ಚಿತ್ತೋರಗಢ ಕೋಟೆಯು ಚಿತ್ತೋರಗಢದ ವೈಭಯುತ ಇತಿಹಾಸದ ಪಳೆಯುಳಿಕೆಯಂತಿದೆ. ಇದು ನಗರದ ಪ್ರಮುಖ ಆಕರ್ಷಕ ಸ್ಥಳ. ಸಂಪ್ರದಾಯದ ಪ್ರಕಾರ, ಮೌರ್ಯರು 7ನೇ ಶತಮಾನದಲ್ಲಿ ಈ ಕೋಟೆಯನ್ನು ಕಟ್ಟಿಸಿದರು ಎನ್ನಲಾಗಿದೆ. ಈ ಗಮನಾರ್ಹ ಕಟ್ಟಡವು 180 ಮೀ. ಎತ್ತರಕ್ಕಿದೆ ಮತ್ತು ಸುಮಾರು 700 ಎಕರೆಗಳಷ್ಟು ವಿಸ್ತಾರದಲ್ಲಿ...
ವಿಜಯ ಸ್ತಂಭ ಅಥವಾ ವಿಕ್ಟರಿ ಟವರ್, ಚಿತ್ತೋರಗಢದ ಪ್ರಮುಖ ಪ್ರವಾಸಿ ತಾಣ. ರಾಜ ಮಹಾರಾಣ ಕುಂಭ, ಈ ಗೋಪುರವನ್ನು 1440 ರಲ್ಲಿ ಕಟ್ಟಿಸಿದ. ಈ ಕಲಾತ್ಮಕ ರಚನೆಯು ಮಹಮ್ಮದ್ ಖಿಲ್ಜಿಯ ಮೇಲಿನ ವಿಜಯದಿಂದ ಪ್ರೇರಿತವಾಗಿ, ನೆನಪಿಗೆ ಕಟ್ಟಿದ್ದು. ಈ ಸ್ತಂಭವು 37 ಮೀಟರು ಎತ್ತರವಾಗಿದೆ ಮತ್ತು 9 ಮಹಡಿಯನ್ನು ಹೊಂದಿದೆ. ಸ್ತಂಭದ...
ಕಾಳಿಕಾ ಮಠವು 8 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಈ ಪ್ರದೇಶದಲ್ಲೇ ಅತ್ಯಂತ ಹಳೆಯದು ಎಂದು ಪರಿಗಣಿತವಾಗಿದೆ. ಸಿಸೋಡಿಯಾ ಸಾಮ್ರಾಜ್ಯದ ರಾಜ ಬಪ್ಪಾ ರಾವಲ್ ಈ ಸೂರ್ಯ ದೇವಸ್ಥಾನವನ್ನು ನಿರ್ಮಿಸಿದರು. 14 ನೇ ಶತಮಾನದಲ್ಲಿ ಮಹಾರಾಣ ಹಮೀರ್ ಸಿಂಗ್ ದೇವಸ್ಥಾನದಲ್ಲಿ ಕಾಳಿಕಾ ಮೂರ್ತಿಯನ್ನು ಸ್ಥಾಪಿಸಿದರು. ಅಲ್ಲಿಂದ ಈ...
ಗೋಮುಖ ಕುಂಡವು ಚಿತ್ತೋರಗಢ ಕೋಟೆಯ ಪಶ್ಚಿಮ ಭಾಗದಲ್ಲಿರುವ ಪ್ರಮುಖ ಪವಿತ್ರ ಕೆರೆ. ಗೋಮುಖ ಎಂದರೆ ಗೋವಿನ ಮುಖ ಎಂದರ್ಥ. ಕಲ್ಲಿನ ಒಂದು ರಂಧ್ರದಿಂದ ನೀರು ಹರಿದು ಕೆರೆಗೆ ಬೀಳುತ್ತದೆ. ಪ್ರವಾಸಿಗರು ಈ ಕೆರೆಯಲ್ಲಿನ ಮೀನುಗಳಿಗೆ ಆಹಾರವನ್ನು ಹಾಕುತ್ತಾರೆ.ರಾಣಿ ಬಿಂದಾರ್ ನಾಲೆಯು ಕೆರೆಯ ಸಮೀಪ ಇದೆ. ಇದು ಪ್ರಮುಖ ಆಕರ್ಷಕ...
ಮಹಾ ಸತಿಯು ತ್ಯಾಗಕ್ಕೆ ಹೆಸರಾದ ಸ್ಥಳ. ಇಲ್ಲಿ ಉದಯಪುರದ ಆಡಳಿತಗಾರರನ್ನು ಸಮಾಧಿ ಮಾಡಲಾಗಿದೆ. ಈ ಪ್ರದೇಶದ ಪ್ರಮುಖ ಆಕರ್ಷಣೆಯೆಂದರೆ ಗಂಗೋಡಭಾವ ಕುಂಡ. ಇದು ನೈಸರ್ಗಿಕ ಕೆರೆಯಾಗಿದೆ. ಐತಿಹ್ಯಗಳ ಪ್ರಕಾರ ಇದು ಗಂಗಾ ನದಿಯ ಉಪನದಿಯಾಗಿದೆ. ಉಪನದಿ ಆಹರ್ ಒಳಗೇ ಹರಿಯುತ್ತಿರುತ್ತದೆ, ಇದರಿಂದಾಗಿ ಇಲ್ಲಿನ ಕುಂಡವು...
ರಜಪೂತ ರಾಜ ಮಹಾರಾಣ ಕುಂಭ, ತನ್ನ ರಾಜವೈಭೋಗ ಮೆರೆದ ಸ್ಥಳ ರಾಣಾ ಕುಂಭ ಅರಮನೆ. ಈ ಸುಂದರವಾದ ಅರಮನೆಯು 15 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಭಾರತದಲ್ಲೇ ಇದು ಅತ್ಯಂತ ಉತ್ತಮ ರಚನೆ ಎಂದು ಪರಿಗಣಿಸಲ್ಪಟ್ಟಿದೆ. ಇದು ರಜಪೂತ ಶೈಲಿಯ ವಾಸ್ತುಶಿಲ್ಪವಾಗಿದ್ದು ಪ್ರವಾಸಿಗರಲ್ಲಿ ತುಂಬಾ ಪ್ರಸಿದ್ಧವಾಗಿದೆ. ಈ ಅರಮನೆಗೆ...
ಕೀರ್ತಿ ಸ್ತಂಭವವನ್ನು ಟವರ್ ಆಫ್ ಫೇಮ್ ಎಂದೂ ಕೂಡಾ ಕರೆಯಲಾಗುತ್ತದೆ. ಇದು 22 ಮೀಟರು ಎತ್ತರವನ್ನು ಹೊಂದಿದೆ ಹಾಗೂ ಏಳು ಮಳಿಗೆಯನ್ನು ಹೊಂದಿದೆ. ಇದನ್ನು ಜೈನ ತೀರ್ಥಂಕರ ಆದಿನಾಥನಿಗೆ ಅರ್ಪಿಸಲಾಗಿದೆ. ಕೀರ್ತಿ ಸ್ತಂಭದ ವಾಸ್ತುಶಿಲ್ಪವು ಸೋಳಂಕಿ ಶೈಲಿಯದ್ದಾಗಿದ್ದು, ಬಾಲ್ಕನಿಯನ್ನು ಹೊಂದಿದೆ. ಗೋಡೆಗಳ ಮೇಲೆ ಸುಂದರ ಕೆತ್ತನೆ...
ಕುಂಭ ಶ್ಯಾಮ ದೇವಸ್ಥಾನವು ವಿಷ್ಣುವಿಗೆ ಅರ್ಪಣೆ ಮಾಡಲ್ಪಟ್ಟಿದ್ದು. ವರಾಹ ಅವತಾರದಲ್ಲಿ ವಿಷ್ಣು ಇಲ್ಲಿ ಉದ್ಭವಿಸಿದ್ದಾನೆ. ಒಂದನೇ ಮಹಾರಾಣ ಸಂಗ್ರಾಮ ಸಿಂಗ್ ಈ ದೇವಸ್ಥಾನವನ್ನು ಕಟ್ಟಿಸಿದ್ದಾನೆ. ಈ ದೇವಸ್ಥಾನದ ಕಟ್ಟೋದಕ್ಕೆ ಸೊಸೆ ಮೀರಾ ವಿಶೇಷವಾಗಿ ಕೋರಿದ್ದಳು. ಚಿತ್ತೋರಗಢ ಕೋಟೆಯ ಸಮೀಪದಲ್ಲಿರುವ ಕುಂಭ ದೇವಸ್ಥಾನದ...
ಚಿತ್ತೋರಗಢದ ಆರ್ಕಿಯಲಾಜಿಕಲ್ ಮ್ಯೂಸಿಯಂ, ಬನ್ಬೀರ್ ಕಿ ದಿವಾರ್ ನ ಪಶ್ಚಿಮ ಕೊನೆಯಲ್ಲಿದೆ. ಇದು ಪ್ರಮುಖ ಪ್ರವಾಸಿ ತಾಣ. ಇತಿಹಾಸದಲ್ಲಿ ಆಸಕ್ತಿ ಇರುವವರು ಈ ಪ್ರದೇಶವನ್ನು ಇಷ್ಟಪಡುತ್ತಾರೆ. ಈ ಮ್ಯೂಸಿಯಂನಲ್ಲಿ ಐತಿಹಾಸಿಕ ಕಲಾಕೃತಿಗಳು, ಪೇಂಟಿಂಗ್ಗಳು ಮತ್ತು ಮೂರ್ತಿಗಳಿವೆ. ಇವುಗಳನ್ನು ರಜಪೂತರ...
ಸಾಹಸಿ, ಸುಂದರಿಯಾದ ರಾಣಿ ಪದ್ಮಿನಿಯ ಅರಮನೆ ಇದು. ಈ ಅರಮನೆಯು ಚಿತ್ತೋರಗಢ ಕೋಟೆಯ ಒಳಗಿದೆ. ರಾಣಿ ಪದ್ಮಿನಿಯ ಸಾಹಸೀ ಮನೋವೃತ್ತಿಗೆ ಇದು ಸಾಕ್ಷಿಯಾಗಿದೆ. ಇಲ್ಲೊಂದು ಸುಮಧುರವಾದ ಕಮಲ ಕೊಳವಿದೆ. ಇಲ್ಲಿಯೇ ರಾಣಿ ಪದ್ಮಿನಿಯನ್ನು ಸುಲ್ತಾನ್ ಅಲಾವುದ್ದೀನ್ ಖಿಲ್ಜಿಯು ನೋಡಿದ ಎಂದು ಹೇಳಲಾಗುತ್ತದೆ. ಅವಳ ಅಪರೂಪದ...
ಮೀರಾ ದೇವಸ್ಥಾನವು ಮೀರಾ ಬಾಯಿಗೆ ಅರ್ಪಿತವಾದ ದೇವಸ್ಥಾನ. ಈಕೆ ರಜಪೂತ ರಾಣಿಯಾಗಿದ್ದಳು. ತನ್ನೆಲ್ಲಾ ರಾಜ ಐಶ್ವರ್ಯವನ್ನು ತ್ಯಜಿಸಿ ಕೃಷ್ಣನ ಆರಾಧನೆಯಲ್ಲಿ ತೊಡಗಿದಳು. ಮೀರಾ ಬಾಯಿಯು ಭಜನೆ ಮತ್ತು ಹಾಡುಗಳನ್ನು ಹಾಡುವ ಮೂಲಕ ಕೃಷ್ಣನನ್ನು ತಪಿಸಿದಳು.ಮೀರಾ ದೇವಸ್ಥಾನವು ರಜಪೂತ ಶೈಲಿಯ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆ....
ನಗ್ರಿಯು, ಮೌರ್ಯರ ಕಾಲದಲ್ಲಿ ಪ್ರಮುಖ ಪಟ್ಟಣವಾಗಿತ್ತು. ಇದು ಚಿತ್ತೋರಗಢದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಬೈರಾಚ್ ನದಿ ತೀರದಲ್ಲಿ ಈ ಪಟ್ಟಣವಿದೆ. ಹಿಂದೆ ಈ ಪಟ್ಟಣವು ಮಾಧ್ಯಮಿಕ ಎಂಬ ಹೆಸರಿನಿಂದ ಜನಪ್ರಿಯವಾಗಿತ್ತು. ಮೌರ್ಯರ ಕಾಲದಿಂದ ಗುಪ್ತರ ಕಾಲದವರೆಗೆ ಈ ಪ್ರದೇಶ ಸಂಪದ್ಭರಿತವಾಗಿತ್ತು.
ಬಸ್ಸಿ ವನ್ಯಧಾಮವು ಬಸ್ಸಿ ಹಳ್ಳಿಯ ಸಮೀಪದಲ್ಲಿದೆ. ಇದು ಸುಮಾರು 50 ಚದರ ಕಿ.ಮೀ ವ್ಯಾಪ್ತಿಯಲ್ಲಿದೆ. ಪಶ್ಚಿಮದಲ್ಲಿ ವಿಂದ್ಯಾಚಲ ಪರ್ವತ ಶ್ರೇಣಿಯಿದೆ. ಈ ಪ್ರದೇಶದ ಸೌಂದರ್ಯವು ನಿಸರ್ಗ ಪ್ರಿಯರಿಗೆ ಇಷ್ಟವಾಗುತ್ತದೆ. ಈ ಪ್ರದೇಶವು ಚಿರತೆ, ನವಿಲು, ಮುಂಗುಸಿ ಮತ್ತು ಜಿಂಕೆಗಳಿಂದ ಕೂಡಿದ್ದು, ವನ್ಯಜೀವಿ ಪ್ರಿಯರು ಭೇಟಿ...
ಸೀತಾಮಾತಾ ವನ್ಯಧಾಮವು ಅರಾವಳಿ ಬೆಟ್ಟಗಳು ಮತ್ತು ಮಾಲ್ವಾ ಬೆಟ್ಟಗಳ ಮೇಲೆ ಇದೆ. ವನ್ಯಧಾಮವು ದಟ್ಟ ಅರಣ್ಯದಿಂದ ಕೂಡಿದ್ದು, ಇಷ್ಟು ದಟ್ಟವಾಗಿರುವ ಒಂದೇ ಅರಣ್ಯವಿದು. ಬಿದಿರು, ಸಲಾರ್, ಆಮ್ಲ ಮತ್ತು ಬೆಲ್ ಮರಗಳ ಜೊತೆಗೆ ಈ ಅರಣ್ಯದ ಅರ್ಧದಷ್ಟು ಭಾಗ ತೇಗದ ಮರವಾಗಿದೆ. ಜಖಮ್ ಮತ್ತು ಕರ್ಮೋಯಿ ನದಿಗಳು ಇಲ್ಲಿ...
ಶನಿವಾರಜಿ ದೇವಸ್ಥಾನಗಳು ಚಿತ್ತೋರಗಢದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇವುಗಳು ಶನಿವಾರಜಿಗೆ ಅರ್ಪಿತವಾದದ್ದು. ಶನಿವಾರಜಿಯನ್ನು ಕೃಷ್ಣನ ಇನ್ನೊಂದು ಅವತಾರ ಎಂದು ಹೇಳಲಾಗಿದೆ. ಈ ದೇವಸ್ಥಾನಗಳು ಉತ್ತರ ಭಾರತದ ಹಿಂದೂಗಳಿಗೆ ಅತ್ಯಂತ ಪ್ರಮುಖವಾಗಿದೆ. ಇಲ್ಲಿನ ಎರಡು ದೇವಸ್ಥಾನಗಳು ರಾಷ್ಟ್ರೀಯ ಹೆದ್ದಾರಿ 76 ರಲ್ಲಿದೆ. ಮೂರನೇ...