ಸಮುದ್ರ ತೀರದ ಮರಳ ಹಾಸಿನ ಮೇಲೆ ನೆಲೆಯೂರಿದ್ದ ಹೆಬ್ಬಂಡೆಗಳಲ್ಲಿ ಏಕ ಶಿಲೆಯ ಬಂಡೆಗಳನ್ನು ಬಲು ಸೂಕ್ಷ್ಮವಾಗಿ ಆಯ್ದುಕೊಂಡು ರಥದ ರೂಪದಲ್ಲಿ ಕಡೆಯಲಾದ ಶಿಲಾ ಸ್ಮಾರಕಗಳೆ ಪಂಚರಥಗಳು. ದ್ರಾವಿಡ ವಾಸ್ತುಶೈಲಿಯನ್ನು ಅದ್ಭುತವಾಗಿ ಅನಾವರಣಗೊಳಿಸುವ ಈ ರಚನೆಗಳು ಸುಮಾರು ಆರರಿಂದ ಏಳನೆಯ ಶತಮಾನದಲ್ಲಿ ನಿರ್ಮಾಣವಾದವುಗಳು.
ಅಷ್ಟು ಪುರಾತನವಾದ ಆ ರಚನೆಗಳು ಇಂದಿಗೂ ಹಾಗೆ ನಿಂತಿರುವುದನ್ನು ನೋಡಿದಾಗ ಸಾಕಷ್ಟು ರೋಮಾಂಚನ ಉಂಟಾಗುತ್ತದೆ. ಪಗೋಡ ಶೈಲಿಯನ್ನು ಕಾಣಬಹುದಾಗಿದ್ದರಿಂದ ಒಮ್ಮೊಮ್ಮೆ ಇವು ಬೌದ್ಧ ಸ್ಮಾರಕಗಳಾಗಿರಬಹುದೆಂಬ ಗೊಂದಲ ಉಂಟಾದರೂ ಹತ್ತಿರದಿಂದ ಗಮನಿಸಿದಾಗ ದ್ರಾವಿಡ ಶೈಲಿಯು ದಟ್ಟವಾಗಿ ಅನಾವರಣಗೊಳ್ಳುವುದನ್ನು ಕಾಣಬಹುದು.
ಮಹಾಬಲಿಪುರಂ : ಬೀಚಲ್ಲೊಂದು ವಿಶಿಷ್ಟ ದೇವಾಲಯ
ವಿಶೇಷವೆಂದರೆ ಈ ಬಂಡೆ ರಥಗಳು ಮಹಾಭಾರತದ ಪಂಚ ಪಾಂಡವರಿಗೆ ಮುಡಿಪಾದ ಅದ್ಭುತ ರಚನೆಗಳಾಗಿದ್ದು ದ್ರೌಪದಿ ಸಮೇತವಾಗಿ ಪ್ರತ್ಯೇಕವಾಗಿ ಎಲ್ಲರಿಗೂ ಮುಡಿಪಾದ ರಥಗಳು ಇಲ್ಲಿರುವುದನ್ನು ಗಮನಿಸಬಹುದಾಗಿದೆ. ಹಾಗಾಗಿ ಇವುಗಳನ್ನು ಪಂಚರಥಗಳೆಂದು ಕರೆಯುತ್ತಾರೆ.
ಅಂದಹಾಗೆ ಈ ಪಂಚರಥಗಳು ಇರುವುದು ಪ್ರಸಿದ್ಧ ಕಡಲ ತಡಿಯ ಐತಿಹಾಸಿಕ ನಗರವಾದ ಮಹಾಬಲಿಪುರಂನಲ್ಲಿ. ಮಾಮ್ಮಲ್ಲಪುರಂ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ಮಹಾಬಲಿಪುರಂ ತಮಿಳುನಾಡಿನ ಕಂಚೀಪುರಂ ಜಿಲ್ಲೆಯಲ್ಲಿದ್ದು ಚೆನ್ನೈ ನಗರದಿಂದ ಕೇವಲ 60 ಕಿ.ಮಿ ಗಳಷ್ಟು ದೂರವಿದ್ದು ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.
ಏಕಶಿಲೆ
ಪಂಚರಥಗಳಲ್ಲಿ ಒಂದಾಗಿದೆ ಧರ್ಮರಾಜ ಅಥವಾ ಯುಧಿಷ್ಟರ ರಥ. ಗುಲಾಬಿ ಬಣ್ಣದ ಗ್ರಾನೈಟ್ ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾಗಿದೆ. ಮೂಲತಃ ಈ ರಚನೆಗಳ ನಿರ್ಮಾಣದ ಗೌರವ ಸಲ್ಲಬೇಕಾದುದು ಪಲ್ಲವ ದೊರೆ ಮಹೇಂದ್ರವರ್ಮ ಹಾಗೂ ಅವನ ಪುತ್ರನಾದ ಒಂದನೇಯ ನರಸಿಂಹವರ್ಮನಿಗೆ.
ವಿತ್ರಕೃಪೆ: michael clarke stuff
ಪೂಜೆಯೆ ಇಲ್ಲ
ಇದು ದೇವಾಲಯದಂತೆ ಕಂಡುಬಂದರೂ ಸಹ ಇದು ದೇವಾಲಯವಲ್ಲ. ಅಲ್ಲದೆ ಇದನ್ನು ಎಂದಿಗೂ ಪೂಜಿಸಲಾಗಿಲ್ಲ ಹಾಗೂ ಇದರ ಕೆತ್ತನೆಯು ಸಂಪೂರ್ಣವಾಗಿಯೂ ಪೂರ್ಣಗೊಂಡಿಲ್ಲ. ಇದಕ್ಕೆ ಕಾರಣ ಈ ರಥಗಳ ನಿರ್ಮಾಣದ ಕೊನೆಯ ಹಂತದಲ್ಲಿ ನರಸಿಂಹವರ್ಮ ತೀರಿಕೊಂಡಿದ್ದು ಎಂದು ಇತಿಹಾಸದಿಂದ ತಿಳಿದುಬರುತ್ತದೆ.
ಚಿತ್ರಕೃಪೆ: Bernard Gagnon
ಶಿವನಿಗೆ ಮುಡಿಪಾದ
ಆದಾಗ್ಯೂ ಕೆಲವು ಇತಿಹಾಸಕಾರರು ಇದು ಶಿವನಿಗೆ ಮುಡಿಪಾಗಿದೆ ಎಂದು ಹೇಳುತ್ತಾರಾದರೂ ಮೊದಲಿನಿಂದಲೂ ಇದು ಧರ್ಮರಾಜ ರಥ ಎಂದೆ ಕರೆಯಲ್ಪಡುತ್ತದೆ. ಮರಳಿನ ಹಾಸಿಗೆಯ ಮೇಲೆ ಕೆತ್ತಲಾಗಿರುವ ಈ ರಥಗಳು ಅದ್ಭುತವಾಗಿ ಕಂಡುಬರುತ್ತವೆ.
ಚಿತ್ರಕೃಪೆ: michael clarke stuff
ಸುಂದರವಾಗಿವೆ
ನೈರುತ್ಯ ದಿಕ್ಕಿನ ಒಂದೆ ರೇಖೆಯಲ್ಲಿ ಎಲ್ಲ ಐದು ರಥಗಳ ನಿರ್ಮಾಣ ಮಾಡಲಾಗಿದ್ದು ಸುಂದರವಾಗಿ ಕಂಡುಬರುತ್ತವೆ. ಧರ್ಮರಾಜ ರಥವೆ ಮಿಕ್ಕೆಲ್ಲ ರಥಗಳಿಗಿಂತ ದೊಡ್ಡದಾದ ರಚನೆಯಾಗಿ ಕಂಡುಬರುವುದರಿಂದ ಇದಕ್ಕೆ ಧರ್ಮರಾಜನ ರಥ ಎಂದು ಕರೆಯಲಾಗುತ್ತದೆ ಎಂದು ಹಲವರ ಅಭಿಪ್ರಾಯವಾಗಿದೆ.
ಚಿತ್ರಕೃಪೆ: Av.kumar85
ಗ್ರಾನೈಟ್ ಕಲ್ಲು
ಪಂಚರಥಗಳಲ್ಲಿ ಒಂದಾಗಿದೆ ಭೀಮ ರಥ. ಗುಲಾಬಿ ಬಣ್ಣದ ಗ್ರಾನೈಟ್ ಕಲ್ಲಿನಲ್ಲಿ ಅದ್ಭುತವಾಗಿ ಕೆತ್ತಲಾಗಿದೆ. ಮೂಲತಃ ಈ ರಚನೆಗಳ ನಿರ್ಮಾಣದ ಗೌರವ ಸಲ್ಲಬೇಕಾದುದು ಪಲ್ಲವ ದೊರೆ ಮಹೇಂದ್ರವರ್ಮ ಹಾಗೂ ಅವನ ಪುತ್ರನಾದ ಒಂದನೇಯ ನರಸಿಂಹವರ್ಮನಿಗೆ.
ಚಿತ್ರಕೃಪೆ: michael clarke stuff
ಮೂರನೆಯ
ಸರತಿ ಸಾಲಿನಲ್ಲಿರುವ ಮೂರನೆಯ ರಥ ಸ್ಮಾರಕ ರಚನೆ ಇದಾಗಿದ್ದು ಪಶ್ಚಿಮಕ್ಕೆ ಮುಖ ಮಾಡಿ ನಿಂತಿದೆ ಭೀಮ ರಥ. ಸಿಂಹದ ಕೆತ್ತನೆಯುಳ್ಳ ಖಂಬಗಳನ್ನು ಇಲ್ಲಿ ಕಾಣಬಹುದು.
ಚಿತ್ರಕೃಪೆ: McKay Savage
ಕೆತ್ತಲಾಗಿದೆ
ಭೀಮ ರಥವೂ ಸಹ ಒಂದೆ ಬಂಡೆಯಲ್ಲಿ ಕೆತ್ತಲಾದ ಅದ್ಭುತ ಸ್ಮಾರಕವಾಗಿದೆ. 42 ಅಡಿ ಉದ್ದ, 24 ಅಡಿ ಅಗಲ ಹಾಗೂ 25 ಅಡಿಗಳಷ್ಟು ಎತ್ತರವನ್ನು ಹೊಂದಿರುವ ಸ್ಮಾರಕ ಇದಾಗಿದೆ.
ಚಿತ್ರಕೃಪೆ: Wikitom2
ಶಿವ
ಶಿವನಿಗೆ ಮುಡಿಪಾದ ರಥ ರಚನೆ ಇದಾಗಿದೆಯಾದರೂ ಅರ್ಜುನರಥ ಎಂತಲೆ ಕರೆಯಲ್ಪಡುತ್ತದೆ. ಈ ರಥವು ಚಿಕ್ಕದಾದ ಮುಖ ಮಂಟಪವನ್ನು ಹೊಂದಿದೆ. ಒಳಗೆ ಯಾವುದೆ ರೀತಿಯ ಕೆತ್ತನೆಗಳಿಲ್ಲವಾದರೂ ಹೊರಗೋಡೆಯ ಮೇಲೆ ಕೆತ್ತನೆಗಳಿರುವುದನ್ನು ಕಾಣಬಹುದು.
ಚಿತ್ರಕೃಪೆ: Bernard Gagnon
ಮನುಷ್ಯ ಹಾಗೂ ದೇವತೆ
ಇಲ್ಲಿರುವ ಕೆತ್ತನೆಗಳಲ್ಲಿ ಒಂದು ದ್ವಾರದ ಬಳಿ ದ್ವಾರಪಾಲಕರ ಕೆತ್ತನೆಗಳಿದ್ದರೆ, ಇನ್ನೊಂದು ಭಾಗದಲ್ಲಿ ಮನುಷ್ಯನ ಹಾಗೂ ದೇವತೆಗಳ ವಿವಿಧ ಭಂಗಿಯ ಕೆತ್ತನೆಗಳಿರುವುದನ್ನು ಕಾಣಬಹುದು.
ಚಿತ್ರಕೃಪೆ: G41rn8
ಸುಂದರ ಸ್ತ್ರೀಯರು
ರಚನೆಯ ಒಂದು ಭಾಗದಲ್ಲಂತೂ ಇಂದ್ರ ದೇವನು ಆನೆ ಸವಾರಿ ಮಾಡುತ್ತಿರುವುದನ್ನು ಹಾಗೂ ನಿಂತ ಇಬ್ಬರು ಸುಂದರ ಸ್ತ್ರೀಯರನ್ನು ಅದ್ಭುತವಾಗಿ ಕೆತ್ತಲಾಗಿದೆ. ಇದರ ಮೋಹಕತೆ ಎಷ್ಟಿದೆ ಎಂದರೆ ಹಲವಾರು ಕವಿಗಳು ಇದರಿಂದ ಪ್ರಭಾವಗೊಂಡು ಕವಿತೆಗಳನ್ನು ರಚಿಸಿದ್ದಾರೆ.
ಚಿತ್ರಕೃಪೆ: Jean-Pierre Dalbéra
ಆನೆ
ಅರ್ಜುನ ರಥದ ಎದುರು ಬದಿಯಲ್ಲಿ ನಕುಲ-ಸಹದೇವರ ರಥವಿದೆ. ಎರಡು ಮಹಡಿಗಳ ಈ ರಥ ಸ್ಮಾರಕವು ಇಂದ್ರದೇವನಿಗೆ ಮುಡಿಪಾಗಿದೆ. ಆನೆಯ ಕೆತ್ತನೆಯನ್ನು ಇಲ್ಲಿ ಕಾಣಬಹುದಾಗಿದ್ದು ಆನೆ ಸಮುದ್ರದೆಡೆ ಮುಖ ಮಾಡಿ ನಿಂತಿವೆ.
ಚಿತ್ರಕ್ರುಪೆ: G41rn8
ಪ್ರವೇಶದ್ವಾರ
ಈ ರಥಗಳಿರುವ ಸಂಕೀರ್ಣದ ಪ್ರವೇಶ ದ್ವಾರದಲ್ಲಿಯೆ ದ್ರೌಪದಿ ರಥವಿರುವುದನ್ನು ಕಾಣಬಹುದು. ಇದು ನೋಡಲು ಆಕರ್ಷಕ ಹಾಗೂ ನಯನಮನೋಹರವಾಗಿದೆ.
ಚಿತ್ರಕೃಪೆ: Sharda Crishna
ದುರ್ಗಾದೇವಿ
ಗುಡಿಸಲಿನ ರೀತಿಯಲ್ಲಿ ಈ ಅದ್ಭುತವಾದ ರಥ ಸ್ಮಾರಕವನ್ನು ಕೆತ್ತಲಾಗಿದೆ ಹಾಗೂ ಇದು ದುರ್ಗಾ ದೇವಿಗೆ ಮುಡಿಪಾಗಿದೆ. ಪ್ರವೇಶ ದ್ವಾರದಲ್ಲಿ ವಿಶಿಷ್ಟವಾಗಿ ದ್ವಾರಪಾಲಿಕೆಯರನ್ನು ಕಾಣಬಹುದು.
ಚಿತ್ರಕೃಪೆ: Amritamitraghosh
ಕಮಲದ ಮೇಲೆ
ಪೂರ್ವಕ್ಕಿರುವ ಗೋಡೆಯ ಮೇಲೆ ದುರ್ಗಾ ದೇವಿಯು ಕಮಲದ ಮೇಲೆ ನಿಂತಿರುವ ಭಂಗಿಯನ್ನು ಅದ್ಭುತವಾಗಿ ಕೆತ್ತಲಾಗಿರುವುದನ್ನು ಗಮನಿಸಬಹುದು. ಎದುರು ಬದಿಯಲ್ಲಿ ದೇವಿಯ ವಾಹನವಾದ ಸಿಂಹದ ಕೆತ್ತನೆಯಿದೆ.
ಚಿತ್ರಕೃಪೆ: Sharda Crishna