ಗದಗಿಗೆ ಹೋಗುವ ಪ್ರವಾಸಿಗರು ತ್ರಿಕೂಟೇಶ್ವರ ದೇವಸ್ಥಾನದ ಸಂಕೀರ್ಣವನ್ನು ಭೇಟಿ ಮಾಡಲೇಬೇಕು. ಈ ಆವರಣದಲ್ಲಿ ಹಲವು ದೇವಸ್ಥಾನಗಳಿವೆ. ತ್ರಿಕೂಟೇಶ್ವರ ದೇವಸ್ಥಾನ, ಸರಸ್ವತಿ ದೇವಸ್ಥಾನ ಮತ್ತು ಸೋಮೇಶ್ವರ ದೇವಸ್ಥಾನ. ಈ ದೇವಸ್ಥಾನಗಳು ಶಿವನಿಗೆ ಅರ್ಪಿತವಾದದ್ದು. ಗದಗ್ ನಲ್ಲಿರುವ ಅತ್ಯಂತ ಪುರಾತನ ದೇವಸ್ಥಾನವಿದು. ಐತಿಹ್ಯಗಳ...
ದೊಡ್ಡ ಬಸಪ್ಪ (ಡಂಬಳ ದೇವಸ್ಥಾನ)ವು ಬಹುಮುಖದ ನಕ್ಷತ್ರಾಕಾರದಲ್ಲಿದೆ. ಡಂಬಳದಲ್ಲಿ ಕೇವಲ ಒಂದು ದೇವಸ್ಥಾನವಲ್ಲ, ದೇಗುಲಗಳ ಸಮೂಹವೇ ಇದೆ. ಈ ದೇವಸ್ಥಾನದಲ್ಲಿ ಶಿವಲಿಂಗವಿದೆ. ಇದನ್ನು ಇಲ್ಲಿಯ ಸ್ಥಳೀಯರು ಭಯಭಕ್ತಿಗಳಿಂದ ಪೂಜಿಸುತ್ತಾರೆ. ಗದಗ್ನ ಮೂಲಕ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರೂ ಈ ಸ್ಥಳಕ್ಕೆ ಭೇಟಿ...
11 ನೇ ಶತಮಾನದಲ್ಲಿ ನಿರ್ಮಾಣವಾದ ವೀರನಾರಾಯಣ ದೇವಸ್ಥಾನವು ಗದಗಿನಲ್ಲಿರುವ ಅತ್ಯಂತ ಪ್ರಮುಖ ಧಾರ್ಮಿಕ ತಾಣ. ಮಹಾ ವಿಷ್ಣು ಅಥವಾ ನಾರಾಯಣನಿಗೆ ಈ ದೇವಸ್ಥಾನವು ಅರ್ಪಿತವಾಗಿದೆ. ಯುದ್ಧಕ್ಕೆ ಹೊರಟು ನಿಂತ ಭಂಗಿಯಲ್ಲಿ ಇಲ್ಲಿನ ದೇವರ ವಿಗ್ರಹವಿದೆ. ವೀರನಾರಾಯಣನ ಮೂರ್ತಿಯು ಧೋತಿಯನ್ನು ಉಟ್ಟು, ಚಕ್ರ, ಶಂಖ, ಗಧೆ ಮತ್ತು...
ನರಗುಂದ ಕೋಟೆಯು ಗದಗ ಜಿಲ್ಲೆಯಲ್ಲಿನ ಪ್ರಮುಖ ಆಕರ್ಷಣೆಯ ಕೇಂದ್ರ. 1675 ರಲ್ಲಿ ಛತ್ರಪತಿ ಶಿವಾಜಿ ಕಾಲದಲ್ಲಿ ನಿರ್ಮಿಸಲ್ಪಟ್ಟ ಎರಡು ಪ್ರಮುಖ ಕೋಟೆಗಳಲ್ಲಿ ಇದೂ ಒಂದು. ಇನ್ನೊಂದು ಕೋಟೆಯೆಂದರೆ ರಾಮದುರ್ಗ ಕೋಟೆ. 1691-92 ರಲ್ಲಿ ಔರಂಗಜೇಬ ಇದನ್ನು ವಶಪಡಿಸಿಕೊಂಡ. ಆದರೆ 1706-07ರಲ್ಲಿ ಪುನಃ ರಾಮರಾವ್ ದಾದಾಜಿಯವರಿಂದ...
ಮಾಗಡಿ ಕೆರೆಯಲ್ಲಿರುವ ಮಾಗಡಿ ಪಕ್ಷಿಧಾಮಕ್ಕೆ ಪ್ರವಾಸಿಗರು ಭೇಟಿನೀಡಲೇಬೇಕು. ಗದಗದಿಂದ ಸುಮಾರು 26 ಕಿ.ಮೀ ದೂರದಲ್ಲಿ ಈ ಪಕ್ಷಿಧಾಮವಿದೆ. ಮಾಗಡಿ ಕೆರೆಯ ವ್ಯಾಪ್ತಿ ಸುಮಾರು 134 ಎಕರೆ ಮತ್ತು 900 ಹೆಕ್ಟೇರಿನಷ್ಟು ಹಿನ್ನೀರನ ಪ್ರದೇಶವನ್ನು ಹೊಂದಿದೆ. ಕೆರೆಯ ಪಕ್ಕದಲ್ಲೇ ಕಾವೇರಿ ನದಿಯ ಉಪನದಿಯೊಂದು ಹರಿಯುತ್ತದೆ. ಸುಂದರವಾದ...
ವೆಂಕಟೇಶ್ವರ ದೇವಸ್ಥಾನವು ವೆಂಕಟೇಶ ದೇವರಿಗೆ ಅರ್ಪಿತವಾದದ್ದು. ವೆಂಕಟಾಪುರ ಎಂಬ ಸಣ್ಣ ಹಳ್ಳಿಯಲ್ಲಿ ಈ ದೇಗುಲವಿದೆ. ಐತಿಹ್ಯಗಳ ಪ್ರಕಾರ ತಿರುಪತಿಗೆ ಹೋಗಲಾಗದವರಿಗಾಗಿಯೇ ವೆಂಕಟೇಶ್ವರನು ಇಲ್ಲಿನ ಕಲ್ಲಿನ ಗುಹೆಯೊಳಗೆ ಬಂದು ಕೂಳಿತಿದ್ದ. ಗದಗಿನಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಈ ದೇವಸ್ಥಾನಕ್ಕೆ ಪ್ರವಾಸಿಗರು ಒಮ್ಮೆ ಭೇಟಿ...
ಸುತ್ತಮುತ್ತ ಪರ್ವತಗಳನ್ನೇ ಸುತ್ತುವರಿದಿರುವ ಧಾರ್ಮಿಕ ಪಟ್ಟಣವೇ ಗಜೇಂದ್ರಗಢ. ಇಲ್ಲಿ ಶಿವಾಜಿಯ ಕೋಟೆ ಮತ್ತು ಕಲಾಕಲೇಶ್ವರ ದೇವಸ್ಥಾನವಿದ್ದು, ಈ ಪ್ರದೇಶದ ಇನ್ನೊಂದು ಪ್ರಮುಖ ಧಾರ್ಮಿಕ ತಾಣ ಎಂದು ಹೆಸರಾಗಿದೆ. ಈ ಕೋಟೆಯನ್ನು ನಿರ್ಮಿಸಿದ್ದು ಛತ್ರಪತಿ ಶಿವಾಜಿ ಮಹಾರಾಜ. ಕಲಾಕಲೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾದದ್ದು....
ಕರ್ನಾಟಕದ ಗದಗ್ ಜಿಲ್ಲೆಯ ಸಣ್ಣ ಪಟ್ಟಣ ಹರ್ತಿ. ಇದು ಅಸಂಖ್ಯ ಪುರಾತನ ಮತ್ತು ಆಧುನಿಕ ದೇವಸ್ಥಾನಗಳ ತಾಣ. ಇಲ್ಲಿನ ಅತ್ಯಂತ ಪುರಾತನ ದೇವಸ್ಥಾನವೆಂದರೆ ಪಾರ್ವತಿ ಪರಮೇಶ್ವರ ದೇವಸ್ಥಾನ (ಇದನ್ನು ಶ್ರೀ ಉಮಾಮಹೇಶ್ವರ ದೇವಸ್ಥಾನ ಎಂದೂ ಕರೆಯಲಾಗುತ್ತದೆ). ಈ ದೇವಸ್ಥಾನ ನಿರ್ಮಾಣವಾಗಿದ್ದು ಚಾಲುಕ್ಯರ...
ರೋಣ ಪಟ್ಟಣಕ್ಕೆ ಐತಿಹಾಸಿಕ ಮಹತ್ವವಿದೆ. ಗದಗ ಜಿಲ್ಲೆಯಲ್ಲಿ ಅತ್ಯಂತ ಜನಪ್ರಿಯ ತಾಲೂಕು ಇದು. ಹಿಂದಿನ ಕಾಲದಲ್ಲಿ ರೋಣಕ್ಕೆ ದ್ರೋಣಪುರ ಎಂದು ಕರೆಯಲಾಗಿತ್ತಂತೆ. ಈ ಹೆಸರು ಬಂದಿದ್ದೇಕೆಂದರೆ ದ್ರೊಣಾಚಾರ್ಯರು ಈ ಪಟ್ಟಣವನ್ನು ನಿರ್ಮಿಸಿದ್ದರು ಎಂಬುದರಿಂದಾಗಿ. ಹೀಗಾಗಿ ಪುರಾತನ ಕಾಲದ ವಾಸ್ತುಶಿಲ್ಪ ಶೈಲಿ ಇಂದಿಗೂ ಕಣ್ಣಿಗೆ...
ಕರ್ನಾಟಕದ ಗದಗ್ ಜಿಲ್ಲೆಯಲ್ಲಿರುವ ಲಕ್ಷ್ಮೇಶ್ವರ ಒಂದು ಕೃಷಿ ಚಟುವಟಿಕೆಯುಳ್ಳ ಪಟ್ಟಣವಾಗಿದೆ. ಧಾರ್ಮಿಕ ಹಿನ್ನಿಲೆಗೂ ಹೆಸರುವಾಸಿಯಾಗಿರುವ ಈ ಪಟ್ಟಣದಲ್ಲಿ ಶಿವನ ಆರಾಧಕರು ಹಾಗು ಜೈನ ಸಮುದಾಯದವರನ್ನು ಕಾಣಬಹುದು. ಇಲ್ಲಿರುವ, ಶಿವನಿಗೆ ಸಮರ್ಪಿತವಾಗಿರುವ ಸೋಮೇಶ್ವರ ದೇವಸ್ಥಾನವು ಕಲ್ಲಿನಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಗರ್ಭ...
ನಾರಾಯಣ ದೇವಸ್ಥಾನವನ್ನು ಪದ್ಮಬ್ಬರಸಿ ಬಸದಿ ಎಂದೂ ಕರೆಯುತ್ತಾರೆ. ಮೂರನೇ ಕೃಷ್ಣನ ಅವಧಿಯಲ್ಲಿ ಕ್ರಿ.ಪೂ 950 ರಲ್ಲಿ ನಿರ್ಮಿಸಿದ ಜೈನ ದೇವಸ್ಥಾನವಿದು. ಗಂಗಾ ಪೆರ್ಮಾಡಿ ಭೂತಯ್ಯ ಕಾಲದಲ್ಲಿ ಆಡಳಿತ ನಡೆಸುತ್ತಿದ್ದ ರಾಣಿ ಪದ್ಮಬ್ಬರಸಿಯು ಈ ದೇವಸ್ಥಾನ ನಿರ್ಮಾಣಕ್ಕೆ ಆಜ್ಞೆ ನೀಡಿದ್ದಳಂತೆ. ರಾಷ್ಟ್ರಕೂಟರ ಆಡಳಿತದಲ್ಲಿ...
ಸರಸ್ವತಿ ದೇವಸ್ಥಾನವು ಗದಗಿನ ತ್ರಿಕೂಟೇಶ್ವರ ದೇವಸ್ಥಾನದ ಆವರಣದಲ್ಲಿದೆ. ಈ ದೇವಸ್ಥಾನವು ಪುರಾತನ ಚಾಲುಕ್ಯ ಕಲೆಯ ಪ್ರತಿನಿಧಿ. ಈ ದೇವಸ್ಥಾನವು ಸ್ತಂಭಗಳು ಮತ್ತು ಸುಂದರವಾಗಿ ನಿರ್ಮಿಸಿದ ಮುಖಮಂಟಪ ಹಾಗೂ ಅಂಕಣಗಳನ್ನು ಹೊಂದಿದೆ. ಕೆಲವು ಸಮಾಜವಿರೋಧಿ ಶಕ್ತಿಗಳಿಂದ ಇಲ್ಲಿನ ಸರಸ್ವತಿ ದೇವಿಯ ವಿಗ್ರಹವು ಭಗ್ನಗೊಂಡಿದೆ. ಆದರೆ...
ಗದಗಿನ ಮೂಲಕ ಹಾದುಹೋಗುವ ಪ್ರವಾಸಿಗರು ಶ್ರೀ ಜಗದ್ಗುರು ಬುದಿಮಹಾಸ್ವಾಮಿಗಳ ಸಂಸ್ಥಾನ ಮಠಕ್ಕೆ ಭೇಟಿ ನೀಡಬಹುದು. ಈ ಮಠವು ಅಂತೂರು ಬೆಂತೂರಿನಲ್ಲಿದೆ. ಇಲ್ಲಿ ಕೃಷಿಯೇ ಮುಖ್ಯ ಕಸುಬು. ಶ್ರೀ ಜಗದ್ಗುರು ಬುದಿಮಹಾಸ್ವಾಮಿಗಳ ಮಠವು ಸುಮಾರು 775 ವರ್ಷಗಳಷ್ಟು ಹಿಂದಿನದು. ಮುಸ್ಲಿಮರು ಮತ್ತು ಹಿಂದೂಗಳು ಈ ಹಳ್ಳಿಯಲ್ಲಿ...
ಶ್ರೀ ರಾಮ ದೇವಸ್ಥಾನವು ಗದಗ್ ಜಿಲ್ಲೆಯ ಬೆಳದಡಿ ಹಳ್ಳಿಯಲ್ಲಿದೆ. ಈ ದೇವಸ್ಥಾನವು ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯರ ಮೂರ್ತಿಯನ್ನು ಹೊಂದಿದೆ. ಈ ದೇವಸ್ಥಾನದಲ್ಲಿ ಮೂರ್ತಿಗಳನ್ನು ಸ್ಥಾಪಿಸಿದ್ದು ಶ್ರೀ ಬ್ರಹ್ಮಾನಂದ ಮಹಾರಾಜರು. ಪ್ರತಿವರ್ಷ ಯುಗಾದಿಯಂದು ರಾಮನ ಹಬ್ಬವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಸಾವಿರಾರು...
ಗದಗ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿ ಕುರ್ತಕೋಟಿ. ಇಲ್ಲಿರುವ ದೇವಸ್ಥಾನಗಳು ಈ ಹಳ್ಳಿಯನ್ನೂ ಜನಪ್ರಿಯವಾಗಿಸಿದವು. ಶ್ರೀ ಉಗ್ರ ನರಸಿಂಹ ದೇವಸ್ಥಾನ, ವಿರೂಪಾಕ್ಷ ದೇವಸ್ಥಾನ ಮತ್ತು ದತ್ತಾತ್ರೇಯ ದೇವಸ್ಥಾನವು ಹಿಂದೂಗಳಿಗೆ ಅತ್ಯಂತ ಪವಿತ್ರವಾದವು. ಈ ದೇವಸ್ಥಾನಗಳ ಜೊತೆಗೆ ರಾಮ ದೇವಸ್ಥಾನ ಮತ್ತು ಅಲ್ಲಮ ಪ್ರಭು...