ದಂತಾ ಒಂದು ಕಾಲದಲ್ಲಿ ಅಗ್ನಿವಂಶ ರಜಪೂತರ ಸಾಮಂತರಾಗಿದ್ದ ಪಾರಮಾರ ವಂಶದವರ ರಾಜಧಾನಿಯಾಗಿತ್ತು. ಸ್ವಾತಂತ್ರ್ಯಾನಂತರ ದಂತಾ ಭಾರತದೊಂದಿಗೆ ವಿಲೀನಗೊಂಡಿತು. ದಂತಾ ಪಟ್ಟಣವು ರಾಜಸ್ತಾನ ಮತ್ತು ಗುಜರಾತಿನ ಗಡಿಯಲ್ಲಿನ ಬಾಣಸ್ಕಾಂತ ಜಿಲ್ಲೆಯಲ್ಲಿದೆ. ಅಹಮದಾಬಾದಿನಿಂದ ದಕ್ಷಿಣಕ್ಕೆ 150 ಕಿಮೀ ದೂರದಲ್ಲಿದೆ. ಇಂದಿಗೂ ರಾಜಮನೆತನದ ಸದಸ್ಯರು ಈ ಅರಮನೆಯಲ್ಲಿದ್ದಾರೆ ಮತ್ತು ನವರಾತ್ರಿಗಳಂದು ದಂತಾದ ಮಹಾರಾಣಾರೆ ಮಾಡುತ್ತಾರೆ.
ರಾಜಸ್ಥಾನದ ಮೌಂಟ್ ಅಬುವಿಗೆ ಸಮೀಪದಲ್ಲಿ ಈ ರಾಜಮನೆತನದವರು “ಭವಾನಿ ವಿಲ್ಲಾ ಹೆರಿಟೇಜ್ ಹೋಂ ಸ್ಟೇ” ಎನ್ನುವ ಹೋಂ ಸ್ಟೇ ಒಂದನ್ನು ನಡೆಸುತ್ತಿದ್ದಾರೆ. ದಂತಾದ ಸುತ್ತಮುತ್ತಲು ಭೇಟಿ ನೀಡಬೇಕಾಗಿರುವ ಸ್ಥಳಗಳೆಂದರೆ ಅಂಬಾಜಿ ದೇವಾಲಯ, ಪಟನ್ನಲ್ಲಿನ ರಾಣಿ ಕಿ ವಾವ್, ಜೈನ ಮಂದಿರದ ಅವಶೇಷಗಳು, ವಾದ್ನಗರದ ಸ್ಮಾರಕಗಳು, ಕೊಟೇಶ್ವರ ದೇವಾಲಯ, ಮೊದ್ಹೇರದ ಸೂರ್ಯನ ದೇವಾಲಯ, ತರಂಗ ಮತ್ತು ಕುಂಭಾರಿಯಾದ ಜೈನ ದೇಗುಲಗಳು ಮತ್ತು ಧರೋಜ್ ಅಣೆಕಟ್ಟು. ಪಶ್ಚಿಮಿನ ಹಾರಗಳು, ಕಂಚಿನ ಆಭರಣಗಳು, ದಂತದಲ್ಲಿ ಕೆತ್ತಿದ ಚಿತ್ರಗಳು ಇತ್ಯಾದಿ ಸ್ಮರಣಿಕೆಗಳನ್ನು ಇಲ್ಲಿ ನೋಡಬಹುದು.
ಬಲರಾಂ ಅಂಬಾಜಿ ವನ್ಯಜೀವಿಧಾಮವು ಕೂಡ ನೋಡಬೇಕಾದ ಸ್ಥಳ. ಬ್ಲೂ ಬುಲ್ಸ್ ರೀತಿಯ ಪ್ರಾಣಿಗಳು, ಜಂಗಲ್ ಫೌಲ್ ಮತ್ತು ಸ್ಪೌರ್ ಫೌಲ್, ಪಾರ್ಟಿರಿಡ್ಜಸ್, ನವಿಲುಗಳು, ಕ್ವೈಲ್ ಮತ್ತಿತರ ವನ್ಯಜೀವಿಗಳಾದ ಕರಡಿ, ತೋಳ, ನರಿ, ಕಾಡು ಬೆಕ್ಕು ಹೈನಾ,ಚಿರತೆ, ಸ್ಲೋತ್ ಕರಡಿ ಮತ್ತು ಪೊರ್ಕುಪೈನ್ಗಳನ್ನು ಇಲ್ಲಿ ಕಾಣಬಹುದು.
ಹವಾಮಾನ:
ದಂತಾದಲ್ಲಿ ಬೇಸಿಗೆಗಳಲ್ಲಿ ಹೆಚ್ಚು ಉಷ್ಣತೆಯಿರುತ್ತದೆ. ಉಳಿದ ಸಮಯಗಳಲ್ಲಿ ಸಾಧಾರಣ ಹವಾಮಾನವಿರುತ್ತದೆ. ಮಳೆಗಾಲ ಮತ್ತು ಚಳಿಗಾಲಗಳು ಒಳ್ಳೆಯ ಪ್ರವಾಸಿ ಅನುಭವವನ್ನು ನೀಡುತ್ತವೆ.