೆಗಳನ್ನು ಇಲ್ಲಿ ನೀಡಲಾಗುತ್ತದೆ. ವರ್ಷವಿಡೀ ನಡೆಯುವ ಹತ್ತು ದಿನಗಳ ಕಾರ್ಯಾಗಾರ ಅತ್ಯಂತ...
ಸುಮಾರು 18 ಕಿ.ಮೀ ಉದ್ದ ಹಾಗೂ 723 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ರಾಮಘಡ್ ತಾಲ್ ಸರೋವರ ಇನ್ನೊಂದು ಪ್ರೇಕ್ಷಣೀಯ ತಾಣವಾಗಿದೆ. ಈ ಸ್ಥಳದಲ್ಲಿ ರಾಮಘಡ ಎಂಬ ಊರಿತ್ತೆಂದೂ, ಯಾವುದೋ ಕಾರಣದಿಂದ ಆ ಊರು ಇದ್ದಕ್ಕಿದ್ದಂತೆ ನಲಕ್ಕೆ ಕುಸಿದು ದೊಡ್ಡ ಗುಂಡಿಯುಂಟಾಯಿತೆಂದೂ, ಕಾಲಕ್ರಮೇಣ ಮಳೆನೀರು ಸಂಗ್ರಹವಾಗಿ ಈ ಸರೋವರ...
ಮಕ್ಕಳಿಂದ ಹಿಡಿದು ವೃದ್ಧರವರೆಗೆ ಖಗೋಳದ ಕುರಿತ ವಿಸ್ಮಯಗಳನ್ನು ಆಧುನಿಕ ಡಿಜಿಟಲ್ ತಂತ್ರಜ್ಞಾನದ ಮೂಲಕ ನೀಡುವ ಸುಂದರ ತಾರಾಲಯವೊಂದು ನಗರದಲ್ಲಿದೆ. ವೀರ್ ಬಹಾದುರ್ ಸಿಂಗ್ ಪ್ಲಾನೆಟೇರಿಯಂ ಎಂಬ ಹೆಸರಿನ ಈ ತಾರಾಲಯಕ್ಕೆ ದೇಶದ ವಿವಿಧ ಪ್ರದೇಶಗಳಿಂದ ಆಸಕ್ತರು ಹಾಗೂ ಶಾಲಾ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಸೋಮವಾರದ...
ನೂರಾರು ವರ್ಷ ಬಾಳುವ ಸಲ್ ಮಾತ್ತು ಸಿಕ್ವೋಯಾ ( Sal and Sequoia) ಮರಗಳು ಹೇರಳವಾಗಿರುವ ಕುಶ್ಮಿ ಅರಣ್ಯವಲಯ ನಗದಿಂದ ಅನತಿದೂರದಲ್ಲಿದೆ. ಈ ಪ್ರಾಚೀನ ವೃಕ್ಷಗಳನ್ನು ಸಂರಕ್ಷಿಸಲಾಗಿದ್ದು ನೀಳ ಮರಗಳ ನಡುವಣ ಕಾನನದ ಕಾಲುದಾರಿಯಲ್ಲಿ ನಡೆಯುವುದು ವಿಭಿನ್ನ ಅನುಭವ ನೀಡುತ್ತದೆ. ಈ ಅರಣ್ಯದಲ್ಲಿ ಕೋತಿ, ಜಿಂಕೆ ಮತ್ತು ನರಿಗಳು...
ಗೋರಖ್ಪುರದ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಗೀತಾ ವಾಟಿಕಾ ದೇವಾಲಯ. ಕಮಲದ ಆಕೃತಿಯಲ್ಲಿರುವ ಗರ್ಭಗುಡಿಯಲ್ಲಿ ಕೃಷ್ಣ ಮತ್ತು ರಾಧೆಯರ ವಿಗ್ರಹಗಳಿವೆ. ಗೋರಖ್ಪುರ ಜಂಕ್ಷನ್ ನಿಂದ ಸುಮಾರು ಮೂರು ಕಿ.ಮೀ ದೂರವಿರುವ ಈ ದೇವಾಲಯವನ್ನು ತಲುಪಲು ವಿವಿಧ ವಾಹನಗಳ ಸೌಕರ್ಯವಿದೆ.
ಹದಿನೇಳನೇ ಶತಮಾನದಲ್ಲಿ ಬದುಕಿದ್ದ ಸಂತ ರೋಶನ್ ಅಲಿ ಶಾ ರವರ ಸ್ಮರಣಾರ್ಥ ಈ ದರ್ಗಾವನ್ನು ನಿರ್ಮಿಸಲಾಗಿದೆ. ’ಧುನಿ’ ಎಂಬ ಅಗ್ಗಷ್ಟಿಕೆ ಅಂದಿನಿಂದಲೂ ಸತತವಾಗಿ ಉರಿಯುತ್ತಿದ್ದು ಅಲ್ಲಿಂದ ಏಳುವ ಹೊಗೆ ಪವಿತ್ರ ಎಂದು ಜನರು ನಂಬುತ್ತಾರೆ. ದರ್ಗಾದ ’ತಾಜಿಯಾ’ (ಪ್ರವಾದಿ ಹುಸೇನ್ ರ...