ಹಿಮಾಲಯದಿಂದ ಕೂಡಿರುವ ಹಿಮಾಚಲ ಪ್ರದೇಶವು ಎಷ್ಟು ಸುಂದರವಾಗಿದೆಯೋ ಅಷ್ಟೇ ರಹಸ್ಯಗಳಿಂದಲೂ ಕೂಡಿದೆ. ಪೌರಾಣಿಕತೆಗೆ ಸಂಬಂಧಿಸಿದ ಅನೇಕ ಸ್ಥಳಗಳು ಇಲ್ಲಿವೆ ಎನ್ನಲಾಗುತ್ತದೆ. ಇಂದು ನಿಮಗೆ ಹಿಮಾಚಲ ಪ್ರದೇಶದ ಒಂದು ವಿಚಿತ್ರ ರಸ್ತೆಯ ಬಗ್ಗೆ ಹೇಳಹೊರಟಿದ್ದೇವೆ. ಅದರ ಬಗ್ಗೆ ಅನೇಕ ಕಥೆಗಳು ಕೇಳ ಸಿಗುತ್ತವೆ. ಈ ರಸ್ತೆಯು ಯಾವುದೋ ಪ್ರೇತಾತ್ಮದ ಮುಷ್ಠಿಯಲ್ಲಿದೆ ಎನ್ನಲಾಗುತ್ತದೆ. ಈ ರಸ್ತೆಯಿಂದ ತೆರಳುವ ಪ್ರತಿಯೊಬ್ಬ ವ್ಯಕ್ತಿಯು ದೆವ್ವದ ಸ್ಥಳದಲ್ಲಿ ಏನಾದರೂ ಅರ್ಪಣೆ ಮಾಡಲೇ ಬೇಕು.
ಮಿನರಲ್ ವಾಟರ್ ಹಾಗೂ ಸಿಗರೇಟ್
PC-ManoharD
ಈ ರಸ್ತೆಯು ಹಿಮಾಚಲದ ಮನಾಲಿ ಮಾರ್ಗದಲ್ಲಿ 17000ಫೀಟ್ ಎತ್ತರದಲ್ಲಿರುವ ಈ ರಸ್ತೆಯು ಬಹಳ ಅಪಾಯಕಾರಿಯಾದುದು. ಈ ಇಳಿಜಾರಾದ ರಸ್ತೆಯಲ್ಲೇ ದೆವ್ವಗಳ ಸ್ಥಾನವಿದೆ ಎನ್ನಲಾಗುತ್ತದೆ. ಇಲ್ಲಿಂದ ಹಾದುಹೋಗುವ ಪ್ರತಿಯೊಬ್ಬ ವ್ಯಕ್ತಿಯೂ ಈ ದೆವ್ವದ ಸ್ಥಾನದಲ್ಲಿ ಮಿನರಲ್ ವಾಟರ್ ಹಾಗೂ ಸಿಗರೇಟ್ ಅರ್ಪಿಸಬೇಕು. ಹೆಚ್ಚಾಗಿ ಈ ದೆವ್ವಗಳ ಭಯದಿಂದಾಗಿ ಈ ರಸ್ತೆಯಲ್ಲಿ ಹೆಚ್ಚಿನ ಜನರು ಓಡಾಡುವುದಿಲ್ಲ. ಇದು ಮನಾಲಿಯಲ್ಲಿರುವ ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದೆ.
ಅಪಾಯಕಾರಿ ರಸ್ತೆ
ಮನಾಲಿ ಬಳಿ ಬರುವ ಈ ಘಾಟಾ ಲೂಪ್ಸ್ ಬೆಟ್ಟಗಳ ನಡುವಿನ ರಸ್ತೆಯು ಅತ್ಯಂತ ಅಪಾಯಕಾರಿ ರಸ್ತೆ ಎನ್ನಲಾಗುತ್ತದೆ. ಈ ರಸ್ತೆಯನ್ನು ದಾಟಬೇಕಾದರೆ 21 ಸುತ್ತು ಸುತ್ತಿ ದಾಟಬೇಕು. ಈ ರಸ್ತೆಯು ಒಂದು ರೀತಿಯ ಭಯದ ವಾತಾವರಣವನ್ನು ಉಂಟುಮಾಡುತ್ತದೆ. ಆ ಸ್ಥಳದಲ್ಲಿ ಒಬ್ಬ ಪುರುಷನ ಆತ್ಮ ತಿರುಗುತ್ತಿರುತ್ತದೆ. ಅದು ಆ ರಸ್ತೆಯಲ್ಲಿ ಓಡಾಡುವ ಜನರಿಗೆ ತೊಂದರೆ ನೀಡುತ್ತದೆ ಎನ್ನಲಾಗುತ್ತದೆ.
ಇದರ ಹಿಂದಿದೆ ದು:ಖಕರ ಕಥೆ
ಅಲೆದಾಡುತ್ತಿರುವ ಹುಡುಗನ ಆತ್ಮದ ಹಿಂದೆ ಒಂದು ದು;ಖಕರ ಕಥೆ ಇದೆ. ಸುಮಾರು 15 ವರ್ಷಗಳ ಹಿಂದೆ ಈ ರಸ್ತೆಯಲ್ಲಿ ಒಂದು ಟ್ರಕ್ ಹಾಳಾಗಿತ್ತು. ಆಗ ಮಂಜು ಬೀಳುತ್ತಿತ್ತು. ಟ್ರಕ್ನ ಚಾಲಕ ತನ್ನ ಸಹಪಾಠಿಯನ್ನು ಟ್ರಕ್ನಲ್ಲೇ ಬಿಟ್ಟು ಸಹಾಯಕ್ಕೆಂದು ಪಕ್ಕದ ಊರಿಗೆ ಹೋಗಿದ್ದನು. ಆಗ ಆ ಊರಿನಲ್ಲಿ ವಿಪರೀತ ಗಾಳಿ ಮಳೆಯಾದ ಕಾರಣ ಟ್ರಕ್ ಡ್ರೈವರ್ಗೆ ಆ ಊರಿನಲ್ಲೇ 7 ದಿನಗಳ ಕಾಲ ನಿಲ್ಲಬೇಕಾಯಿತು. ಗಾಳಿ ಮಳೆ ನಿಂತ ನಂತರ ಟ್ರಕ್ ಡ್ರೈವರ್ ತನ್ನ ಟ್ರಕ್ ಬಳಿ ಬಂದಾಗ ಟ್ರಕ್ನಲ್ಲಿದ್ದ ತನ್ನ ಸ್ನೇಹಿತ ಹಸಿವಿನಿಂದ, ಚಳಿಯಿಂದ ಸಾವನ್ನಪ್ಪಿದ್ದ.
ವಿಚಿತ್ರ ಘಟನೆಗಳು ನಡೆಯಲಾರಂಭಿಸಿದವು
ತನ್ನ ಸ್ನೇಹಿತ ಸಾವನ್ನಪ್ಪಿದ ದು;ಖದಲ್ಲಿ ಆತನ ಅಂತಿಮ ಸಂಸ್ಕಾರವನ್ನು ಟ್ರಕ್ ಹಾಳಾಗಿದ್ದ ಜಾಗದಲ್ಲೇ ಮಾಡಿದ. ಆ ನಂತರದಿಂದ ಇಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯಲು ಆರಂಭವಾದವು. ವಿಚಿತ್ರ ಶಬ್ಧ ಕೇಳಿಸಲಾರಂಭಿಸಿತು. ಕೆಲವೊಮ್ಮೆ ಆ ಹುಡುಗ ಜನರಿಗೆ ಕಾಣಿಸಲಾರಂಭಿಸಿದ. ಆತ ಆ ರಸ್ತೆಯಲ್ಲಿ ಬರುವ ಹೋಗುವ ಜನರಲ್ಲಿ ತಿನ್ನಲು ಕುಡಿಯಲು ಕೇಳುತಿದ್ದ.
ತಾಂತ್ರಿಕರನ್ನು ಕರೆಸಲಾಯಿತು
ಈ ಘಟನೆಯ ನಂತರ ಆ ರಸ್ತೆಯಲ್ಲಿ ಒಂದಲ್ಲ ಒಂದು ಅಪಘಾತಗಳು ನಡೆಯಲಾರಂಭಿಸಿದವು. ಹಾಗಾಗಿ ಜನರು ಆ ರಸ್ತೆಯಿಂದ ಹೋಗುವುದನ್ನೇ ನಿಲ್ಲಿಸಿದ್ದರು. ಈ ವಿಷ್ಯ ಇಡೀ ಹಿಮಾಚಲಕ್ಕೆ ಹಬ್ಬಿತು. ಈ ಆತ್ಮವನ್ನು ಹತ್ತಿಕ್ಕಲು ತಾಂತ್ರಿಕರನ್ನು ಕರೆಸಲಾಯಿತು. ಪೂಜೆಯನ್ನೆಲ್ಲಾ ಮಾಡಿ ಆ ಹುಡುಗನಿಗಾಗಿ ಒಂದು ಸ್ಥಾನವನ್ನು ನಿರ್ಮಿಸಲಾಯಿತು. ಅಲ್ಲಿ ಜನರು ಏನಾದರೂ ಅರ್ಪಿಸಿಯೇ ಮುಂದೆ ಹೋಗುತ್ತಾರೆ. ಹೆಚ್ಚಿನ ಜನರು ಮಿನರಲ್ ವಾಟರ್ ಹಾಗೂ ಸಿಗರೇಟ್ ಅರ್ಪಿಸುತ್ತಾರೆ.