ಕ್ರಿ.ಪೂ.4000 ದಷ್ಟು ಹಿಂದಿನ ಬೇರುಗಳುಳ್ಳ , ಪುರಾತನ ದೇವಾಲಯ - ಪಟ್ಟಣ , ಪಶ್ಚಿಮ ಘಟ್ಟಗಳ ಕಾಡುಗಳ ಆಳವಾದ ಮಡಿಕೆಗಳಲ್ಲಿ , ಉತ್ತರ ಕನ್ನಡ ಜಿಲ್ಲೆಯ ವರದಾ ನದಿಯ ತಟದಲ್ಲಿ ಸ್ಥಿತಗೊಂಡಿದೆ ಈ ಬನವಾಸಿ.
ಹೆಸರಿನ ಹಿಂದಿನ ಕಥೆ
'ಬನ' ಮತ್ತು ’ವಾಸಿ’ ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು ಕ್ರಮವಾಗಿ 'ಕಾಡು' ಮತ್ತು 'ವಸಂತ' ಎಂಬ ಅರ್ಥವನ್ನು ಕೊಡುತ್ತವೆ . ಪಟ್ಟಣವು ಅಕ್ಷರಶಃ ಒಂದು ಅರಣ್ಯದಲ್ಲೇ ಇದ್ದಿತ್ತು. ಆದ್ದರಿಂದಲೇ ಈ ಹೆಸರನ್ನು ಪಡೆದುಕೊಂಡಿದೆ. ಬನವಾಸಿಯನ್ನು ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು ಎಂಬ ಮಾನ್ಯತೆ ಪಡೆದಿದೆ.ಹಾಗೂ ಇದನ್ನು ಮಹಾಭಾರತದಲ್ಲಿಯೂ ಬಳಸಿಕೊಳ್ಳಲಾಗಿದೆ.
ಈ ಕ್ಷೇತ್ರ ಏಕೆ ಪ್ರಸಿದ್ಧ
ಮಧುಕೇಶ್ವರ ದೇವಸ್ಥಾನವು ಪಟ್ಟಣಕ್ಕೆ ಜನಪ್ರಿಯತೆ ನೀಡಿದೆ. 9 ನೇ ಶತಮಾನದಲ್ಲಿ ನಿರ್ಮಿಸಲಾದ ಈ ದೇವಸ್ಥಾನವು ಯಾತ್ರಿಕರನ್ನು ಬಹು ದೊಡ್ಡ ಸಂಖ್ಯೆಯಲ್ಲಿ ಸೆಳೆಯುತ್ತದೆ. ದೇವಾಲಯ ನಗರಿಗೆ ಭೇಟಿನೀಡಲು ಡಿಸೆಂಬರ್ ತಿಂಗಳು ತುಂಬಾ ಸೂಕ್ತ. ಈ ತಿಂಗಳಲ್ಲೇ ರಾಜ್ಯ ಸರ್ಕಾರವು ಕದಂಬೋತ್ಸವ ಎಂಬ ಬೃಹತ್ ವಿಶಿಷ್ಟ ಉತ್ಸವವನ್ನು ಆಯೋಜಿಸಿರುತ್ತದೆ. ಉತ್ಸವವು ಸಾಂಸ್ಕೃತಿಕ ಹಬ್ಬವಾಗಿದ್ದು, ಯಕ್ಷಗಾನ ಮುಂತಾದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಪ್ರದರ್ಶನಗಳು ಜರುಗುತ್ತವೆ. ವಾಸ್ತವವಾಗಿ, ಪಟ್ಟಣ ಯಕ್ಷಗಾನ ಕಲೆಯ ಕೇಂದ್ರವಾಗಿದೆ.
ಬೆಂಗಳೂರಿನಿಂದ 374 ಕಿಲೋಮೀಟರ್ ದೂರ ಇರುವ ಬನವಾಸಿಗೆ 100 ಕಿಲೋಮೀಟರ್ ದೂರದ ಹುಬ್ಬಳ್ಳಿಯೇ ಹತ್ತಿರದ ವಿಮಾನನಿಲ್ದಾಣ . ಸಮೀಪದ ರೈಲು ನಿಲ್ದಾಣವಾಗಿರುವ ಹಾವೇರಿ, 70 ಕಿಲೋಮೀಟರ್ ದೂರದಲ್ಲಿದೆ. ಪಟ್ಟಣದ ಸಂಪರ್ಕ ಚೆನ್ನಾಗಿರುವುದರಿಂದ ಇಬ್ಬದಿಯ ಪ್ರಯಾಣ ಎಂದೂ ವಿವಾದಕ್ಕೆಡೆಮಾಡಿಕೊಟ್ಟಿಲ್ಲ.