ಬಾರಾಬಂಕಿ ಗಂಟೆಗೋಪುರ ನಗರದ ಹ್ರದಯ ಭಾಗದಲ್ಲಿದ್ದು ನಗರಕ್ಕೆ ಪ್ರವೇಶಿಸುವ ಸಾರ್ವಜನಿಕರಿಗೆ ಹೆಬ್ಬಾಗಿಲಿನಂತೆ ತೋರುತ್ತದೆ. ಹೆಸರೇ ಸೂಚಿಸುವಂತೆ ಈ ಕಲ್ಲಿನ ಕಮಾನು ಭಾರತೀಯ ಕಾಲಮಾನವನ್ನು ಸೂಚಿಸುವ ಗಡಿಯಾರವನ್ನು ಹೊಂದಿದ್ದು ನಗರದ ಪ್ರಮುಖ ಸ್ಥಳವೆಂದೆ ಗುರುತರವಾಗಿದೆ. ಸುಂದರವಾದ ಕಲ್ಲಿನ ಕೆತ್ತನೆಗಳು ರಚನಾತ್ಮಕ ಗುರುತಗಳು...
ಬಾರಾಬಂಕಿಯಲ್ಲಿರುವ ಪಾರಿಜಾತ ಗಿಡ ಜಗತ್ತಿನಲ್ಲಿರುವ ಈ ತರಹದ ಏಕೈಕ ಗಿಡ. ಇದು ಏಕಲಿಂಗ ಗಂಡು ಜಾತಿಯ ಸಸ್ಯವಾಗಿದ್ದು ಇದರ ವಯಸ್ಸು ಮತ್ತು ಬೀಜ ಹಣ್ಣುಗಳ ಉತ್ಪಾದನೆ ಸಾಧ್ಯವಿಲ್ಲದ ವಿಚಿತ್ರ ಗುಣದಿಂದಾಗಿ ಗಮನ ಸೆಳೆಯುತ್ತದೆ. ಪಾರಿಜಾತ ಮರ ಸುಮಾರು 5000 ವರ್ಷಗಳಷ್ಟು ಹಳೆಯದೆಂದು ಗುರುತಿಸಲ್ಪಟ್ಟಿದೆ.
ವಿಚಿತ್ರ ಗುಣದ ಈ...
ಮಹಾದೇವ ದೇವಸ್ಥಾನ ಜಿಲ್ಲೆಯಲ್ಲಿಯೇ ಅತ್ಯಂತ ಪ್ರಾಚೀನ ಕಾಲದ್ದು ಮತ್ತು ಅತ್ಯಂತ ಅಪರೂಪದ ಶಿವಲಿಂಗಗಳು ಇಲ್ಲಿವೆ. ನಿಷ್ಠಾವಂತ ಭಕ್ತರು ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಸಿದ್ದ ದಂತಕಥೆಗಳ ಪ್ರಕಾರ, ಸರಳ ಬ್ರಾಹ್ಮಣ ಪಂಡಿತನಾದ ಲೋಧೆರಾಮ್ ಅವಸ್ತಿ ತನ್ನ ಜಮೀನಿನಲ್ಲಿ ಅಗೆಯುತ್ತಿದ್ದಾಗ ಈ ಮೂರ್ತಿ...
ಐತಿಹಾಸಿಕ ಸತ್ರಿಖ್ ನಗರ ಬಾರಾಬಂಕಿ ಜಿಲ್ಲೆಯಲ್ಲಿದೆ. ಇದು ಭಾರತದಾದ್ಯಂತ ಹಲವಾರು ಸಂತರು ಮತ್ತು ಸಾಧುಗಳಿಗೆ ತಪಸ್ಸಿನ ಸ್ಥಳವಾಗಿದೆ. ಇದಕ್ಕಿಂತ ಮಿಗಿಲಾಗಿ ಸಾಲಾರ್ ಶಾ ಅವರ ತಂದೆಯ ಸಮಾಧಿ ಇಲ್ಲಿಯೇ ಇದ್ದು ಪ್ರಸಿದ್ದ ಪ್ರವಾಸಿ ತಾಣವಾಗಿದೆ.
ವಿಶ್ವಪ್ರೇಮ ಮತ್ತು ಮಾನವೀಯತೆಯಲ್ಲಿ ನಂಬಿಕೆ ಇಟ್ಟಿದ್ದ ಪ್ರಸಿದ್ದ ಸೂಫೀ ಸಂತ ಹಾಜಿ ವರಿಸ್ ಅಲಿ ಶಾಹ್ ಅವರ ನೆಲೆ ಇರುವುದು ದೇವಾದಲ್ಲಿ. ಇವರ ನೆನಪಿನಲ್ಲಿ ಅತಿರಂಜಿತ ಸ್ಮಾರಕವನ್ನು ಇಲ್ಲಿ ಸ್ಥಾಪಿಸಲಾಗಿದೆ. ಈ ಸ್ಮಾರಕ ಮೇಲೆದ್ದು ನಿಂತಿರುವ ಸ್ಥಳದಲ್ಲಿಯೇ ಸೂಫಿ ಸಂತರು ಮೃತಪಟ್ಟರೆಂಬ ನಂಬಿಕೆಯಿದೆ. ಅವರನ್ನು ಇದೇ...
ಬಡೋಸರಾಯ್ ಪ್ರಸಿದ್ದ ಯಾತ್ರಾ ಸ್ಥಳವಾಗಿರುವುದು ಬಾಬಾ ಜಗಜೀವನ್ ದಾಸ್ ಮಂದಿರದಿಂದ. ಸಂತ ಬಾಬಾ ಜಗಜೀವನ್ ದಾಸ್ ಕೋತ್ವಾ ಧಾಮ್ ಎಂದು ಕರೆಯಲ್ಪಡುವ ಸತ್ನಾಮಿಯನ್ನು ಹುಟ್ಟುಹಾಕಿದರು. ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ ಇಲ್ಲಿನ ಕೊಳವೊಂದರಲ್ಲಿ ಭಕ್ತರು ಮುಳುಗೇಳುತ್ತಾರೆ.ಇನ್ನೊಂದು ಮಸೀದಿ ಸೂಫೀ ಸಂತ ಮಲಾಮತ್ ಶಾಹ್ ಹೆಸರಿನಲ್ಲಿ...
ಸಿದ್ದೌರ್ ಐತಿಹಾಸಿಕ ನಗರಕ್ಕೆ ಹೆಸರು ಬಂದಿರುವುದು ಸಿದ್ದೇಶ್ವರ ಮಹಾದೇವ ದೇವಾಲಯದಿಂದ. ಡಿಸೆಂಬರ್ ಮತ್ತು ಜನವರಿ ತಿಂಗಳ ಮಧ್ಯಭಾಗದಲ್ಲಿ ಶಿವರಾತ್ರಿಯ ಅಂಗವಾಗಿ ಪ್ರತಿವರ್ಷ ಜಾತ್ರೆ ನೆರವೇರುತ್ತದೆ. ಹಲವಾರು ಭಕ್ತರು ಇಲ್ಲಿ ವಿಶೆಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸುತ್ತಾರೆ. ವಿಶೆಷ ಅಂಗಡಿಗಳನ್ನೂ ಈ ಸಮಯದಲ್ಲಿ...
ಮಸೌಲಿ ಗ್ರಾಮ ಪ್ರಸಿದ್ದ ಸ್ವಾತಂತ್ರ್ಯ ಹೋರಾಟಗಾರ ರಫಿ ಅಹಮದ್ ಕಿದ್ವಾಯ್ ಜನಿಸಿದ ಸ್ಥಳ. ಪ್ರಶಾಂತ ಗ್ರಾಮವಾದ ಮಸೌಲಿಯಲ್ಲಿ ವಿಶಾಲವಾದ ಕ್ರಷಿಭೂಮಿಯಿದೆ. ಭಾರತದ ಇತಿಹಾಸ ಮತ್ತು ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಆಸಕ್ತಿಯಿರುವ ಪ್ರವಾಸಿಗರು ಈ ಸ್ವಾತಂತ್ರ್ಯ ಹೋರಾಟಗಾರನ ಬದುಕನ್ನು ತಿಳಿದುಕೊಳ್ಳುವುದಕ್ಕೆ ಇಲ್ಲಿಗೆ ಭೇಟಿ...
ಭಿತೌಲಿ ಗ್ರಾಮವನ್ನು ಸ್ಥಾಪಿಸಿದ್ದು ಧಾರ್ಮಿಕ ಚಿಂತಕ ಸಯ್ಯದ್ ದೌದ್. ಇವರ ಹಾಗೂ ಇವರ ಮೊಮ್ಮಗಳ ಸಮಾಧಿಯು ಇದೇ ಗ್ರಾಮದಲ್ಲಿದೆ. ಇವತ್ತಿಗೂ ಇವರ ಮೊಮ್ಮಗಳ ಸಮಾಧಿಯನ್ನು ಪುರುಷರು ನೋಡುವಂತಿಲ್ಲ. ಸುಂದರವಾದ ಪರಿಸರ, ಕೊಳಗಳು ಮತ್ತು ಗದ್ದೆಗಳಿಂದ ಕೂಡಿದೆ ಈ ಗ್ರಾಮ. ಅಲ್ವಿ ಕುಟುಂಬದ ಒಂದು ಭಾಗವಾಗಿದೆ.
ಕಿಂತೂರ್ ಬಡೋಸರಾಯ್ ನ ಪೂರ್ವದಿಕ್ಕಿನಲ್ಲಿದೆ.ಪಾಂಡವರ ತಾಯಿ ಕುಂತಿಯಿಂದಾಗಿ ಈ ಹೆಸರು ಬಂದಿದೆ. ಪ್ರಸಿದ್ದ ಕುಂತೇಶ್ವರ ಗ್ರಾಮ ಸುಪ್ರಸಿದ್ದ. ಹಲವಾರು ಭಕ್ತರು ಮತ್ತು ಇತಿಹಾಸ ತಜ್ನರು ಇಲ್ಲಿಗೆ ಭೇಟಿ ನೀಡುತ್ತಾರೆ.