1600ರ ಮಧ್ಯಭಾಗದಲ್ಲಿ ರಾಜ ರಘುನಾಥ ಸಿಂಗನು ಈ ಅದ್ಭುತ ಕಟ್ಟಡವನ್ನು ಜೇಡಿಮಣ್ಣಿನ ಇಟ್ಟಿಗೆಗಳಿಂದ ಕಟ್ಟಿಸಿದನು. ಈ ದೇವಾಲಯವು ಟೆರ್ರಾಕೊಟ್ಟಾ ವಾಸ್ತುಶೈಲಿಯಲ್ಲಿದೆ. ಈ ದೇವಾಲಯದ ಗೋಡೆಗಳ ಮೇಲೆ ಸಂಸ್ಕೃತಿ, ಧರ್ಮ ಮತ್ತು ಸಂಘರ್ಷಗಳ ಕತೆಗಳನ್ನು ಕೆತ್ತಲಾಗಿದೆ. ಇದರೊಂದಿಗೆ ಕೆಲವು ಅಸಂಗತವಾದ ರೇಖಾಗಣಿತದ ವಿನ್ಯಾಸಗಳನ್ನು ಕೂಡ...
ಈ ಟೆರಕೊಟ್ಟಾ ರಚನೆಯು ಪಿರಮಿಡ್ ಗೋಪುರವನ್ನು ಹೊಂದಿದೆ. ರಸಮಂಚವು ಬಿಷ್ಣುಪುರದ ಪುರಾತನ ದೇಗುಲ. ಇಲ್ಲಿ ಶ್ರೀ ಕೃಷ್ಣನ ವಿಗ್ರಹ ಮತ್ತು ಗ್ರಂಥಗಳಿವೆ. ಇಲ್ಲಿ ರಾಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಟೆರ್ರಾಕೊಟ್ಟಾ ವಸ್ತುಗಳನ್ನು ಮತ್ತು ಕುದುರೆಗಳನ್ನು ಖರೀದಿಸಬಹುದು.
ಇದು ಐದು ಶಿಖರಗಳ ಟೆರ್ರಾಕೊಟ್ಟಾ ದೇವಾಲಯ. ಇದನ್ನು 1600ರಲ್ಲಿ ಮಹಾರಾಜ ರಘುಬೀರ್ ಸಿಂಗನು ಕಟ್ಟಿಸಿದನು. ಈ ರೀತಿಯ ಶಿಖರಗಳು ಸುತ್ತಮುತ್ತಲ ಯಾವ ದೇಗುಲಗಳಲ್ಲೂ ಕಂಡುಬರುವುದಿಲ್ಲವಾದ್ದರಿಂದ ಇದಕ್ಕೆ ವಿಶಿಷ್ಟ ಕಳೆಯನ್ನು ತಂದುಕೊಟ್ಟಿದೆ. ಈ ದೇಗುಲದ ಗೋಡೆಗಳ ಮೇಲೆ ಮಹಾಭಾರತ ಮತ್ತು ರಾಮಾಯಣದ ಕಥೆಗಳನ್ನು ಕೆತ್ತಲಾಗಿದೆ.
ಮದನಮೋಹನ ಆಲಯವನ್ನು 1600 ರ ನಂತರದಲ್ಲಿ ರಾಜ ದುರ್ಜನ ಸಿಂಗ್ ದೇವನು ತನ್ನ ವಂಶದ ಶ್ರೀ ಕೃಷ್ಣ ಮತ್ತು ರಾಧೆಯ ಭಕ್ತರಿಗೆ ಗೌರವ ಸಲ್ಲಿಸಲು ಕಟ್ಟಿಸಿದನು. ಇದು ರಥಾಕಾರದಲ್ಲಿ ನಿರ್ಮಿಸಲಾಗಿರುವ ದೇವಾಲಯ. ಇದರ ಮೇಲೆ ಹಿಂದೂ ಧಾರ್ಮಿಕ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಕೆತ್ತಲಾಗಿದೆ.
ಬಿಹಾರಿನಾಥ ದೇವಾಲಯದಿಂದ ಈ ಬೆಟ್ಟಕ್ಕೆ ಈ ಹೆಸರು ಬಂದಿದೆ. ಇಲ್ಲಿಗೆ ವರ್ಷಪೂರ್ತಿ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಇದು ಶಿವನ ದೇವಾಲಯ. ಇದು ನಗರದ ಸದ್ದುಗದ್ದಲದಿಂದ ದೂರ ಪ್ರಶಾಂತ ವಾತಾವರಣದಲ್ಲಿದೆ.