ಮಹಾರಾಷ್ಟ್ರದ ಜನಪ್ರೀಯ ಚಾರಣ ತಾಣವಾದ ಕರ್ಜಾತ್ ನ ಸಮೀಪದಲ್ಲಿರುವ ಪ್ರಸಿದ್ದ ಧಾರ್ಮಿಕ ಕೇಂದ್ರವೇ ಈ ಭೀಮಾಶಂಕರ. ಹನ್ನೆರಡು ಜೋತಿರ್ಲಿಂಗಗಳಲ್ಲಿ ಭೀಮಾಶಂಕರವೂ ಒಂದಾಗಿರುವುದು ಇಲ್ಲಿನ ವಿಶೇಷತೆ. ಈ ಹನ್ನೆರಡು ಜೋತಿರ್ಲಿಂಗಗಳಲ್ಲಿ ಐದು ಮಹಾರಾಷ್ಟ್ರ ಒಂದರಲ್ಲೇ ಇವೆ.
ಪುಣೆಯ ಹತ್ತಿರದ ಖೇಡಾದಿಂದ ವಾಯವ್ಯಕ್ಕೆ 50 ಕಿ.ಮೀ. ದೂರದಲ್ಲಿರುವ ಶಿರಾಧೊನ್ ಎಂಬ ಗ್ರಾಮದಲ್ಲಿ, 3,250 ಅಡಿ ಎತ್ತರದ ಮೇಲೆ ಇರುವ ಶಿವಲಿಂಗದ ದರ್ಶನ ಮಾಡಬೇಕಾದರೆ ಬೃಹತ್ ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನು ದಾಟಿ ಹೋಗಬೇಕು.
ಆಗ್ನೇಯ ದಿಕ್ಕಿನಲ್ಲಿ ಹರಿದು ನಂತರ ಕೃಷ್ಣಾ ನದಿಯೊಂದಿಗೆ ವಿಲೀನವಾಗುವ ಭೀಮಾ ನದಿಯ ಉಗಮಸ್ಥಾನವೂ ಭೀಮಾಶಂಕರದಲ್ಲೇ ಇದೆ.
ಧಾರ್ಮಿಕ ಕ್ಷೇತ್ರವಾಗಿ ಭೀಮಾಶಂಕರ
ದೇವರುಗಳ ಕೋರಿಕೆಗೆ ಓಗೊಟ್ಟು ಭಗವಾನ್ ಶಿವನು ಭೀಮನ ರೂಪದಲ್ಲಿ ಸಹ್ಯಾದ್ರಿ ಬೆಟ್ಟಗಳ ಮೇಲೆ ನೆಲೆಸಲಾರಂಭಿಸಿದ್ದನು. ಕೆಲವು ಕಾಲದ ಬಳಿಕ ದುಷ್ಟ ರಕ್ಕಸ, ತ್ರಿಪುರಾಸುರನೊಂದಿಗೆ ನಡೆದ ಭೀಕರ ಯುದ್ದದಲ್ಲಿ ರಕ್ಕಸನು ಶಿವನಿಂದ ಕೊಲ್ಲಲ್ಪಟನು. ಈ ಯುದ್ದದಲ್ಲಿ ಘರ್ಷಣೆಯಿಂದುಂಟಾದ ಶಾಖದಿಂದಾಗಿ ಭೀಮಾ ನದಿಯು ಬತ್ತಿಹೋಯಿತೆಂದೂ ಯುದ್ದದಲ್ಲಿ ಶಿವನ ದೇಹದಿಂದ ಸುರಿದ ಬೆವರಿನಿಂದ ನದಿ ಪುನರ್ ನಿರ್ಮಿತವಾಯಿತೆಂದೂ ಹೇಳಲಾಗುತ್ತದೆ.
ಭೀಮಾಶಂಕರದ ಸನಿಹದಲ್ಲೇ ಪಾರ್ವತಿ ದೇವಿಯ ಮರುಅವತಾರ ಕಮಲಜಾ ದೇವಿಯ ದೇವಾಲಯವೂ ಇದೆ.
ಭೀಮಾಶಂಕರದ ಪ್ರವಾಸಿ ಕ್ಷೇತ್ರಗಳು
ಮೋಕ್ಷಕುಂಡ ತೀರ್ಥ, ಕುಶಾರಣ್ಯ ತೀರ್ಥ ಹಾಗೂ ಸರ್ವತೀರ್ಥಗಳೆಂಬ ಇತರೆ ಧಾರ್ಮಿಕ ಕ್ಷೇತ್ರಗಳೂ ಇಲ್ಲಿದ್ದು, ನೀವು ಭೀಮಾಶಂಕರಕ್ಕೆ ಭೇಟಿ ನೀಡಿದಾಗ ಇವುಗಳಿಗೂ ಭೇಟಿ ನೀಡುವುದನ್ನು ಮರೆಯದಿರಿ.
ಭೀಮಾಶಂಕರವು ಕೇವಲ ಪುಣ್ಯಕ್ಷೇತ್ರಗಳಿಗಷ್ಟೇ ಅಲ್ಲದೆ, ಪ್ರಕೃತಿ ಪ್ರೀಯರನ್ನೂ ಆಕರ್ಷಿಸುವ ಅತ್ಯುತ್ತಮ ತಾಣವಾಗಿದೆ. ಈ ಪ್ರವಾಸವು ನಿಮಗೆ ಸಹ್ಯಾದ್ರಿ ಬೆಟ್ಟಗಳ ಪ್ರದೇಶದಲ್ಲಿ ಚಾರಣದ ಅನುಭವವನ್ನೂ ನೀಡುತ್ತದೆ. ಇಲ್ಲಿನ ರಕ್ಷಿತ ಅರಣ್ಯದಲ್ಲಿ ವಿವಿಧ ಜಾತಿಯ ಪಕ್ಷಿಗಳನ್ನು ಕಾಣಬಹುದು. ಅಲ್ಲದೆ ವನ್ಯಜೀವಿ ಅಭಯಾರಣ್ಯವೂ ಇಲ್ಲಿರುವುದು. ನೀವಿಲ್ಲಿ ಬಂದಾಗ ಪ್ರಸಿದ್ದ ಭಾರತೀಯ ಅಳಿಲುಗಳನ್ನು ನೋಡುವುದನ್ನು ಮರೆಯದಿರಿ.
ಭೀಮಾಶಂಕರವು ಕೇವಲ ಧಾರ್ಮಿಕ ಜನರಲ್ಲಿ ಮಾತ್ರವಲ್ಲದೆ, ಸಾಹಸ-ಬಯಸುವ ಪ್ರವಾಸಿಗರಲ್ಲೂ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಸಮೃದ್ಧ ಹಸಿರು ಪರಂಪರೆಯನ್ನು ಹೆಮ್ಮೆಯಿಂದ ಪ್ರಕಟಗೊಳಿಸುವತ್ತಿರುವಂತೆ ತೋರುತ್ತದೆ.